- ಪ್ರಕಟಣೆಯ ಮಾರ್ಗಸೂಚಿ ನಿಯಮಗಳು26 ಆಗಸ್ಟ್ 2026ಕೃತಕ ಬುದ್ಧಿಮತ್ತೆ (AI) ಬಳಕೆಯ ಕುರಿತ ಮಾರ್ಗಸೂಚಿಗಳು : ವ್ಯಾಕರಣ ಮತ್ತು ಕಾಗುಣಿತವೂ ಸೇರಿದಂತೆ ಭಾಷಾ ಶುದ್ಧತೆಯ ಪರಿಶೀಲನೆಗಾಗಿ ಹಾಗೂ ಕಥೆಗೆ ಸೂಕ್ತ ಚೌಕಟ್ಟು ನಿರ್ಮಿಸಲು, ಕಥಾವಸ್ತುವಿನ ಕುರಿತ ಕಲ್ಪನೆಯನ್ನು ಇನ್ನಷ್ಟು ಸ್ಪಷ್ಟವಾಗಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವುದನ್ನು ಪ್ರತಿಲಿಪಿಯಲ್ಲಿ ಸದಾ ಸ್ವಾಗತಿಸಲಾಗುತ್ತದೆ. ವಿಶೇಷವಾಗಿ ಲೇಖಕರಾಗಿ ನಿಮಗೆ ಕಥೆ ಮುಂದುವರಿಸಲು ಆಲೋಚನೆಗಳು ಅಥವಾ ಕಲ್ಪನೆಗಳು ಹೊಳೆಯದೇ ಇದ್ದಾಗ, ಕೃತಕ ಬುದ್ಧಿಮತ್ತೆಯು ನಿಮ್ಮ ಸೃಜನಶೀಲ ಸಹಾಯಕನಾಗಿ ನೆರವಾಗಬಹುದು. ನಿಮ್ಮ ಕೃತಿಗಳ ಮುಖಪುಟ ಚಿತ್ರಗಳನ್ನು ಸೃಜನಾತ್ಮಕವಾಗಿ ರಚಿಸಿಕೊಳ್ಳಲು ಕೂಡ ನೀವು ಇದನ್ನು ಬಳಸಿಕೊಳ್ಳಬಹುದು. ಮೂಲ ಲೇಖಕರ ಅನುಮತಿ ಇಲ್ಲದೇ, ಹಕ್ಕುಸ್ವಾಮ್ಯ ಹೊಂದಿರುವ ಇತರರ ಯಾವುದೇ ಕೃತಿಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕ ಅನುವಾದಿಸಿ ಪ್ರಕಟಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜೊತೆಗೆ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಕೃತಿಗಳನ್ನು ನಿಮ್ಮದೇ ಸ್ವಂತ ರಚನೆ ಎಂದು ಪ್ರಸ್ತುತಪಡಿಸಬೇಡಿ. ರಚನೆಯನ್ನು ಪ್ರಮುಖವಾಗಿ ಕೃತಕ ಬುದ್ಧಿಮತ್ತೆಯೇ ಮಾಡಿದ್ದರೆ, ನಂತರ ನೀವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದ್ದರೂ ಸಹ ಅದನ್ನು ಕೃತಕ ಬುದ್ಧಿಮತ್ತೆಯಿಂದ ರಚಿತವಾದ ಕೃತಿ ಎಂದೇ ಪರಿಗಣಿಸಲಾಗುತ್ತದೆ. ಅಶ್ಲೀಲ ಹಾಗೂ ಲೈಂಗಿಕ ವಿಷಯಗಳ ಕುರಿತ ಮಾರ್ಗಸೂಚಿಗಳು : ಯಾವುದೇ ಕಥೆ, ಪಾತ್ರ ಅಥವಾ ಕಲಾತ್ಮಕ ಉದ್ದೇಶವಿಲ್ಲದೇ, ಕೇವಲ ಓದುಗರನ್ನು ಲೈಂಗಿಕವಾಗಿ ಪ್ರಚೋದಿಸುವ ಏಕೈಕ ಉದ್ದೇಶ ಹೊಂದಿರುವ ಬರಹಗಳು ಎಷ್ಟೇ ಚನ್ನಾಗಿ ರಚಿತವಾಗಿದ್ದರೂ ಅವುಗಳಿಗೆ ಪ್ರತಿಲಿಪಿ ಅನುಮತಿಸುವುದಿಲ್ಲ. ನಿಮ್ಮ ಕಥೆಯ ಯಾವುದೇ ಭಾಗದಲ್ಲೂ ಲೈಂಗಿಕ ಕ್ರಿಯೆಗಳನ್ನು ಅತಿಯಾಗಿ ಅಥವಾ ನೇರವಾಗಿ ಎಳೆಎಳೆಯಾಗಿ ವರ್ಣಿಸುವುದು ಮತ್ತು ದೇಹದ ಅಂಗಾಂಗಗಳಿಗೆ ಅಶ್ಲೀಲ ಪದಗಳನ್ನು ಬಳಸುವುದು ನಿಷಿದ್ಧ. ಕಥೆಯ ಮುಖಪುಟ ಚಿತ್ರಗಳಲ್ಲಿ ಬೆತ್ತಲೆ ಚಿತ್ರಣ ಅಥವಾ ಲೈಂಗಿಕವಾಗಿ ಪ್ರಚೋದಿಸುವ ಭಂಗಿಗಳನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಕಥೆಯ ಒಳಗಿನ ವಿಷಯ ಏನೇ ಇರಲಿ, ಮುಖಪುಟ ಚಿತ್ರಗಳಿಗೆ ಈ ನಿಯಮವು ಕಡ್ಡಾಯವಾಗಿ ಮತ್ತು ಯಾವುದೇ ವಿನಾಯಿತಿ ಇಲ್ಲದೆ ಅನ್ವಯಿಸುತ್ತದೆ. ಸಮ್ಮತಿ ಇಲ್ಲದ ಲೈಂಗಿಕ ಕ್ರಿಯೆ, ಲೈಂಗಿಕ ದೌರ್ಜನ್ಯ ಅಥವಾ ಅಪ್ರಾಪ್ತರು ಹಾಗೂ ಮಕ್ಕಳನ್ನು ಒಳಗೊಂಡ ಯಾವುದೇ ಲೈಂಗಿಕ ಕೃತ್ಯಗಳನ್ನು ಪ್ರೋತ್ಸಾಹಿಸುವುದು, ವೈಭವೀಕರಿಸುವುದು ಅಥವಾ ಸರಿಯೆಂದು ಬಿಂಬಿಸುವ ಬರಹಗಳನ್ನು ಅತ್ಯಂತ ಗಂಭೀರ ಅಪರಾಧ ಹಾಗೂ ನಮ್ಮ ನೀತಿ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಮೇಲಿನ ಯಾವುದೇ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕೃತಿಯನ್ನು ತೆಗೆದುಹಾಕಲಾಗುತ್ತದೆ, ಓದುಗರಿಗೆ ಕಾಣಿಸದಂತೆ ನಿರ್ಬಂಧಿಸಲಾಗುತ್ತದೆ ಹಾಗೂ ನಿಯಮಗಳನ್ನು ಪದೇ ಪದೇ ಮುರಿದಲ್ಲಿ ಅಂತಹ ಖಾತೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೃತಿಚೌರ್ಯದ ಕುರಿತ ಮಾರ್ಗಸೂಚಿಗಳು : ನೀವು ಸ್ವತಃ ರಚಿಸಿದ ನೈಜ ಕೃತಿಗಳನ್ನು ಮಾತ್ರ ಪ್ರಕಟಿಸಿ. ಪುಸ್ತಕಗಳು, ಚಲನಚಿತ್ರಗಳು, ಕಿರುತೆರೆ ಧಾರಾವಾಹಿಗಳು, ಬ್ಲಾಗ್ಗಳು ಅಥವಾ ಪ್ರಕಟಿತವಾಗಿರುವ ಯಾವುದೇ ಇತರ ಮೂಲಗಳಿಂದ ಪೂರ್ಣವಾಗಿ ಅಥವಾ ಭಾಗಶಃ ವಿಷಯವನ್ನು ನಕಲಿಸಿ, ಕೆಲವು ಪದಗಳನ್ನು ಬದಲಾಯಿಸಿ ನಿಮ್ಮದೇ ಕೃತಿ ಎಂಬಂತೆ ಪ್ರಕಟಿಸಲು ಅನುಮತಿಯಿಲ್ಲ. ಇತರರ ಕೃತಿಯನ್ನು ದೃಶ್ಯದಿಂದ ದೃಶ್ಯಕ್ಕೆ ಮರುಬರಹ ಮಾಡುವುದು ಅಥವಾ ಮೇಲ್ನೋಟದ ವಿವರಗಳನ್ನು ಬದಲಾಯಿಸಿ ಅವರ ಕಥಾವಸ್ತು, ಪಾತ್ರಗಳು ಹಾಗೂ ಕಥೆಯ ಚೌಕಟ್ಟನ್ನು ಮರುಬಳಕೆ ಮಾಡುವುದನ್ನು ಕೂಡ ಕೃತಿಚೌರ್ಯ ಎಂದೇ ಪರಿಗಣಿಸಲಾಗುತ್ತದೆ. ಇನ್ನೊಬ್ಬ ಲೇಖಕರ ಕೃತಿಯನ್ನು ಬೇರೆ ಭಾಷೆಗೆ ಅನುವಾದಿಸಲು ಅಥವಾ ಅಳವಡಿಸಿಕೊಳ್ಳಲು ಅವರ ಲಿಖಿತ ಪೂರ್ವಾನುಮತಿ ಕಡ್ಡಾಯ. ಮೂಲ ಲೇಖಕರಿಗೆ ಗೌರವಪೂರ್ವಕ ಉಲ್ಲೇಖ ನೀಡಿದ್ದರೂ ಸಹ, ಅನುಮತಿ ಇಲ್ಲದೇ ಅನುವಾದವನ್ನು ಪ್ರಕಟಿಸುವುದು ನಿಯಮಗಳ ಉಲ್ಲಂಘನೆಯಾಗುತ್ತದೆ. ಮೂಲ ಲೇಖಕರ ಹೆಸರನ್ನು ಉಲ್ಲೇಖಿಸುವುದು ಅನುಮತಿಗೆ ಪರ್ಯಾಯವಾಗುವುದಿಲ್ಲ. ಮೂಲ ಲೇಖಕರ ಹೆಸರು ಹಾಕಿದರೂ ಸಹ ಇತರರ ಕೃತಿಯನ್ನು ಹಂಚಿಕೊಳ್ಳಲು ಅವರ ಸ್ಪಷ್ಟ ಒಪ್ಪಿಗೆ ಅಗತ್ಯ. ಪ್ರಕಟವಾಗುವ ಪ್ರತಿಯೊಂದು ಕೃತಿಯನ್ನು ಹೋಲಿಕೆಗಾಗಿ ಪ್ರತಿಲಿಪಿಯ ಬೃಹತ್ ಸಂಗ್ರಹದೊಂದಿಗೆ ತಂತ್ರಜ್ಞಾನದ ಮೂಲಕ ಪರಿಶೀಲಿಸಲಾಗುತ್ತದೆ. ಮೂಲ ಲೇಖಕರಿಂದ ಅಧಿಕೃತ ದೂರು ಬರದಿದ್ದರೂ ಸಹ, ಹೋಲಿಕೆ ಕಂಡುಬಂದಲ್ಲಿ ಅಂತಹ ಕೃತಿಗಳನ್ನು ಪರಿಶೀಲಿಸಿ ತೆಗೆದುಹಾಕಬಹುದು. ನಿಯಮ ಉಲ್ಲಂಘಿಸಿದಲ್ಲಿ ಕೃತಿಯನ್ನು ಅಪ್ರಕಟಿತಗೊಳಿಸಲಾಗುವುದು ಅಥವಾ ಶಾಶ್ವತವಾಗಿ ಅಳಿಸಿಹಾಕಲಾಗುತ್ತದೆ ಹಾಗೂ ಪುನರಾವರ್ತಿತ ಉಲ್ಲಂಘನೆಗಳ ಸಂದರ್ಭದಲ್ಲಿ ಪ್ರೊಫೈಲ್ ಅಮಾನತುಗೊಳಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕೃತ ಹಕ್ಕುಸ್ವಾಮ್ಯ ದೂರುಗಳು ಬಂದಲ್ಲಿ ಕೃತಿಚೌರ್ಯ ಮಾಡಿದ ಲೇಖಕರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಬೇಕಾಗಬಹುದು. ದ್ವೇಷಪೂರಿತ ವಿಷಯಗಳ ಕುರಿತ ಮಾರ್ಗಸೂಚಿಗಳು : ಓದುಗರು, ಸಹ ಲೇಖಕರು ಅಥವಾ ಸಾರ್ವಜನಿಕ ವ್ಯಕ್ತಿಗಳು ಸೇರಿದಂತೆ ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಸಮುದಾಯವನ್ನು ಗುರಿಯಾಗಿಸಿ ಅವಮಾನಿಸಲು, ನಿಂದಿಸಲು, ಬೆದರಿಕೆ ಹಾಕಲು ಅಥವಾ ಕಿರುಕುಳ ನೀಡಲು ನಿಮ್ಮ ಕಥೆಗಳು, ವಿಮರ್ಶೆಗಳು, ಸಂದೇಶಗಳು ಅಥವಾ ಪ್ರೊಫೈಲ್ ವಿವರಗಳನ್ನು ಬಳಸಬೇಡಿ. ಅರ್ಥಪೂರ್ಣ ಕಥೆಯ ಭಾಗವಾಗಿ ಜಾತಿ ತಾರತಮ್ಯ, ಕೋಮು ಉದ್ವಿಗ್ನತೆ, ಕೌಟುಂಬಿಕ ದೌರ್ಜನ್ಯ ಅಥವಾ ಬಾಲ್ಯವಿವಾಹದಂತಹ ಸಮಾಜದ ಕಠಿಣ ವಾಸ್ತವಗಳನ್ನು ಕಾಲ್ಪನಿಕ ಕಥೆಗಳಲ್ಲಿ ಮುಕ್ತವಾಗಿ ವಿವರಿಸಬಹುದು. ಇಂತಹ ಹಾನಿಕಾರಕ ಆಚರಣೆಗಳನ್ನು ಬಯಲು ಮಾಡಲು ಅಥವಾ ಪ್ರಶ್ನಿಸಲು ಬರೆಯುವುದು ಮತ್ತು ಅವುಗಳನ್ನು ಪ್ರೋತ್ಸಾಹಿಸುವುದು ಎರಡೂ ಬೇರೆ ಬೇರೆ ಪ್ರಕ್ರಿಯೆಗಳು. ಯಾವುದೇ ವ್ಯಕ್ತಿ, ಸಮುದಾಯ, ಧರ್ಮ, ಜಾತಿ, ಲಿಂಗಗಳ ವಿರುದ್ಧ ಹಿಂಸೆ, ದ್ವೇಷ, ದೌರ್ಜನ್ಯ ಅಥವಾ ತಾರತಮ್ಯವನ್ನು ಸಹಜವೆಂದು ಬಿಂಬಿಸುವುದು, ವೈಭವೀಕರಿಸುವುದು ಅಥವಾ ಸರಿಯೆಂದು ಪ್ರಸ್ತುತಪಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಮ್ಮ ಪ್ರೊಫೈಲ್ ಹೆಸರು, ಚಿತ್ರ ಅಥವಾ ಪರಿಚಯ ವಿವರಗಳು ಸೇರಿದಂತೆ ಎಲ್ಲಿಯೂ ಯಾವುದೇ ವರ್ಗದ ವಿರುದ್ಧ ದ್ವೇಷ ಅಥವಾ ಹಿಂಸೆಯನ್ನು ಪ್ರಚೋದಿಸುವ ನಿಂದನೀಯ ಪದಗಳು, ರಾಜಕೀಯವಾಗಿ ಪ್ರಚೋದನಕಾರಿ ವಿಷಯಗಳು, ದ್ವೇಷಪೂರಿತ ಚಿಹ್ನೆಗಳು ಅಥವಾ ಭಾಷೆಯನ್ನು ಬಳಸಬೇಡಿ. ಕಾಲ್ಪನಿಕವಲ್ಲದ ಬರಹಗಳಲ್ಲಿ ಆಧಾರರಹಿತ ವದಂತಿಗಳನ್ನು ಹರಡುವುದು, ಐತಿಹಾಸಿಕ ಸತ್ಯಗಳನ್ನು ತಿರುಚುವುದು ಅಥವಾ ಒಂದು ಸಮುದಾಯವು ಇನ್ನೊಂದಕ್ಕಿಂತ ಶ್ರೇಷ್ಠ ಅಥವಾ ಕೀಳು ಎಂದು ಬಿಂಬಿಸುವುದನ್ನು ಪ್ರಕಟಿಸಬಾರದು. ಅಪ್ರಾಪ್ತರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು, ಬಾಲ್ಯವಿವಾಹವನ್ನು ಅಪೇಕ್ಷಣೀಯವೆಂದು ಪ್ರಚಾರ ಮಾಡುವುದು ಅಥವಾ ಮಹಿಳೆಯರ ಮೇಲಿನ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯವನ್ನು ವೈಭವೀಕರಿಸುವುದನ್ನು ಅತ್ಯಂತ ಗಂಭೀರ ಹಾಗೂ ಕಿಂಚಿತ್ತೂ ಸಹಿಸದ ನೀತಿ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಉಲ್ಲಂಘನೆಯ ತೀವ್ರತೆಗೆ ಅನುಗುಣವಾಗಿ ಎಚ್ಚರಿಕೆ ನೀಡುವುದು, ಕೃತಿಯನ್ನು ತೆಗೆದುಹಾಕುವುದು ಮತ್ತು ಪ್ರೊಫೈಲ್ ಅನ್ನು ಶಾಶ್ವತವಾಗಿ ನಿರ್ಬಂಧಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನುಬಾಹಿರ ವಿಷಯಗಳಿದ್ದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಪ್ರೊಫೈಲ್ ಅನ್ನು ನಿರ್ಬಂಧಿಸಲಾಗುವುದು ಹಾಗೂ ಸಂಬಂಧಪಟ್ಟ ಕಾನೂನು ಪ್ರಾಧಿಕಾರಗಳಿಗೆ ವರದಿ ಮಾಡಲಾಗುವುದು.ಇನ್ನೂ ಹೆಚ್ಚು ತೋರಿಸಿ
- ದ್ವೇಷಪೂರಿತ ವಿಷಯಗಳ ಕುರಿತ ಮಾರ್ಗಸೂಚಿಗಳು20 ಆಗಸ್ಟ್ 2026ಓದುಗರು, ಸಹ ಲೇಖಕರು ಅಥವಾ ಸಾರ್ವಜನಿಕ ವ್ಯಕ್ತಿಗಳು ಸೇರಿದಂತೆ ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಸಮುದಾಯವನ್ನು ಗುರಿಯಾಗಿಸಿ ಅವಮಾನಿಸಲು, ನಿಂದಿಸಲು, ಬೆದರಿಕೆ ಹಾಕಲು ಅಥವಾ ಕಿರುಕುಳ ನೀಡಲು ನಿಮ್ಮ ಕಥೆಗಳು, ವಿಮರ್ಶೆಗಳು, ಸಂದೇಶಗಳು ಅಥವಾ ಪ್ರೊಫೈಲ್ ವಿವರಗಳನ್ನು ಬಳಸಬೇಡಿ. ಅರ್ಥಪೂರ್ಣ ಕಾಲ್ಪನಿಕ ಕಥೆಗಳ ಭಾಗವಾಗಿ ಜಾತಿ ತಾರತಮ್ಯ, ಕೋಮು ಉದ್ವಿಗ್ನತೆ, ಕೌಟುಂಬಿಕ ದೌರ್ಜನ್ಯ ಅಥವಾ ಬಾಲ್ಯವಿವಾಹದಂತಹ ಸಮಾಜದ ಕಠಿಣ ವಾಸ್ತವಗಳನ್ನು ಮುಕ್ತವಾಗಿ ವಿವರಿಸಬಹುದು. ಇಂತಹ ಹಾನಿಕಾರಕ ಆಚರಣೆಗಳನ್ನು ಬಯಲು ಮಾಡುವುದು ಅಥವಾ ಪ್ರಶ್ನಿಸುವುದು ಮತ್ತು ಅವುಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರೋತ್ಸಾಹಿಸುವುದು ಎರಡೂ ಬೇರೆ ಬೇರೆ ಪ್ರಕ್ರಿಯೆಗಳು. ಯಾವುದೇ ವ್ಯಕ್ತಿ, ಸಮುದಾಯ, ಧರ್ಮ, ಜಾತಿ, ಲಿಂಗ, ನಂಬಿಕೆ ಆಚರಣೆಗಳ ವಿರುದ್ಧ ಹಿಂಸೆ, ದ್ವೇಷ, ದೌರ್ಜನ್ಯ ಅಥವಾ ತಾರತಮ್ಯವನ್ನು ಸಹಜವೆಂದು ಬಿಂಬಿಸುವುದು, ವೈಭವೀಕರಿಸುವುದು ಅಥವಾ ಅವು ಸರಿಯೆಂದು ಪ್ರಸ್ತುತಪಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಮ್ಮ ಪ್ರೊಫೈಲ್ ಹೆಸರು, ಚಿತ್ರ ಅಥವಾ ಪರಿಚಯ ವಿವರಗಳು ಸೇರಿದಂತೆ ಎಲ್ಲಿಯೂ ಯಾವುದೇ ವರ್ಗದ ವಿರುದ್ಧ ದ್ವೇಷ ಅಥವಾ ಹಿಂಸೆಯನ್ನು ಪ್ರಚೋದಿಸುವ ನಿಂದನೀಯ ಪದಗಳು, ರಾಜಕೀಯವಾಗಿ ಪ್ರಚೋದನಕಾರಿ ವಿಷಯಗಳು, ದ್ವೇಷಪೂರಿತ ಚಿಹ್ನೆಗಳು ಅಥವಾ ಭಾಷೆಯನ್ನು ಬಳಸಬೇಡಿ. ಕಾಲ್ಪನಿಕವಲ್ಲದ ಬರಹಗಳಲ್ಲಿ ಆಧಾರರಹಿತ ವದಂತಿಗಳನ್ನು ಹರಡುವುದು, ಐತಿಹಾಸಿಕ ಸತ್ಯಗಳನ್ನು ತಿರುಚುವುದು ಅಥವಾ ಒಂದು ಸಮುದಾಯವು ಇನ್ನೊಂದಕ್ಕಿಂತ ಶ್ರೇಷ್ಠ ಅಥವಾ ಕೀಳು ಎಂದು ಬಿಂಬಿಸುವ ಬರಹಗಳನ್ನು ಪೋಸ್ಟ್ ಗಳನ್ನು ಪ್ರಕಟಿಸಬಾರದು. ಅಪ್ರಾಪ್ತರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು, ಬಾಲ್ಯವಿವಾಹವನ್ನು ಅಪೇಕ್ಷಣೀಯವೆಂದು ಬಿಂಬಿಸುವುದು ಅಥವಾ ಮಹಿಳೆಯರ ಮೇಲಿನ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯವನ್ನು ವೈಭವೀಕರಿಸುವುದನ್ನು ಅತ್ಯಂತ ಗಂಭೀರ ಹಾಗೂ 'ಕಿಂಚಿತ್ತೂ ಸಹಿಸದ ನೀತಿ ಉಲ್ಲಂಘನೆ' ಎಂದು ಪರಿಗಣಿಸಲಾಗುತ್ತದೆ. ಉಲ್ಲಂಘನೆಯ ತೀವ್ರತೆಗೆ ಅನುಗುಣವಾಗಿ ಎಚ್ಚರಿಕೆ ನೀಡುವುದು, ಕೃತಿಯನ್ನು ತೆಗೆದುಹಾಕುವುದು ಮತ್ತು ಪ್ರೊಫೈಲ್ ಅನ್ನು ಶಾಶ್ವತವಾಗಿ ನಿರ್ಬಂಧಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನುಬಾಹಿರ ವಿಷಯಗಳಿದ್ದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಪ್ರೊಫೈಲ್ ಅನ್ನು ನಿರ್ಬಂಧಿಸಲಾಗುವುದು ಹಾಗೂ ಸಂಬಂಧಪಟ್ಟ ಕಾನೂನು ಪ್ರಾಧಿಕಾರಗಳಿಗೆ ವರದಿ ಮಾಡಲಾಗುವುದು.ಇನ್ನೂ ಹೆಚ್ಚು ತೋರಿಸಿ
- ಕೃತಿಚೌರ್ಯದ ಕುರಿತ ಮಾರ್ಗಸೂಚಿಗಳು20 ಆಗಸ್ಟ್ 2026ನೀವು ಸ್ವತಃ ರಚಿಸಿದ ನೈಜ ಕೃತಿಗಳನ್ನು ಮಾತ್ರ ಪ್ರಕಟಿಸಿ. ಈಗಾಗಲೇ ಪ್ರಕಟಗೊಂಡ ಪುಸ್ತಕಗಳು, ಚಲನಚಿತ್ರಗಳು, ಕಿರುತೆರೆ ಧಾರಾವಾಹಿಗಳು, ಬ್ಲಾಗ್ಗಳು ಅಥವಾ ಪ್ರಕಟಿತವಾಗಿರುವ ಯಾವುದೇ ಇತರ ಮೂಲಗಳಿಂದ ಪೂರ್ಣವಾಗಿ ಅಥವಾ ಭಾಗಶಃ ವಿಷಯವನ್ನು ನಕಲಿಸಿ, ಕೆಲವು ಪದಗಳನ್ನು ಬದಲಾಯಿಸಿ ನಿಮ್ಮದೇ ಕೃತಿ ಎಂಬಂತೆ ಪ್ರಕಟಿಸಲು ಪ್ರತಿಲಿಪಿ ಅನುಮತಿಸುವುದಿಲ್ಲ. ಇತರರ ಕೃತಿಗಳನ್ನು ದೃಶ್ಯದಿಂದ ದೃಶ್ಯಕ್ಕೆ ಮರುಬರಹ ಮಾಡುವುದು ಅಥವಾ ಮೇಲ್ನೋಟದ ವಿವರಗಳನ್ನು ಬದಲಾಯಿಸಿ ಅವರ ಕಥಾವಸ್ತು, ಪಾತ್ರಗಳು ಹಾಗೂ ಕಥೆಯ ಚೌಕಟ್ಟನ್ನು ಮರುಬಳಕೆ ಮಾಡುವುದನ್ನು ಕೂಡ ಕೃತಿಚೌರ್ಯ ಎಂದೇ ಪರಿಗಣಿಸಲಾಗುತ್ತದೆ. ಇನ್ನೊಬ್ಬ ಲೇಖಕರ ಕೃತಿಯನ್ನು ಬೇರೆ ಭಾಷೆಗೆ ಅನುವಾದಿಸಲು ಅಥವಾ ಅಳವಡಿಸಿಕೊಳ್ಳಲು ಅವರ ಲಿಖಿತ ಪೂರ್ವಾನುಮತಿ ಕಡ್ಡಾಯ. ಮೂಲ ಲೇಖಕರಿಗೆ ಗೌರವಪೂರ್ವಕ ಉಲ್ಲೇಖ ನೀಡಿದ್ದರೂ ಸಹ, ಅನುಮತಿ ಇಲ್ಲದೇ ಅನುವಾದವನ್ನು ಪ್ರಕಟಿಸುವುದು ನಿಯಮಗಳ ಉಲ್ಲಂಘನೆಯಾಗುತ್ತದೆ. ಮೂಲ ಲೇಖಕರ ಹೆಸರನ್ನು ಉಲ್ಲೇಖಿಸುವುದು ಅನುಮತಿಗೆ ಪರ್ಯಾಯವಾಗುವುದಿಲ್ಲ. ಮೂಲ ಲೇಖಕರ ಹೆಸರು ಹಾಕಿದರೂ ಸಹ ಇತರರ ಕೃತಿಯನ್ನು ಹಂಚಿಕೊಳ್ಳಲು ಅವರ ಸ್ಪಷ್ಟ ಒಪ್ಪಿಗೆ ಅಗತ್ಯ. ಪ್ರಕಟವಾಗುವ ಪ್ರತಿಯೊಂದು ಕೃತಿಯನ್ನು ಹೋಲಿಕೆಗಾಗಿ ಪ್ರತಿಲಿಪಿಯ ಬೃಹತ್ ಸಂಗ್ರಹದೊಂದಿಗೆ ತಂತ್ರಜ್ಞಾನದ ಮೂಲಕ ಪರಿಶೀಲಿಸಲಾಗುತ್ತದೆ. ಮೂಲ ಲೇಖಕರಿಂದ ಅಧಿಕೃತ ದೂರು ಬರದಿದ್ದರೂ ಸಹ, ಹೋಲಿಕೆ ಕಂಡುಬಂದಲ್ಲಿ ಅಂತಹ ಕೃತಿಗಳನ್ನು ಪರಿಶೀಲಿಸಿ ತೆಗೆದುಹಾಕಬಹುದು. ನಿಯಮ ಉಲ್ಲಂಘಿಸಿದಲ್ಲಿ ಕೃತಿಯನ್ನು ಅಪ್ರಕಟಿತಗೊಳಿಸಲಾಗುವುದು ಅಥವಾ ಶಾಶ್ವತವಾಗಿ ಅಳಿಸಿಹಾಕಲೂಬಹುದು ಹಾಗೂ ಪುನರಾವರ್ತಿತ ಉಲ್ಲಂಘನೆಗಳ ಸಂದರ್ಭದಲ್ಲಿ ಪ್ರೊಫೈಲ್ ಅಮಾನತುಗೊಳಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕೃತ ಹಕ್ಕುಸ್ವಾಮ್ಯ ದೂರುಗಳು ಬಂದಲ್ಲಿ ಕೃತಿಚೌರ್ಯ ಮಾಡಿದ ಲೇಖಕರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಬೇಕಾಗಬಹುದು.ಇನ್ನೂ ಹೆಚ್ಚು ತೋರಿಸಿ
- ಅಶ್ಲೀಲ ಹಾಗೂ ಲೈಂಗಿಕ ವಿಷಯಗಳ ಕುರಿತ ಮಾರ್ಗಸೂಚಿಗಳು20 ಆಗಸ್ಟ್ 2026ಯಾವುದೇ ಕಥೆ, ಪಾತ್ರಗಳಲ್ಲಿ ಕಲಾತ್ಮಕ ಉದ್ದೇಶವಿಲ್ಲದೇ, ಕೇವಲ ಓದುಗರನ್ನು ಲೈಂಗಿಕವಾಗಿ ಪ್ರಚೋದಿಸುವ ಏಕೈಕ ಉದ್ದೇಶ ಹೊಂದಿರುವ ಬರಹಗಳು ಎಷ್ಟೇ ಚನ್ನಾಗಿ ರಚಿತವಾಗಿದ್ದರೂ ಅವುಗಳಿಗೆ ಪ್ರತಿಲಿಪಿ ಅನುಮತಿಸುವುದಿಲ್ಲ. ನಿಮ್ಮ ಕಥೆಯ ಯಾವುದೇ ಭಾಗದಲ್ಲೂ ಲೈಂಗಿಕ ಕ್ರಿಯೆಗಳನ್ನು ಅತಿಯಾಗಿ ಅಥವಾ ನೇರವಾಗಿ ಎಳೆಎಳೆಯಾಗಿ ವರ್ಣಿಸುವುದು ಮತ್ತು ದೇಹದ ಅಂಗಾಂಗಗಳಿಗೆ ಅಶ್ಲೀಲ ಪದಗಳನ್ನು ಬಳಸುವುದು ನಿಷಿದ್ಧ. ಕಥೆಯ ಮುಖಪುಟ ಚಿತ್ರಗಳಲ್ಲಿ ಬೆತ್ತಲೆ ಚಿತ್ರಣ ಅಥವಾ ಲೈಂಗಿಕವಾಗಿ ಪ್ರಚೋದಿಸುವ ಭಂಗಿಗಳನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಕಥೆಯ ಒಳಗಿನ ವಿಷಯ ಏನೇ ಇರಲಿ, ಮುಖಪುಟ ಚಿತ್ರಗಳಿಗೆ ಈ ನಿಯಮವು ಕಡ್ಡಾಯವಾಗಿ ಮತ್ತು ಯಾವುದೇ ವಿನಾಯಿತಿ ಇಲ್ಲದೆ ಅನ್ವಯಿಸುತ್ತದೆ. ಸಮ್ಮತಿ ಇಲ್ಲದ ಲೈಂಗಿಕ ಕ್ರಿಯೆ, ಲೈಂಗಿಕ ದೌರ್ಜನ್ಯ ಅಥವಾ ಅಪ್ರಾಪ್ತರು ಹಾಗೂ ಮಕ್ಕಳನ್ನು ಒಳಗೊಂಡ ಯಾವುದೇ ಲೈಂಗಿಕ ಕೃತ್ಯಗಳನ್ನು ಪ್ರೋತ್ಸಾಹಿಸುವುದು, ವೈಭವೀಕರಿಸುವುದು ಅಥವಾ ಸರಿಯೆಂದು ಬಿಂಬಿಸುವ ಬರಹಗಳನ್ನು ಅತ್ಯಂತ ಗಂಭೀರ ಅಪರಾಧ ಹಾಗೂ ನಮ್ಮ ನೀತಿ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಮೇಲಿನ ಯಾವುದೇ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕೃತಿಯನ್ನು ತೆಗೆದುಹಾಕಲಾಗುತ್ತದೆ, ಓದುಗರಿಗೆ ಕಾಣಿಸದಂತೆ ನಿರ್ಬಂಧಿಸಲಾಗುತ್ತದೆ ಹಾಗೂ ನಿಯಮಗಳನ್ನು ಪದೇ ಪದೇ ಮುರಿದಲ್ಲಿ ಅಂತಹ ಖಾತೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಇನ್ನೂ ಹೆಚ್ಚು ತೋರಿಸಿ
- ಕೃತಕ ಬುದ್ಧಿಮತ್ತೆ ಬಳಕೆಯ ಕುರಿತ ಮಾರ್ಗಸೂಚಿಗಳು20 ಆಗಸ್ಟ್ 2026ವ್ಯಾಕರಣ ಮತ್ತು ಕಾಗುಣಿತವೂ ಸೇರಿದಂತೆ ಭಾಷಾ ಶುದ್ಧತೆಯ ಪರಿಶೀಲನೆಗಾಗಿ ಹಾಗೂ ಕಥೆಗೆ ಸೂಕ್ತ ಚೌಕಟ್ಟು ನಿರ್ಮಿಸಲು, ಕಥಾವಸ್ತುವಿನ ಕುರಿತ ಕಲ್ಪನೆಯನ್ನು ಇನ್ನಷ್ಟು ಸ್ಪಷ್ಟವಾಗಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವುದನ್ನು ಪ್ರತಿಲಿಪಿಯಲ್ಲಿ ಸದಾ ಸ್ವಾಗತಿಸಲಾಗುತ್ತದೆ. ವಿಶೇಷವಾಗಿ ಲೇಖಕರಾಗಿ ನಿಮಗೆ ಕಥೆ ಮುಂದುವರಿಸಲು ಆಲೋಚನೆಗಳು ಅಥವಾ ಕಲ್ಪನೆಗಳು ಹೊಳೆಯದೇ ಇದ್ದಾಗ, ಕೃತಕ ಬುದ್ಧಿಮತ್ತೆಯು ನಿಮ್ಮ ಸೃಜನಶೀಲ ಸಹಾಯಕನಾಗಿ ನೆರವಾಗಬಹುದು. ನಿಮ್ಮ ಕೃತಿಗಳ ಮುಖಪುಟ ಚಿತ್ರಗಳನ್ನು ಸೃಜನಾತ್ಮಕವಾಗಿ ರಚಿಸಿಕೊಳ್ಳಲು ಕೂಡ ನೀವು ಇದನ್ನು ಬಳಸಿಕೊಳ್ಳಬಹುದು. ಮೂಲ ಲೇಖಕರ ಅನುಮತಿ ಇಲ್ಲದೇ, ಹಕ್ಕುಸ್ವಾಮ್ಯ ಹೊಂದಿರುವ ಇತರರ ಯಾವುದೇ ಕೃತಿಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕ ಅನುವಾದಿಸಿ ಪ್ರಕಟಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜೊತೆಗೆ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಕೃತಿಗಳನ್ನು ನಿಮ್ಮದೇ ಸ್ವಂತ ರಚನೆ ಎಂದು ಪ್ರಸ್ತುತಪಡಿಸಬೇಡಿ. ರಚನೆಯನ್ನು ಪ್ರಮುಖವಾಗಿ ಕೃತಕ ಬುದ್ಧಿಮತ್ತೆಯೇ ಮಾಡಿದ್ದರೆ, ನಂತರ ನೀವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದ್ದರೂ ಸಹ ಅದನ್ನು ಕೃತಕ ಬುದ್ಧಿಮತ್ತೆಯಿಂದ ರಚಿತವಾದ ಕೃತಿ ಎಂದೇ ಪರಿಗಣಿಸಲಾಗುತ್ತದೆ.ಇನ್ನೂ ಹೆಚ್ಚು ತೋರಿಸಿ
- ಪ್ರತಿಲಿಪಿ ಕಥಾ ಅವಾರ್ಡ್ಸ್ ಸೀಸನ್ 2 ಸ್ಪರ್ಧೆಯ ಫಲಿತಾಂಶ19 ಆಗಸ್ಟ್ 2026ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ಕನ್ನಡ ಆಯೋಜಿಸಿದ್ದ ಪ್ರತಿಲಿಪಿ ಕಥಾ ಅವಾರ್ಡ್ಸ್ ಸೀಸನ್ 2 ಸ್ಪರ್ಧೆಗೆ ಬರಹಗಾರರು ತೋರಿಸಿರುವ ಉತ್ಸಾಹ, ಪ್ರೀತಿ ಅಪಾರ. ಬರಹಗಾರರು ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರ ಮನಗೆಲ್ಲುವ ಉತ್ತಮ ಕೃತಿಗಳನ್ನು ರಚಿಸಿ, ಪ್ರಕಟಿಸಿ ಸ್ಪರ್ಧೆಯ ಉದ್ದೇಶವನ್ನು ಪೂರ್ಣಗೊಳಿಸಿದ್ದಾರೆ. ವೈಜ್ಞಾನಿಕ, ಫ್ಯಾಂಟಸಿ, ಕೌಟುಂಬಿಕ, ಪ್ರೀತಿ, ಮಹಿಳೆ, ಸಾಮಾಜಿಕ, ಪೌರಾಣಿಕ, ಅಪರಾಧ, ಹಾರರ್ ಹೀಗೆ ವಿವಿಧ ಪ್ರಭೇದಗಳ ಮೇಲೆ ವಿಭಿನ್ನ ರೀತಿಯ ಕೃತಿಗಳು ರಚನೆಯಾಗಿವೆ. ಉತ್ತಮ ಕಥಾಹಂದರ, ಪಾತ್ರಪೋಷಣೆಗಳು ಕತೆಯನ್ನು ಇನ್ನಷ್ಟು ಸ್ವಾರಸ್ಯಕರವಾಗಿಸಿವೆ. ಪ್ರತಿಯೊಂದು ಕತೆಗಳು ತನ್ನದೇ ಆದ ವೈಶಿಷ್ಟ್ಯಪೂರ್ಣ ಪ್ರಭಾವವನ್ನು ಓದುಗರ ಮೇಲೆ ಬೀರುವಂತಿವೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ, ಪರಿಶ್ರಮ ಮತ್ತು ಬದ್ಧತೆಯಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಎಲ್ಲ ಕೃತಿಗಳು ವಿಭಿನ್ನ ಕಥಾವಸ್ತು, ಕಥಾಹಂದರಗಳನ್ನೊಳಗೊಂಡು ಸ್ಪರ್ಧೆಗೆ ಮೆರಗು ತಂದುಕೊಟ್ಟಿವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರ ಪ್ರಯತ್ನವೂ ಶ್ಲಾಘನೀಯ. ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು. ಕೆಲವು ಕೃತಿಗಳು ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿರಲಿಲ್ಲ. ಅಂತಹ ಕತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿಲ್ಲ. ಉಳಿದ ಕತೆಗಳಲ್ಲಿ ಸರಿಸುಮಾರು ಎಲ್ಲಾ ಕತೆಗಳು ಭಿನ್ನವಾಗಿ ರಚಿಸಲ್ಪಟ್ಟಿದ್ದವು. ಫ್ಯಾಂಟಸಿ, ಸೈನ್ಸ್ ಫಿಕ್ಷನ್, ಗೂಢಚಾರ, ಪತ್ತೇದಾರಿ, ಕ್ರೈಮ್ ಥ್ರಿಲ್ಲರ್, ಭಯಾನಕ, ಕೌಟುಂಬಿಕ, ಸಾಮಾಜಿಕ, ಕಾಲ್ಪನಿಕ ಪ್ರೇಮಕತೆಗಳು ಹೀಗೆ ವಿವಿಧ ರೀತಿಯ ಕತೆಗಳು ಸಲ್ಲಿಸಲ್ಪಟ್ಟು ಸ್ಪರ್ಧೆಯ ಉದ್ದೇಶವನ್ನು ಸಾರ್ಥಕಗೊಳಿಸಿವೆ. ಧಾರಾವಾಹಿ ಬರೆಯುವಿಕೆ ಸುದೀರ್ಘ ಮತ್ತು ಸೃಜನಶೀಲ ಪ್ರಕ್ರಿಯೆ; ಸಂಕೀರ್ಣ ಮತ್ತು ಜಟಿಲವೂ ಹೌದು. ಕಥಾವಸ್ತುವಿನ ನಿರ್ವಹಣೆ, ಪ್ರಸ್ತುತಿಯಲ್ಲಿ ಸಾಕಷ್ಟು ತಾಳ್ಮೆ, ಬದ್ಧತೆ ಇರಬೇಕು. ಸೃಷ್ಟಿಸಿದ ಪಾತ್ರಗಳನ್ನು, ಸನ್ನಿವೇಶಗಳನ್ನು ನಿರಂತರವಾಗಿ ಬೆಳೆಸುವ, ತಿದ್ದುವ, ಪೋಷಿಸುವ ಸಹನೆ ಇರಬೇಕು. ಒಟ್ಟಾರೆ ಸುದೀರ್ಘ ಧಾರಾವಾಹಿ ಬರೆಯುವುದು ಮತ್ತು ಓದುವುದು ತಾಳ್ಮೆಯನ್ನು ಬೇಡುವ ಕೆಲಸ. ಹೀಗಿದ್ದೂ ಈ ಸ್ಪರ್ಧೆಗೆ ಅರವತ್ತಕ್ಕೂ ಅಧಿಕ ಧಾರಾವಾಹಿಗಳು ಪ್ರಕಟಗೊಂಡಿರುವುದು ಬರಹಗಾರರ ಹುಮ್ಮಸ್ಸನ್ನು ತೋರಿಸುತ್ತದೆ. ಎಲ್ಲ ಬರಹಗಾರರಿಗೆ ಸಲಹೆಯೆಂದರೆ, ಒಂದು ಕತೆಯನ್ನು ರಚಿಸುವಾಗ ಅಂತ್ಯದವರೆಗೂ ಒಂದು ಸ್ಪಷ್ಟ ಚಿತ್ರಣವನ್ನು ಅಥವಾ ರೂಪುರೇಷೆಯನ್ನು ಹಾಕಿಕೊಂಡರೆ ಗೋಜಲುಗಳಿಲ್ಲದೆ ಅಧ್ಯಾಯಗಳನ್ನು ರಚಿಸಲು, ಧಾರಾವಾಹಿಯನ್ನು ಸುದೀರ್ಘವಾಗಿ ಬರೆಯಲು ಸುಲಭವಾಗಬಹುದು. ಕಥಾಪ್ರವೇಶಕ್ಕೂ ಮುನ್ನ ಹಲವು ರೀತಿಯ ಯೋಜನೆ, ಅಧ್ಯಯನಗಳು ಧಾರಾವಾಹಿ ರಚನೆಯನ್ನು ಪರಿಣಾಮಕಾರಿಯಾಗಿಸುತ್ತವೆ. ಎಲ್ಲರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ; ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಂತಾಗಲಿ. ಎಲ್ಲಾ ಬರಹಗಾರರೂ ಸ್ಪರ್ಧೆಗೆ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸುವಂತಾಗಲಿ ಎಂದು ಆಶಿಸುತ್ತೇವೆ. ವಿಜೇತ ಸಾಹಿತಿಗಳ ಯಾದಿ ಪ್ರಥಮ ಬಹುಮಾನ: 15,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಶತೃ ಅವರ ರುಧಿರ ದ್ವೀಪದ ಕರಾಳ ಛಾಯೆ ಕೃತಿಯ ಕುರಿತು: ಆಯ್ಕೆ ಮಾಡಿಕೊಂಡ ಕಥಾವಸ್ತು ಬಹಳ ವಿಶಿಷ್ಟವಾಗಿದ್ದು, ಪ್ರತಿ ಅಧ್ಯಾಯದಲ್ಲಿ ಹೆಚ್ಚಿಸುವ ಕುತೂಹಲ, ಆಸಕ್ತಿದಾಯಕ ಅಂಶಗಳ ಬಳಕೆಯಿಂದ ಕತೆ ಓದುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಕಥಾಹಂದರವನ್ನು ಅಭಿವೃದ್ಧಿಪಡಿಸಿದ ರೀತಿ, ಪಾತ್ರಪೋಷಣೆ, ನಿರೂಪಣೆ ಎಲ್ಲವೂ ಕತೆಯ ಮೆರಗನ್ನು ಹೆಚ್ಚಿಸಿವೆ. ದ್ವಿತೀಯ ಬಹುಮಾನ: 7,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಚೈತ್ರಾ ಅನಂತಾಡಿ ಅವರ ಅಂತರ್ಲೋಕ ಕೃತಿಯ ಕುರಿತು: ಸೈನ್ಸ್ ಫಿಕ್ಷನ್ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿ ಚಿತ್ರಿಸಿರುವುದು ಬಹಳ ಉತ್ತಮವಾಗಿ ಮೂಡಿಬಂದಿದೆ. ಕಥಾವಸ್ತು, ನಿರೂಪಣೆ, ಪಾತ್ರಗಳು ಎಲ್ಲವೂ ಹದವಾಗಿ ಕೂಡಿ; ಪ್ರತಿ ಹಂತದಲ್ಲಿಯೂ ಕುತೂಹಲವನ್ನು ಉಳಿಸಿಕೊಂಡು ಓದುಗರಿಗೆ ರೋಚಕ ಅನುಭವವನ್ನು ನೀಡುತ್ತದೆ. ತೃತೀಯ ಬಹುಮಾನ: 5,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ರಾಮಚಂದ್ರ ಭಟ್ ಅವರ ಕೊಲ್ಲೆನ್ನ ಗೆಳತಿ... ನಿನ್ನ ಪ್ರೀತಿಯಲ್ಲಿ! ಕೃತಿಯ ಕುರಿತು: ಸಸ್ಪೆನ್ಸ್ ಥ್ರಿಲ್ಲರ್ ಪ್ರಕಾರದಲ್ಲಿ ರಚಿತವಾದ ಈ ಕೃತಿ ಉತ್ತಮ ಪಾತ್ರಪೋಷಣೆ, ಗಟ್ಟಿ ನಿರೂಪಣೆ, ರೋಚಕ ತಿರುವುಗಳ ಮೂಲಕ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ನಾಲ್ಕನೆಯ ಬಹುಮಾನ: 3,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ದಿ ಬ್ಲಾಕ್ ಅವರ ಲೈಫ್ ಆಫ್ ಸ್ಪೈ ಐದನೆಯ ಬಹುಮಾನ: 3,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ವಾಣಿಶ್ರೀ ಹೆಚ್ ಎನ್ ಅವರ ಒಡತಿ ಆನ್ ಡ್ಯೂಟಿ... ಆರನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನವಿ ಅವರ ಅನಾದಿ - ಕಾಲಚಕ್ರ ಏಳನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಜಯಶ್ರೀ ಅಂಗಡಿ ಅವರ ಶಾಂತಿ ಕ್ರಾಂತಿ ಎಂಟನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಸ್ನೇಹ ಸೌರಭ ರತ್ನ ಅವರ ಕುಸುಮಾರ್ಪಿತ ಒಂಬತ್ತನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪ್ರಸನ್ನಾ ವಿ ಚೆಕ್ಕೆಮನೆ ಅವರ ಅನುರಾಗದ ಅಂತರ್ಜಲ ಹತ್ತನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕಾವ್ಯಾ ಹೆಗಡೆ ಅವರ ಮಹಾಲಕ್ಷ್ಮಿ ನಿಲಯದ ಮಾಣಿಕ್ಯ ಹನ್ನೊಂದರಿಂದ ಇಪ್ಪತ್ತನೆಯ ಸ್ಥಾನ ವಿಜೇತರ ಯಾದಿ ಈ ಕೃತಿಗಳ ಕರ್ತೃಗಳಿಗೆ ವಿಜೇತ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು ಮತ್ತು ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುವುದು. ಕ್ರ.ಸಂ. ಕೃತಿ ಕರ್ತೃ ೧೧ ಪೋಸ್ಟ್ ಮಾರ್ಟಮ್ ಆದರ್ಶ್ ಪಟೇಲ್ ೧೨ ದೈವ ಬೆಸೆದ ಬಂಧ..! ವಸುಧಾ ಶಾಸ್ತ್ರಿ ೧೩ ಜಿಗೀಷು ಸಿ ೧೪ ವಿಹನ್ಯ... ಕತ್ತಲಿನಿಂದ ಬೆಳಕಿನೆಡೆಗೆ ರಶ್ಮಿ ಭಟ್ಟ ರಾವ್ ಪಿ ೧೫ ವರ್ಣಪಟಲ ಪೂಜಾ ಕೌಶಿಕ್ ೧೬ ಮೃತ್ಯುರಾಗ: ಬ್ಲಡ್ ಮೆಲೋಡಿ ಶಮ್ನಾ ೧೭ ಹೊಸ ಬೆಳಕು ಹಿತ್ಯ ೧೮ ಅವನ ಸೇಡು ಕೃಷ್ಣ ತುಳಸಿ ೧೯ ಹೃದಯ ಲಹರಿ ವಿದ್ಯಾ ವೈ. ಎಸ್ ೨೦ ಪ್ರೀತಿಯೇ ನಿನ್ನ ಪರಿಧಿಯೊಳಗೆ ಸ್ವಪ್ನ ಶರತ್ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಯನ್ನು ರಚಿಸಿದವರ ಯಾದಿ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ಶ್ಲಾಘನೀಯ. ಬರಹಗಾರರು 100 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಅವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು. ಇವುಗಳಲ್ಲಿ ರೀಡರ್ ಎಂಗೇಜ್ಮೆಂಟ್ ಆಧಾರದ ಮೇಲೆ ಟಾಪ್ 10 ಧಾರಾವಾಹಿಗಳ ಕರ್ತೃಗಳಿಗೆ ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿಯನ್ನು ಅವರು ನೀಡುವ ವಿಳಾಸಕ್ಕೆ ಕೋರಿಯರ್ ಮೂಲಕ ಕಳುಹಿಸಲಾಗುವುದು. ಈ ಕೆಳಗೆ ಎಂಗೇಜ್ಮೆಂಟ್ ಸ್ಕೋರ್ ಆಧಾರದ ಮೇಲೆ ಧಾರಾವಾಹಿಗಳನ್ನು ಕ್ರಮವಾಗಿ ಪಟ್ಟಿ ಮಾಡಲಾಗಿದೆ. ಕ್ರ.ಸಂ. ಕೃತಿ ಕರ್ತೃ ೧ ಪರಿಧಿಯಾಚೆ - ಅತೃಪ್ತ ಮನದ ಅಂತರಾಳ ವಿನು ಪಿ ೨ ಇಂದಿರಾ ಪಾಕಶಾಲಾ ಪಾರ್ಥಸಾರಥಿ ನರಸಿಂಗ ರಾವ್ ೩ ರುದ್ರಾನ್ವಿತಂ ಲಕ್ಷ್ಮೀ ವಾಗ್ದೇವಿ ೪ ಮೃತ್ಯುಕೂಪ ಮಧುಸೂರ್ಯ ಭಟ್ ೫ ಅವನು ನನ್ನವನ? ಮಾನಸ ರಾಮ್ ೬ ಸಂಸಾರದ ನೌಕೆ ಜಯದೇವಿ ಕೆ. ಎಲ್. ೭ ಸಂಭಾವಿತ ಸುಜಾತ ಗುರುಪಾದಸ್ವಾಮಿ ೮ ಹೆಜ್ಜೆ ಗುರುತು (ಮಲ್ಲಿಗೆ ಪುರದ ರಹಸ್ಯ) ಭಾನು ಹೆಚ್ ಎಫ್ ೯ ಅಪರಾಜಿತೆ ಗಾಯತ್ರಿ ೧೦ ಹೃದಯದ ಮೌನ ರಾಗ ರೇಣು. ಯಸ್. ಯಚ್ ೧೧ ಯಾರು ಹಿತವರು ನನಗೆ? ಭಾರತಿ ಕೃತಿಕಾ ೧೨ ಧೃವಾಂತರ ಮೌನ ೧೩ ನಿನ್ನೊಲವಿಗೆ ಅಧಿಪತಿ ನಾ,,, ಸಿಹಿ ೧೪ ಒಡತಿ ಆನ್ ಡ್ಯೂಟಿ... ವಾಣಿಶ್ರೀ ಹೆಚ್ ಎನ್ ೧೫ ಧಾರಾವಾಹಿ ಗುಣಸಂಪನ್ನರು ಕಾ ವಿ ರಮೇಶ್ ಕುಮಾರ್ ೧೬ ವಿಹನ್ಯ... ಕತ್ತಲಿನಿಂದ ಬೆಳಕಿನೆಡೆಗೆ ರಶ್ಮಿ ಭಟ್ಟ ರಾವ್ ಪಿ ೧೭ ಮಹಾಲಕ್ಷ್ಮಿ ನಿಲಯದ ಮಾಣಿಕ್ಯ ಕಾವ್ಯಾ ಹೆಗಡೆ ೧೮ ಶಿಖರ ಸಾನಿಧ್ಯ ಲೀಲಾ ೧೯ ಪೋಸ್ಟ್ ಮಾರ್ಟಮ್ ಆದರ್ಶ್ ಪಟೇಲ್ ೨೦ ಅಂತರಾಳ ವಿಷ್ಣುಪ್ರಿಯಾ ೨೧ ಕೊಲ್ಲೆನ್ನ ಗೆಳತಿ... ನಿನ್ನ ಪ್ರೀತಿಯಲ್ಲಿ! ರಾಮಚಂದ್ರ ಭಟ್ ೨೨ ಡಿಜಿಟಲ್ ಮಾಫಿಯಾ ರಹಸ್ಯ ಪಟ ರಮ್ಯಾ ಗೌರೀಶ್ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ಮ್ಯಾರಥಾನ್ ಲೇಖಕರ ಪಟ್ಟಿ- ಪ್ರತಿಲಿಪಿ ಕ್ರಿಯೇಟರ್ಸ್ ಪ್ರೋಗ್ರಾಮ್ ಸೀಸನ್ 524 ಜುಲೈ 2026ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ೨೦೨೫ ರ ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಿದ್ದ ಪ್ರತಿಲಿಪಿ ಕ್ರಿಯೇಟರ್ಸ್ ಪ್ರೋಗ್ರಾಮ್ ಸೀಸನ್ 5 ರಲ್ಲಿ ಭಾಗವಹಿಸಿ ೧೦೦ ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿ ರಚಿಸಿರುವ ಪ್ರತಿಭಾವಂತ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಲು, ಮ್ಯಾರಥಾನ್ ಬರಹಗಾರ- ವಿಭಾಗವನ್ನು ಪರಿಚಯಿಸಲಾಗಿತ್ತು. ಬರಹಗಾರರ ಪ್ರತಿಕ್ರಿಯೆ ಉತ್ತಮ ರೀತಿಯಲ್ಲಿ ವ್ಯಕ್ತವಾಗಿತ್ತು. ರೈಟಿಂಗ್ ಚಾಲೆಂಜ್ ನಲ್ಲಿ ಭಾಗವಹಿಸಿ, ತಮ್ಮ ಕೃತಿಯ ಮೂಲಕ ಲಕ್ಷಾಂತರ ಓದುಗರನ್ನು ತಲುಪುವ ಅವಕಾಶವನ್ನು ಈ ಎಲ್ಲಾ ಬರಹಗಾರರು ಪಡೆದುಕೊಂಡಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತದೆ. 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ಪ್ರಕಟಿಸಿರುವ ಎಲ್ಲಾ ಬರಹಗಾರರ ಪರಿಶ್ರಮ, ಬದ್ಧತೆ ಮತ್ತು ಉತ್ಸಾಹ ಮಾದರಿಯಾಗುವಂಥದ್ದು. ರೈಟಿಂಗ್ ಚಾಲೆಂಜ್ ನ ಕಾಲಾವಕಾಶದೊಳಗೆ ತಮ್ಮ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು. 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿ ರಚಿಸಿರುವವರ ಮತ್ತು ಮ್ಯಾರಥಾನ್ ಲೇಖಕರ ಪಟ್ಟಿ- ಕ್ರ. ಸಂ. ಕೃತಿ ಲೇಖಕರು ೧ ತರ್ಲೆ ತ್ಯಾಂಪ ಬೆಳ್ಳಾಲ ಗೋಪಿನಾಥ್ ೨ ಆಕರ್ಷಣೆ ಪ್ರೀತಿಗೆ ಮೊದಲ ಮೆಟ್ಟಿಲು ರೇಣುಕಾ ಶಿವರಾಜ್ ೩ ಕಲ್ಯಾಣ ಬಂಧನ "ಎಸ್" ಪವಿತ್ರ ೪ Mafia Obsessed Lover ಖುಷ್ಬು ೫ ಸುಲಗ್ನ ಸುಮುಹೂರ್ತ ಸನ್ಮಂಗಳ ಮೀರಾ ೬ ಬೆಂಕಿಪಂಜರ ಪ್ರಸಾದ್ ಹೆಬ್ರಿ ೭ ಪವಿತ್ರ ಬಂಧನ(ಮಕ್ಕಳಿಗಾಗಿ ಒಂದು ಒಪ್ಪಂದ) ಪಿ. ಎ. ರೆಡ್ಡಿ ೮ ಜೀವನದಿ ಕಾವೇರಿ ಸೀತಾರಾಮ ಕಾನಳ್ಳಿ ೯ ಪುನರಪಿ ಮರಣಂ ರಾಮಚಂದ್ರ ಭಟ್ ೧೦ ಈ ಪ್ರೇಮದ ಸಂಕೋಲೆ ಮೌನದ ಮಾತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬರಹಗಾರರು ಸ್ಪರ್ಧೆಯ ಕುರಿತು ಆಸಕ್ತಿ ತೋರಿಸಿ ಇನ್ನಷ್ಟು ಉತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂಬುದು ನಮ್ಮ ಆಶಯ. ಮತ್ತೊಮ್ಮೆ ಎಲ್ಲಾ ಲೇಖಕರಿಗೂ ಅಭಿನಂದನೆಗಳು. - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ನಿಮ್ಮ ಕಥೆಗೆ ತಕ್ಕಂತೆ ಮುಖಪುಟವನ್ನು ವಿನ್ಯಾಸಗೊಳಿಸಿ23 ಜುಲೈ 2026ಆತ್ಮೀಯ ಲೇಖಕರೇ, ಆನ್ಲೈನ್ ಓದುಗರು ಮೊಬೈಲ್ ಪರದೆಯ ಮೇಲೆ ಲಭ್ಯವಾಗುವ ಕೃತಿಗಳನ್ನು ಬಹಳ ವೇಗವಾಗಿ ಸ್ಕ್ರಾಲ್ ಮಾಡುತ್ತಾರೆ. ನಿಮ್ಮ ಕಥೆಯನ್ನು ತೆರೆದು ಓದುವ ಮೊದಲು ಅವರ ಕಣ್ಣಿಗೆ ಬೀಳುವ ಮೊದಲ ವಿಷಯವೇ ನಿಮ್ಮ ಕಥೆಯ ಮುಖಪುಟ ಚಿತ್ರ. ಒಂದು ಉತ್ತಮ ಮುಖಪುಟವು ಕೇವಲ ಆಕರ್ಷಕವಾಗಿ ಕಂಡರೆ ಸಾಲದು; ಅದು ನಿಮ್ಮ ಕಥೆಯ ಸರಿಯಾದ ಪ್ರಭೇದ, ಮನಸ್ಥಿತಿ ಮತ್ತು ವಿಷಯ ವಸ್ತುವನ್ನು ಪ್ರತಿಬಿಂಬಿಸಬೇಕು. ಮುಖಪುಟವು ತಪ್ಪಾದ ಭಾವನೆಯನ್ನು ಮೂಡಿಸಿದರೆ, ವಾಚಕರು ನಿಮ್ಮ ಕಥೆಯನ್ನು ನಿರ್ಲಕ್ಷಿಸಬಹುದು ಅಥವಾ ತಪ್ಪಾದ ನಿರೀಕ್ಷೆಯೊಂದಿಗೆ ಓದಲು ಪ್ರಾರಂಭಿಸಬಹುದು. ೧. ನಿಮ್ಮ ಕಥೆಯ ಭಾವನೆಗೆ ತಕ್ಕಂತೆ ಮುಖಪುಟವಿರಲಿ ನಿಮ್ಮ ಮುಖಪುಟವು ನಿಮ್ಮ ಕಥೆಯಷ್ಟೇ ಸ್ಪಷ್ಟವಾದ ಭಾವನೆಯನ್ನು ನೀಡಬೇಕು. ನಿಮ್ಮ ಕಥೆಯು ಗಂಭೀರ, ಸಸ್ಪೆನ್ಸ್, ಭಾವುಕ ಅಥವಾ ಪ್ರೇಮಕಥೆಯಾಗಿದ್ದರೆ, ಮುಖಪುಟವೂ ಅದೇ ಭಾವವನ್ನು ಸ್ಪಷ್ಟವಾಗಿ ತೋರಿಸಬೇಕು. ೨. ಕಥೆಯ ಪ್ರಕಾರವನ್ನು ಸುಲಭವಾಗಿ ಅರ್ಥೈಸಿಕೊಳ್ಳುವಂತಿರಲಿ ಇದು ಯಾವ ರೀತಿಯ ಕಥೆ ಎಂಬುದನ್ನು ವಾಚಕರು ತಕ್ಷಣವೇ ಅರ್ಥಮಾಡಿಕೊಳ್ಳುವಂತಿರಲಿ. ಥ್ರಿಲ್ಲರ್ ಕಥೆಯ ಮುಖಪುಟವು ನಿಗೂಢವಾಗಿರಬೇಕು, ಪ್ರೇಮಕಥೆಯ ಮುಖಪುಟವು ಭಾವುಕವಾಗಿರಬೇಕು ಮತ್ತು ಭಯಾನಕ ಕಥೆಯ ಮುಖಪುಟವು ಗಾಢ ಅಥವಾ ಭಯಾನಕ ಅನುಭವ ನೀಡುವಂತಿರಲಿ. ೩. ದಾರಿತಪ್ಪಿಸುವ ಮುಖಪುಟಗಳನ್ನು ಬಳಸಬೇಡಿ ನಿಮ್ಮ ಕಥೆಗೆ ಸಂಪೂರ್ಣವಾಗಿ ಭಿನ್ನವಾದ ಭಾವನೆ ನೀಡುವ ಮುಖಪುಟವನ್ನು ಬಳಸಬೇಡಿ. ಮುಖಪುಟವು ಪ್ರೇಮಕಥೆಯಂತೆ ಕಂಡುಬಂದು, ಕಥೆಯು ಕ್ರೈಮ್ ಥ್ರಿಲ್ಲರ್ ಆಗಿದ್ದರೆ, ತಪ್ಪಾದ ವಾಚಕರು ಕಥೆಯನ್ನು ತೆರೆದು ತಕ್ಷಣವೇ ಹೊರನಡೆಯಬಹುದು. ೪. ಪ್ರಸಿದ್ಧ ವ್ಯಕ್ತಿಗಳು ಅಥವಾ ನಟ-ನಟಿಯರ ಛಾಯಾಚಿತ್ರಗಳನ್ನು ಬಳಸಬೇಡಿ ನಟರ ಛಾಯಾಚಿತ್ರಗಳು, ಚಲನಚಿತ್ರದ ಪೋಸ್ಟರ್ಗಳು ಅಥವಾ ಹಕ್ಕುಸ್ವಾಮ್ಯ ಹೊಂದಿರುವ ಚಿತ್ರಗಳನ್ನು ಮುಖಪುಟವಾಗಿ ಬಳಸುವುದನ್ನು ತಪ್ಪಿಸಿ. ಇದು ನಿಮ್ಮ ಕಥೆಯ ಮೌಲ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಮುಂದೆ ಹಕ್ಕುಸ್ವಾಮ್ಯದ ಸಮಸ್ಯೆಗಳನ್ನು ತಂದೊಡ್ಡಬಹುದು. ೫. ಸರಳ ಚಿಹ್ನೆಗಳನ್ನು ಬಳಸಿ ಚಿಕ್ಕ ಚಿಕ್ಕ ದೃಶ್ಯ ಚಿಹ್ನೆಗಳು ವಾಚಕರಿಗೆ ಕಥೆಯನ್ನು ವೇಗವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಉದಾಹರಣೆಗೆ, ಆಸ್ಪತ್ರೆಯ ಚಿಹ್ನೆಯು ವೈದ್ಯಕೀಯ ಕಥಾವಸ್ತುವನ್ನು, ನೆರಳುಗಳು ನಿಗೂಢತೆಯನ್ನು ಮತ್ತು ಮದುವೆಯ ಚಿಹ್ನೆಯು ಕೌಟುಂಬಿಕ ಅಥವಾ ಸಂಬಂಧಗಳ ಕಥೆಯನ್ನು ಸೂಚಿಸುತ್ತದೆ. ೬. ಬಣ್ಣಗಳನ್ನು ಜಾಗರೂಕತೆಯಿಂದ ಆಯ್ಕೆಮಾಡಿ ಬಣ್ಣಗಳು ವಾಚಕರ ಮನಸ್ಸಿನಲ್ಲಿ ಭಾವನೆಗಳನ್ನು ಮೂಡಿಸುತ್ತವೆ. ಗಾಢ ಬಣ್ಣಗಳು ನಿಗೂಢ ಅಥವಾ ಭಯಾನಕ ಕಥೆಗಳಿಗೆ ಸೂಕ್ತವಾಗಿದ್ದರೆ, ಉಜ್ವಲ ಅಥವಾ ಮೃದುವಾದ ಬಣ್ಣಗಳು ಪ್ರೇಮಕಥೆ, ಹಾಸ್ಯ ಅಥವಾ ಸಾಧಾರಣ ಕಥೆಗಳಿಗೆ ಉತ್ತಮವಾಗಿ ಒಪ್ಪುತ್ತವೆ. ೭. ಪ್ರಕಟಿಸುವ ಮೊದಲು ಪರಿಶೀಲಿಸಿ ಪ್ರಕಟಿಸುವ ಮೊದಲು, ವಾಚಕರು ೩ ಸೆಕೆಂಡುಗಳಲ್ಲಿ ನಿಮ್ಮ ಕಥೆಯ ಪ್ರಕಾರ, ಭಾವನೆ ಮತ್ತು ಮುಖ್ಯ ಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಎಂದು ನಿಮಗಷ್ಟೇ ಕೇಳಿಕೊಳ್ಳಿ. ಸಾಧ್ಯವಿಲ್ಲ ಎಂದಾದರೆ, ಮುಖಪುಟವನ್ನು ಮತ್ತಷ್ಟು ಸ್ಪಷ್ಟವಾಗಿ ಮತ್ತು ಸುಲಭವಾಗಿ ಅರ್ಥವಾಗುವಂತೆ ಬದಲಾಯಿಸಿ. ಅಂತಿಮ ಸಂದೇಶ: ನಿಮ್ಮ ಕಥೆಯ ಮುಖಪುಟವು ಕೇವಲ ಅಲಂಕಾರವಲ್ಲ; ಅದು ನೀವು ಓದುಗರಿಗೆ ನೀಡುವ ಮೊದಲ ಭರವಸೆ. ಒಂದು ಉತ್ತಮ ಮುಖಪುಟವು ಸರಿಯಾದ ಓದುಗರನ್ನು ಆಕರ್ಷಿಸುತ್ತದೆ, ಕಥೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರು ಓದುವುದನ್ನು ಮುಂದುವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಬರೆಯುವ ಆನಂದ ನಿಮ್ಮದಾಗಲಿ! ಪ್ರತಿಲಿಪಿಕನ್ನಡ ಬಳಗಇನ್ನೂ ಹೆಚ್ಚು ತೋರಿಸಿ
- ಪ್ರತಿಲಿಪಿಯ ಆತ್ಮೀಯ ಪತ್ರ01 ಏಪ್ರಿಲ್ 2026ಆತ್ಮೀಯ ಸಾಹಿತಿಗಳೇ, ದೀರ್ಘಕಾಲದಿಂದ ನಿಮಗೆ ಈ ಪತ್ರವನ್ನು ಬರೆಯಬೇಕು ಎಂಬ ಹಂಬಲ ನಮ್ಮದಾಗಿತ್ತು. ಇದು ಕೇವಲ ಒಂದು ಸಂಸ್ಥೆಯ ಅಧಿಕೃತ ಸಂದೇಶವಲ್ಲ; ಬದಲಿಗೆ 'ಪ್ರತಿಲಿಪಿ'ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹೃದಯಿಗಳ ಮಾತು! ಪ್ರತಿಲಿಪಿ ತಂಡದ ಬಹುಪಾಲು ಸದಸ್ಯರು ಕೂಡ ನಿಮ್ಮಂತೆ ಬರಹಗಾರರೇ ಆಗಿರುವುದರಿಂದ ಕೃತಿಯ ಕಲ್ಪನೆ, ಅದರ ಬರಹ ರೂಪ, ಕಥೆಯನ್ನು ವಿಸ್ತರಿಸುವಲ್ಲಿನ ಸವಾಲು, ವಿವಿಧ ತಿರುವುಗಳನ್ನು ಅಚ್ಚರಿಗಳನ್ನು ಓದುಗರಿಗೆ ನೀಡುವಾಗಿನ ಕಾತರ, ಭಯ ಮತ್ತು ಪ್ರಕಟಿಸಿದ ಬಳಿಕದ ನಿರಾಳತೆ ಇವುಗಳನ್ನೆಲ್ಲ ನಾವು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಓದುಗರು ಕತೆಯನ್ನು ಓದಿದಾಗ, ಅವರಿಗೆ ಕಾಣುವುದು ಕೇವಲ ಪ್ರಕಟವಾದ ಸಾಲುಗಳು ಮಾತ್ರ. ಆದರೆ ಆ ಹಂತವನ್ನು ತಲುಪಲು ಒಬ್ಬ ಲೇಖಕ ಪಟ್ಟ ಕಷ್ಟ, ವಿನಿಯೋಗಿಸಿದ ಸಮಯ ಮತ್ತು ತ್ಯಾಗ ಲೇಖಕನಿಗಷ್ಟೇ ಗೊತ್ತು. ದೈನಂದಿನ ಉದ್ಯೋಗ/ವ್ಯವಹಾರ, ಮನೆಯ ಜವಾಬ್ದಾರಿಗಳು, ಓದು, ಆರೋಗ್ಯ ಸಮಸ್ಯೆಗಳು ಮತ್ತು ಸಾಂಸಾರಿಕ ಜಂಜಡಗಳ ನಡುವೆ ಸಿಗುವ ಅಲ್ಪ ಸಮಯದಲ್ಲಿ ಬರೆಯುವುದು, ಬದುಕು ಮತ್ತು ಬರಹದ ನಡುವೆ ಸಮತೋಲನ ಕಾಯ್ದುಕೊಳ್ಳುವುದು, ಹೇಳಲಾಗದ ಕತೆಯನ್ನು ದಿನಗಟ್ಟಲೆ ಮನಸ್ಸಿನಲ್ಲೇ ಹೊತ್ತು ತಿರುಗುವುದು, ಆಗಾಗ ಕಾಡುವ ಆತ್ಮವಿಶ್ವಾಸದ ಕೊರತೆ, ಅರ್ಧಕ್ಕೆ ನಿಂತ ಕರಡು ಪ್ರತಿಗಳು, ಪ್ರಕಟಿಸುವಾಗ ಕಾಡುವ ಆತಂಕ... ಇವೆಲ್ಲದರ ನಡುವೆಯೂ ನನ್ನ ಕಥೆ ಪ್ರತಿಲಿಪಿಯ ಮೂಲಕ ಸಾವಿರಾರು ಅರ್ಹ ಓದುಗರನ್ನು ತಲುಪುತ್ತದೆ ಎಂಬ ಆಶಯವಿದೆಯಲ್ಲವೇ? ಅದುವೇ ನಿಮ್ಮ ಬರಹದ ಶಕ್ತಿ. ಬರವಣಿಗೆ ಎಂಬುದು ಕೆಲವೊಮ್ಮೆ ಏಕಾಂಗಿತನದಿಂದ ಕೂಡಿರಬಹುದು, ಆದರೆ ಅದು ನೋವಿಗೆ ಮದ್ದಾಗಬಲ್ಲದು. ಪ್ರತಿಲಿಪಿಯಲ್ಲಿ ಪ್ರಕಟಗೊಂಡ ನನ್ನ ಬರಹಗಳ ಮೂಲಕ ಗಳಿಸಿದ ಸಂಪಾದನೆ ನನ್ನ ಯಾವುದೋ ದೊಡ್ಡ ಸಂಕಷ್ಟದಿಂದ ಪಾರು ಮಾಡಿತು, ವೈಯಕ್ತಿಕ ನಷ್ಟ/ನೋವಿನ ಸಮಯದಲ್ಲಿ ಅಥವಾ ಆಂತರಿಕ ಸಂಘರ್ಷಗಳ ಸಂದರ್ಭದಲ್ಲಿ ಓದುಗರ ಅಭಿಪ್ರಾಯ ವಿಮರ್ಶೆಗಳು ಹೊಸ ಉತ್ಸಾಹ ಸ್ಫೂರ್ತಿ ನೀಡಿದವು, ಜೀವನವನ್ನು ಧನಾತ್ಮಕವಾಗಿ ನೋಡಲು ಓದುಗರ ಪ್ರೀತಿಯ ಅಭಿಮಾನದ ಸಂದೇಶ, ಸಾಂತ್ವನಗಳು ನೆರವಾದವು ಎಂಬರ್ಥದ ಸಂದೇಶಗಳು ಅಭಿಪ್ರಾಯಗಳು ನಮಗೆ ಆಗಾಗ ಬರುತ್ತಿರುತ್ತವೆ. ಹಾಗಾಗಿಯೇ ನಾವು ಬರವಣಿಗೆಯನ್ನು ಅತ್ಯಂತ ಗೌರವಯುತವಾದ ಕೌಶಲ್ಯ ಎಂದು ಭಾವಿಸುತ್ತೇವೆ. ಕಳೆದ ಕೆಲವು ತಿಂಗಳುಗಳಿಂದ ಪ್ರತಿಲಿಪಿಯ ಬೇರೆ ಬೇರೆ ಭಾಷೆಗಳಲ್ಲಿ ನಮ್ಮ 'ವೀಕ್ಲಿ ಕಮ್ಯುನಿಟಿ ಸೆಷನ್ಸ್' ಮೂಲಕ ನಾವು ನಿಮ್ಮಲ್ಲಿ ಅನೇಕರೊಂದಿಗೆ ಸಂವಾದ ನಡೆಸಿದ್ದೇವೆ. ಈ ಸಂದರ್ಭದಲ್ಲಿ ಒಂದು ಮುಖ್ಯವಾದ ಪ್ರಶ್ನೆ ನಮ್ಮನ್ನು ಕಾಡುತ್ತಿದೆ: ಪ್ರೇಮಕಥೆಗಳ ಹೊರತಾಗಿ ಇತರ ಪ್ರಕಾರದ ಕಥೆಗಳು ಹೆಚ್ಚು ಓದುಗರನ್ನು ತಲುಪುವುದು ಹೇಗೆ? ಖಂಡಿತವಾಗಿಯೂ ಪ್ರತಿಲಿಪಿಯಲ್ಲಿ ಪ್ರೇಮಕಥೆಗಳಿಗೆ ಯಾವಾಗಲೂ ವಿಶೇಷ ಸ್ಥಾನವಿದ್ದೇ ಇರುತ್ತದೆ. ಆದರೆ ಹಾರರ್, ಸಸ್ಪೆನ್ಸ್ ಮತ್ತು ಕ್ರೈಮ್ ಥ್ರಿಲ್ಲರ್ನಂತಹ ಪ್ರಕಾರಗಳಿಗೂ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಾಗ, ಲೇಖಕರು ಓದುಗರ ಸಂಖ್ಯೆ ಅಥವಾ ಆದಾಯದ ಬಗ್ಗೆ ಚಿಂತಿಸದೆ ಮುಕ್ತವಾಗಿ ಪ್ರಯೋಗಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ಅದರ ಮೊದಲ ಹೆಜ್ಜೆಯಾಗಿ, ನಾವು ಹಾರರ್, ಕ್ರೈಮ್ ಥ್ರಿಲ್ಲರ್ ಅಥವಾ ಫ್ಯಾಂಟಸಿ ಕಥೆಗಳಿಗಾಗಿ ಹೊಸ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಈ ಕ್ಲಿಕ್ ಮಾಡುವ ಮೂಲಕ ನೀವು ಭಾಗವಹಿಸಬಹುದು ಮತ್ತು ನಿಮ್ಮ ಓದುಗರ ಬಳಗವನ್ನು ವಿಸ್ತರಿಸಿಕೊಳ್ಳಬಹುದು : https://kannada.pratilipi.com/event/cq0fu1hnqh ನಾವು ನಿಮಗೆ ನೀಡಬಯಸುವ ಇನ್ನೊಂದು ಮುಖ್ಯ ಭರವಸೆಯೆಂದರೆ: ನಾವು ನಿಮ್ಮ ಮಾತುಗಳನ್ನು ಆಲಿಸುತ್ತೇವೆ. ಪ್ರತಿಲಿಪಿಯಲ್ಲಿ ನಿಮ್ಮ ಅನುಭವ ಹೇಗಿದೆ? ನಿಮಗೆ ಇಲ್ಲಿ ಏನು ಇಷ್ಟವಾಯಿತು ಮತ್ತು ಏನನ್ನು ಸರಿಪಡಿಸಬೇಕಿದೆ? ನಾವು ಯಾವೆಲ್ಲಾ ಹೊಸ ಸೌಲಭ್ಯಗಳನ್ನು ತರಬೇಕೆಂದು ನೀವು ಬಯಸುತ್ತೀರಿ? ಇವೆಲ್ಲವನ್ನೂ ಈ ಕೆಳಗಿನ ಸರ್ವೇ ಲಿಂಕ್ ಭರ್ತಿ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ: https://docs.google.com/forms/d/e/1FAIpQLSdpKo3TwoLVhymoXUeYYYrqMMx7MKjLnvNBpVn5dhixQE5P0w/viewform?usp=publish-editor ನಿಮ್ಮ ಪ್ರತಿಯೊಂದು ಅಭಿಪ್ರಾಯವನ್ನೂ ನಮ್ಮ ತಂಡವು ಸೂಕ್ಷ್ಮವಾಗಿ ಗಮನಿಸುತ್ತದೆ. ಬರೆದು ಪ್ರಕಟಿಸಿ ಓದುಗರ ಮನಗೆಲ್ಲಲು ಶ್ರಮಿಸುತ್ತಿರುವುದಕ್ಕಾಗಿ ಧನ್ಯವಾದಗಳು. ಹಲವು ಸವಾಲುಗಳ ನಡುವೆಯೂ ನಿಮ್ಮ ಸಾಹಿತ್ಯಿಕ ಪಯಣವನ್ನು ಮುಂದುವರೆಸುತ್ತಿರುವುದಕ್ಕಾಗಿ ವಂದನೆಗಳು. ಮತ್ತು ನಿಮ್ಮ ಮನಸ್ಸಿನ ಭಾವನೆ, ಕಲ್ಪನೆ ಮತ್ತು ವಿಚಾರಗಳನ್ನು ಅಕ್ಷರ ರೂಪದಲ್ಲಿ ಪ್ರತಿಲಿಪಿಯಲ್ಲಿ ಪ್ರಕಟಿಸಿ ಓದುಗರನ್ನು ಸಂತಸಪಡಿಸುತ್ತಿರುವುದಕ್ಕೆ ನಾವು ನಿಮಗೆ ಆಭಾರಿಯಾಗಿದ್ದೇವೆ. ನಿಮ್ಮ ವಿಶ್ವಾಸನೀಯ, ಪ್ರತಿಲಿಪಿಕನ್ನಡ ಬಳಗಇನ್ನೂ ಹೆಚ್ಚು ತೋರಿಸಿ
- ಪ್ರತಿಲಿಪಿ ಕಥಾ ಅವಾರ್ಡ್ಸ್ ಸೀಸನ್ 1 ಸ್ಪರ್ಧೆಯ ಫಲಿತಾಂಶ16 ಮಾರ್ಚ್ 2026ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ಕನ್ನಡ ಆಯೋಜಿಸಿದ್ದ ಪ್ರತಿಲಿಪಿ ಕಥಾ ಅವಾರ್ಡ್ಸ್ ಸೀಸನ್ 1 ಸ್ಪರ್ಧೆಗೆ ಬರಹಗಾರರು ತೋರಿಸಿರುವ ಉತ್ಸಾಹ, ಪ್ರೀತಿ ಅಪಾರ. ಬರಹಗಾರರು ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರ ಮನಗೆಲ್ಲುವ ಉತ್ತಮ ಕೃತಿಗಳನ್ನು ರಚಿಸಿ, ಪ್ರಕಟಿಸಿ ಸ್ಪರ್ಧೆಯ ಉದ್ದೇಶವನ್ನು ಪೂರ್ಣಗೊಳಿಸಿದ್ದಾರೆ. ಕೌಟುಂಬಿಕ, ಪ್ರೀತಿ, ಮಹಿಳೆ, ಸಾಮಾಜಿಕ, ಪೌರಾಣಿಕ, ಅಪರಾಧ, ವೈಜ್ಞಾನಿಕ ಫ್ಯಾಂಟಸಿ, ಹಾರರ್ ಹೀಗೆ ವಿವಿಧ ಪ್ರಭೇದಗಳ ಮೇಲೆ ವಿಭಿನ್ನ ರೀತಿಯ ಕೃತಿಗಳು ರಚನೆಯಾಗಿವೆ. ಉತ್ತಮ ಕಥಾಹಂದರ, ಪಾತ್ರಪೋಷಣೆಗಳು ಕತೆಯನ್ನು ಇನ್ನಷ್ಟು ಸ್ವಾರಸ್ಯಕರವಾಗಿಸಿವೆ. ಪ್ರತಿಯೊಂದು ಕತೆಗಳು ತನ್ನದೇ ಆದ ವೈಶಿಷ್ಟ್ಯಪೂರ್ಣ ಪ್ರಭಾವವನ್ನು ಓದುಗರ ಮೇಲೆ ಬೀರುವಂತಿವೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ, ಪರಿಶ್ರಮ ಮತ್ತು ಬದ್ಧತೆಯಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ ಪ್ರತಿಲಿಪಿ ಕಥಾ ಅವಾರ್ಡ್ಸ್ ಸ್ಪರ್ಧೆಯ ಉದ್ದೇಶ - ಉದಯೋನ್ಮುಖ ಮತ್ತು ಜನಪ್ರಿಯ ಬರಹಗಾರರನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ಕತೆಗಳನ್ನು ಸುದೀರ್ಘ ಧಾರಾವಾಹಿಗಳ ರೂಪದಲ್ಲಿ ಸಕ್ರಿಯವಾಗಿ ಬರೆದು ಪ್ರಕಟಿಸಲು ಪ್ರೇರೇಪಿಸುವುದಾಗಿತ್ತು. ಜೊತೆಗೆ ಅವರ ಓದುಗರು, ಹಿಂಬಾಲಕರು, ಸಬ್ಸ್ಕ್ರೈಬರ್ ಗಳನ್ನು ಅಧಿಕಗೊಳಿಸಿ, ನಿರಂತರ ಆದಾಯ ಗಳಿಕೆಯನ್ನು ಖಾತ್ರಿಪಡಿಸುವುದಾಗಿತ್ತು! ಸ್ಪರ್ಧೆಯ ಕೃತಿಗಳನ್ನು ಗಮನಿಸಿದಾಗ ಸ್ಪರ್ಧೆಯ ಉದ್ದೇಶ ತಕ್ಕಮಟ್ಟಿಗೆ ಸಫಲವಾಗಿದೆ ಎನ್ನಬಹುದು. ಧಾರಾವಾಹಿ ಬರೆಯುವಿಕೆ ಸುದೀರ್ಘ ಮತ್ತು ಸೃಜನಶೀಲ ಪ್ರಕ್ರಿಯೆ; ಸಂಕೀರ್ಣ ಮತ್ತು ಜಟಿಲವೂ ಹೌದು. ಕಥಾವಸ್ತುವಿನ ನಿರ್ವಹಣೆ, ಪ್ರಸ್ತುತಿಯಲ್ಲಿ ಸಾಕಷ್ಟು ತಾಳ್ಮೆ, ಬದ್ಧತೆ ಇರಬೇಕು. ಸೃಷ್ಟಿಸಿದ ಪಾತ್ರಗಳನ್ನು, ಸನ್ನಿವೇಶಗಳನ್ನು ನಿರಂತರವಾಗಿ ಬೆಳೆಸುವ, ತಿದ್ದುವ, ಪೋಷಿಸುವ ಸಹನೆ ಇರಬೇಕು. ಒಟ್ಟಾರೆ ಸುದೀರ್ಘ ಧಾರಾವಾಹಿ ಬರೆಯುವುದು ಮತ್ತು ಓದುವುದು ತಾಳ್ಮೆಯನ್ನು ಬೇಡುವ ಕೆಲಸ. ಹೀಗಿದ್ದೂ ಈ ಸ್ಪರ್ಧೆಗೆ ಅರವತ್ತಕ್ಕೂ ಅಧಿಕ ಧಾರಾವಾಹಿಗಳು ಪ್ರಕಟಗೊಂಡಿರುವುದು ಬರಹಗಾರರ ಹುಮ್ಮಸ್ಸನ್ನು ತೋರಿಸುತ್ತದೆ. ಬರಹಗಾರರು ಧಾರಾವಾಹಿ ರಚನಾ ಕೌಶಲ್ಯದಲ್ಲಿ ಪಳಗುತ್ತಿರುವುದು ಅವರ ಕೃತಿಗಳಲ್ಲಿ ಕಂಡುಬರುತ್ತಿದೆ. ಆದರೂ ಹಲವು ವಿಚಾರಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ಮಾಡಿಕೊಂಡರೆ ಇನ್ನಷ್ಟು ಅದ್ಭುತ ಕೃತಿಗಳು ಕನ್ನಡ ಸಾಹಿತ್ಯ ಪ್ರೇಮಿಗಳ ಹೃದಯವನ್ನಾಳುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ಕತೆಯನ್ನು ರಚಿಸುವಾಗ ಅಂತ್ಯದವರೆಗೂ ಒಂದು ಸ್ಪಷ್ಟ ಚಿತ್ರಣವನ್ನು ರೂಪಿಸಿಕೊಂಡರೆ ಗೊಂದಲ, ಗೋಜಲುಗಳಿಲ್ಲದೆ ಅಧ್ಯಾಯಗಳನ್ನು ರಚಿಸಲು ಸುಲಭವಾಗಬಹುದು. ಕೇವಲ ಸಂಭಾಷಣೆಗಳ ಮೂಲಕ ಕತೆಯನ್ನು ಹೇಳುವುದಕ್ಕಿಂತ ಸಂದರ್ಭಾನುಸಾರ ವಿವರಣೆಗಳು ಕತೆಯ ಮೆರುಗನ್ನು ಹೆಚ್ಚಿಸುತ್ತವೆ. ಕಥಾಪ್ರವೇಶಕ್ಕೂ ಮುನ್ನ ಹಲವು ರೀತಿಯ ಯೋಜನೆ, ಅಧ್ಯಯನಗಳು ಧಾರಾವಾಹಿ ರಚನೆಯನ್ನು ಪರಿಣಾಮಕಾರಿಯಾಗಿಸುತ್ತವೆ. ಭಾಷಾ ಶುದ್ಧತೆಯ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಎಲ್ಲಾ ಬರಹಗಾರರೂ ಸ್ಪರ್ಧೆಯಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸುತ್ತೇವೆ. ಬರಹಗಾರರ ಕೃತಿ ರಚನಾ ಕೌಶಲ್ಯ ಇನ್ನಷ್ಟು ಸುಧಾರಿಸಿ ಅತ್ಯುತ್ತಮ ಕೃತಿಗಳ ಮೂಲಕ ಅವರು ಕನ್ನಡ ಸಾಹಿತ್ಯಾಸಕ್ತರನ್ನು ಮನರಂಜಿಸುವಂತಾಗಲಿ ಎಂಬುದು ನಮ್ಮ ಆಶಯ. ವಿಜೇತ ಸಾಹಿತಿಗಳ ಪಟ್ಟಿ ಪ್ರಥಮ ಬಹುಮಾನ: 15,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಸೌಮ್ಯ ವಸಿಷ್ಠಅವರಫೆಮ್-ಟೋಪಿಯಾ ಕೃತಿಯ ಕುರಿತು:ಆಯ್ಕೆ ಮಾಡಿಕೊಂಡ ಕಥಾವಸ್ತು ಬಹಳ ವಿಭಿನ್ನವಾಗಿದ್ದು, ನಿರೂಪಣಾ ಶೈಲಿ ಓದುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಆಂಗ್ಲ ಪದಗಳ ಬಳಕೆಯನ್ನು ಕನ್ನಡದಲ್ಲಿ ಲಿಪ್ಯಂತರಣ ಮಾಡಿರದಿದ್ದಲ್ಲಿ ಓದು ಇನ್ನಷ್ಟು ಸರಾಗವಾಗಿ ಆಗಬಹುದಿತ್ತು. ಅದರ ಹೊರತಾಗಿ ಕಥಾಹಂದರವನ್ನು ಅಭಿವೃದ್ಧಿಪಡಿಸಿದ ರೀತಿ, ಪಾತ್ರಪೋಷಣೆ, ವೈಜ್ಞಾನಿಕ, ವೈದ್ಯಕೀಯ ವಿಷಯಗಳ ಸರಳ ನಿರೂಪಣೆ ಎಲ್ಲವೂ ಕತೆಯ ಮೆರಗನ್ನು ಹೆಚ್ಚಿಸಿವೆ. ದ್ವಿತೀಯ ಬಹುಮಾನ: 7,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಓಂಪ್ರಕಾಶ್ ನಾಯ್ಕ್ಅವರಅಮೆಜಾನ್ ಕೃತಿಯ ಕುರಿತು:ವೈಜ್ಞಾನಿಕ ಫ್ಯಾಂಟಸಿ ಕಥಾಹಂದರವನ್ನು ಸಾಹಸಮಯವಾಗಿ ಚಿತ್ರಿಸಿರುವುದು ಬಹಳ ಉತ್ತಮವಾಗಿ ಮೂಡಿಬಂದಿದೆ. ಕಥಾವಸ್ತು, ನಿರೂಪಣೆ, ಪಾತ್ರಗಳು ಎಲ್ಲವೂ ಹದವಾಗಿ ಬೆರೆತು; ಪ್ರತಿ ಹಂತದಲ್ಲಿಯೂ ಕುತೂಹಲವನ್ನು ಉಳಿಸಿಕೊಂಡು ಓದುಗರಿಗೆ ರೋಚಕ ಪ್ರಯಾಣವನ್ನು ಮೂಡಿಸುತ್ತದೆ. ತೃತೀಯ ಬಹುಮಾನ: 5,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೃಷ್ಣಪ್ರಿಯೆ ಕೆ.ವಿ.ಕೆಅವರಮಾಯಾಪುರ... ದಿ ಹಿಡನ್ ಹ್ಯಾಬಿಟೇಟ್ ಕೃತಿಯ ಕುರಿತು:ವೈಜ್ಞಾನಿಕ, ಸಾಮಾಜಿಕ, ಪ್ರೇಮ ಪ್ರಭೇದಗಳನ್ನು ಮೇಳೈಸಿ ಸಾಹಸಮಯವಾದ ಕೃತಿಯನ್ನು ರಚಿಸಿರುವುದು ಒಂದು ವಿಭಿನ್ನ ಪ್ರಯೋಗದಂತೆ ಭಾಸವಾಗುತ್ತದೆ. ಉತ್ತಮ ಪಾತ್ರಪೋಷಣೆ, ಗಟ್ಟಿ ನಿರೂಪಣೆ, ರೋಚಕ ತಿರುವುಗಳ ಮೂಲಕ ಓದುಗರನ್ನು ಸೆಳೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ನಾಲ್ಕನೆಯ ಬಹುಮಾನ: 3,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ರತ್ನಾ ಪಟವರ್ಧನ್ಅವರನರ್ತನ ನಗರಿ ಐದನೆಯ ಬಹುಮಾನ: 3,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ವೀಣಾ ವಿನಾಯಕಅವರಹಾವಿನ ಹೆಜ್ಜೆ ಆರನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನವಿಅವರಬಿಡಲಾರೆ ಎಂದು ನಿನ್ನ ಏಳನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ವಿನುತಾಮುರಳಿಅವರಅಗರ್ತಲ (ಅರಣ್ಯದಲ್ಲಿ ಆರಂಭವಾದ ಯುಗಾಂತರದ ಸಮರ) ಎಂಟನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಅಶೋಕ್ ಕುಮಾರ್ ಜಿ. ಎಸ್ಅವರಸ್ವರ್ಗಕ್ಕೆ ಕಿಚ್ಚು ಹಚ್ಚಿದ ಒಂಬತ್ತನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಭಾನು ಶ್ರೀಪಾದ್ಅವರದೂರ ತೀರ ಯಾನ ಹತ್ತನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಾಗಲಕ್ಷ್ಮಿ ಪ್ರಸನ್ನ ಕುಮಾರ್ಅವರಕಾಡುತಿವೆ ನೆನ್ನೆಗಳು ಹನ್ನೊಂದರಿಂದ ಇಪ್ಪತ್ತನೆಯ ಸ್ಥಾನ ವಿಜೇತರ ಯಾದಿ ಈ ಕೃತಿಗಳ ಕರ್ತೃಗಳಿಗೆ ವಿಜೇತ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು ಮತ್ತು ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುವುದು. ಸ್ಥಾನ ಕೃತಿ ಕರ್ತೃ 11 ಅಹಲ್ಯ ಪುನರ್ಭವ ಜಯಶ್ರೀ ಅಂಗಡಿ 12 "ಅಗ್ನಿಶಿಖಾ"(ಸತ್ಯದ ಪಥದಲ್ಲಿ ಕತ್ತಲ ಛಾಯೆ) ಮಾಲಾ ಶ್ರೀನಿವಾಸ್ ಭಟ್ 13 ಶಾರ್ವರಿ ಸೀತಾರಾಮ ಕಾನಳ್ಳಿ 14 ಕ್ರೈಮ್ ಫೈಲ್ಸ್ -ಸಾವಿನ ರಹಸ್ಯ ಡಿಸಿ ಗೌಡ 15 ಕಾಗದದ ಹೂವು ಸಹ್ಲಾ ಎಸ್ 16 ಸಂಪತ್ ನಿಲಯ ಶುಭಾ ಶ್ರೀನಾಥ್ 17 ಕರ್ಮಸಂಜೀವಿನಿ ವಿದ್ಯಾ ವೈ. ಎಸ್ 18 ಹೊಸಬೆಳಕು ವೈಷ್ಣವಿ 19 ಹೆಜ್ಜೆ ಸಂಧ್ಯಾ ಭಟ್ 20 ಯುಗಂಧರ ಅಪೂರ್ವ ಪ್ರೇಮಕಾವ್ಯ ರಶ್ಮಿ ಭಟ್ಟ ರಾವ್ ಪಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಯನ್ನು ರಚಿಸಿದವರ ಯಾದಿ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 100 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಅವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು. ಇವುಗಳಲ್ಲಿ ರೀಡರ್ ಎಂಗೇಜ್ಮೆಂಟ್ ಆಧಾರದ ಮೇಲೆ ಟಾಪ್ 10 ಧಾರಾವಾಹಿಗಳ ಕರ್ತೃಗಳಿಗೆ ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿಯನ್ನು ಅವರು ನೀಡುವ ವಿಳಾಸಕ್ಕೆ ಕೋರಿಯರ್ ಮೂಲಕ ಕಳುಹಿಸಲಾಗುವುದು. ಈ ಕೆಳಗೆ ಎಂಗೇಜ್ಮೆಂಟ್ ಸ್ಕೋರ್ ಆಧಾರದ ಮೇಲೆ ಧಾರಾವಾಹಿಗಳನ್ನು ಕ್ರಮವಾಗಿ ಪಟ್ಟಿ ಮಾಡಲಾಗಿದೆ. ಕ್ರ.ಸಂ. ಕೃತಿ ಕರ್ತೃ 1 ಲವ್ ಮೀ ಒನ್ಸ್ ಮನುಪ್ರಿಯ 2 ನಿನ್ನಾಣೆ ನನ್ನೊಲವೇ ಕೇಳು... ಶ್ರೀ ಹರಿಣಿ 3 ಮಸಣದ ಹೂ ರೇಖಾ ಕೆ ಎಸ್ 4 ದುರಂಧರ ಬನಶಂಕರಿ ಕುಲಕರ್ಣಿ 5 ಹಿಟ್ಲರ್ ಗಂಡ ಚೈತ್ರ ಯೋಗೇಶ್ 6 ಕೃಷ್ಣ ಸುಂದರಿ ರಚ್ಚು 7 ಏಳು ಜನ್ಮಕೂ... ಅಜೇಯ ನೀರ್ಕಜೆ 8 ಗಹನ ದಿ ಬ್ಲಾಕ್ 9 ಧೈರ್ಯಂ ಸರ್ವತ್ರ ಸಾಧನಂ ಸವಿ ಹೆಬ್ಬಾರ 10 ಚಿರಸ್ವಿನಿ ಶ್ರೀಲೇಖ ಬೆಂದಕಾಳೂರು 11 ಅವನಿಯೊಡಲಲ್ಲಿ ಬಿತ್ತಿದ ಬದುಕು ಸ್ನೇಹ ಸೌರಭ ರತ್ನ 12 "ಅಗ್ನಿಶಿಖಾ"(ಸತ್ಯದ ಪಥದಲ್ಲಿ ಕತ್ತಲ ಛಾಯೆ) ಮಾಲಾ ಶ್ರೀನಿವಾಸ್ ಭಟ್ 13 ಸ್ನೇಹಿತೆ ಕೃಷ್ಣ ಪ್ರಿಯಾ 14 ಆರದಿರಲಿ ಬೆಳಕು ರಮ್ಯಾ ಅಬ್ಯುದಯ 15 ನಿನ್ನ ನಗುವಲ್ಲಿ ನಾನು! ರಂಜಿತಾ ಪಿ 16 ಅನುರಾಗದ ಅನುಬಂಧ ಅನಾಮಿಕನ ಗೆಳತಿ 17 ಸಂಹಾರ... ಐಶು 18 ಮೇಘಮಲ್ಲಿಗೆ ಪ್ರಸಾದ್ ಹೆಬ್ರಿ 19 ಬಂಧು ಬಳಗ ಎಲ್ಲವೂ ನನಗೆಂದಿಗೂ ನೀನು... ಪ್ರೀತಿ 20 ಅರಳದ ಪ್ರೀತಿಗೆ ಚಿಗುರಿದ ಕನಸು ನಿರ್ಮಲಾ ವಿಘ್ನೇಶ್ ಕೋಟ್ಯಾನ್ 21 ಬಾಂಬೆ ಬ್ಲಡ್ : ರುದ್ರ ವೇದನೆ ಗಾಯತ್ರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
