- 'ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8' ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ17 ಡಿಸೆಂಬರ್ 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ಕನ್ನಡ ಆಯೋಜಿಸಿದ್ದಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8 ಸ್ಪರ್ಧೆಉತ್ತಮ ಪ್ರತಿಕ್ರಿಯೆ ಪಡೆದು ಮುಕ್ತಾಯಗೊಂಡಿದೆ. ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಒಳ್ಳೆಯ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆ, ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಎಲ್ಲ ಕೃತಿಗಳು ವಿಭಿನ್ನ ಮತ್ತು ಉತ್ತಮ ಕಥಾವಸ್ತುವಿನ ಮೇಲೆ ರಚಿಸಲ್ಪಟ್ಟಿದ್ದವು; ನಿರೂಪಣೆ, ಕಥಾ ಸಾರ ಬಹಳ ಉತ್ತಮವಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರ ಪ್ರಯತ್ನವೂ ಶ್ಲಾಘನೀಯ. ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು. ಸ್ಪರ್ಧೆಯ ನಿಯಮಗಳನ್ನು ಪಾಲಿಸಿರದ ಕತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿಲ್ಲ. ಉಳಿದ ಕತೆಗಳಲ್ಲಿ ಬಹುತೇಕ ಎಲ್ಲಾ ಕತೆಗಳು ಭಿನ್ನವಾಗಿ ರಚಿಸಲ್ಪಟ್ಟಿದ್ದವು. ಪ್ರೀತಿ, ಕ್ರೈಮ್ ಥ್ರಿಲ್ಲರ್, ಭಯಾನಕ, ಕೌಟುಂಬಿಕ, ಸಾಮಾಜಿಕ ಹೀಗೆ ವಿವಿಧ ರೀತಿಯ ಕತೆಗಳು ಸಲ್ಲಿಸಲ್ಪಟ್ಟು ಸ್ಪರ್ಧೆಯ ಉದ್ದೇಶವನ್ನು ಸಾರ್ಥಕಗೊಳಿಸಿ, ಸ್ಪರ್ಧೆಗೆ ಇನ್ನಷ್ಟು ಮೆರುಗು ತಂದುಕೊಟ್ಟಿವೆ. ಆದರೂ ಕೆಲವು ಬರಹಗಾರರು ಚಿಹ್ನೆಗಳು, ವ್ಯಾಕರಣ ದೋಷಗಳ ಕುರಿತು ಇನ್ನಷ್ಟು ಗಮನ ಹರಿಸಬೇಕಾಗಿರುವುದು ಅಗತ್ಯ. ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ. ಎಲ್ಲಾ ಬರಹಗಾರರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ. ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು- ವಿಜೇತ ಕೃತಿಗಳು ಪ್ರಥಮ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವೈಶಾದಿತ್ಯಅವರಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಕತೆಯ ಕುರಿತು:ಕನ್ನಡ ವ್ಯಾಕರಣ ಮತ್ತು ಪುನರ್ಜನ್ಮವನ್ನು ಸಮೀಕರಿಸಿ ರಚಿತವಾದ ಈ ಕತೆ ವಿಭಿನ್ನ ಕಥಾಹಂದರ ಮತ್ತು ಉತ್ತಮ ಪ್ರಸ್ತುತಿಯಿಂದ ಗಮನ ಸೆಳೆಯುತ್ತದೆ. ದ್ವಿತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಪ್ರಶಾಂತ್ ಶಿರ್ವಅವರಒಂಟಿಗ ಕತೆಯ ಕುರಿತು:ಐತಿಹಾಸಿಕ ಕಾಲಘಟ್ಟದಲ್ಲಿ ಹಳ್ಳಿಯ ಜನಜೀವನ, ಪ್ರಾಣಿ ಪ್ರಪಂಚ ಮತ್ತು ಬ್ರಿಟಿಷ್ ಆಡಳಿತ, ಜನರ ನಂಬಿಕೆಗಳು ಇವುಗಳನ್ನೆಲ್ಲ ಅಚ್ಚುಕಟ್ಟಾಗಿ ಕತೆಯಲ್ಲಿ ಬಿಂಬಿಸಲಾಗಿದೆ. ಉತ್ತಮ ನಿರೂಪಣೆಯ ಮೂಲಕ ಕತೆ ಗಮನ ಸೆಳೆಯುತ್ತದೆ. ತೃತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವೀಣಾಅವರತುಡಿತ (ಸಮಗ್ರ) ಕತೆಯ ಕುರಿತು:ಸಾಮಾನ್ಯ ವ್ಯಕ್ತಿಯ ಜೀವನದ ಕಥಾಹಂದರವೊಂದನ್ನು ಉತ್ತಮ ನಿರೂಪಣೆಯ ಮೂಲಕ ಹೆಣೆಯಲಾಗಿದೆ. ಪ್ರತಿ ಹಂತದಲ್ಲಿಯೂ ಅಚ್ಚುಕಟ್ಟು ಪ್ರಸ್ತುತಿಯ ಮೂಲಕ ಮಧ್ಯಮ ವರ್ಗದ ಪುರುಷನೊಬ್ಬನ ಜೀವನವನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ. ನಾಲ್ಕನೆಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ರಮ್ಯ ನೆಕ್ಕರೆಕಾಡುಅವರ"ಸೀಳು" : ದ್ವಂದ್ವಗಳ ಸುಳಿಯಲ್ಲಿ ಐದನೆಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಡಾ. ರಾಜೇಶ್ವರಿ ಶ್ರೀನಿವಾಸಅವರಚಂದ್ರ- ಚಕೋರಿ ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಪ್ರಸನ್ನಾ ವಿ ಚೆಕ್ಕೆಮನೆಅವರಕಣ್ಣೀರ ಅಲೆಯಲ್ಲಿ ಕಾಗದದ ದೋಣಿ ಏಳನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಪುಷ್ಕರಿಣಿಅವರಆ... ಆ...!! (ಸಮಗ್ರ) ಎಂಟನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವಾಗ್ಮಿಯಅವರಭಾವಬಂಧನ ಒಂಬತ್ತನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶುಭಾ ಶ್ರೀನಾಥ್ಅವರಬಾಳ ಪಯಣದಲಿ ಹತ್ತನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಅಶೋಕ್ ಕುಮಾರ್ ಜಿ. ಎಸ್ಅವರಅಸಹನೆಯ ಜ್ವಾಲೆ ಹನ್ನೊಂದನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶಿವಶಂಕರ್ ಎಸ್. ಜಿಅವರನರ್ತಿಸದ ನವಿಲು! ಹನ್ನೆರಡನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವೇದಾ ಮಂಜುನಾಥನ್ಅವರಹೂವು ಮುಳ್ಳು ಜೋಡಿಯಾಗಿ ಹದಿಮೂರನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶ್ರುವಿಅವರಎಲ್ಲ ಮರೆತಿರುವಾಗ! ಹದಿನಾಲ್ಕನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಉಮಾ ಶಂಕರಿಅವರವಾತ್ಸಲ್ಯದ ಕರೆ ಹದಿನೈದನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಚೈತ್ರ ಭಟ್ಅವರಕತ್ತಲ ಕಾಮನಬಿಲ್ಲು ಹದಿನಾರನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ವಿಜಯ ಭಾರತಿಅವರಅಂತರಾಳ ಹದಿನೇಳನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಸೌಮ್ಯ ಶ್ರೀಅವರಆರಿಗೆ ವಧುವಾದೆ(ಸಮಗ್ರ) ಹದಿನೆಂಟನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಶ್ರೀ ಬಾಲಾಅವರಸಂಭವಾಮಿ ಹತ್ತೊಂಬತ್ತನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಸಂಧ್ಯಾ ಭಟ್ಅವರನೀಲಗಿರಿಯ ನೀಲ ಕುರುಂಜಿ ಇಪ್ಪತ್ತನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ ಅಚಲಾ ಬಿ ಹೆನ್ಲಿಅವರವಲ್ಲಿಯ ಬಳ್ಳಿ ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು ಉತ್ತಮ ಕಥಾಹಂದರ, ನಿರೂಪಣೆಗಳ ಮೂಲಕ ತೀರ್ಪುಗಾರರ ಮೆಚ್ಚುಗೆ ಪಡೆದ ಈ ಕೃತಿಗಳ ಕರ್ತೃಗಳಿಗೆ ಡಿಜಿಟಲ್ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು. ಎಲ್ಲ ಬರಹಗಾರರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳ ಮೂಲಕ ಸಾಹಿತ್ಯಾಸಕ್ತರ ಮನಗೆದ್ದು ಜನಪ್ರಿಯತೆ ಗಳಿಸುವಂತಾಗಲಿ ಎಂದು ಹಾರೈಸುತ್ತೇವೆ. ಕ್ರ. ಸಂ. ಕೃತಿ ಕರ್ತೃ 1 ಪ್ರಮದ್ವರೆ ಶುಭಾ ಗಿರಣಿಮನೆ 2 ನಾ ಬಿಡಲಾರೆ ಎಂದೂ ನಿನ್ನ... ವೆಂಕಟೇಶ್ ಡಿ ಎನ್ 3 ತಮಸೋಮಾ ಜ್ಯೋತಿರ್ಗಮಯ ಮಲ್ಲಿಕಾ ಶಾಂತಾರಾಮ್ ಶೆಟ್ಟಿ 4 ಪಂಜರದ ಬೇಟೆ ಅಭಿವ್ಯಕ್ತಿ 5 ದೇವರ ಆಟ ಬಲ್ಲವರಾರು!? ಉರ್ಮಿಲಾ ಪಾಶ್ಚಾಪೂರ 6 ಪದ್ಮಗಂಧಿನಿ ಲಕ್ಷ್ಮಿ ಗೌಡ 7 ಉಸಿರಾದೆ ನೀ ಜೀವಕೆ ವಿದ್ಯಾ ಮೂರ್ತಿ 8 ಭೂತಗನ್ನಡಿ ಓಂಪ್ರಕಾಶ್ ನಾಯ್ಕ್ 9 ಪಿರಮಿಡ್ ಆದರ್ಶ ಪಟೇಲ್ 10 "ಆಪರೇಷನ್ ವಿಸ್ಮಯ" ಮಧುಸೂರ್ಯ ಭಟ್ 11 ನಿಗೂಢ ನಾಯಕ ಸುಮನ ಕಾರಂತ್ 12 ಹೃದಯ ವೀಣೆ ಮಿಡಿಯಿತು ಸುಜಲ ಘೋರ್ಪಡೆ 13 ದೇವರ ಆಟ ಬಲ್ಲವರಾರು ಕೀರ್ತನ. ಎಂ 14 ಈ ಯಾನಕ್ಕೆ ನೀನೇ ನಾವಿಕ ಲಕ್ಷ್ಮಿ ಎಂ. ಆರ್ 15 ಸುಪ್ತಸಾಗರ ಸುನೇತ್ರೀ 16 ಪ್ರೀತಿಯ ರೀತಿ ನಿಯತಿಯ ನೀತಿ ಆಶ್ರಿತಾ ಕಿರಣ್ 17 ದೊರೆಸಾನಿ ಸ್ಫೂರ್ತಿ 18 ಕ್ಷಮಯಾಧರಿತ್ರಿ(ಪ್ರೀತಿಯ ಅಲೆಯಲಿ ನಲುಗಿತೆ ಹೃದಯ?) ಮಾಲಾ ಶ್ರೀನಿವಾಸ್ ಭಟ್ 19 ನಿನ್ನದೇ ಚಡಪಡಿಕೆ ಅಶ್ವಿನಿ ಜೈನ್ 20 ನಿನ್ನೊಂದಿಗೆ ಈ ಜೀವನ ಅನು 21 ಮಗದೊಮ್ಮೆ ಪ್ರೀತಿಸಲಾರೆಯ ನನ್ನ... ತುಳಸಿ ರಾಜೇಶ್ (ರಾಶಿ) 22 ತ್ರಿವೇಣಿ ಸ್ಪೂರ್ತಿಯ ಚಿಲುಮೆ ಅರ್ಚನಾ ಕುಲಕರ್ಣಿ 23 ನೀ ನನ್ನ ಕಡಲು ಸಾನ್ವಿ ಹೆಗಡೆ 24 ಹೃದಯದಿ ನೀನಿರಲು ಲಾವಣ್ಯ ಪರಮೇಶ್ 25 ಭಾರ್ಗವನ ಸೀತಾ ಕಾವ್ಯಶ್ರೀ 26 ಪರಿಶುದ್ಧವಾದ ಪ್ರೇಮವೆಂದರೆ ಅದು ಸಿಗಲಾರದ ಪ್ರೀತಿ!! ಎಸ್ ಸತ್ಯಪ್ರದ 27 ಪ್ರೇಮ ತೀರ ವರ ಲಕ್ಷ್ಮಿ 28 ಪ್ರೇಮ ಮತ್ಸರ ಆಮ್ರಪಾಲಿ 29 ಸು-ಮನ ಮಂಥನ.. ಪ್ರೀತಿಯ ಮನದಮಾತು.. ಮಧುಮತಿ ಕೆ 30 ಮುಸಂಜೆಯ ಮೌನರಾಗ.. ಆಶಾ 120 ಕ್ಕೂ ಅಧಿಕ ಅಧ್ಯಾಯಗಳನ್ನು ರಚಿಸಿದವರ ಯಾದಿ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 120 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 120 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಬರಹಗಾರರು ನೀಡುವ ವಿಳಾಸಕ್ಕೆ ಕಳುಹಿಸಲಾಗುವುದು. ಜೊತೆಗೆ ಬರಹಗಾರರ ಸಂದರ್ಶನವನ್ನು ಪ್ರತಿಲಿಪಿ ಬಳಗದ ಜೊತೆ ಹಂಚಲಾಗುವುದು. ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ: ಆಮ್ರಪಾಲಿಅವರಪ್ರೇಮ ಮತ್ಸರ ಕ್ರ. ಸಂ. ಕೃತಿ ಕರ್ತೃ 1 ಪ್ರೇಮ ಮತ್ಸರ ಆಮ್ರಪಾಲಿ 2 ಪ್ರೀತಿ ಬಂಧವೋ.ಬಂಧನವೋ...? ಎಸ್ ಪವಿತ್ರ 3 ಉಸಿರಾದೆ ನೀ ಜೀವಕೆ ವಿದ್ಯಾ ಮೂರ್ತಿ 4 ಕ್ಷಮಯಾಧರಿತ್ರಿ(ಪ್ರೀತಿಯ ಅಲೆಯಲಿ ನಲುಗಿತೆ ಹೃದಯ?) ಮಾಲಾ ಶ್ರೀನಿವಾಸ್ ಭಟ್ 5 ಕಥೆಯೊಂದು ಶುರುವಾಗಲಿದೆ ರಕ್ಷಿತಾ ಆರ್ ಭಟ್ 6 ನಾ ಬಿಡಲಾರೆ ಎಂದೂ ನಿನ್ನ... ವೆಂಕಟೇಶ್ ಡಿ ಎನ್ 7 ಪ್ರೇಮ ತೀರ ವರ ಲಕ್ಷ್ಮಿ 8 ವಿಶಿಷ್ಟಾ ವೈಭವ ಅದೀರ 9 ಎಲ್ಲ ಮರೆತಿರುವಾಗ! ಶ್ರುವಿ 10 ತ್ರಿವೇಣಿ ಸ್ಪೂರ್ತಿಯ ಚಿಲುಮೆ ಅರ್ಚನಾ ಕುಲಕರ್ಣಿ 11 ವಾತ್ಸಲ್ಯದ ಕರೆ ಉಮಾ ಶಂಕರಿ 12 "ಆರಿಗೆ ವಧುವಾದೆ(ಸಮಗ್ರ)" ಸೌಮ್ಯ ಶ್ರೀ 13 ಪದ್ಮಗಂಧಿನಿ ಲಕ್ಷ್ಮಿ ಗೌಡ 14 ಹೃದಯದ ಅಂತಪುರದಲ್ಲಿ ಹಚ್ಚುವೆಯ ದೀವಳಿಗೆ ಪಲ್ಲವಿ ನಾಯ್ಕ 15 ಕತ್ತಲ ಕಾಮನಬಿಲ್ಲು ಚೈತ್ರ ಭಟ್ 16 ದೇವರ ಆಟ ಬಲ್ಲವರಾರು ಕೀರ್ತನ. ಎಂ ನವ ಬರಹಗಾರರ ಯಾದಿ ಪ್ರತಿಲಿಪಿಯ ತಮ್ಮ ಪ್ರೊಫೈಲ್ನಲ್ಲಿ ಮೊದಲ ಬಾರಿಗೆ ಕನಿಷ್ಠ 80 ಅಧ್ಯಾಯಗಳ ಧಾರಾವಾಹಿ ರಚಿಸಿ ಪ್ರಕಟಿಸಿರುವ ಎಲ್ಲ ನವ ಬರಹಗಾರರ ಉತ್ಸಾಹ ಮತ್ತು ಪ್ರಯತ್ನ ಸಂತಸ ನೀಡಿದೆ. ಈ ಬರಹಗಾರರ ಸಾಹಿತ್ಯ ಪ್ರಯಾಣ ಎಲ್ಲಿಯೂ ವಿರಮಿಸದೇ ಮುಂದುವರೆಯಲಿ ಎಂದು ಆಶಿಸುತ್ತೇವೆ. ಈ ಬರಹಗಾರರಿಗೆ ಗೌರವ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು. ಕ್ರ. ಸಂ. ಕೃತಿ ಕರ್ತೃ 1 ಪ್ರೀತಿ ಬಂಧವೋ.ಬಂಧನವೋ...? ಎಸ್ ಪವಿತ್ರ 2 ನೀ ನನ್ನ ಕಡಲು ಸಾನ್ವಿ ಹೆಗಡೆ 3 ಆ... ಆ...!! (ಸಮಗ್ರ) ಪುಷ್ಕರಿಣಿ 4 ಪರಿಶುದ್ಧವಾದ ಪ್ರೇಮವೆಂದರೆ ಅದು ಸಿಗಲಾರದ ಪ್ರೀತಿ!! ಎಸ್ ಸತ್ಯಪ್ರದ 5 ಭಾರ್ಗವನ ಸೀತಾ ಕಾವ್ಯಶ್ರೀ 6 "ಸೀಳು" : ದ್ವಂದ್ವಗಳ ಸುಳಿಯಲ್ಲಿ ರಮ್ಯ ನೆಕ್ಕರೆಕಾಡು 7 ವಲ್ಲಿಯ ಬಳ್ಳಿ ಅಚಲಾ ಬಿ ಹೆನ್ಲಿ 8 ಒಂಟಿಗ ಪ್ರಶಾಂತ್ ಶಿರ್ವ 9 ತಮಸೋಮಾ ಜ್ಯೋತಿರ್ಗಮಯ ಮಲ್ಲಿಕಾ ಶಾಂತಾರಾಮ್ ಶೆಟ್ಟಿ 10 ನೀಲಗಿರಿಯ ನೀಲ ಕುರುಂಜಿ ಸಂಧ್ಯಾ ಭಟ್ 11 ಒಲವ ಕದನದಲ್ಲಿ ಖುಷಿ ಕೆ 12 ಪ್ರಮದ್ವರೆ ಶುಭಾ ಗಿರಣಿಮನೆ 13 ಕಥೆಯೊಂದು ಶುರುವಾಗಲಿದೆ ರಕ್ಷಿತಾ ಆರ್ ಭಟ್ 14 ನಿನ್ನುಸಿರಲ್ಲಿ ನನ್ನೆಸರಿದೆ ನಿಖಿಲ್ ಕುಮಾರ್ 15 ನರ್ತಿಸದ ನವಿಲು! ಶಿವಶಂಕರ್ ಎಸ್. ಜಿ 16 ಅರ್ಥನಾಧ (ಒಂದು ಹೆಣ್ಣಿನ ಕೂಗು) ಜಿ. ಎಸ್. ಅಂಬರೀಶ 17 ಪಿರಮಿಡ್ ಆದರ್ಶ ಪಟೇಲ್ 18 ನಿನ್ನೊಂದಿಗೆ ಈ ಜೀವನ ಅನು 19 ಪ್ರೀತಿಯ ರೀತಿ ನಿಯತಿಯ ನೀತಿ ಆಶ್ರಿತಾ ಕಿರಣ್ 20 ನಿಗೂಢ ನಾಯಕ ಸುಮನ ಕಾರಂತ್ 21 ದೇವರ ಆಟ ಬಲ್ಲವರಾರು!? ಉರ್ಮಿಲಾ ಪಾಶ್ಚಾಪೂರ 22 ದೊರೆಸಾನಿ ಸ್ಫೂರ್ತಿ 23 ಹೃದಯದ ಅಂತಪುರದಲ್ಲಿ ಹಚ್ಚುವೆಯ ದೀವಳಿಗೆ ಪಲ್ಲವಿ ನಾಯ್ಕ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು! ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ನಮ್ಮ ಕೆಲವು ಯಶಸ್ವೀ ಸಾಹಿತಿಗಳ ಮನದಾಳದ ನುಡಿಗಳು13 ಸೆಪ್ಟೆಂಬರ್ 2024ನಮ್ಮ ಕೆಲವು ಯಶಸ್ವೀ ಸಾಹಿತಿಗಳು ಪ್ರತಿಲಿಪಿಯ ಕುರಿತು ವ್ಯಕ್ತಪಡಿಸಿದ ಅಭಿಮಾನದ, ಪ್ರೀತಿಯ ನುಡಿಗಳು ಅವರದೇ ಮಾತಿನಲ್ಲಿ... "ಜೀವನದಲ್ಲಿ ಎಲ್ಲಾ ಇದ್ದರೂ ಏನಾದರೂ ಒಂದು ಕೊರಗು, ನೋವು ಇರೋದು ಸಹಜ ಅಲ್ವಾ..? ನನಗೂ ಹಾಗೆ, ರಾಜ್ಯ ಬಿಟ್ಟು ಈ ಮಹಾರಾಷ್ಟ್ರಕ್ಕೆ ಕಾಲಿಟ್ಟಾಗ ನಾನು ಕಳೆದುಕೊಂಡಿದ್ದು ನನ್ನ ಪ್ರೀತಿಯ ಭಾಷೆ ಕನ್ನಡವನ್ನು. ಕೇಳಲು ಇಂಪು, ಮನಸ್ಸಿಗೆ ಮುದ ನೀಡುವ ಭಾಷೆ ನನ್ನಿಂದ ನಿಧಾನಕ್ಕೆ ಮರೆಯಾಗುತ್ತಿದ್ದಂತೆ ಮನಸ್ಸಲ್ಲಿ ಏನೋ ಕಳೆದುಕೊಂಡ ಭಾವ. ಆಗ ನನಗೆ ಪರಿಚಯವಾಗಿದ್ದೇ ನನ್ನ ಪ್ರತಿಲಿಪಿ. ನನ್ನೊಳಗಿನ ನೋವು ಮರೆಸಿ, ಮರೆತು ಹೋದ ಅಕ್ಷರಗಳಿಗೆ ಜೀವ ತುಂಬಿ, ನನ್ನ ಬದುಕಿಗೆ ಒಂದು ಹೊಸ ಅರ್ಥವನ್ನೇ ಕೊಟ್ಟಿತು. ಎಲ್ಲರ ಕಥೆ ಓದುತ್ತಾ, ನಾನು ಬರೆಯಲು ಶುರುಮಾಡಿ ಪ್ರತಿಲಿಪಿಯೊಂದಿಗೆ ನನ್ನ ಬದುಕು ಬೆರೆತು ಹೋಯಿತು. ಅದರಲ್ಲಿ ಬರುವ ಸುಂದರ ಕಾಮೆಂಟ್, ಕೆಲವರು ಮೆಸೇಜ್ ಮಾಡಿ ಕೂಡಾ ತುಂಬಾ ಚೆನ್ನಾಗಿ ಬರೆಯುತ್ತಿರಿ ಎಂದಾಗ ಅದೇನೋ ಸಾಧಿಸಿದಂತಹ ಹೆಮ್ಮೆ. ಗೃಹಿಣಿಯಾಗಿ ಮನೆಯಲ್ಲೇ ಇರುವ ನನಗೆ ಇತ್ತೀಚಿಗೆ ಬರುತ್ತಿರುವ ಒಂದಿಷ್ಟು ಹಣ ನೋಡಿ ಮನಸಲ್ಲಿ ಹೇಳಲಾರದಷ್ಟು ಖುಷಿ. ನನ್ನ ಪ್ರತಿಲಿಪಿ ನನ್ನ ಹೆಮ್ಮೆ. ನನ್ನ ಬದುಕಿನ ಕೊನೆಯವರೆಗೂ ನನ್ನ ಜೊತೆಯಾಗಿರೋ ನನ್ನ ಬಂಧು" - ರೂಪ ರೈ "ಇದುವರೆಗೂ ಬರೀ ತೀರ್ಥ ಶಿವು ಎಂದು ನಾಲ್ಕಾರು ಜನರಿಗೆ ಪರಿಚಯವಿದ್ದ, ನನ್ನವರಿಂದಲೇ ತಿರಸ್ಕೃತಳಾಗಿದ್ದ ನಾನು ಇಂದು ನೂರಾರು, ಸಾವಿರಾರು ಜನರಿಗೆ ಪರಿಚಿತಳು. ಕೆಲವರಿಗೆ ಗೆಳತಿ, ಅಕ್ಕ, ತಂಗಿ, ಮಗಳು, ಅಮ್ಮ, ಸ್ಫೂರ್ತಿ ಕೂಡ ಆಗಿದ್ದೇನೆ. ನನಗೊಂದು ದೊಡ್ಡ ಕುಟುಂಬ ದೊರೆತಿದೆ ಅಂದ್ರೆ ಅದಕ್ಕೆ ಕಾರಣವೇ ಪ್ರತಿಲಿಪಿ. ಯಾರೆದಿರೂ ಕೈ ಚಾಚದೇ ಸ್ವಂತ ದುಡಿಮೆಯಿಂದಲೇ ಪುಟ್ಟ ಮನೆಯೊಂದನ್ನು ಕಟ್ಟಲು ನೆರವಾಗಿದ್ದು, ನನ್ನನ್ನು ಆರ್ಥಿಕವಾಗಿ ಸದೃಢಳನ್ನಾಗಿಸಿದ್ದು ಇದೇ ಪ್ರತಿಲಿಪಿ. ಇಷ್ಟು ಮಾತ್ರವೇ ಅಲ್ಲ ಬರಿದಾಗಿದ್ದ ನನ್ನ ಮಡಿಲನ್ನು ತುಂಬಿದ್ದು ಕೂಡ ಪ್ರತಿಲಿಪಿಯೇ. ಲಿಪಿಯಲ್ಲಿ ಓದುಗರೊಬ್ಬರ ಮೂಲಕ ಒಂದು ಮಗುವನ್ನು ದತ್ತು ಪಡೆದ ನಾನಿಂದು ಪರಮ ಸುಖಿ ಎನ್ನುವುದಕ್ಕೂ ಅಡ್ಡಿಯಿಲ್ಲ. ಒಟ್ಟಿನಲ್ಲಿ ಪ್ರತಿಲಿಪಿ ಎನ್ನುವುದು ನನ್ನ ಪಾಲಿಗೆ ಕೇವಲ ಬರೆಯುವ - ಓದುವ ಒಂದು ವೇದಿಕೆ ಮಾತ್ರವೇ ಅಲ್ಲ. ನನ್ನ ಬದುಕನ್ನೇ ಬದಲಿಸಿದ ಅಧ್ಭುತ. ನಾನೆಂದೂ ಪ್ರತಿಲಿಪಿಗೆ ಚಿರಋಣಿಯೇ ಸರಿ. ಇದರಲ್ಲಿ ಅತಿಶಯೋಕ್ತಿ ಏನೂ ಇಲ್ಲ" - ತೀರ್ಥ ಶಿವು ಪ್ರತಿಲಿಪಿಯಲ್ಲಿ 2017ರ ಕೊನೆಯ ದಿನ ನನ್ನ ಥ್ರಿಲ್ಲರ್ ಕಾದಂಬರಿ ಛದ್ಮವೇಷದ ಮೊದಲ ಕಂತು ಪ್ರಕಟವಾಯಿತು. ಅಂದೇ ಆರಂಭ. ಅಂದಿನಿಂದ ಒಂದು ದಿನವೂ ಎಡೆಬಿಡದೇ ಪ್ರತಿ ದಿನ ಕನಿಷ್ಠ ಒಂದೊಂದು ಬರಹ. ಆ ರೀತಿ ನನ್ನ ಎಲ್ಲ ಕಾದಂಬರಿಗಳೂ, ಎಲ್ಲ ಕಥೆಗಳೂ, ಅನೇಕ ಲೇಖನಗಳೂ ಪ್ರಕಟವಾಗಿವೆ. ನನಗೆ ಆಗುತ್ತಿದ್ದ ಸಂತೋಷವೇನೆಂದರೆ ನನ್ನ ಬರಹದ ಒಂದು ಕಂತು ಪ್ರಕಟವಾದೊಡನೆ ಓದುಗರಿಂದ ಬರುತ್ತಿರುವ ಪ್ರತಿಕ್ರಿಯೆಗಳು. ಅವರ ಆನಂದ, ದುಃಖ, ಕೋಪ ಎಲ್ಲವನ್ನೂ ಹೊರಹಾಕುತ್ತಾರೆ. ನನ್ನ ಅನೇಕ ಕಾದಂಬರಿ ನಾಯಕ ನಾಯಕಿಯರ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟವರಿದ್ದಾರೆ. ಇಂದು ನನಗೆ 32 ಲಕ್ಷಕ್ಕೂ ಹೆಚ್ಚು ಓದುಗರಿದ್ದಾರೆ. ಧನ್ಯವಾದಗಳು ಶ್ರೀ ರಂಜಿತ್ ಸಿಂಹ ಮತ್ತು ಶ್ರೀ ಅಕ್ಷಯ್ ಬಾಳೆಗೆರೆ" - ಯತಿರಾಜ್ ವೀರಾಂಬುಧಿ ಸಾಮಾನ್ಯ ಓದುಗಳಾಗಿದ್ದ ನಾನು ಇಂದು ಒಬ್ಬ ಲೇಖಕಿಯಾಗಿ ಗುರುತಿಸಿಕೊಂಡು ನನ್ನದೇ ಆದ ಅಭಿಮಾನಿಗಳನ್ನು ಅವರ ಪ್ರೀತಿ ವಿಶ್ವಾಸವನ್ನು ಹೊಂದಿದ್ದೇನೆ ಎಂದರೆ ಅದು ಸಾಧ್ಯವಾಗಿದ್ದು ಪ್ರತಿಲಿಪಿಯಿಂದ. ಈಗ ಪ್ರತಿಲಿಪಿ ನನ್ನ ಜೀವನದ ಅತಿ ಬಹು ಮುಖ್ಯ ಭಾಗವಾಗಿದೆ. ಹಾಗೆ ಆರ್ಥಿಕವಾಗಿಯೂ ಸಬಲಳನ್ನಾಗಿ ಮಾಡಿದೆ. ಇಂಥ ಒಂದು ಪ್ರತಿಲಿಪಿ ವೇದಿಕೆಗೆ ಹತ್ತು ವರ್ಷಗಳು ತುಂಬಿದೆ ಹೀಗೆ ನಿರಂತರವಾಗಿ ಸಾಗಲಿ ಎಂದು ಬಯಸುತ್ತೇನೆ. - ಶ್ರೀ ಮಂಗಳ ಶೆಟ್ಟಿ ಪ್ರತಿಲಿಪಿ ಬರೀ ಬರವಣಿಗೆಗಳನ್ನು ಸ್ವಯಂ ಪ್ರಕಾಶನಗೊಳಿಸುವ ವೇದಿಕೆ ಮಾತ್ರ ಅಲ್ಲ ನಮ್ಮ ಜ್ಞಾನಕ್ಕೆ ಒರೆ ಹಚ್ಚಿ ನಮ್ಮಲ್ಲಿ ಸುಪ್ತವಾಗಿ ಅಡಗಿರುವ ಅನೇಕಾನೇಕ ಪದಗಳನ್ನು ಹೊರ ತಂದು ಅರ್ಥ ತಿಳಿಸಿ, ನಮ್ಮ ಜ್ಞಾನಕ್ಕೆ ಸಾಣೆ ಹಿಡಿದ ಒಂದು ವೇದಿಕೆ. ಈ ಪ್ರತಿಲಿಪಿಯಿಂದಾಗಿ ಎಲ್ಲೋ ಹಳೆಯ ಪುಟಗಳಲ್ಲಿ ಕೊಳೆತು ಹೋಗಿದ್ದ ನನ್ನ ಬರವಣಿಗೆ ಮತ್ತೆ ಚಿಗುರೊಡೆದು ನಳನಳಿಸಿ ಸಾವಿರಾರು ಓದುಗರ ಮನದoಗಳದಲ್ಲಿ ಪುಷ್ಪವಾಗಿದ್ದು ನನ್ನ ಸುಕೃತ ಫಲ. ನನ್ನ ಒಂದೊಂದು ಬರಹದಲ್ಲಿ ಬರುವ ಒಂದೊಂದು ವಿಷಯದ ಬಗ್ಗೆ ಕೃಷಿ ಮಾಡಿದಾಗ ಕಲೆ ಹಾಕಿದ ಅದೆಷ್ಟೋ ಮಾಹಿತಿಗಳೆoಬ ದವಸ ಧಾನ್ಯಗಳು ನನ್ನ ಜ್ಞಾನದ ಕಣಜ ತುಂಬಲು ಸಹಾಯವಾಗಿದೆ. ಹಲವಾರು ಬರಹಗಾರರಿಗೆ ಅಥವಾ ಓದುಗರಿಗೆ ತಾನು ನಕ್ಕಾಗ ನಗುವ ಅತ್ತಾಗ ಅಳುವ ಒಂದು ಸಂಗಾತಿ ಈ ಪ್ರತಿಲಿಪಿ. ಈ ಪ್ರತಿಲಿಪಿ ಎನ್ನುವ ಸಂಗಾತಿಗೆ ಹತ್ತನೇ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು - ಕೃಷ್ಣಪ್ರಿಯೆ ಪ್ರತಿಲಿಪಿ ಪ್ರತಿದಿನದ ನನ್ನ ಜೀವನದ ಒಂದು ಭಾಗವೇ ಆಗಿದೆ. ಒಂದು ದಿನ ಪ್ರತಿಲಿಪಿ ಕಡೆ ಹೋಗಿಲ್ಲ ಅಂದ್ರೆ ಏನನ್ನೋ ಕಳ್ಕೊಂಡ ಅನುಭವ. 2019ರಲ್ಲಿ ಪ್ರತಿಲಿಪಿ ನಂಗೆ ಪರಿಚಯವಾಗಿದ್ದು. ಪಕ್ಕದ ಮಹಾರಾಷ್ಟ್ರದ ಪುಣೆಗೆ ಆಗತಾನೇ ಬಂದ ದಿನಗಳು. ಕನ್ನಡ, ತಕ್ಕಮಟ್ಟಿಗೆ ಇಂಗ್ಲಿಷ್ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ ನನಗೆ. ಮನೆಯಲ್ಲಿ ಒಬ್ಬಳೇ ಇದ್ದಾಗ ಮಾತನಾಡೋಕೆ ಕೂಡಾ ಯಾರೂ ಸಿಗದೇ ಸ್ವಚ್ಚಂದವಾಗಿ ಹಾರಾಡ್ಕೊಂಡು ಇದ್ದ ಹಕ್ಕಿಯನ್ನ ತಂದು ಪಂಜರದಲ್ಲಿ ಬಂಧಿಸಿದ ಹಾಗೆ ಆಗಿತ್ತು ನನ್ನ ಪರಿಸ್ಥಿತಿ. ಆಗ ಪರಿಚಯವಾದ ಆಪತ್ಬಾಂಧವನೇ ನನ್ನ ಪ್ರೀತಿಯ ಪ್ರತಿಲಿಪಿ. ಭಾಷೆ ಗೊತ್ತಿಲ್ದೆ ಇದ್ದಾಗ ಈ ಮರಾಠಿ ಜನಗಳ ನಡುವೆ ನನ್ನ ಭಾಷೆಯ ಬಗ್ಗೆ ಇನ್ನಷ್ಟು ಹೆಮ್ಮೆ ಎನಿಸಿದ್ದು ಪ್ರತಿಲಿಪಿಯಿಂದ ಮಾತ್ರ. ಒಂಟಿಯಾಗಿರುವೆ ಅನ್ನಿಸಿದಾಗ ಸ್ನೇಹಿತೆಯರು ಸಿಕ್ಕಿದ್ರು. ಒಂಟಿತನ ಕಳೆಯೋಕೆ ಒಂದು ಮಾರ್ಗ ಮಾಡಿಕೊಟ್ಟಿದ್ದು ಪ್ರತಿಲಿಪಿ. ನನ್ನ ಕೋಪ, ನೋವು ದುಃಖ ಖುಷಿಯ ಎಲ್ಲಾ ಕ್ಷಣಕ್ಕೂ ನಾನು ಪ್ರತಿಲಿಪಿಯನ್ನೇ ಆಶ್ರಯಿಸೋದು. ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕಥೆ ಬರೆದಾಗ ಓದುಗರು ಕಾಮೆಂಟ್ ಮಾಡಿದಾಗ ಅದೂ ನನಗೆ ಸಮಾಧಾನ ಮಾಡಿದ ಹಾಗೆ ಇರತ್ತೆ. ಓದುಗರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳೋಕೆ ಸಹಾಯ ಆಗಿದೆ. ಸೂಪರ್ ಸಾಹಿತಿ ಆರರ ಆವೃತ್ತಿಗೆ ಬರೆದ ಕಥೆ ಓದುಗರ ಆಯ್ಕೆಯ ವಿಜೇತ ಕೃತಿಯಲ್ಲಿ ಕಾಣಿಸಿಕೊಂಡಾಗ ಆದ ಖುಷಿ ಪ್ರತೀ ದಿನ ಹೊಸತನದ ಅನುಭವ ನೀಡತ್ತೆ. ಇನ್ನೂ ಪ್ರತಿಲಿಪಿಯ ಆದಾಯ ಗಳಿಕೆಯ ವಿಚಾರಕ್ಕೆ ಬಂದ್ರೆ, ಸಣ್ಣ ಪುಟ್ಟ ತಿಂಡಿ, ಅಗತ್ಯ ವಸ್ತುಗಳಿಂದ ಹಿಡಿದು ಮೊಬೈಲ್ ರೀಚಾರ್ಜ್'ಗೆ ಕೂಡಾ ಪತಿಯ ಬಳಿ ಕೇಳುತ್ತಿದ್ದವಳಿಗೆ ಈಗ ನನ್ನ ಸಣ್ಣ ಪುಟ್ಟ ಖರ್ಚುಗಳಿಗೆ ಪ್ರತಿ ಲಿಪಿಯಿಂದ ಬರುವ ಆದಾಯ ಸಾಕಷ್ಟು ಸಹಾಯಕಾರಿ ಆಗಿದೆ. ಹೇಳ್ತಾ ಹೋದ್ರೆ ಇನ್ನೂ ಇದೆ ಆದ್ರೆ ಅಷ್ಟನ್ನೂ ಇಲ್ಲಿ ಹೇಳೋಕೆ ಆಗಲ್ಲ. ಊಟ, ನಿದ್ದೆ ಬೇಕಾದ್ರೂ ಸುಲಭಕ್ಕೆ ಬಿಟ್ಟೇನು ಆದ್ರೆ ಪ್ರತಿಲಿಪಿ ಬಿಡೋದು ಹೆಚ್ಚೇ ಕಷ್ಟ. ಅಷ್ಟರ ಮಟ್ಟಿಗೆ ಪ್ರತಿಲಿಪಿ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ - ಚೈತ್ರ ಯೋಗೇಶ್ ಪ್ರತೀ ಕಷ್ಟದಲ್ಲೂ ಸಹ ಅವಕಾಶವನ್ನು ಕಂಡುಕೊಳ್ಳಬಹುದು ಎಂಬಂತೆ ಈ ಪ್ರತಿಲಿಪಿ ಎನ್ನುವ ಪುಟ್ಟ ಪ್ರಪಂಚ ಇಂದು ಬೃಹದಾಕಾರವಾಗಿ ಆಕಾಶದೆತ್ತರಕ್ಕೆ ಬೆಳೆದು ನಮ್ಮಿಂದ ಏನೂ ಸಾಧ್ಯ ಇಲ್ಲ ಎನ್ನುತ್ತಾ ಮನೆಯಲ್ಲಿ ಇದ್ದ ಎಷ್ಟೋ ಗೃಹಿಣಿಯರಿಗೆ ಬದುಕಿನ ದಾರಿ ದೀಪ ಆಗಿದೆ. ದುಡಿಮೆಯ ಶಕ್ತಿ ಆಗಿದೆ. ನಾನೂ ಸಾಧಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಹೆಚ್ಚಿಸುವ ಮಾರ್ಗ ಆಗಿದೆ. ಬೇಸರದಲ್ಲಿ ಇದ್ದಾಗ ನೋವು ಮರೆಯುವ ಮಾರ್ಗ, ಒಬ್ಬಂಟಿಯಾಗಿದ್ದಾಗ ನಾನಿರುವೆ ಜೊತೆಗೆ ಎನ್ನುವ ಧೈರ್ಯ ಕೊಟ್ಟಿದೆ. ಎಷ್ಟೋ ಬರಹಗಾರರಿಗೆ ನಿನ್ನಮೇಲೆ ನಿನಗೆ ನಂಬಿಕೆ ಇದ್ರೇ ಎಲ್ಲವೂ ಸಾಧ್ಯ ಎನ್ನುವ ವಚನ ಪೂರೈಸಿದೆ - ಕಾವ್ಯ ತನ್ಮಯಿ ಬರೆಯುವ ಹವ್ಯಾಸವಿದ್ದ ನನಗೆ ಪ್ರತಿಲಿಪಿ ಒಂದು ಉತ್ತಮ ವೇದಿಕೆಯಾಗಿ ಸಿಕ್ಕಿತ್ತು. ಸುಮಾರು ನಾಲ್ಕು ವರ್ಷಗಳಿಂದ ನಾನು ಪ್ರತಿಲಿಪಿ ಕನ್ನಡದಲ್ಲಿ ಬರೆಯುತ್ತಿದ್ದೇನೆ. ಪ್ರತಿಲಿಪಿ ನನ್ನ ಬರಹ ಮತ್ತು ಭಾಷೆಯ ನೈಪುಣ್ಯತೆಯನ್ನು ಹೆಚ್ಚಿಸಿದೆ. ಹಾಗೆಯೇ ಪ್ರತಿಲಿಪಿ ಆರ್ಥಿಕವಾಗಿಯೂ ನನಗೆ ಬೆಂಬಲವನ್ನು ನೀಡುತ್ತಿದೆ. ಈ ವೇದಿಕೆ ಅನೇಕ ಉತ್ತಮ ಬರಹಗಾರರ ಪರಿಚಯ ಮಾಡಿಕೊಟ್ಟಿದೆ. ಅಲ್ಲದೆ ಓದುಗರ ಪ್ರೀತಿ ಕಾಳಜಿ ಅಭಿಮಾನ ದೊರಕಿದೆ. ಹಾಗೆಯೇ ಓದುಗರು ನನ್ನ ಬರಹವನ್ನು ಓದಿ, ಪ್ರತಿಕ್ರಿಯೆ, ಪ್ರೋತ್ಸಾಹ ನೀಡಿ ಇನ್ನಷ್ಟು ಮತ್ತಷ್ಟು ಬರಹವನ್ನು ಬರೆಯಲು ಪ್ರೇರಣೆ ನೀಡುತ್ತಿದ್ದಾರೆ. ಇದರಿಂದ ಪ್ರತಿಲಿಪಿ ನನ್ನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಈ ವೇದಿಕೆ ಇನ್ನಷ್ಟು ಉತ್ತಮ ಬರಹಗಾರರನ್ನು ಈ ಸಮಾಜಕ್ಕೆ ನೀಡಲಿ ಹಾಗೂ ಉತ್ತಮ ಸ್ಥಾನಕ್ಕೆ ಏರಲಿ...! - ವಸುಧಾ ಶಾಸ್ತ್ರಿ ಅನಿಸುತಿದೆ ಯಾಕೋ ಇಂದು, ನನ್ನ ಮನಸಿನ ಮಾತ ನಿಮ್ಮೊಡನೆ ಹೇಳಿಕೊಳ್ಳಬೇಕೆಂದು... ಹೌದು... ನನ್ನ 67 ನೇ ವಯಸ್ಸಿನಲ್ಲಿ ನನಗೆ ಉಂಟಾಗಿದ್ದು ಪ್ರತಿಲಿಪಿಯ ಒಡನಾಟ. ನನ್ನ ಬದುಕಿನ ಮೊದಲ 66 ವರುಷಗಳಲ್ಲಿ, ಅಜ್ಞನಾಗಿದ್ದ ನನ್ನ ಸಾಹಿತ್ಯ ರಚನೆ ಸೊನ್ನೆಯಾಗಿತ್ತು. ಈಗ ನನಗೆ 71 ವರುಷ. ಪ್ರತಿಲಿಪಿಯಲ್ಲಿ ಚಿಕ್ಕ ಪುಟ್ಟ ಲೇಖನ, ಕಥೆ, ಕವನಗಳನ್ನು ಬರೆಯಲು ಶುರುಮಾಡಿದ ಈ 4 ವರುಷಗಳಲ್ಲಿ, ನಾನು 7 ಪುಸ್ತಕಗಳನ್ನು ಪ್ರಕಟಿಸಿದ್ದೇನೆ. ಅವುಗಳಲ್ಲಿ ನನ್ನ ವೃತ್ತಿ ಅನುಭವ ಕಥನ, ಸಣ್ಣ ಕಥೆಗಳು ಹಾಗೂ ಕವನದ ಪುಸ್ತಕಗಳಿವೆ. ನನ್ನ ಸಂಗೀತ ಪಯಣದ ನೆನಪುಗಳ ಪುಸ್ತಕವು ಸದ್ಯದಲ್ಲಿಯೇ 8 ನೇ ಪುಸ್ತಕವಾಗಿ ಲೋಕಾರ್ಪಣೆಯಾಗುವುದರಲ್ಲಿದೆ. ನಾಲ್ಕು ವರುಷಗಳ ಹಿಂದೆ, ನಾನು ಇಷ್ಟು ಪುಸ್ತಕಗಳನ್ನು ಪ್ರಕಟಿಸಬಹುದು ಎಂದು, ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ಅದು ಸಾಧ್ಯವಾದದ್ದಕ್ಕೆ ಪ್ರತಿಲಿಪಿಯೇ ಕಾರಣ. ಪ್ರತಿಲಿಪಿಯಲ್ಲಿ ನಾವು ಬರೆದಿದ್ದನ್ನು ಅತಿ ಸುಲಭವಾಗಿ ನಾವೇ ಪ್ರಕಟಿಸಬಹುದು. ನಮ್ಮ ಬರೆಹ ಪ್ರಕಟವಾದೊಡನೆ, ಆ ಬರೆಹಗಳನ್ನು ಓದಿ ಒಂದಿಷ್ಟು ಪ್ರತಿಕ್ರಿಯೆಗಳು ಬರುತ್ತವೆ. ಲೇಖಕನಿಗೆ, ಇದಕ್ಕಿಂತ ಉತ್ತಮವಾದ ಉತ್ತೇಜನ ಎಲ್ಲಿ ದೊರೆಯಲು ಸಾಧ್ಯ? ನಾವು ಬರೆದು ಆನಂದವನ್ನು ಅನುಭವಿಸಿ, ನಮ್ಮ ಬರೆಹವನ್ನು ಓದಿದವರಿಗೂ ಆನಂದವನ್ನು ಹಂಚುತ್ತೇವೆ! ಅದರ ಜೊತೆಯಲ್ಲಿ, ಪ್ರತಿಲಿಪಿಯಲ್ಲಿ ನಿತ್ಯವೂ, ಕಥೆ ರಚಿಸಲು ನಮಗೊಂದು ವಿಷಯವನ್ನು ನೀಡುತ್ತಾರೆ. ಆ ವಿಷಯವು ನಮಗೆ ಕಥೆ, ಕವನ, ವೈಚಾರಿಕ ಲೇಖನ, ಮುಂತಾದುವನ್ನು ರಚಿಸಲು, ಪ್ರೇರಣೆ ನೀಡುತ್ತದೆ! ಹಾಗಾಗಿಯೇ, ಇಲ್ಲಿಯವರೆಗೂ ನಾನು 418 ಸಣ್ಣ ಕಥೆಗಳನ್ನು ಹಾಗೂ 200 ಕ್ಕೂ ಹೆಚ್ಚು ಕವನಗಳನ್ನು, ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದೇನೆ. ನಿಜಕ್ಕೂ ಇವೆಲ್ಲಾ ನನ್ನ ಸಾಧನೆಯಲ್ಲ. ಇವೆಲ್ಲಾ ನನಗೆ ಸಾಧ್ಯವಾದದ್ದು ನನ್ನ ನೆಚ್ಚಿನ ಪ್ರತಿಲಿಪಿಯಿಂದ, ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ! ಈ ಮೇಲಿನ ಕಾರಣಗಳಿಂದಾಗಿ, ಪ್ರತಿಲಿಪಿಗೆ ನಾನು ಸರ್ವದಾ ಕೃತಜ್ಞನಾಗಿದ್ದೇನೆ. ನನಗೆ ಸಾಹಿತ್ಯ ರಚಿಸುವ ನಿತ್ಯದ ಗೀಳು ಹಚ್ಚಿಸಿದ ಪ್ರತಿಲಿಪಿಗೆ, ನನ್ನ ಒಂದು ಪುಸ್ತಕವನ್ನು ಕೃತಜ್ಞತಾಪೂರ್ವಕವಾಗಿ ಸಮರ್ಪಿಸಿದ್ದೇನೆ. ಪ್ರತಿಲಿಪಿ-ಕನ್ನಡಕ್ಕೆ ಹತ್ತರ ಸಂಭ್ರಮ! ಹತ್ತು ವರುಷವೇನು, ನೂರು, ಸಾವಿರಗಳ ಸಂಭ್ರಮ, ಪ್ರತಿಲಿಪಿಯದ್ದಾಗಲಿ! ಎಂಥ ಅಜ್ಞನಿಗೂ ಬರೆಯಲು ಕಲಿಸುವ ಪ್ರತಿಲಿಪಿಯ ಕೀರ್ತಿ ಜಗದಗಲಕ್ಕೂ ಹರಡಲಿ, ತನ್ಮೂಲಕ ಕನ್ನಡ ಸಾಹಿತ್ಯ ಸೇವೆ ಅಜರಾಮರವಾಗಲಿ, ಅನಂತವಾಗಲಿ ಎಂದು ಮನತುಂಬಿ ಹಾರೈಸುತ್ತೇನೆ. - ವೆಂಕಟೇಶ್ ಎಂ ಟಿಇನ್ನೂ ಹೆಚ್ಚು ತೋರಿಸಿ
- ಸಾಹಿತ್ಯಾಭಿಮಾನಿಗಳಿಗೆ ಪ್ರತಿಲಿಪಿಯ ಸಿ.ಇ.ಓ. ಅವರ ಪತ್ರ13 ಸೆಪ್ಟೆಂಬರ್ 2024ಆತ್ಮೀಯ ಸಾಹಿತ್ಯಾಭಿಮಾನಿಗಳಿಗೆ ನಮಸ್ಕಾರಗಳು, 10 ವರ್ಷಗಳ ಹಿಂದೆ ಅಂದರೆ 14 ಸೆಪ್ಟೆಂಬರ್, 2014 ರಂದು ಪ್ರತಿಲಿಪಿ ವೆಬ್ಸೈಟ್ನ ಮೊದಲ ಸಾರ್ವಜನಿಕ ಬೀಟಾ ಆವೃತ್ತಿಯನ್ನು ಬಿಡುಗಡೆಗೊಳಿಸಿದೆವು. ಆ ಸಮಯದಲ್ಲಿ ನಮ್ಮೊಂದಿಗಿದ್ದದ್ದು ನೂರಾರು ಪ್ರಶ್ನೆಗಳು ಮತ್ತು ಒಂದೇ ಒಂದು ಗುರಿ! ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳಿಗೆ ಯಾವುದೇ ಭಾಷೆಯ ತಡೆ ಇರುವುದಿಲ್ಲ. ನಮ್ಮ ಲೇಖಕ, ಲೇಖಕಿಯರು ತಮ್ಮ ಕಲ್ಪನೆ, ವಿಚಾರ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ದೇಶ, ಭಾಷೆಗಳ ಮಿತಿ ಇಲ್ಲದೇ ವಿಶ್ವಾದ್ಯಂತ ಹಂಚುವಂತಾಗಬೇಕು. ಪ್ರತಿಲಿಪಿ ಅದಕ್ಕೆ ವೇದಿಕೆಯಾಗಬೇಕು ಎಂಬ ಗುರಿ. ಈ ಪಯಣ ಅಷ್ಟು ಸುಲಭವಾದದ್ದೇನೂ ಅಲ್ಲ ಎಂಬುದು ನಮಗೆ ತಿಳಿದಿತ್ತು. ಹಾಗೆಯೇ ನಮ್ಮ ಈ ಮಹತ್ವಾಕಾಂಕ್ಷೆಯನ್ನು ಸಫಲಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಜಯ ಗಳಿಸಿದರೆ ಅದು ಅದ್ಭುತ ಯಶಸ್ಸಾಗಿ ಪರಿಣಮಿಸುವುದರಲ್ಲಿ ಸಂಶಯವಿರಲಿಲ್ಲ. ಈ ಪ್ರಯಾಣ ಇಷ್ಟು ಕಠಿಣ; ಜೊತೆಗೆ ಇಷ್ಟೊಂದು ಜನರ ಪ್ರೀತಿ, ಅಭಿಮಾನ ಗಳಿಸಿಕೊಡುತ್ತದೆಂದು ನಾವು ಭಾವಿಸಿರಲಿಲ್ಲ! ನಿಮ್ಮ ಕತೆಗಳು ಒಂದು ತಿಂಗಳಿನಲ್ಲಿ ನೂರಾರು ಬಾರಿ ಓದಲ್ಪಡುತ್ತಿದ್ದುದರಿಂದ ಹಿಡಿದು; ನಮ್ಮ ಈ ಪ್ರಯಾಣದಲ್ಲಿ ನೂರಾರು ಜನರು ನಮ್ಮೊಂದಿಗೆ ಸೇರುತ್ತಿರುವುದನ್ನು ಸಂಭ್ರಮಿಸಿದ ಕ್ಷಣಗಳು ಅವಿಸ್ಮರಣೀಯ. ಈಗ ನಾವು ಒಂದು ಮಿಲಿಯನ್ಗೂ ಅಧಿಕ ಬರಹಗಾರರ ಕುಟುಂಬವಾಗಿದ್ದು, ನಮ್ಮಲ್ಲಿ ಪ್ರಕಟಗೊಳ್ಳುತ್ತಿರುವ ಬರಹಗಳನ್ನು ಪ್ರತಿವಾರ ನೂರಾರು ಮಿಲಿಯನ್ ಜನರು ಓದುತ್ತಿರುವುದು ಹೆಮ್ಮೆಯೆನಿಸುತ್ತಿದೆ! 3 ವರ್ಷಗಳ ಹಿಂದೆ ನಾವು ಪ್ರತಿಲಿಪಿಯಲ್ಲಿ ಬರೆದು ಪ್ರಕಟಿಸುವ ತಮ್ಮ ಬರಹಗಳಿಂದಲೇ ನಮ್ಮ ಲೇಖಕ/ಲೇಖಕಿಯರು ಆದಾಯ ಗಳಿಕೆಯ ಸೌಲಭ್ಯವನ್ನು ಪರಿಚಯಿಸಿದೆವು. ಇದಕ್ಕೆ ನಿಮ್ಮ ಬೆಂಬಲ ನಿಜಕ್ಕೂ ಅವಿಸ್ಮರಣೀಯವಾದುದು. ನೀವೆಲ್ಲರೂ ಪ್ರತಿಲಿಪಿಯಲ್ಲಿ ಬರೆದು ಪ್ರಕಟಿಸಿ ಓದುಗರ ಮನಗೆಲ್ಲುತ್ತಿದ್ದೀರಿ. ಏಕೆಂದರೆ ನಿಮ್ಮ ಕತೆಯನ್ನು ಅಷ್ಟೊಂದು ಉತ್ಸಾಹದಿಂದ, ಕೌತುಕದಿಂದ ಓದುವ ಓದುಗರ, ಅಭಿಮಾನಿಗಳ ಬಳಗ ನಿಮ್ಮ ಹಿಂದಿದೆ. ಹಿಂದಿನ ತಿಂಗಳು ಅಂತಹ ಅಭಿಮಾನಿ ಓದುಗರು 1.5 ಕೋಟಿಗೂ ಅಧಿಕ ರಾಯಧನವನ್ನು ತಮ್ಮ ನೆಚ್ಚಿನ ಬರಹಗಾರರು ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿರುವುದನ್ನು ನೋಡಿದಾಗ; ಪ್ರತಿಲಿಪಿಯ ಲೇಖಕ/ಲೇಖಕಿಯರು ಮತ್ತು ಅವರ ಕೃತಿಗಳಿಗೆ ಮಾನ್ಯತೆ ಸಿಗಬಹುದೇ ಎಂದು ಹೊರಗಿನವರು ಅನುಮಾನಿಸುತ್ತಿದ್ದದ್ದು ನಿನ್ನೆ ಮೊನ್ನೆ ನಡೆದಂತೆ ತೋರುತ್ತದೆ. ನಾವೀಗ ಐದು ಟಿ.ವಿ. ಶೋಗಳನ್ನು ಹೊಂದಿದ್ದೇವೆ; ಪ್ರತಿಲಿಪಿಯ ಕಥೆಗಳ ಆಧಾರಿತ ವೆಬ್ ಸಿರೀಸ್ಗಳನ್ನು ರಚಿಸಿದ್ದೇವೆ. ಮತ್ತುಈ ಪಯಣ ಎಲ್ಲಿಯೂ ವಿರಮಿಸದೇ ಸಾಗಲಿ ಎನ್ನುವ ಹಂಬಲವನ್ನು ಹೊತ್ತು ನಡೆಯುತ್ತಿದ್ದೇವೆ. ಇದು ನೇರ ಮತ್ತು ಸುಲಲಿತ ಪ್ರಯಾಣವಾಗಿರಲಿಲ್ಲ. ಹಲವು ಬಾರಿ ದಿಕ್ಕುಗಾಣದ ಸ್ಥಿತಿಗಳೂ ಎದುರಾಗಿವೆ. ಇನ್ನಷ್ಟು ಬಾರಿ ಎದುರಾದ ಅಡೆತಡೆಗಳಿಂದ ಮುಗ್ಗರಿಸಿದ್ದೂ ಇದೆ. ಆದರೆ ಸತತ ಪ್ರಯತ್ನ ಮತ್ತು ಪರಿಶ್ರಮದ ಫಲ ಸಿಹಿಯಾಗಿರುತ್ತದೆ ಎಂಬುದರ ಅನುಭವಗಳು ಆಗಿವೆ; ಆಗುತ್ತಿವೆ. ಆ ಸಿಹಿಯಾದ ಫಲ ಉಣಿಸಿದ್ದು ನೀವು! ನಿಮ್ಮ ವಿಶ್ವಾಸ, ಪ್ರೀತಿ, ಅಭಿಮಾನಗಳು ಎಲ್ಲ ಹಂತಗಳನ್ನು ದಾಟಿ ಮುಂದುವರೆಯಲು ಪುಷ್ಟಿ ನೀಡಿದೆ, ನೀಡುತ್ತಲಿದೆ. ಕ್ರಮಿಸುವ ದಾರಿ ಇನ್ನೂ ಬಹಳ ದೂರವಿದೆ. ನಮ್ಮ ಸಾವಿರಾರು ಬರಹಗಾರರು ಬರವಣಿಗೆಯನ್ನು ವೃತ್ತಿಯನ್ನಾಗಿಸಿಕೊಳ್ಳುವ ಮೂಲಕ ಪ್ರತಿ ತಿಂಗಳೂ ಖಚಿತ ಆದಾಯ ಗಳಿಸಿ, ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದನ್ನು ಕಾಣಲು ನಾವು ಬಯಸುತ್ತೇವೆ. ನಮ್ಮಲ್ಲಿ ಬರೆದು ಪ್ರಕಟಿಸಲು ಪ್ರಾರಂಭಿಸಿದ ಸಾವಿರಾರು ಉದಯೋನ್ಮುಖ ಲೇಖಕ/ಲೇಖಕಿಯರು ಪ್ರತಿಲಿಪಿಯ ಹೊರಗೂ ಸಾಕಷ್ಟು ಮನ್ನಣೆ, ಯಶಸ್ಸು ಮತ್ತು ಜನಪ್ರಿಯತೆಯನ್ನು ಈಗಾಗಲೇ ಗಳಿಸುತ್ತಿದ್ದು, ಇದಿನ್ನೂ ಅಧಿಕಗೊಳ್ಳುವ ದಿನಗಳಿಗಾಗಿ ಎದುರು ನೋಡುತ್ತಿದ್ದೇವೆ. ಅವರ ಯಶಸ್ಸನ್ನು ಸಂಭ್ರಮಿಸಲು ಕಾಯುತ್ತಿದ್ದೇವೆ. ನಮ್ಮ ಮುಂದಿನ ಪ್ರಯಾಣದಲ್ಲಿ ನಮ್ಮ ಜೊತೆ ನಿಮ್ಮ ಹೆಜ್ಜೆಗಳೂ ಇರಲಿ ಎಂದು ಬಯಸುತ್ತೇವೆ. ನಿಮ್ಮ ಪ್ರೋತ್ಸಾಹ, ವಿಶ್ವಾಸ, ಅಭಿಮಾನಗಳೇ ಮುಂದಿನ ನಮ್ಮ ಮೈಲುಗಲ್ಲುಗಳಿಗೆ ಅಡಿಪಾಯ. ನಮ್ಮ ಪ್ರಯತ್ನ ನಿರಂತರವಾಗಿರುತ್ತದೆಇನ್ನೂ ಹೆಚ್ಚು ತೋರಿಸಿ
- 'ಸೂಪರ್ ಸಾಹಿತಿ ಅವಾರ್ಡ್ಸ್ : ಸೂಪರ್ 7 ಸೀಸನ್' ಸ್ಪರ್ಧೆಯ ಫಲಿತಾಂಶ22 ಜುಲೈ 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ಕನ್ನಡ ಆಯೋಜಿಸಿದ್ದ ಸೂಪರ್ ಸಾಹಿತಿ ಅವಾರ್ಡ್ಸ್: ಸೂಪರ್ 7 ಸೀಸನ್ ಸ್ಪರ್ಧೆ ಮುಕ್ತಾಯಗೊಂಡಿದ್ದು ಒಳ್ಳೆಯ ಪ್ರತಿಕ್ರಿಯೆ ದೊರಕಿದೆ. ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಒಳ್ಳೆಯ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಎಲ್ಲ ಕೃತಿಗಳು ವಿಭಿನ್ನ ಕಥಾವಸ್ತು, ಕಥಾಹಂದರಗಳನ್ನೊಳಗೊಂಡು ಸ್ಪರ್ಧೆಗೆ ಮೆರಗು ತಂದುಕೊಟ್ಟಿವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರ ಪ್ರಯತ್ನವೂ ಶ್ಲಾಘನೀಯ. ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು. ಕೆಲವು ಕೃತಿಗಳು ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿರಲಿಲ್ಲ. ಅಂತಹ ಕತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿಲ್ಲ. ಉಳಿದ ಕತೆಗಳಲ್ಲಿ ಸರಿಸುಮಾರು ಎಲ್ಲಾ ಕತೆಗಳು ಭಿನ್ನವಾಗಿ ರಚಿಸಲ್ಪಟ್ಟಿದ್ದವು. ಕ್ರೈಮ್ ಥ್ರಿಲ್ಲರ್, ಭಯಾನಕ, ಕೌಟುಂಬಿಕ, ಸಾಮಾಜಿಕ, ಕಾಲ್ಪನಿಕ ಪ್ರೇಮಕತೆಗಳು ಹೀಗೆ ವಿವಿಧ ರೀತಿಯ ಕತೆಗಳು ಸಲ್ಲಿಸಲ್ಪಟ್ಟು ಸ್ಪರ್ಧೆಯ ಉದ್ದೇಶವನ್ನು ಸಾರ್ಥಕಗೊಳಿಸಿವೆ. ಬರಹಗಾರರ ಕೌಶಲ್ಯ ಮತ್ತು ಉತ್ಸಾಹ ಶ್ಲಾಘನೀಯ. ಚಿಹ್ನೆಗಳು, ವ್ಯಾಕರಣ ದೋಷಗಳ ಕುರಿತು ಇನ್ನಷ್ಟು ಗಮನ ಹರಿಸಬೇಕಾಗಿರುವುದು ಅಗತ್ಯ. ಜೊತೆಗೆ ಒಂದು ಕತೆಯನ್ನು ರಚಿಸುವಾಗ ಅಂತ್ಯದವರೆಗೂ ಒಂದು ಸ್ಪಷ್ಟ ಚಿತ್ರಣವನ್ನು ಅಥವಾ ರೂಪುರೇಷೆಯನ್ನು ಹಾಕಿಕೊಂಡರೆ ಗೋಜಲುಗಳಿಲ್ಲದೆ ಅಧ್ಯಾಯಗಳನ್ನು ರಚಿಸಲು, ಧಾರಾವಾಹಿಯನ್ನು ಸುದೀರ್ಘವಾಗಿ ಬರೆಯಲು ಸುಲಭವಾಗಬಹುದು. ಕಥಾಪ್ರವೇಶಕ್ಕೂ ಮುನ್ನ ಹಲವು ರೀತಿಯ ಯೋಜನೆ, ಅಧ್ಯಯನಗಳು ಧಾರಾವಾಹಿ ರಚನೆಯನ್ನು ಪರಿಣಾಮಕಾರಿಯಾಗಿಸುತ್ತವೆ. ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ. ಎಲ್ಲಾ ಬರಹಗಾರರೂ ಸ್ಪರ್ಧೆಗೆ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸುವಂತಾಗಲಿ ಎಂದು ಆಶಿಸುತ್ತೇವೆ. ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು- ಓದುಗರ ಆಯ್ಕೆಯ ಕೃತಿಗಳು ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಕತೆಗಳಲ್ಲಿ; ಸ್ಪರ್ಧೆಯ ಪ್ರಾರಂಭದ ದಿನಾಂಕದಿಂದ ಮುಕ್ತಾಯದ ದಿನಾಂಕದವರೆಗಿನ ಅಂಕಿಅಂಶಗಳ ಆಧಾರದ ಮೇಲೆ, ಈ ಕೆಳಗಿನ ಅಂಶಗಳನ್ನು ಪರಿಗಣಿಸಿ, ಒಟ್ಟಾರೆ ರೇಶಿಯೋ ಪಡೆದು ಓದುಗರ ಆಯ್ಕೆಯ ಕೃತಿಗಳ ಸ್ಥಾನಗಳನ್ನು ತೀರ್ಮಾನಿಸಲಾಗಿದೆ. - ಕೃತಿಯ ಒಟ್ಟಾರೆ ಓದಿನ ಸಂಖ್ಯೆ - ಹೆಚ್ಚು ಓದುಗರಿಂದ ಚರ್ಚಿಸಲ್ಪಡುವ ಕೃತಿ (ಓದುಗರ ಎಂಗೇಜ್ಮೆಂಟ್ ರೇಶಿಯೋ) ಪ್ರಥಮ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಅನಿತಾ ಶಿವಭಕ್ತೆ ಅವರ ಇಬ್ಬನಿ ಕರಗಿತು ದ್ವಿತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶಿಲ್ಪ ಎಂ ಅವರ ಜೋಡಿಹಕ್ಕಿ ತೃತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಮನುಪ್ರಿಯ ಅವರ ನೂರು ಜನ್ಮಕೂ... ನೂರಾರೂ ಜನ್ಮಕೂ ನಾಲ್ಕನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವೀಣಾ ವಿನಾಯಕ ಅವರ ನೀರಿನಲ್ಲಿ ಹುಣ್ಣಿಮೆಯ ಚಂದ್ರಬಿಂಬ ಐದನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವಿದ್ಯಾ ಮೂರ್ತಿ ಅವರ ಕನಸಾಗಿ ಕಾಡುವೆ ಏಕೆ? ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸುಜಲ ಘೋರ್ಪಡೆ ಅವರ ಕಾದಂಬರಿ ಪ್ರೇಮಾನುಬಂಧ ಏಳನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ರಾಘವ್ ವಿಶ್ವಾಸಿ ಅವರ ಲಿಪಿ ಲೇಖಕನೊಬ್ಬನ ಕೊಲೆ ರಹಸ್ಯ ತೀರ್ಪುಗಾರರ ಆಯ್ಕೆಯ ಕೃತಿಗಳು ಓದುಗರ ಆಯ್ಕೆಯ ವಿಜೇತ ಕೃತಿಗಳನ್ನು ಆರಿಸಿದ ನಂತರ ಉಳಿದ ಎಲ್ಲಾ ಕತೆಗಳನ್ನು ತೀರ್ಪುಗಾರರು ಓದಿ; ಭಾಷೆ, ವ್ಯಾಕರಣ, ಕಥಾವಸ್ತು, ಕಥಾಹಂದರ, ಸೃಜನಶೀಲತೆ ಮುಂತಾದ ಮಾನದಂಡಗಳನ್ನು ಆಧರಿಸಿ, ವಿಶ್ಲೇಷಿಸಿ ಅವುಗಳಲ್ಲಿ ಉತ್ತಮವಾದ ಕೃತಿಗಳನ್ನು ವಿಜೇತ ಕೃತಿಗಳಾಗಿ ಆಯ್ಕೆ ಮಾಡಿದ್ದಾರೆ. ಪ್ರಥಮ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪಾರ್ಥಸಾರಥಿ ನರಸಿಂಗ ರಾವ್ ಅವರ ಶ್ರೀಮತಿ ರಾಮರುದ್ರ ಕೃತಿಯ ಕುರಿತು: ಐತಿಹಾಸಿಕ ಅಂಶಗಳನ್ನು ಒಳಗೊಂಡ ಉತ್ತಮ ಕಾಲ್ಪನಿಕ ಕತೆ. ಪ್ರಸ್ತುತ ಕಾಲದ ಅಂಶಗಳ ಜೊತೆಗೆ ಐತಿಹಾಸಿಕ ಕಲ್ಪನೆಯನ್ನು ಜೋಡಿಸಿ ಕತೆಯನ್ನು ಹೆಣೆದ ರೀತಿ ಬಹಳ ಸೊಗಸಾಗಿದೆ. ನಿರೂಪಣೆಯೂ ಮನಮುಟ್ಟುವಂತಿದೆ. ದ್ವಿತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶ್ರೀಷ ಅವರ ನನ್ನುಸಿರು ನಿನಗಾಗಿ ಕೃತಿಯ ಕುರಿತು: ಆಕ್ಷನ್, ಭಾವನಾತ್ಮಕತೆಯನ್ನೊಳಗೊಂಡ ಪ್ರೇಮಕತೆ ಇದಾಗಿದ್ದು ಪ್ರತಿ ಹಂತದಲ್ಲೂ ಕುತೂಹಲ ಉಂಟುಮಾಡುತ್ತ ಸಾಗುತ್ತದೆ. ಕಥಾವಿಷಯ ಸಾಮಾನ್ಯವೆನಿಸಿದರೂ ನಿರೂಪಣೆಯ ಮೂಲಕ ಗಮನ ಸೆಳೆಯುತ್ತದೆ. ತೃತೀಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಉಮಾ ಶಂಕರಿ ಅವರ ಯಾವುದೀ ಹೊಸ ಸಂಚು..? ಕೃತಿಯ ಕುರಿತು: ಹೆಣ್ಣಿನ ಜೀವನದ ಕತೆ ಇದಾಗಿದ್ದು, ದೃಢ ನಿರ್ಧಾರ, ಛಲ ಒಂದು ಹೆಣ್ಣನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಅನೇಕ ಉತ್ತಮ ವಿಚಾರಗಳನ್ನೊಳಗೊಂದು ಇದು ಓದುಗರ ಮನಮುಟ್ಟುತ್ತದೆ. ನಾಲ್ಕನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸಂಧ್ಯಾ ಭಟ್ ಅವರ ಋಣಾನುಬಂಧ ಐದನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಕೃಷ್ಣಪ್ರಿಯೆ ಅವರ ನನ್ನ ನೀನು ಗೆಲ್ಲಲಾರೆ ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪ್ರಜ್ಞಾ ಅವರ ಮೂರನೆಯ ಅಡ್ಡರಸ್ತೆ ಏಳನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಕೌಸಲ್ಯ ಕಾರಂತ್ ಅವರ ಒಲವ ಭಾವಗೀತೆ 77 ಕ್ಕೂ ಅಧಿಕ ಅಧ್ಯಾಯಗಳನ್ನು ರಚಿಸಿದವರ ಯಾದಿ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 77 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 77 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ರಾಜಪತ್ರವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು. ಜೊತೆಗೆ ಪ್ರತಿಲಿಪಿ ತಂಡ ಈ ಕೃತಿಗಳಿಗೆ ವಿಶೇಷ ಮುಖಪುಟ(ಕವರ್ ಚಿತ್ರ)ವನ್ನು ವಿನ್ಯಾಸಗೊಳಿಸುತ್ತದೆ. ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ: ಬನಶಂಕರಿ ಕುಲಕರ್ಣಿ ಅವರ ಉರ್ಮಿಳಾ (ಭಾವನೆಗಳ ಸಂಘರ್ಷ) ಕ್ರಮಸಂಖ್ಯೆ ಕೃತಿ ಕರ್ತೃ 1 ಹೃದಯ ಬಡಿತ ನಿನದೇ ಭಾನು ಹೆಚ್. ಎಫ್. 2 ರಾಯಣ್ಣನ ರತ್ನ ಆಶಾ ಮಹೇಶ್ 3 ನಾ ನಿನಗೆ ಕಾವಲುಗಾರ ಸುಹಾನಿ 4 ನಿಧಿ ಸಿಕ್ಕಾಗ ರತ್ನ ಪಟವರ್ಧನ್ 5 ಲಿಪಿ ಲೇಖಕನೊಬ್ಬನ ಕೊಲೆ ರಹಸ್ಯ ರಾಘವ್ ವಿಶ್ವಾಸಿ 6 ನೂರು ಜನ್ಮಕೂ... ನೂರಾರೂ ಜನ್ಮಕೂ ಮನುಪ್ರಿಯ 7 ಅಂತರಾಳ ಡಾ ರಾಜೇಶ್ವರಿ ಶ್ರೀನಿವಾಸ 8 ಜೋಡಿಹಕ್ಕಿ ಶಿಲ್ಪ ಎಂ 9 ಮೊದಲಿನಿಂದ ಮೋಹಿಸುವೆನು ಮರಳಿ ಬಂದರೆ ಅವಳು ಶ್ರೀ ಭಾಗ್ಯ ಪೂಜಾರಿ 10 ಶ್ರಾವಣದ ಸಿರಿ ಮುಗಿಲು ಅಶೋಕ್ ಕುಮಾರ್ ಜಿ. ಎಸ್. 11 ಕನಸಾಗಿ ಕಾಡುವೆ ಏಕೆ? ವಿದ್ಯಾ ಮೂರ್ತಿ 12 ಒಲವಿನಾಗಮನ... ಜೆ. ಕೆ. 13 ನನ್ನುಸಿರು ನಿನಗಾಗಿ ಶ್ರೀಷ 14 ಯಾವುದೀ ಹೊಸ ಸಂಚು..? ಉಮಾ ಶಂಕರಿ 15 ಒಲವೇ ನೀ ಬಾಡದಿರು ಮಾನಸ ವಿಜಯ್ 16 ನೀರಿನಲ್ಲಿ ಹುಣ್ಣಿಮೆಯ ಚಂದ್ರಬಿಂಬ ವೀಣಾ ವಿನಾಯಕ 17 ಭಾವನವನವೀನ ವಿಜಯ ಭಾರತಿ 18 ಉರ್ಮಿಳಾ (ಭಾವನೆಗಳ ಸಂಘರ್ಷ) ಬನಶಂಕರಿ ಕುಲಕರ್ಣಿ 19 "ದ್ವೇಷಾನಲ"(ಅತೃಪ್ತ ಆತ್ಮದ ಪ್ರತೀಕಾರ) ಮಾಲಾ ಭಟ್ 20 ಮೊದಲನೆ ದಿನವೇ ಒಲಿದೆ... ಮನೋ'ರಮೆ' ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು ಈ ಬಾರಿ ಸಣ್ಣ ಅಂತರದಿಂದ ವಿಜೇತ ಕೃತಿಗಳ ಪಟ್ಟಿಗೆ ಬರಲು ಸಾಧ್ಯವಾಗದ ಕೆಲವು ಧಾರಾವಾಹಿಗಳನ್ನು ಕೆಳಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇವೆ. ಕ್ರಮಸಂಖ್ಯೆ ಕೃತಿ ಕರ್ತೃ 1 ಅವಶೇಷ! ಶಿವಶಂಕರ್ ಎಸ್ ಜಿ 2 ಚಾಂದಿನಿ ನಾಗಲಕ್ಷ್ಮಿ ಪ್ರಸನ್ನ ಕುಮಾರ್ 3 ಸಾಗರದ ಆಚೆ (ಎದೆ ತುಂಬಿ ಹಾಡಿದೆನು) ಶುಭಾ ಶ್ರೀನಾಥ್ 4 ಬದುಕು ಮಾಯೆಯ ಮಾಟ ಲತಾ ರವಿ 5 ಕವಲುದಾರಿ ಲಕ್ಷ್ಮಿ ಗೌಡ 6 ಚಂದ್ರಲೇಖಾ ಪುಷ್ಕರಿಣಿ ಕನ್ನಡತಿ 7 ಬಾಳೆಂಬ ಈ ಪಥದಲ್ಲಿ... ವೇದಾ ಮಂಜುನಾಥನ್ 8 ಜನ್ಮಾಂತರದ ಮೋಹ ಗುಪ್ತ ಗಾಮಿನಿ ಸೂಚನೆ: ಡಿಜಿಟಲ್ ಪ್ರಮಾಣಪತ್ರ ಮತ್ತು ರಾಜಪತ್ರಗಳನ್ನು ಬರಹಗಾರರ ಪ್ರತಿಲಿಪಿ ಪ್ರೊಫೈಲ್ಗೆ ಲಿಂಕ್ ಆಗಿರುವ ಈಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಸ್ಪರ್ಧೆಯ ಕೃತಿಗಳನ್ನು ಒಂದು ವಾರದೊಳಗೆ ಪ್ರತಿಲಿಪಿ ಹೋಮ್ ಪೇಜಿನಲ್ಲಿ ಬ್ಯಾನರ್ ಮೂಲಕ ಪ್ರಚಾರ ಮಾಡಲಾಗುವುದು. ನೀವು ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8 ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 80+ ಅಧ್ಯಾಯಗಳ ಧಾರಾವಾಹಿಯನ್ನು 15 ಅಕ್ಟೋಬರ್ 2024 ರ ಒಳಗೆ ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://kannada.pratilipi.com/event/q9s1uwrfzr ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಧಾರಾವಾಹಿಗಳನ್ನು ಪರಿಣಾಮಕಾರಿ ಮತ್ತು ಆಕರ್ಷಕವಾಗಿ ಬರೆಯಿರಿ14 ಮೇ 2024ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಧಾರಾವಾಹಿಗಳನ್ನು ಪರಿಣಾಮಕಾರಿ ಮತ್ತು ಆಕರ್ಷಕವಾಗಿ ಬರೆಯಿರಿ ಕೆಳಗೆ ನೀಡಲಾಗಿರುವ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡು ಅತ್ಯುತ್ತಮ ಕೃತಿ ರಚಿಸಿ, ಯಶಸ್ಸು ಗಳಿಸಿ: ಕಥಾವಸ್ತು ಮತ್ತು ಪಾತ್ರಪೋಷಣೆ: (1)ಒಂದು ಕಥಾವಸ್ತು/ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿಸುವುದು ಹೇಗೆ? (2)ಉಪಕತೆಗಳು ಮತ್ತು ಪಾತ್ರಪೋಷಣೆ ಮಾಡುವುದು ಹೇಗೆ? (3)ಓದುಗರನ್ನು ಆಕರ್ಷಿಸಲು ಜನಪ್ರಿಯ ಕಥಾವಿಷಯಗಳು; ಕ್ಲಿಫ್'ಹ್ಯಾಂಗರ್ ಮತ್ತು ಕೊಂಡಿಗಳ ಬಳಕೆ ನಿರ್ದಿಷ್ಟ ಪ್ರಕಾರದ ಕತೆಗಳನ್ನು ಬರೆಯುವಿಕೆ: (1)ಪ್ರೀತಿ-ಪ್ರೇಮ ವಿಷಯಾಧಾರಿತ ಕತೆಗಳನ್ನು ಆಸಕ್ತಿದಾಯಕವಾಗಿ ರಚಿಸುವುದು ಹೇಗೆ? (2)ಕೌಟುಂಬಿಕ, ಸಾಮಾಜಿಕ, ಮಹಿಳಾ ಕೇಂದ್ರಿತ ಕೃತಿಗಳನ್ನು ಆಸಕ್ತಿದಾಯಕವಾಗಿ ಹೇಗೆ ರಚಿಸಬಹುದು? (3)ಕಾಲ್ಪನಿಕ(ಫ್ಯಾಂಟಸಿ), ರಹಸ್ಯ, ಭಯಾನಕ ವಿಷಯಾಧಾರಿತ ಕತೆಗಳನ್ನು ಕುತೂಹಲಕಾರಿಯಾಗಿ ರಚಿಸುವುದು ಹೇಗೆ? (4)ಥ್ರಿಲ್ಲರ್ ಧಾರಾವಾಹಿಗಳನ್ನು ಕೌತುಕಭರಿತವಾಗಿಸುವುದು ಹೇಗೆ?? ಬರವಣಿಗೆಯ ತಂತ್ರಗಳು: (1)ಅಧಿಕ ಆದಾಯ ಗಳಿಸುವ ಧಾರಾವಾಹಿಗಳನ್ನು ಬರೆಯುವುದು ಹೇಗೆ? (2)ನಿರೂಪಣಾ ಶೈಲಿ ಮತ್ತು ಸನ್ನಿವೇಶಗಳ ಸೃಷ್ಟಿ, ಘಟನೆಗಳನ್ನು ಜೋಡಿಸುವುದು ಹೇಗೆ? (3)ಅಧ್ಯಾಯಗಳ ರೂಪುರೇಷೆ ಮತ್ತು ಸನ್ನಿವೇಶಗಳನ್ನು ಬರೆಯುವ ವಿಧಾನ (4)ಸಂಭಾಷಣಾ ಶೈಲಿ ಮತ್ತು ಕೃತಿಯ ಮೊದಲ ಅಧ್ಯಾಯವನ್ನು ಆರಂಭಿಸುವ ಬಗೆ (5)ತಿರುವುಗಳು ಮತ್ತು ಕಥಾ ಕೊಂಡಿಗಳನ್ನು ಬಳಸುವುದು; ಕತೆಯನ್ನು ಅಂತ್ಯಗೊಳಿಸುವ ಪರಿ (6)ವಿವಿಧ ಭಾವನೆಗಳನ್ನು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ? ಯೋಜನೆ ರೂಪಿಸುವಿಕೆ ಮತ್ತು ಬರೆಯುವಾಗ ಎದುರಾಗುವ ಸಮಸ್ಯೆಗಳಿಗೆ ಪರಿಹಾರ: (1)ಸತತವಾಗಿ ಬರೆಯಲು ವೇಳಾಪಟ್ಟಿ ತಯಾರಿಸುವುದು ಹೇಗೆ? (2)ಬರೆಯುವಾಗ ಎದುರಾಗುವ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ (3)ರೈಟರ್ಸ್ ಬ್ಲಾಕ್'ಅನ್ನು ಸಮರ್ಧವಾಗಿ ಎದುರಿಸಿ ಧಾರಾವಾಹಿಗಳನ್ನು ವಿಸ್ತರಿಸಲು ಕೆಲವು ವಿಧಾನಗಳು ಪ್ರತಿಲಿಪಿಯಲ್ಲಿ ಸುದೀರ್ಘ ಧಾರಾವಾಹಿಗಳನ್ನು ಬರೆಯುವುದರ ಪ್ರಯೋಜನ: (1)ಪ್ರತಿಲಿಪಿಯು ತನ್ನ ಬರಹಗಾರರಿಗೆ ಸುದೀರ್ಘ ಕೃತಿಗಳನ್ನು ರಚಿಸಲು ಏಕೆ ಪ್ರೇರೇಪಿಸುತ್ತದೆ? (2)ಓದುಗರನ್ನು ನಿಮ್ಮ ಕತೆಯಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಮಾಡುವುದು ಹೇಗೆ? (3)ಟ್ರೆಂಡಿಂಗ್ ಧಾರಾವಾಹಿಗಳ ವಿಶ್ಲೇಷಣೆ (4)ಓದುಗರನ್ನು ಆಕರ್ಷಿಸಬಲ್ಲ ವಿವಿಧ ಬಗೆಯ ಪ್ರಚಾರ ತಂತ್ರಗಳು (5)ಪ್ರತಿಲಿಪಿ ಶಿಫಾರಸ್ಸು ವ್ಯವಸ್ಥೆ(ರೆಕಮಂಡೇಶನ್ ಸಿಸ್ಟಂ) ಹೇಗೆ ಕಾರ್ಯ ನಿರ್ವಹಿಸುತ್ತದೆ? (6)ಪ್ರೀಮಿಯಂ ಧಾರಾವಾಹಿಗಳಿಂದ ಮಾಸಿಕ ಆದಾಯ ಗಳಿಸುವ ಬಗೆ (7)ಸೀಸನ್ಗಳನ್ನು ಬರೆಯುವಿಕೆ (8)ಬೋನಸ್ ಅಧ್ಯಾಯಗಳನ್ನು ಬರೆಯುವುದು ಹೇಗೆ? (9)ದೀರ್ಘ ಧಾರಾವಾಹಿಗಳನ್ನು ರಚಿಸುವುದರ ಪ್ರಯೋಜನಗಳು ಧಾರಾವಾಹಿಗಳನ್ನು ರಚಿಸುವ ಕುರಿತು ವಿಶೇಷ ಮಾಹಿತಿ ಮತ್ತು ಆನ್ಲೈನ್ ತರಬೇತಿಯ ರೆಕಾರ್ಡಿಂಗ್'ಗಳನ್ನು ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: 1.ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0 3.ಪ್ರತಿಲಿಪಿ ಕ್ರಿಯೇಟರ್ಸ್ ಪ್ರೋಗ್ರಾಮ್ 4.ಪ್ರತಿಲಿಪಿ ಕ್ರಿಯೇಟರ್ಸ್ ಪ್ರೋಗ್ರಾಮ್ 2.0 ಇಂದಿನಿಂದಲೇ ಯೋಜನೆಯನ್ನು ರೂಪಿಸಲು ಆರಂಭಿಸಿ!ಈ ರೀತಿಯಾಗಿ ಯೋಜನೆ ರೂಪಿಸಿಕೊಳ್ಳಲು 4-5 ದಿನಗಳ ಕಾಲಾವಕಾಶ ಬೇಕಾಗಬಹುದು. ಆದರೆ ಈ ಯೋಜನೆ ನಿಮ್ಮ ಕಥಾರಚನೆಗೆ ಖಂಡಿತವಾಗಿ ಸಹಾಯ ಮಾಡುತ್ತದೆ.ಈ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿ, ದೀರ್ಘ ಧಾರಾವಾಹಿ ಬರವಣಿಗೆ ನಿಮಗೆ ಎಷ್ಟು ಸರಳ ಮತ್ತು ಸುಲಭವಾಗಿ ತೋರುತ್ತದೆ ಎಂಬುದನ್ನು ನೀವು ಮನಗಾಣುವಿರಿ. ಶುಭವಾಗಲಿ! ಪ್ರತಿಲಿಪಿ ಸ್ಪರ್ಧಾ ವಿಭಾಗಇನ್ನೂ ಹೆಚ್ಚು ತೋರಿಸಿ
- ಸೂಪರ್ ಸಾಹಿತಿ ಅವಾರ್ಡ್ಸ್ | FAQ ಬ್ಲಾಗ್09 ಮೇ 20241. ಈ ಸ್ಪರ್ಧೆಯಲ್ಲಿ ಯಾರು ಭಾಗವಹಿಸಬಹುದು? ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಅಥವಾ ಹೊಂದಿರದ ಎಲ್ಲಾ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. 2. ನನ್ನ ಧಾರಾವಾಹಿಯಲ್ಲಿ ಮುನ್ನುಡಿ, ಪಾತ್ರ ಪರಿಚಯ ಅಥವಾ ಹೆಚ್ಚುವರಿ ಟಿಪ್ಪಣಿಗಳನ್ನು ಪ್ರತ್ಯೇಕ ಅಧ್ಯಾಯಗಳಾಗಿ ಪ್ರಕಟಿಸುವುದನ್ನು ನಾನು ಏಕೆ ತಪ್ಪಿಸಬೇಕು? ನಿಮ್ಮ ಧಾರಾವಾಹಿಯಲ್ಲಿ ಮುನ್ನುಡಿ, ಪಾತ್ರ ಪರಿಚಯ ಮತ್ತು ಹೆಚ್ಚುವರಿ ಟಿಪ್ಪಣಿಗಳನ್ನು ಪ್ರತ್ಯೇಕ ಅಧ್ಯಾಯಗಳಾಗಿ ಪ್ರಕಟಿಸುವುದನ್ನು ತಪ್ಪಿಸುವುದು ಏಕೆ ಉತ್ತಮ ಎಂಬುದು ಇಲ್ಲಿದೆ: (1) ರೀಡರ್ ಎಂಗೇಜ್ಮೆಂಟ್: ಮುಖ್ಯ ಕಥೆಯು ಮೊದಲ ಅಧ್ಯಾಯದಲ್ಲಿ ತಕ್ಷಣವೇ ಪ್ರಾರಂಭವಾಗಬೇಕೆಂದು ಓದುಗರು ನಿರೀಕ್ಷಿಸುತ್ತಾರೆ. ಧಾರಾವಾಹಿಯ ಭಾಗವಾಗಿ ಅಗತ್ಯವಿಲ್ಲದ ವಿಷಯವನ್ನು ಪ್ರಕಟಿಸುವುದರಿಂದ ಕಥೆಯನ್ನು ಓದುವ ಆಸಕ್ತಿಯನ್ನು ಓದುಗರು ಕಳೆದುಕೊಳ್ಳಬಹುದು. (2) ಸಲಹೆ: ನೀವು ಬಯಸಿದರೆ ನಿಮ್ಮ ಮೊದಲ ಅಧ್ಯಾಯವನ್ನು 4-5 ಸಾಲುಗಳ ಮುನ್ನುಡಿ ಅಥವಾ ಪರಿಚಯದೊಂದಿಗೆ ಪ್ರಾರಂಭಿಸಬಹುದು, ನಂತರ ನಿಮ್ಮ ಓದುಗರನ್ನು ಸೆಳೆಯಲು ನಿಮ್ಮ ಕಥೆಯ ಮೊದಲ ದೃಶ್ಯವನ್ನು ನೇರವಾಗಿ ಪ್ರಾರಂಭಿಸಿ. 3. ನನ್ನ ಧಾರಾವಾಹಿಯನ್ನು ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಸೇರಿಸುವುದು ಹೇಗೆ? ನೀವು ಹೊಸ ಧಾರಾವಾಹಿಯನ್ನು ರಚಿಸುವಾಗ ಮೊದಲ 15 ಅಧ್ಯಾಯಗಳು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸಲ್ಪಡುವುದಿಲ್ಲ ಅಂದರೆ ಲಾಕ್ ಆಗುವುದಿಲ್ಲ. 16 ನೆಯ ಅಧ್ಯಾಯ ಪ್ರಕಟಗೊಂಡಾಗ ನಿಮ್ಮ ಧಾರಾವಾಹಿ ತಾನಾಗಿಯೇ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸಲ್ಪಡುತ್ತದೆ. ಮೊದಲ 15 ಅಧ್ಯಾಯಗಳು ಪ್ರಕಟಗೊಂಡಾಗ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಆಯ್ಕೆ ನಿಮಗೆ ಕಾಣಿಸುವುದಿಲ್ಲ. 16 ನೆಯ ಅಧ್ಯಾಯದ ನಂತರ ನಿಮಗೆ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಆಯ್ಕೆ ಕಾಣಿಸುತ್ತದೆ. 16 ನೆಯ ಅಧ್ಯಾಯದಿಂದ ಎಲ್ಲಾ ಅಧ್ಯಾಯಗಳು ಲಾಕ್ ಆಗಲ್ಪಡುತ್ತವೆ ಮತ್ತು ಶಾಶ್ವತವಾಗಿ ಪ್ರತಿಲಿಪಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತವೆ. ಪ್ರೀಮಿಯಂ ಚಂದಾದಾರಿಕೆ, ನಾಣ್ಯಗಳನ್ನು ನೀಡುವಿಕೆ ಅಥವಾ ಮರುದಿನದವರೆಗೆ ಕಾಯುವುದರ ಮೂಲಕ ಓದುಗರು ನಿಮ್ಮ ಧಾರಾವಾಹಿಯ ಅಧ್ಯಾಯಗಳನ್ನು ಅನ್ಲಾಕ್ ಮಾಡಲು ಸಾಧ್ಯವಾಗುತ್ತದೆ. 4. ನಾನು ಗೋಲ್ಡನ್ ಬ್ಯಾಡ್ಜ್ ಹೊಂದಿಲ್ಲ, ಏನು ಮಾಡಬೇಕು? ನೀವು ಗೋಲ್ಡನ್ ಬ್ಯಾಡ್ಜ್ ಹೊಂದಿಲ್ಲದಿದ್ದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಯನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸಬಹುದು. ಸ್ಪರ್ಧೆಗೆ ಕೃತಿಯನ್ನು ಕಳುಹಿಸುವ ಅಂತಿಮ ದಿನಾಂಕದೊಳಗೆ ನೀವು ನಿಮ್ಮ ಪ್ರೊಫೈಲ್ ನಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆದರೆ ನಿಮ್ಮ ಕೃತಿ 15 ಅಧ್ಯಾಯಗಳ ನಂತರ ಸ್ವಯಂಚಾಲಿತವಾಗಿ ಪ್ರತಿಲಿಪಿ ಪ್ರೀಮಿಯಂಅನ್ನು ಸೇರುತ್ತದೆ. ಅಕಸ್ಮಾತ್ ನೀವು ಗೋಲ್ಡನ್ ಬ್ಯಾಡ್ಜ್ ಪಡೆಯದಿದ್ದರೂ ಕೃತಿಯು ಸ್ಪರ್ಧೆಗೆ ಪರಿಗಣಿಸಲ್ಪಡುತ್ತದೆ. ಸ್ಪರ್ಧೆಗೆ ಕೃತಿಯನ್ನುಧಾರಾವಾಹಿರೂಪದಲ್ಲಿ ಪ್ರಕಟಿಸಲು ಪ್ರಾರಂಭಿಸಿದ ಬಳಿಕ, ನೀವು ನಿಮ್ಮ ಪ್ರೊಫೈಲ್ ನಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿದಲ್ಲಿ; ಮತ್ತು ಆ ಬಳಿಕವೂ ನಿಮ್ಮ ಕೃತಿ ಸ್ವಯಂಚಾಲಿತವಾಗಿ ಸಬ್ಸ್ಕ್ರಿಪ್ಷನ್ ವಿಭಾಗಕ್ಕೆ ಸೇರ್ಪಡೆಯಾಗದಿದ್ದರೆ, 16 ನೆಯ ಅಧ್ಯಾಯದ ನಂತರ ನೀವು ಈ ಕೆಳಗಿನ ವಿಧಾನವನ್ನು ಅನುಸರಿಸುವುದರ ಮೂಲಕ ಕೃತಿಯನ್ನು ಪ್ರೀಮಿಯಂಗೆ ಸೇರಿಸಬಹುದು: 1: ಪ್ರತಿಲಿಪಿ ಅಪ್ಲಿಕೇಶನ್ನಿನ ಹೋಂ ಪೇಜಿನಲ್ಲಿ ಕಾಣುವ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 2: ನಿಮ್ಮ ಕೃತಿಯನ್ನು ಎಡಿಟ್ ಮಾಡುವಲ್ಲಿಗೆ ಹೋಗಿ, ಇತರೆ ಮಾಹಿಗಳನ್ನು ಎಡಿಟ್ ಮಾಡಿ ಎನ್ನುವಲ್ಲಿಗೆ ಹೋಗಿ; 3: ಸಬ್ಸ್ಕ್ರಿಪ್ಷನ್ ಸೌಲಭ್ಯಕ್ಕೆ ಸೇರಿಸಿ ಎಂಬಲ್ಲಿ ಹೌದು ಎಂದು ಆಯ್ಕೆ ಮಾಡಿ. ನಿಮ್ಮ ಕೃತಿ 24 ಗಂಟೆಗಳಲ್ಲಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತದೆ. 5. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವುದು ಹೇಗೆ? ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಸಾಹಿತಿಯಾಗಲು ಎರಡು ಮಾನದಂಡಗಳಿವೆ: 1. ನೀವು ಕನಿಷ್ಠ 200 ಹಿಂಬಾಲಕರನ್ನು ಹೊಂದಿರಬೇಕು. ನಂತರ; 2. ನೀವು ಹಿಂದಿನ 30 ದಿನಗಳಲ್ಲಿ ಕನಿಷ್ಠ 5 ಬರಹಗಳನ್ನು ಪ್ರಕಟಿಸರಬೇಕು. 6. ನನ್ನ ಕೃತಿ ಸ್ಪರ್ಧೆಗೆ ಪರಿಗಣಿತವಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ನಿಮ್ಮ ಕೃತಿ ಸ್ಪರ್ಧೆಗೆ ಪರಿಗಣಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು: (1) ಸ್ಪರ್ಧೆಯ ಕಾಲಾವಧಿಯ ಒಳಗೆ ನಿಮ್ಮ ಧಾರಾವಾಹಿಯ ಎಲ್ಲಾ ಅಧ್ಯಾಯಗಳನ್ನು ಪ್ರಕಟಿಸಬೇಕು: ಸ್ಪರ್ಧೆಯ ಪ್ರಾರಂಭ ಮತ್ತು ಮುಕ್ತಾಯದ ದಿನಾಂಕದೊಳಗೆ ನಿಮ್ಮ ಧಾರಾವಾಹಿಯ ಎಲ್ಲಾ ಅಧ್ಯಾಯಗಳು ಎಲ್ಲ ನಿಯಮಗಳನ್ನು ಪಾಲಿಸಿ ಪ್ರಕಟಗೊಂಡು, ಪೂರ್ಣಗೊಂಡಿರಬೇಕು. ಪ್ರತಿ ಅಧ್ಯಾಯ ಕನಿಷ್ಠ 1000 ಪದಗಳನ್ನು ಹೊಂದಿರಬೇಕು. ಗರಿಷ್ಠ ಪದಸಂಖ್ಯೆಗೆ ಯಾವುದೇ ಮಿತಿಯಿಲ್ಲ. (2) ಸ್ಪರ್ಧೆಯ ಪ್ರಭೇದವನ್ನು ಆಯ್ಕೆ ಮಾಡಬೇಕು: ನಿಮ್ಮ ಕೃತಿಯನ್ನು ಪ್ರಕಟಿಸುವಾಗ ಸ್ಪರ್ಧೆಯ ಪ್ರಭೇದ ಸೂಪರ್ ಸಾಹಿತಿ- 10ನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು. (3) ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಸ್ಪರ್ಧೆಯ ವಿವರಗಳಲ್ಲಿ ನೀಡಿರುವ ಎಲ್ಲಾ ಮಾಹಿತಿಗಳನ್ನು, ನಿಯಮಗಳನ್ನು ಗಮನವಿಟ್ಟು ಓದಿ, ಅರ್ಥೈಸಿಕೊಂಡು ಎಲ್ಲಾ ನಿಯಮಗಳನ್ನು ಪಾಲಿಸಿ ನಿಮ್ಮ ಕೃತಿಯನ್ನು ಪ್ರಕಟಿಸಬೇಕು. 7. ಸ್ಪರ್ಧೆಯ ವಿಜೇತ ಕೃತಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಸ್ಪರ್ಧೆಯ ಮುಕ್ತಾಯದ ದಿನದ ನಂತರ, ಸ್ಪರ್ಧೆಯ ಪ್ರಭೇದದ ಅಡಿಯಲ್ಲಿ ಪ್ರಕಟಿಸಲ್ಪಟ್ಟ ಎಲ್ಲಾ ಕೃತಿಗಳನ್ನು ನಮ್ಮ ತಂಡ ನಮ್ಮ ಸಿಸ್ಟಂ ಸಹಾಯದಿಂದ ಸಂಗ್ರಹಿಸುತ್ತದೆ. ಸಲ್ಲಿಸಲ್ಪಟ್ಟ ಕೃತಿಗಳ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿರುವುದರ ಬಗ್ಗೆ ನಮ್ಮ ತಂಡ ಪರಿಶೀಲಿಸುತ್ತದೆ. ನಂತರ ನಮ್ಮ ನಿರ್ಣಾಯಕರ ಹಾಗೂ ಸಂಪಾದಕರ ತಂಡ ಕೃತಿಯನ್ನು ಓದಿ; ಭಾಷೆ, ವ್ಯಾಕರಣ, ಕಥಾವಸ್ತು, ಕಥಾಹಂದರ, ಸೃಜನಶೀಲತೆ ಮುಂತಾದ ಮಾನದಂಡಗಳನ್ನು ಆಧರಿಸಿ ವಿಜೇತ ಕೃತಿಗಳನ್ನು ಆಯ್ಕೆ ಮಾಡುತ್ತದೆ. 8.ನಾನು ಈಗಾಗಲೇ ಪ್ರಕಟಿಸಿರುವ ಕೃತಿಯ ಮುಂದಿನ ಸೀಸನ್ಅನ್ನು ಸ್ಪರ್ಧೆಗಾಗಿ ಪ್ರಕಟಿಸಬಹುದೇ? ಖಂಡಿತ, ನೀವು ಈಗಾಗಲೇ ಪ್ರತಿಲಿಪಿಯಲ್ಲಿ ಪ್ರಕಟಿಸಿರುವ ಯಾವುದೇ ಕತೆಯ ಮುಂದಿನ ಸೀಸನ್ಅನ್ನು ಸ್ಪರ್ಧೆಗಾಗಿ ಪ್ರಕಟಿಸಬಹುದು. ಈಗಾಗಲೇ ಜನಪ್ರಿಯವಾಗಿರುವ ನಿಮ್ಮ ಕತೆಯ ಮುಂದಿನ ಸೀಸನ್ಅನ್ನು ಪ್ರಕಟಿಸುವುದು ಉತ್ತಮ ಯೋಚನೆ. ಆದರೆ ನಿಮ್ಮ ಪ್ರಸ್ತುತ ಕೃತಿ ಹಿಂದಿನ ಕೃತಿಯ ಮೇಲೆಯೇ ಹೆಚ್ಚು ಅವಲಂಬಿತವಾಗಿರದಂತೆ ನೋಡಿಕೊಳ್ಳುವುದು ಉತ್ತಮ; ಸಾಧ್ಯವಾದಷ್ಟು ತೀರ್ಪುಗಾರರಿಗೆ ಸ್ಪರ್ಧೆಗೆ ಸಲ್ಲಿಸಿರುವ ಕೃತಿಗಳನ್ನು ಓದಿ, ಪರಿಶೀಲಿಸಲು, ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು. 9.ನಾನು ಒಂದೇ ಕೃತಿಯನ್ನು ಎರಡು ಸ್ಪರ್ಧೆಗಾಗಿ ಪ್ರಕಟಿಸಬಹುದೇ? ಒಂದು ಕೃತಿ ಒಂದೇ ಸ್ಪರ್ಧೆಗಾಗಿ! ಪ್ರತಿಯೊಂದು ಸ್ಪರ್ಧೆಯ ಉದ್ದೇಶ, ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಹಾಗಾಗಿ ಒಂದು ಕೃತಿಯನ್ನು ಒಂದೇ ಸ್ಪರ್ಧೆಗಾಗಿ ಸಲ್ಲಿಸಬೇಕು. ಒಂದೇ ಕೃತಿಯನ್ನು ಬೇರೆ ಬೇರೆ ಸ್ಪರ್ಧೆಗಳಿಗೆ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ. 10.ಸ್ಪರ್ಧೆಯ ಫಲಿತಾಂಶವನ್ನು ನಾನು ಎಲ್ಲಿ ನೋಡಬಹುದು? ನೀವು ಸ್ಪರ್ಧೆಯ ಫಲಿತಾಂಶದ ವಿವರಗಳನ್ನು ಬ್ಲಾಗ್ ವಿಭಾಗದಲ್ಲಿ ನೋಡಬಹುದು. ಸ್ಪರ್ಧೆಯ ಫಲಿತಾಂಶಗಳು ಆಯಾ ಸ್ಪರ್ಧೆಯ ವಿವರಗಳಲ್ಲಿ ತಿಳಿಸುವ ದಿನಾಂಕದಂದು ಬ್ಲಾಗ್ ವಿಭಾಗದಲ್ಲಿ ಪ್ರಕಟಗೊಳ್ಳುತ್ತವೆ. ಬ್ಲಾಗ್ ವಿಭಾಗಕ್ಕೆ ಹೋಗಲು- 1. ಪ್ರತಿಲಿಪಿಯ ಹೋಂ ಪೇಜ್'ನಲ್ಲಿ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 2. ಆ ಪುಟದ ಕೆಳಗೆ ಅಂಕಿಅಂಶಗಳು, ಅಗ್ರಮಾನ್ಯ ಸಾಹಿತಿಗಳು ಆಯ್ಕೆಯ ಜೊತೆಗೆ ಬ್ಲಾಗ್ ವಿಭಾಗವನ್ನೂ ಕಾಣಬಹುದು. 3. ಬ್ಲಾಗ್ ವಿಭಾಗಕ್ಕೆ ಹೋಗಿ ಸ್ಪರ್ಧೆಯ ಫಲಿತಾಂಶವನ್ನು ವೀಕ್ಷಿಸಬಹುದು. ಸೂಪರ್ ಸಾಹಿತಿಯಾಗಿ ಗುರುತಿಸಿಕೊಳ್ಳಲು ಸಹಾಯ ಬೇಕೇ? = ಪ್ರತಿಲಿಪಿಯಲ್ಲಿ ಧಾರಾವಾಹಿಯನ್ನು ರಚಿಸುವ ವಿಧಾನವನ್ನು ಹಂತ ಹಂತವಾಗಿ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: ಸ್ವಪ್ರಕಾಶನ ಮಾರ್ಗದರ್ಶಿ = ನಿಮ್ಮ ಕೃತಿಯನ್ನು ರಚಿಸಲು ಟ್ರೆಂಡಿಂಗ್ ಕಥಾಹಂದರಗಳು, ಪಾತ್ರ ಪೋಷಣೆಗೆ ಅಗತ್ಯವಿರುವ ಮಾಹಿತಿಗಳು, ಇತರೆ ಸಂಪನ್ಮೂಲಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: ನಿಮಗಾಗಿ ಕೆಲವು ಸಲಹೆಗಳು : ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಗೆ ಅದ್ಭುತ ಕೃತಿಗಳನ್ನು ರಚಿಸಿ! ನೀವು ಯಾವುದೇ ಸಮಸ್ಯೆ, ಅನುಮಾನಗಳನ್ನು ಹೊಂದಿದ್ದಲ್ಲಿ [email protected] ಗೆ ಈಮೇಲ್ ಕಳುಹಿಸಿ. ನಮ್ಮ ತಂಡ 24 ಗಂಟೆಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಲು ಪ್ರಯತ್ನಿಸುತ್ತದೆ. ಸಾವಿರಾರು ಲೇಖಕರು ಈಗಾಗಲೇ ನಮ್ಮ ಪ್ಲಾಟ್ಫಾರ್ಮ್ನಲ್ಲಿ ತಮ್ಮ ಕೃತಿಗಳ ಪ್ರಕಟಣೆಯ ಮೂಲಕ ಯಶಸ್ಸನ್ನು ಕಂಡುಕೊಂಡಿದ್ದಾರೆ, ತಮ್ಮ ಪ್ರತಿಭೆಯನ್ನು ಆಕರ್ಷಕ ಕಥೆಗಳಾಗಿ ಪರಿವರ್ತಿಸಿ ಆ ಮೂಲಕ ಪ್ರತಿ ತಿಂಗಳೂ ಆದಾಯವನ್ನು ಗಳಿಸುತ್ತಿದ್ದಾರೆ. ನೀವೂ ಅವರೊಳಗೊಬ್ಬರಾಗಲು ಇಲ್ಲಿದೆ ಅವಕಾಶ! ಸ್ಪರ್ಧೆಯಲ್ಲಿ ಭಾಗವಹಿಸಿ ಸಾಹಿತ್ಯ ಲೋಕದಲ್ಲಿ ನಿಮ್ಮದೇ ಛಾಪು ಮೂಡಿಸುವ ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ! ಶುಭವಾಗಲಿ! ಪ್ರತಿಲಿಪಿ ಸ್ಪರ್ಧಾ ವಿಭಾಗಇನ್ನೂ ಹೆಚ್ಚು ತೋರಿಸಿ
- ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯ ‘ಶ್ರೀಮತಿ ಎಚ್. ಜಿ. ರಾಧಾದೇವಿ ಸ್ಮರಣ ಪುರಸ್ಕಾರ’ - ವಿಜೇತರಿಗೆ ಅಭಿನಂದನೆಗಳು!11 ಏಪ್ರಿಲ್ 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಸೂಪರ್ ಸಾಹಿತಿ ಅವಾರ್ಡ್ಸ್-6 ಸ್ಪರ್ಧೆಯಲ್ಲಿ ವಿಶೇಷವಾಗಿ, ಕನ್ನಡದ ಖ್ಯಾತ ಕಾದಂಬರಿಕಾರ್ತಿ ಶ್ರೀಮತಿ ಎಚ್. ಜಿ. ರಾಧಾದೇವಿಯವರ ಸ್ಮರಣಾರ್ಥ ಪುರಸ್ಕಾರ ವಿಭಾಗವನ್ನು ಪರಿಚಯಿಸಲಾಗಿತ್ತು. ಶ್ರೀಮತಿ ಎಚ್. ಜಿ. ರಾಧಾದೇವಿಯವರ ಪುತ್ರಿ ಶ್ರೀಮತಿ ಶ್ರೀಲಕ್ಷ್ಮಿ, ವೀಣಾ ನಾಯಕ್ ಮತ್ತು ಅವರ ಬಳಗದ 11 ತೀರ್ಪುಗಾರರು ಸ್ಪರ್ಧೆಯ ಕೃತಿಗಳನ್ನು ಓದಿ ಶ್ರೀಮತಿ ಎಚ್. ಜಿ. ರಾಧಾದೇವಿ ಸ್ಮರಣ ಪುರಸ್ಕಾರ ವಿಭಾಗದ ವಿಜೇತ ಕೃತಿಗಳನ್ನು ಆಯ್ಕೆ ಮಾಡಿರುತ್ತಾರೆ. ಎಲ್ಲಾ ವಿಜೇತರಿಗೂ ಅಭಿನಂದನೆಗಳು. ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯಲ್ಲಿ ಈ ವಿಶೇಷ ಬಹುಮಾನವನ್ನು ಘೋಷಿಸಿ ನಮ್ಮೊಂದಿಗೆ ಕೈ ಜೋಡಿಸಿರುವ ಶ್ರೀಮತಿ ಶ್ರೀಲಕ್ಷ್ಮಿ ಮತ್ತು ವೀಣಾ ನಾಯಕ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕನ್ನಡದ ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ಎಚ್. ಜಿ. ರಾಧಾದೇವಿಯವರ ಹೆಸರಿನಲ್ಲಿ ನೀಡುತ್ತಿರುವ ಈ ಪುರಸ್ಕಾರವು ಪ್ರತಿಲಿಪಿಯ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಅತ್ಯುತ್ತಮ ಕೃತಿಗಳನ್ನು ನೀಡುವ ಕನಸು ಹೊತ್ತಿರುವ ನೂರಾರು ಯುವ ಲೇಖಕ/ಲೇಖಕಿಯರಿಗೆ ಆಶೀರ್ವಾದಪೂರ್ವಕ ಪ್ರೋತ್ಸಾಹ ನೀಡಿದಂತಾಗುತ್ತದೆ. ಜೊತೆಗೆ ಸ್ಪರ್ಧೆಯ ಕೃತಿಗಳನ್ನು ಕೂಲಂಕಷವಾಗಿ ಓದಿ, ವಿಶ್ಲೇಷಿಸಿ ವಿಜೇತ ಕೃತಿಗಳನ್ನು ಆಯ್ಕೆ ಮಾಡಿರುವ ಎಲ್ಲಾ ತೀರ್ಪುಗಾರರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ವಿಜೇತ ಕೃತಿಗಳ ವಿವರ: ಪ್ರಥಮ ಬಹುಮಾನ: ಪ್ರಖ್ಯಾ ಅವರ ಮೃತ್ಯೋರ್ಮಾ ಅಮೃತಂಗಮಯ ದ್ವಿತೀಯ ಬಹುಮಾನ: ವೀಣಾ ವಿನಾಯಕ ಅವರ ಇಷ್ಟೇ ಸಾಕು ಈ ಜನ್ಮಕೆ ತೃತೀಯ ಬಹುಮಾನ: ಶಿವಶಂಕರ್ ಎಸ್. ಜಿ ಅವರ ಓ..ನನ್ನ ಚೇತನ! ಸಮಾಧಾನಕರ ಬಹುಮಾನಗಳು: 1. ಸವಿತಾ ರಮೇಶ್ ಅವರ ಮೋಹದ ಬಲೆ 2. ಭಾರತಿ ಕೃತಿಕಾ ಅವರ ನೀನಿಲ್ಲದೆ 3. ನಯನಾ ಭಟ್ ಅವರ ಅನ್ವೇಷಣೆ ನನ್ನೊಲವ ಹುಡುಕಾಟದಲ್ಲಿ 4. ರಮ್ಯಾ ವಿಜಿತ್ ಅವರ ಯದ್ಭಾವಂ ತದ್ಭವತಿ 5. ಅನಿತಾ ಹೆಚ್. ಅವರ ಈ ಪ್ರೀತಿ ಒಂಥರಾ ಸ್ಪರ್ಧೆಯ ವಿಜೇತ ಕೃತಿಗಳ ಕುರಿತು ಆಯೋಜಕರು ಮತ್ತು ತೀರ್ಪುಗಾರರ ಅನಿಸಿಕೆ: ಪ್ರಿಯ ಸ್ನೇಹಿತರೇ, ಖ್ಯಾತ ಲೇಖಕಿ ಶ್ರೀಮತಿ H G ರಾಧಾದೇವಿಯವರ ಹೆಸರಿನಲ್ಲಿ 2019ರಿಂದ ಫೇಸ್ಬುಕ್ ನ ವಿವಿಧ ಸಾಹಿತ್ಯದ ಗ್ರೂಪ್ಗಳಲ್ಲಿ ಕಥಾ ಸ್ಪರ್ಧೆ ನಡೆಸುತ್ತಾ ಬಂದಿದ್ದೆವು. ನಮ್ಮ ತಾಯಿಯವರ ಸಾಹಿತ್ಯದ ಮಾಧ್ಯಮ ಕಾದಂಬರಿ ಆದ್ದರಿಂದ ಕಾದಂಬರಿ ಪ್ರಕಾರದಲ್ಲಿ ಪ್ರತಿಭಾನ್ವಿತ ಉದಯೋನ್ಮುಖ ಲೇಖಕರಿಗೆ ಪ್ರೋತ್ಸಾಹ ಕೊಡುವ ವಿಚಾರ ತಲೆಯಲ್ಲಿ ಬಂತು. ಈ ದಿಸೆಯಲ್ಲಿ ನನ್ನ ಉದ್ದೇಶಕ್ಕೆ ಒತ್ತಾಸೆಯಾಗಿ ನಿಂತದ್ದು ಪ್ರತಿಲಿಪಿ. ಲಕ್ಷಾಂತರ ಓದುಗರು ಹಾಗು ಸಾವಿರಾರು ಬರಹಗಾರರನ್ನು ಒಳಗೊಂಡ ಪ್ರತಿಲಿಪಿ ಸಂಸ್ಥೆಯವರು ತಮ್ಮ 'ಸೂಪರ್ ಸಾಹಿತಿ ಅವಾರ್ಡ್ಸ್ - 6' ಸ್ಪರ್ಧೆಗೆ ಬಂದ ಕಾದಂಬರಿಗಳನ್ನು ನಮಗೆ ಕೊಟ್ಟರು. ನನ್ನ ಸಾಹಿತ್ಯ ಸಂಬಂಧಿ ಪ್ರತಿಯೊಂದು ಕಾರ್ಯಗಳಲ್ಲೂ ಕೈ ಜೋಡಿಸಿ, ನನಗೆ ಬೆಂಬಲ ನೀಡುವ ಶ್ರೀಮತಿ ವೀಣಾ ನಾಯಕ್ ಮೇಡಂ ಅವರು ಈ ಬಾರಿ ಸಹಾ ನನ್ನೊಂದಿಗೆ ಇದ್ದಾರೆ. ಅವರು ತಾವಾಗಿಯೇ ಒಂದು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಅಂತೆಯೇ ನಮ್ಮ ಸ್ಪರ್ಧೆಯ ದ್ವಿತೀಯ ಬಹುಮಾನದ ಪ್ರಾಯೋಜಕರು ಶ್ರೀಮತಿ ವೀಣಾ ನಾಯಕ್ ಅವರು. ನಮ್ಮ ಈ ಕಾರ್ಯ ಯಶಸ್ವಿಯಾಗಲು ನಮ್ಮೊಂದಿಗೆ ಕೈ ಜೋಡಿಸಿದ ನಮ್ಮ ತೀರ್ಪುಗಾರರಿಗೂ ಅನಂತ ಧನ್ಯವಾದಗಳು. ಈ ಕಾದಂಬರಿಗಳನ್ನು ಓದಿ, ಪ್ರತಿಯೊಂದು ಕೃತಿಯಲ್ಲಿನ ಉತ್ತಮ ಅಂಶಗಳನ್ನು ಪಟ್ಟಿಮಾಡಿ, ಅಂಕಗಳನ್ನು ಕೊಟ್ಟು ಬಹುಮಾನಕ್ಕಾಗಿ ಆಯ್ಕೆ ಮಾಡಿದ ನಮ್ಮ ತೀರ್ಪುಗಾರ್ತಿಯರು- 1. ಶ್ರೀಮತಿ ಮಾಲತಿ ಮುದಕವಿ 2. ಶ್ರೀಮತಿ ವಿದ್ಯಾ ಶಿರಹಟ್ಟಿ 3. ಶ್ರೀಮತಿ ರಾಧಾ ಶ್ಯಾಮರಾವ್ 4. ಶ್ರೀಮತಿ ಕವಿತಾ ಅಭಯಂ 5. ಶ್ರೀಮತಿ ಇಂದಿರಾ ಪ್ರಸಾದ್ 6. ಶ್ರೀಮತಿ ಉಷಾ ಗದ್ದಗಿಮಠ 7. ವಿನುತಾ ಹಂಚಿನಮನಿ 8. ಪುಷ್ಪಾ ಹಾಲಭಾವಿ 9. ನಳಿನಿ ಭೀಮಪ್ಪ 10. ದೀಪಿಕಾ ಚಾಟೆ 11. ಶ್ರೀಮತಿ ಅನುಪಮಾ ರವೀಂದ್ರನಾಥ್ ಸಕಾಲದಲ್ಲಿ ಇಷ್ಟೆಲ್ಲ ಕೃತಿಗಳನ್ನು ಓದಿ, ವಿಶ್ಲೇಷಿಸಿದ ನಮ್ಮ ಎಲ್ಲಾ ತೀರ್ಪುಗಾರ್ತಿಯರಿಗೆ ನಮನಗಳು. ಸ್ಪರ್ಧೆಗೆ ಬಂದ ಕೃತಿಗಳ ಓದು ಒಂದು ಅತ್ಯಂತ ವಿಭಿನ್ನ ವಿಶಿಷ್ಟ ಅನುಭವ ಕೊಟ್ಟಿತು. ಬಹುತೇಕ ಲೇಖಕ/ಲೇಖಕಿಯರ ಪ್ರಯತ್ನ ಉತ್ತಮವಾಗಿದೆ. ಹೊಸ ಮಾದರಿಯ ಕಥಾವಸ್ತು, ನಿರೂಪಣೆಯಲ್ಲಿ ಹೊಸತನ, ಇಂದಿನ ಸಮಾಜದ ಸಮಸ್ಯೆಗಳ ದರ್ಶನ ಇತ್ಯಾದಿ ಪ್ರತಿಯೊಂದರಲ್ಲೂ ನವೀನತೆ ಇದೆ. ಇನ್ನು ಬಹುಮಾನ ವಿಜೇತ ಕೃತಿಗಳ ವಿವರ- ಮೊದಲ ಬಹುಮಾನ ಪಡೆದ ಪ್ರಖ್ಯಾ ಅವರ ಮೃತ್ಯೋರ್ಮ ಅಮೃತಂಗಮಯ ಕಾದಂಬರಿಯ ವಸ್ತುವಿಷಯವಾದ ಸಸ್ಯ ಶಾಸ್ತ್ರ, ಕಾಪಿ ರೈಟ್ ಆಕ್ಟ್ ವಗೈರೆ ವಿಷಯವೂ ಹೊಸದು. ಅದನ್ನು ಪ್ರಸ್ತುತ ಪಡಿಸಿರುವ ರೀತಿ ಕೂಡ ಚೆನ್ನಾಗಿದೆ. ನಡು ನಡುವೆ ಇರುವ ಟ್ವಿಸ್ಟ್ ಗಳೂ ಕಥೆಯ ಆಕರ್ಷಣೆ ಹೆಚ್ಚಿಸಿವೆ ಆದ್ದರಿಂದಲೇ ಈ ಕಾದಂಬರಿಗೆ ಪ್ರಥಮ ಬಹುಮಾನ. ಇನ್ನು ಎರಡನೇ ಬಹುಮಾನ ಪಡೆದ ವೀಣಾ ವಿನಾಯಕ್ ಅವರ ಇಷ್ಟೇ ಸಾಕು ಈ ಜನ್ಮಕೆ ಕಾದಂಬರಿಯ ಶೈಲಿ ತುಂಬಾನೇ ಚೆನ್ನಾಗಿದೆ . ಮಲೆನಾಡಿನ ಬದುಕಿನ ಸರಳ ಸುಂದರ ಚಿತ್ರಣ. ಸಿರಿವಂತ, ಬಡ ಕುಟುಂಬ, ಹಳ್ಳಿ - ಪಟ್ಟಣ, ಆಧುನಿಕ - ಸಾಂಪ್ರದಾಯಿಕ ಎರಡೂ ಕುಟುಂಬಗಳ ಚಿತ್ರಣ ಇಲ್ಲಿದೆ. ಮೂರನೇ ಬಹುಮಾನ ಪಡೆದ ಜಿ. ಎಸ್. ಶಿವಶಂಕರ್ ಅವರ ಓ ನನ್ನ ಚೇತನ ಕಾದಂಬರಿಯ ವಸ್ತು ಹಾಗು ನಿರೂಪಣೆ ಎರಡೂ ಹೊಸದು, ಅಮೆರಿಕಾದಲ್ಲಿ ಕೆಲಸ ಮಾಡುವ ಒಬ್ಬ ಭಾರತೀಯ, ಆತ ಭೌತ ಶಾಸ್ತ್ರದ ಪ್ರಾಧ್ಯಾಪಕ. ಪರಕಾಯ ಪ್ರವೇಶವನ್ನು ವೈಜ್ಞಾನಿಕವಾಗಿ ಸಾಧಿಸಿ, ಲೋಕ ಕಲ್ಯಾಣಕ್ಕಾಗಿ ಅದನ್ನು ಬಳಸುವುದು ಈ ಕಥಾವಸ್ತುವಿನ ಪರಿಕಲ್ಪನೆಯೇ ಹೊಚ್ಚ ಹೊಸದು. ಟಿವಿ ವರದಿಗಾರನೊಬ್ಬ ಈ ರಹಸ್ಯದ ಬೆನ್ನು ಹತ್ತಿ ಶೋಧಿಸಲು ಯತ್ನಿಸುವುದು ಕಥೆಗೆ ಕುತೂಹಲಕಾರಿ ಟ್ವಿಸ್ಟ್ ನೀಡಿದೆ. ಈ ಮೂರೂ ಕಾದಂಬರಿಗಳಲ್ಲದೆ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಸಮಾಧಾನ ಬಹುಮಾನಕ್ಕೆ ಪಾತ್ರವಾದ ಐದು ಕಾದಂಬರಿಗಳು ಸಹಾ ಇವೆ. ಸಿಂಗಲ್ ಪೇರೆಂಟ್ ಆಗಿ ಬದುಕಲು ನಿರ್ಧರಿಸುವ ಹೆಣ್ಣಿನ ಸ್ವಾಭಿಮಾನದ ಕಥೆ ಚಿತ್ರಿಸುವ ಸವಿತಾ ರಮೇಶ್ ಅವರ ಮೋಹದ ಬಲೆ. ತೀರ್ಥಯಾತ್ರೆಯ ಸಂದರ್ಭದಲ್ಲಿ ಒಟ್ಟಾದ ಗೃಹಿಣಿಯರ ಕಥೆಗಳ ಗುಚ್ಛವಾದ ಭಾರತಿ ಕೃತ್ತಿಕಾ ಅವರಾ ನೀನಿಲ್ಲದೆ ಕಾದಂಬರಿ; ಇವರೆಲ್ಲರೂ ಮನೆಗಾಗಿ ಏನೆಲ್ಲಾ ಮಾಡಿದರೂ, ಗಂಡನ ಹಾಗು ಸೊಸೆಯಂದಿರು ಅಸಡ್ಡೆಗೆ ಒಳಗಾದವರು. ಆದರೆ ಈಗ ಮಗನ ಸಹಾಯದಿಂದ ಇಲ್ಲಿ ಬಂದು ತಮ್ಮ ವೈಯುಕ್ತಿಕ ಸ್ವಾತಂತ್ರ್ಯ ಎಂಜಾಯ್ ಮಾಡುತ್ತಾರೆ. ಹಾಗು ಮನೆಯವರಿಗೆ ವಿಶೇಷವಾಗಿ ಗಂಡನಿಗೆ ಇವರ ಕೊರತೆ ಅನುಭವವಾಗುವ ಕಥಾ ವಸ್ತುವಿನದು. ನಯನಾ ಭಟ್ ಅವರ ಅನ್ವೇಷಣೆ ಜನ್ಮಾಂತರದ ಪ್ರೇಮಿಗಳ ಕಥೆ. ರಮ್ಯಾ ವಿಜಿತ್ ಅವರ ಯದ್ಭಾವಂ ತದ್ಭವತಿ ಕಾದಂಬರಿಯ ಸಾರಾಂಶ ಬೇರೆಯವರಿಗೆ ಒಳಿತು ಆಶಿಸಿದರೆ, ತಮಗೂ ಒಳಿತೇ ಆಗುತ್ತದೆ ಎನ್ನುವ ನೀತಿ ಇಷ್ಟವಾಯ್ತು. ನಾಯಕಿ ಸರಯುವಿನ ನಿಸ್ವಾರ್ಥ ಮನೋಭಾವ ಹಾಗು ವರ್ಮಾ ಕುಟುಂಬದ ಒಳ್ಳೆತನ ಇಷ್ಟವಾಗುತ್ತದೆ. ಇನ್ನು ಅನಿತಾ ಅವರ ಈ ಪ್ರೀತಿ ಒಂಥರಾ ಕಾದಂಬರಿಯ ಕಥೆಯಲ್ಲಿ ತಾಜಾತನವಿದೆ ಮಾಮೂಲು ಪ್ರೇಮ ಕಥೆಗಳಿಗಿಂತ ಭಿನ್ನವಾಗಿದೆ ಕೂಡ. ಈ ಐದೂ ಕಾದಂಬರಿಕಾರರು ಕಥನ ಕಲೆಯನ್ನು ಇನ್ನೂ ಒಂದಷ್ಟು ಪಳಗಿಸಿಕೊಂಡರೆ ಮತ್ತಷ್ಟು ಎತ್ತರಕ್ಕೆ ಬೆಳೆಯಬಲ್ಲರು. ಇನ್ನು ಸ್ಪರ್ಧೆಗೆ ಬಂದ ಉಳಿದ ಕಾದಂಬರಿಗಳ ಬಗ್ಗೆ ಹೇಳುವುದಾದರೆ, ಬಹಳಷ್ಟು ಬರಹಗಾರರ ಪ್ರಯತ್ನ ಉತ್ತಮವಾಗಿಯೇ ಇತ್ತು. ಕಾದಂಬರಿಯ ವಿಷಯದ ಆಯ್ಕೆಯೇ ಸಾಕು ಇವರೆಲ್ಲ ಇದರಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ ಎನ್ನುವ ಸಾಕ್ಷಿ. ಕೆಲವರು ವ್ಯಾಕರಣದೋಷಗಳು ಹಾಗು ಭಾಷಾ ಶುದ್ಧಿಯ ಕಡೆಗೆ ಇನ್ನಷ್ಟು ಗಮನ ಕೊಡಬೇಕಾಗಿದೆ(ಇದು ಎಲ್ಲರಿಗೂ ಅನ್ವಯಿಸಿ ಹೇಳಿದ್ದಲ್ಲ). ವಿಜೇತರಿಗೆ ಮತ್ತೊಮ್ಮೆ ಅಭಿನಂದನೆಗಳು, ಪ್ರಯತ್ನಿಸಿದವರಿಗೆ ಮುಂದಿನ ಸ್ಪರ್ಧೆಗೆ ಶುಭಹಾರೈಕೆಗಳು. ಸುಂದರ ಸರ್ಟಿಫಿಕೇಟ್ಗಳನ್ನು ಮಾಡಿಕೊಟ್ಟ ಶ್ರೀಮತಿ ವಿದ್ಯಾ ಎಂ ಹೆಗಡೆಯವರಿಗೆ ಧನ್ಯವಾದಗಳು. ಸಹ ಪ್ರಾಯೋಜಕರಾದ ಶ್ರೀಮತಿ ವೀಣಾ ನಾಯಕ್ ಹಾಗು ತೀರ್ಪುಗಾರರಾದ ನಮ್ಮ ಎಲ್ಲಾ ಲೇಖಕಿಯರಿಗೂ ಧನ್ಯವಾದಗಳು. ಕನ್ನಡ ಸಾಹಿತ್ಯವನ್ನು ಎಲೆಕ್ಟ್ರಾನಿಕ್ ಮಾಧ್ಯಮದಲ್ಲೂ ಬೆಳೆಸುತ್ತಿರುವ, ರಾಶಿ ರಾಶಿ ಹೊಸ ಬರಹಗಾರರನ್ನು ಹುಟ್ಟುಹಾಕಿ, ಅವರೆಲ್ಲರಿಗೂ ನಿರಂತರ ಪ್ರೋತ್ಸಾಹ ಕೊಡುತ್ತಿರುವ ಪ್ರತಿಲಿಪಿ ಸಂಸ್ಥೆಗೆ ಅನಂತ ಪ್ರಣಾಮಗಳು.ಇನ್ನೂ ಹೆಚ್ಚು ತೋರಿಸಿ
- ‘ಸೂಪರ್ ಸಾಹಿತಿ ಅವಾರ್ಡ್ಸ್- 6’ ಸ್ಪರ್ಧೆಯ ‘ಪ್ರತಿಭಾವಂತ ಉದಯೋನ್ಮುಖ ಲೇಖಕ'ರಿಗೆ ಅಭಿನಂದನೆಗಳು!09 ಏಪ್ರಿಲ್ 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿಯ ಪ್ರತಿಭಾವಂತ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಲು, ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯಲ್ಲಿ ಪ್ರತಿಭಾವಂತ ಉದಯೋನ್ಮುಖ ಲೇಖಕ ಪ್ರಶಸ್ತಿ- ವಿಭಾಗವನ್ನು ಪರಿಚಯಿಸಲಾಗಿತ್ತು. ಸ್ಪರ್ಧೆಗೆ ಬರಹಗಾರರ ಪ್ರತಿಕ್ರಿಯೆ ಉತ್ತಮ ರೀತಿಯಲ್ಲಿ ವ್ಯಕ್ತವಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೃತಿಯ ಮೂಲಕ ಲಕ್ಷಾಂತರ ಓದುಗರನ್ನು ತಲುಪುವ ಅವಕಾಶವನ್ನು ಈ ಎಲ್ಲಾ ಬರಹಗಾರರು ಪಡೆದುಕೊಂಡಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತದೆ. ಪ್ರತಿಲಿಪಿ ಆಯೋಜಿಸಿದ್ದ 'ಸೂಪರ್ ಸಾಹಿತಿ ಅವಾರ್ಡ್ಸ್ 6' ಸ್ಪರ್ಧೆಯಲ್ಲಿ ಭಾಗವಹಿಸಿ 60 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ಪ್ರಕಟಿಸಿರುವ ಎಲ್ಲಾ ಬರಹಗಾರರ ಪರಿಶ್ರಮ, ಬದ್ಧತೆ ಮತ್ತು ಉತ್ಸಾಹ ಮಾದರಿಯಾಗುವಂಥದ್ದು. ಸಹಜವಾಗಿ ಕತೆ ಬರೆಯುವಾಗ ಸಮಯದ ಮಿತಿ ಇರಲಾರದು; ಆಗ ಬರಹಗಾರರಿಗೆ ಸಮಯದ ಸ್ವಾತಂತ್ರ್ಯ ಅಧಿಕವಿರುವುದರಿಂದ ಹೆಚ್ಚು ಒತ್ತಡವಿರದಂತೆ ತಮ್ಮ ಬರವಣಿಗೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ಇರುತ್ತದೆ. ಆದರೆ ಸ್ಪರ್ಧೆ ಎಂದಾಕ್ಷಣ ಇರುವ ಮನೋಭಾವವೇ ಬೇರೆಯಾಗುತ್ತದೆ. ಕಾಲಾವಕಾಶದಿಂದ ಹಿಡಿದು ಅದಕ್ಕೆ ಓದುಗರು ಸ್ಪಂದಿಸುವ ರೀತಿಯವರೆಗೆ ಎಲ್ಲವನ್ನು ಮಸ್ತಿಷ್ಕದಲ್ಲಿಟ್ಟುಕೊಂಡು ತಮ್ಮ ಮೂಲ ಆಲೋಚನೆಗೆ ಧಕ್ಕೆ ಬರದಂತೆ ಕೃತಿಯನ್ನು ರಚಿಸುವುದು ಒಂದು ಯಜ್ಞವೆಂದೇ ಹೇಳಬಹುದು. ಹಾಗಾಗಿ ಸ್ಪರ್ಧೆಯ ಕಾಲಾವಕಾಶದೊಳಗೆ ತಮ್ಮ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು. ಪ್ರತಿಭಾವಂತ ಉದಯೋನ್ಮುಖ ಲೇಖಕರ ಪಟ್ಟಿ- ಕ್ರ. ಸಂ. ಕೃತಿ ಕರ್ತೃ 1 ಜಡ್ಜ್ ಮೆಂಟ್(ಪ್ರೀತಿ ಕುರುಡಲ್ಲ.....) ರಶ್ಮಿ ಮಂಜುನಾಥ್ 2 ಒಡೆದ ಕನ್ನಡಿ ಲತಾ ರವಿ 3 ಗಿಗೋಳೋ (ಗಂಡು ವೇಶ್ಯೆ) ಸಂಜಯ್ ಪಾಟೀಲ್ 4 ಸಿಂಹ ಪುರಿಯ ರಹಸ್ಯ ಮಾಧವಿ ಹೆಬ್ಬಾರ್ 5 ಘರ್ಷಣೆ ರಾಘವ್ ವಿಶ್ವಾಸಿ 6 ಶ್ವೇತ ವರ್ಣ ಕಮಲಾಕ್ಷಿ ಶೆಟ್ಟಿಗಾರ್ 7 ನಿನಗಾಗಿ ನಾನಿಲ್ಲವೇ? ನಿರ್ಮಲಾ ವಿಘ್ನೇಶ್ ಕೋಟ್ಯಾನ್ 8 ನಿಗೂಢ ಶಿಲ್ಪ ಎಸ್. 9 ಸುಗುಣ ಸುವರ್ಣಾ ಭಟ್ 10 ಮಹಿರ ಪುಷ್ಪಲತಾ ಹರೀಶ್ 11 ಸೌಪರ್ಣಿಕ ಆದರ್ಶ ಪಟೇಲ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬರಹಗಾರರು ಸ್ಪರ್ಧೆಯ ಕುರಿತು ಆಸಕ್ತಿ ತೋರಿಸಿ ಇನ್ನಷ್ಟು ಉತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂಬುದು ನಮ್ಮ ಆಶಯ. ಮತ್ತೊಮ್ಮೆ ಎಲ್ಲಾ ಲೇಖಕರಿಗೂ ಅಭಿನಂದನೆಗಳು. - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- 'ಒಲವ ಇಬ್ಬನಿ' ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ29 ಮಾರ್ಚ್ 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಒಲವ ಇಬ್ಬನಿ' ಧಾರಾವಾಹಿ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ಪ್ರೀತಿ, ಪ್ರೇಮ, ಸಂಬಂಧಗಳ ನಡುವಿನ ಬಾಂಧವ್ಯವನ್ನು ಪ್ರತಿಬಿಂಬಿಸುವ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 10 ಅಧ್ಯಾಯಗಳ ಕಿರು ಕಥಾಸರಣಿಗಳನ್ನು ರಚಿಸುವ ಸ್ಪರ್ಧೆಯಾಗಿತ್ತು. ಪ್ರತಿಲಿಪಿಯ ಹೊಸ ಬರಹಗಾರರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬರಹಗಾರರು ಈ ಸ್ಪರ್ಧೆಯಲ್ಲಿ ತಮ್ಮ ಕಿರು ಧಾರಾವಾಹಿಯನ್ನು ಪ್ರಕಟಿಸುವುದರ ಮೂಲಕ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವತ್ತ ಒಂದು ಹೆಜ್ಜೆ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಯಾಕೆ ಮುಖ್ಯವಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು! ಸರಳವಾಗಿ ಹೇಳುವುದಾದರೆ, ಬರಹಗಾರರಿಗೆ ತಮ್ಮ ಬರವಣಿಗೆಯ ಮೂಲಕವೇ ಆದಾಯ ಗಳಿಸುವ ಅವಕಾಶ ಪಡೆಯಲು ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಮೊದಲ ಹೆಜ್ಜೆ. ಒಲವ ಇಬ್ಬನಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಬರಹಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ಲಕ್ಷಾಂತರ ಓದುಗರ ಪ್ರೀತಿ, ಅಭಿಮಾನ ಗಳಿಸುವಂತಾಗಲಿ ಎಂದು ನಾವು ಆಶಿಸುತ್ತೇವೆ. ಬರವಣಿಗೆಯ ಕುರಿತು ನಿಮಗಿರುವ ಆಸಕ್ತಿ ಮತ್ತು ನಿಯಮಿತವಾಗಿ ಕೃತಿಗಳನ್ನು ರಚಿಸುವ ಬದ್ಧತೆ ಮುಂದಿನ ದಿನಗಳಲ್ಲಿ ನಿಮಗೆ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಸಹಾಯ ಮಾಡಲಿದೆ. ವಿಜೇತ ಕೃತಿಗಳ ವಿವರ ಪ್ರಥಮ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಇಂದು ಅವರ ಹೇಳದೆ ಉಳಿದ ಮಾತುಗಳು ನೂರು ಕತೆಯ ಕುರಿತು: ವಿಭಿನ್ನ ಕಥಾಹಂದರದೊಂದಿಗೆ ಪ್ರೇಮವನ್ನು ತೆರೆದಿಡುವ ಪ್ರಯತ್ನ, ಬಹಳ ಉತ್ತಮವಾಗಿ ಮೂಡಿಬಂದಿದೆ. ಪ್ರೀತಿಗೆ ಸಾವಿಲ್ಲ ಎನ್ನುವ ಮಾತನ್ನು ಹೇಳಿದ ರೀತಿ ಚೆನ್ನಾಗಿದೆ. ದ್ವಿತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಶ್ರೀನಾಥ್ ಫೇಸ್ಬುಕ್ ಅವರ ಒಲವು ಮೂಡಿದಾಗ ಕತೆಯ ಕುರಿತು: ಮೊದಲ ನೋಟದಲ್ಲಿ ಉಂಟಾದ ಪ್ರೀತಿ ಇದ್ದ ತಡೆಗಳನ್ನೆಲ್ಲ ದಾಟಿಕೊಂಡು ಹೇಗೆ ಸಫಲವಾಯಿತು ಎಂಬುದನ್ನು ಲೇಖಕರು ಈ ಕತೆಯಲ್ಲಿ ಅಚ್ಚುಕಟ್ಟಾಗಿ ಹೇಳಿದ್ದಾರೆ. ತೃತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಆಶ್ರಿತ ಕಿರಣ್ ಅವರ ಒಲಿದ ಜೀವ ಕತೆಯ ಕುರಿತು: ಉತ್ತಮ ಕಥಾಹಂದರದ ಆಯ್ಕೆ, ಮತ್ತು ನಿರೂಪಣೆಯೂ ಹೊಂದಿಕೊಂಡು ಕತೆ ಚೆನ್ನಾಗಿ ಮೂಡಿಬಂದಿದೆ. ಪ್ರೀತಿಯ ದಾಂಪತ್ಯ ಗೀತೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ. ನಾಲ್ಕನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಮಂಗಲಾ ಬಾಡನಟ್ಟಿ ಅವರ ಒಲವೇ ಮಂದಾರ ಐದನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಸುನೀತ ಶೆಟ್ಟಿ ಅವರ ಸನಿಹ ರೋಮಾಂಚನ ಆರನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ರೇಖಾ ರಘು ಅವರ ಒಮ್ಮೊಮ್ಮೆ ಹೀಗೂ ಆಗುವುದು ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು ಕ್ರ. ಸಂ ಕರ್ತೃ ಕೃತಿ 1 ಸುಮಾ ಬೆಳಗೆರೆ ನೀನೆ ನನ್ನ ಜೀವ 2 ಅಶೋಕ್ ಕುಮಾರ್ ಜಿ. ಎಸ್ ಬಾಳಿನೊಲುಮೆ 3 ಪ್ರಶ್ನಾ ನಾರಾಯಣ ರೈ ನಿನಗೂ ಒಲವಾಗುವವರೆಗೆ ಕಾಯುವೆ... 4 ಶಿವಗೀತಾ ಹೃದಯದ ಸಪ್ತಸ್ವರ 5 ಪ್ರಪಂಚ ಪ್ರಣಯದ ದಾರಿಯಲ್ಲಿ ಮಿಹಿಕ ಸಿಂಚನ 6 ತನುಶ್ರೀ ಸಿ ನಾಗರಾಜ್ ಬಾಳನೌಕೆ 7 ಎಸ್ ಬದುಕಿನ ಬಣ್ಣವೇ ಶೃತಿಯಾದಾಗ 8 ರಕ್ಷಿತಾ ರಚ್ಚು ಅಚ್ಚು ರಚ್ಚು 9 ಮೌನ ಒಲವ ಇಬ್ಬನಿ 10 ಪಾರಿಜಾತ ಕರುಳ ಬಂಧ ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ: ಬರವಣಿಗೆ ಒಂದು ಕಲಾ ಸಾಧನೆ. ಅದರಲ್ಲಿ ಧಾರಾವಾಹಿಗಳ ರಚನೆ ಬಹಳ ಸಮಯ, ಅಧ್ಯಯನ ಬೇಡುವ ಕೌಶಲ್ಯಗಳಲ್ಲಿ ಒಂದು ಎಂದರೆ ತಪ್ಪಲ್ಲ. ಒಳ್ಳೆಯ ಕಥಾಹಂದರ, ಅಚ್ಚುಕಟ್ಟು ನಿರೂಪಣೆ ಮತ್ತು ಓದುಗರ ಮನಸ್ಸು ಮುಟ್ಟುವ ಸಂಭಾಷಣೆ, ಕುತೂಹತ ಕೆರಳಿಸುವ ಅಂಶಗಳನ್ನು ಸರಿಯಾದ ಹದಕ್ಕೆ ತರುವುದು ಬರಹಗಾರನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಪ್ರತಿ ಅಧ್ಯಾಯಗಳಲ್ಲೂ ಕುತೂಹಲ ಕಾಪಾಡಿಕೊಂಡು ಜೊತೆಗೆ ತನ್ನ ಕಥಾವಸ್ತುವಿನಿಂದ ಹೊರಬರದೇ ಧಾರಾವಾಹಿಗಳು ರಚನೆಯಾಗಬೇಕು; ಅಂದಾಗ ಮಾತ್ರ ಧಾರಾವಾಹಿ ಓದುಗರ ಮನಸ್ಸಿನಲ್ಲಿ ಅದು ಅಚ್ಚೊತ್ತಬಲ್ಲದು. ಹಾಗಾಗಿ ಒಲವ ಇಬ್ಬನಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರು ಧಾರಾವಾಹಿಗಳನ್ನು ರಚಿಸಿರುವ ಎಲ್ಲರಿಗೂ ಅವರ ಪ್ರಯತ್ನಕ್ಕಾಗಿ ಶ್ಲಾಘಿಸಲೇಬೇಕು; ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಉಳಿದಂತೆ ಉತ್ತಮ ಕತೆಗಳು ರಚಿಸಲ್ಪಟ್ಟಿದ್ದವು. ಕೆಲವು ಕತೆಗಳ ವಿಷಯಗಳಲ್ಲಿ ಹೋಲಿಕೆಯೆನಿಸಿದರೂ ನಿರೂಪಣೆಯಲ್ಲಿ ಭಿನ್ನವಾಗಿದ್ದವು. ಒಂದೆರಡು ಕತೆಗಳು ಮಾನವರ ನಡುವಿನ ವಿಭಿನ್ನ, ವಿವಿಧ ಬಂಧಗಳನ್ನು ಬಹಳ ಉತ್ತಮ ರೀತಿಯಲ್ಲಿ ತೆರೆದಿಡುವ ಪ್ರಯತ್ನ ಮಾಡಿವೆ. ಕಥಾ ರಚನೆಯ ಮೂಲಕ ಪ್ರೀತಿ, ಪ್ರೇಮ, ಸಂಬಂಧಗಳ ಸವಿಯನ್ನು ಸಂಭ್ರಮಿಸುವ ಸ್ಪರ್ಧೆಯ ಉದ್ದೇಶ ಸಫಲವಾಗಿದೆ ಎಂದರೆ ತಪ್ಪಿಲ್ಲ. ಆದರೂ ಬರಹಗಾರರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಓದು, ಅಧ್ಯಯನಗಳ ಮೂಲಕ ಹೊಸ ಹೊಸ ಪ್ರಯೋಗಗಳನ್ನು ಮಾಡುವಂತಾಗಲಿ, ಕಥಾವಸ್ತು ಪ್ರೀತಿ-ಪ್ರೇಮ ಎಂದಾದರೂ ಕಥಾಹಂದರದಲ್ಲಿ ಇತರ ಹಲವು ವಿಷಯಗಳಿಂದ ಪ್ರೇರಣೆ ಪಡೆದು ಕತೆಗಳಲ್ಲಿ ಬಳಸಿಕೊಳ್ಳುವಂತಾಗಲಿ ಎಂಬುದು ನಮ್ಮ ಆಶಯ. ಸಲ್ಲಿಸಲ್ಪಟ್ಟಿದ್ದ ಕತೆಗಳಲ್ಲಿ ಭಾಷೆ, ಸಾಹಿತ್ಯ, ನಿರೂಪಣೆ ಮತ್ತು ಮೌಲ್ಯಯುತ ಸಂದೇಶ ಮುಂತಾದ ಮಾನದಂಡಗಳ ಆಧಾರದ ಮೇಲೆ ವಿಜೇತ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ಬರಹಗಾರರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ. - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ಸೂಪರ್ ಸಾಹಿತಿ ಅವಾರ್ಡ್ಸ್- 6 ರಲ್ಲಿ 80+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು!28 ಮಾರ್ಚ್ 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಬಹು ನಿರೀಕ್ಷಿತ ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯ ಫಲಿತಾಂಶ ಕೆಲವು ದಿನಗಳ ಹಿಂದೆ ಘೋಷಣೆಯಾಗಿದೆ! ಇದು ಭಾರತದ ಅತಿದೊಡ್ಡ ಆನ್ಲೈನ್ ಕಥಾ ಸ್ಪರ್ಧೆಯಾಗಿದ್ದು ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ವೇದಿಕೆಯನ್ನೊದಗಿಸುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ 80+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸುವ ಬರಹಗಾರರಿಗೆ ಪ್ರತಿಲಿಪಿ ಕಡೆಯಿಂದ ಖಚಿತ ಬಹುಮಾನ ನೀಡುವುದಾಗಿ ತಿಳಿಸಲಾಗಿತ್ತು. ನಿಗದಿತ ಕಾಲಾವಧಿಯಲ್ಲಿ 80+ ಅಧ್ಯಾಯಗಳನ್ನು ಹೊಂದಿರುವ ಧಾರಾವಾಹಿ ರಚಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಬರಹಗಾರರು ಸಾಕಷ್ಟು ಶ್ರಮ ಮತ್ತು ಸಮಯವನ್ನು ವ್ಯಯಿಸಿ ತಮ್ಮ ಕೌಶಲ್ಯಕ್ಕೆ ರೂಪ ನೀಡಿರುತ್ತಾರೆ. ಶಿಸ್ತುಬದ್ಧ ಮತ್ತು ಯೋಜನಾಬದ್ಧವಾಗಿ ಕೃತಿಯನ್ನು ರಚಿಸಿರುತ್ತಾರೆ. ಸಾಹಿತ್ಯ ಮತ್ತು ಬರವಣಿಗೆಯ ಕುರಿತು ಆಸಕ್ತಿ ಹೊಂದಿರುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ನಿಜವಾಗಿಯೂ, ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು ಈ ಸವಾಲನ್ನು ಸ್ವೀಕರಿಸಿ 80, 100+ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇಂತಹ ಪ್ರತಿಭಾವಂತ ಬರಹಗಾರರನ್ನು ಹೊಂದಿರುವುದು ನಮಗೆ ಹೆಮ್ಮೆಯ ವಿಷಯ. ಇದೇ ರೀತಿಯ ಬದ್ಧತೆ ಮತ್ತು ಪರಿಶ್ರಮದಿಂದ ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಇನ್ನಷ್ಟು ಉತ್ತಮವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಯಾಗಿಸಿದ್ದಕ್ಕೆ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಾಹಿತ್ಯದ ಕುರಿತು ನಿಮಗಿರುವ ಆಸಕ್ತಿ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಈ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿದೆ. ಸ್ಪರ್ಧೆಗೆ ಸಲ್ಲಿಸಲ್ಪಟ್ಟ ಕನ್ನಡದ ಬೃಹತ್ ಧಾರಾವಾಹಿ ಚೈತ್ರಾ ಯೋಗೇಶ್ ಅವರ 216 ಅಧ್ಯಾಯಗಳ ನಿನ್ನೇ ಪ್ರೀತಿಸುವೆ ಎಂದೂ 80+ ಅಧ್ಯಾಯಗಳ ಧಾರಾವಾಹಿ ರಚಿಸಿದವರ ವಿವರ- ಕ್ರ. ಸಂ ಕರ್ತೃ ಕೃತಿ 1 ಸಂಧ್ಯಾ ಭಟ್ ಸೂಕ್ಷ್ಮ 2 ಹಿತ್ಯ ನಾ ನಿನ್ನಾ ಬಿಡಲಾರೆ 3 ಸುಷ್ಮಿತಾ ಕೆ. ಎನ್ ಒಲವಿನ ಅಭಿಸಾರಿಕೆ 4 ಓಂಪ್ರಕಾಶ್ ನಾಯಕ್ ಕೆಂಪು ಜೀಪು 5 ಗೋಪಾಲ ಬಂಗಾರದ ಹುಲಿ 6 ಮಾಲಾ ನಾರಾಯಣ ಕವಲೊಡೆದ ಬದುಕು ನನ್ನದು 7 ಸವಿತಾ ಪ್ರೀತಿಯ ಪಯಣ 8 ಉಮಾ ರಾವ್ ಎಸ್ ಭಟ್ ಯೂಫೋರಿಯಾ 9 ವಿದ್ಯಾ ಮೂರ್ತಿ ನಿನ್ನೊಲವಿನಾಸರೆ 10 ಗಜಲಕ್ಷ್ಮಿ ಗೋವಿಂದ ರಾಜು ಬೆದರಿದ ಅರಗಿಣಿ 11 ಭಾನು ಹೆಚ್. ಎಫ್ ಭಾವ ಶರಧಿ 12 ಭಾರತಿ ಕೃತಿಕಾ ನೀನಿಲ್ಲದೆ 13 ಪ್ರಸನ್ನಾ ವಿ ಚೆಕ್ಕೆಮನೆ ಈ ಹೃದಯ ನಿನಗೇ ಮೀಸಲು 14 ಮನುಪ್ರಿಯ ಒಲವಿನ ಹೂವೇ... 15 ತೀರ್ಥ ಶಿವು ಸದ್ದಿಲ್ಲದೆ ಮೂಡಿದೆ ಪ್ರೇಮ... 16 ವೀಣಾ ವಿನಾಯಕ ಇಷ್ಟೇ ಸಾಕು ಈ ಜನ್ಮಕೆ 17 ಸುಜಲ ಘೋರ್ಪಡೆ ಜೀವನ ಸಂಜೀವನ 18 ಲಕ್ಷ್ಮಿ ಗೌಡ ಕಾರ್ಮೋಡ 19 ಚೈತ್ರಾ ಯೋಗೇಶ್ ನಿನ್ನೇ ಪ್ರೀತಿಸುವೆ ಎಂದೂ 20 ಆರತಿಗುರು ನಿರೀಕ್ಷೆಯ ಜೀವನ 21 ಚೈತ್ರ ಭಟ್ಟ ಸೀತೆಯಂತೆ ಕಾಯುವೆ, ನೀ ರಾಮನಾದರೆ.. 22 ಶಿಲ್ಪ ಎಸ್. ನಿಗೂಢ 23 ಶುಭಾ ಶ್ರೀನಾಥ್ ಕನ್ನಡಿಯಲ್ಲಿ ಕಂಡ ಪ್ರತಿಬಿಂಬ 24 ತುಳಸಿ ಚೈತ್ರಾ ದಯಾನಂದ್ ಕಾ ಬೋರಪ್ಪ ಚೆಲುವೆ ಮೊಗದಿ ಗೆಲುವು ಕಂಡಿತು 25 ಮಾಲಾ ಭಟ್ ಯುಗ್ಮ 26 ವಿಜಯ ಭಾರತಿ ತಲ್ಲಣಿಸದಿರು 27 ಶ್ರೀನಿವಾಸ ಸಂಡೂರು ಎ ಜಾಕಲ್ಸ್ ಡೇ 28 ಕೌಸಲ್ಯ ಕಾರಂತ್ ಬದುಕು ಜಟಕಾಬಂಡಿ ನಮ್ಮ ದೃಷ್ಟಿಯಲ್ಲಿ ನೀವೆಲ್ಲರೂ ಸೂಪರ್ ಸಾಹಿತಿಗಳು! ನಿಮ್ಮಿಂದ ಇನ್ನಷ್ಟು ಉತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ನೀವು ಸೂಪರ್ ಸಾಹಿತಿ ಅವಾರ್ಡ್ಸ್ : ಸೂಪರ್ 7 ಸೀಸನ್ ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 60+ ಅಧ್ಯಾಯಗಳ ಧಾರಾವಾಹಿಯನ್ನು ಮೇ 7 ರ ಒಳಗೆ ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://kannada.pratilipi.com/event/03likagbaw ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ