pratilipi-logo ಪ್ರತಿಲಿಪಿ
ಕನ್ನಡ

‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 10’ ಸ್ಪರ್ಧೆಯ ಫಲಿತಾಂಶ

15 ഒക്റ്റോബര്‍ 2025

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 10’ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. ‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. ಇದು ‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆಯ ಕೊನೆಯ ಆವೃತ್ತಿಯಾಗಿದ್ದು ಸಾಹಿತ್ಯಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡಿದೆ. 

 

12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಉತ್ತಮ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. 

 

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆ, ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.

 

ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ

 

‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆಯ ಕೊನೆಯ ಆವೃತ್ತಿಯಾದ ‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 10’ ಸ್ಪರ್ಧೆ ಹಿಂದಿನ ಆವೃತ್ತಿಗಳಂತೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿ ಸ್ಪರ್ಧೆಯ ಯಶಸ್ಸಿಗೆ ಕಾರಣರಾದ ಎಲ್ಲ ಬರಹಗಾರರಿಗೆ ಧನ್ಯವಾದಗಳು. ಸ್ಪರ್ಧೆಯ ಕುರಿತು ನಿಮ್ಮ ಆಸಕ್ತಿ ಮತ್ತು ಉತ್ಸಾಹ ಶ್ಲಾಘನೀಯ.

 

ಸ್ಪರ್ಧೆಗೆ ಅರವತ್ತೈದಕ್ಕೂ ಅಧಿಕ ಕೃತಿಗಳು ಸಲ್ಲಿಸಲ್ಪಟ್ಟಿದ್ದವು. ಆದರೆ ಅವುಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಧಾರಾವಾಹಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗಿದೆ. ಕೆಲವು ಕೃತಿಗಳು ಕೊನೆಯ ಹಂತದಲ್ಲಿ ನಿಯಮ ಪಾಲಿಸದೆ ಸ್ಪರ್ಧೆಯಿಂದ ಹೊರಗುಳಿಯುವಂತಾದದ್ದು ವಿಷಾದದ ಸಂಗತಿ. ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲ ನಿಯಮಗಳು ಮತ್ತು ಕಾಲಾವಧಿಯನ್ನು ಗಮನದಲ್ಲಿಟ್ಟುಕೊಂಡು ಕೃತಿಗಳನ್ನು ಬರೆಯಲು ನಾವು ಸಲಹೆ ನೀಡುತ್ತೇವೆ. 

 

ದೀರ್ಘ ಧಾರಾವಾಹಿಗಳನ್ನು ರಚಿಸುವಾಗ ಬರಹಗಾರರಲ್ಲಿ ಕತೆಯನ್ನು ಮುಂದುವರೆಸುವಲ್ಲಿ ಅನೇಕ ತೊಡಕುಗಳು ಎದುರಾಗಬಹುದು. ಜೊತೆಗೆ ಸಮಯದ ಮಿತಿ ಒಳಪಟ್ಟಾಗ ಒತ್ತಡದ ಮನಸ್ಥಿತಿ ಒಂದು ಕೃತಿಯ ರೂಪುರೇಷೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಇವೆಲ್ಲವುಗಳನ್ನು ಸಮರ್ಥವಾಗಿ ಎದುರಿಸಿ ಬರಹಗಾರರು ಅತ್ಯುತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂದು ನಾವು ಬಯಸುತ್ತೇವೆ. 

 

ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಎಲ್ಲಾ ಕೃತಿಗಳೂ ವಿಭಿನ್ನ ಕಥಾಹಂದರ, ಪಾತ್ರಗಳು, ನಿರೂಪಣೆಯ ಮೂಲಕ ಗಮನ ಸೆಳೆಯುವಂತಿದ್ದವು. ಸಲ್ಲಿಸಲ್ಪಟ್ಟಿರುವ ಕೃತಿಗಳಲ್ಲಿ ಕಥಾಹಂದರ, ಸೃಜನಾತ್ಮಕತೆ, ಪಾತ್ರಪೋಷಣೆ, ನಿರೂಪಣೆ, ಭಾಷೆ ಮತ್ತು ವ್ಯಾಕರಣ ಶುದ್ಧಿ ಮುಂತಾದ ಮಾನದಂಡಗಳ ಆಧಾರದ ಮೇಲೆ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳನ್ನು ರಚಿಸುವತ್ತ ಗಮನ ಹರಿಸುವಂತಾಗಲಿ ಎಂದು ಆಶಿಸುತ್ತೇವೆ.

 

ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು-

 

ಪ್ರಥಮ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಪ್ರಶಾಂತ್ ಶಿರ್ವ ಅವರ ಸುಮೇರು

 

ಕತೆಯ ಕುರಿತು: ಪ್ರಕೃತಿ ಮಾನವನ ನಡುವಿನ ಸಂಬಂಧ, ಕತೆಯ ಕಾಲಘಟ್ಟದ ಜನಜೀವನದ ಬಿಂಬ, ಮಾನವನ ಆಸೆ,  ಪರಿಣಾಮಗಳು ಕೃತಿಯಲ್ಲಿ ಹದವಾಗಿ ಬೆರೆತಿವೆ. ಕೊನೆಯವರೆಗೂ ಓದಿಸಿಕೊಂಡು ಹೋಗಬಲ್ಲ ನಿರೂಪಣೆಯೊಂದಿಗೆ ಕತೆ ಚೆನ್ನಾಗಿ ಮುಡಿಬಂದಿದೆ. 

 

ದ್ವಿತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಶ್ರೀನಿವಾಸ್ ಸಂಡೂರ್ ಅವರ ಧಾರವ - ಸಮುದ್ರ ಗುಪ್ತ ಪರಾಕ್ರಮಾಂಕ

 

ಕತೆಯ ಕುರಿತು: ಐತಿಹಾಸಿಕ ವಸ್ತು ವಿಷಯವನ್ನೊಳಗೊಂಡ ಈ ಕತೆ ಅಧ್ಯಯನದ ಹಿನ್ನೆಲೆಯೊಂದಿಗೆ, ಉತ್ತಮ ಪಾತ್ರಪೋಷಣೆ, ಹದವಾದ ಸಂಭಾಷಣೆ, ಕಣ್ಣಿಗೆ ಕಟ್ಟುವಂತಹ ಸನ್ನಿವೇಶ ಚಿತ್ರಣಗಳ ಮೂಲಕ ಓದುಗನ ಗಮನ ಸೆಳೆಯುತ್ತದೆ. 

 

ತೃತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಅಭಿವ್ಯಕ್ತಿ ಅವರ ಹೈಜಾಕ್

 

ಕತೆಯ ಕುರಿತು: ಸಾಮಾಜಿಕ ಸಮಸ್ಯೆಯೊಂದರ ಸುತ್ತ ಹೆಣೆಯಲ್ಪಟ್ಟಿರುವ ಈ ಕತೆ ವಿಭಿನ್ನವಾದ ಕಥಾಹಂದರ, ಪಾತ್ರಚಿತ್ರಣ, ಸಾಮಾಜಿಯ ನ್ಯಾಯದ ಕುರಿತು ಕಾಳಜಿ ಮತ್ತು ಉತ್ತಮ ನಿರೂಪಣೆಯೊಂದಿಗೆ ಓದುಗರ ಮನಸೆಳೆಯುತ್ತದೆ. 

 

ನಾಲ್ಕನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಸಂಧ್ಯಾ ಭಟ್  ಅವರ ಪಾಂಚಜನ್ಯ

 

ಐದನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಉಮಾ ಶಂಕರಿ ಅವರ ಬಾಳ್ವೆಯ ತೆನೆ ತೂಗುವುದೇ..?

 

ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಸುಜಾತ ಗುರುಪಾದಸ್ವಾಮಿ ಅವರ ಸಂಯೋಗ (ಅವನ ಒಲವು)

 

ಏಳನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ವಿಜಯಲಕ್ಷ್ಮಿ ಎಸ್. ಅವರ ಗಗನ ಕುಸುಮ

 

ಎಂಟನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಜ್ಯೋತಿ ಬಾಳಿಗಾ ಅವರ ಬಂದೆಯಾ ಬಾಳಿಗೆ ಬೆಳಕಾಗಿ

 

ಒಂಬತ್ತನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಶ್ರೀಲೇಖ ಅವರ ಜೀವನ ಸಾಹಿತ್ಯ

 

ಹತ್ತನೆಯ ಬಹುಮಾನ: 2,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ರಂಗವಲ್ಲಿಸುತೆ ಅವರ ಸಾಧನೆಯ ಹಾದಿಯಲ್ಲಿ

 

ಹನ್ನೊಂದರಿಂದ ಇಪ್ಪತ್ತೈದನೆಯ ಸ್ಥಾನ ವಿಜೇತರ ಯಾದಿ 

 

ಈ ಕೃತಿಗಳ ಕರ್ತೃಗಳಿಗೆ ತಲಾ 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ ಮತ್ತು ವಿಶೇಷ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

ಕ್ರ.ಸಂ.

ಕೃತಿ 

ಕರ್ತೃ

11

ಕೊಳಲಿನ ಕರೆ

ವಿಜಯ ಭಾರತಿ

12

ಪುಷ್ಪಕ ವಿಮಾನ

ನವಿ

13

ಯಾಂತ್ರಿಕತೆಯ ಸುಳಿಯಲ್ಲಿ...

ರೇಖಾ ದೇವರಾಜ್

14

ಕಲ್ಲು ಗುಲಾಬಿ

ಚೈತ್ರ ಭಟ್

15

ಕೈಕೇಯಿ

ಬನಶಂಕರಿ ಕುಲಕರ್ಣಿ

16

ದಿಕ್ಸೂಚಿ

ಸೌಮ್ಯ ಶ್ರೀ

17

"ಅನುಕ್ತ" ಇದು ಮಾತಿಗೆ ನಿಲುಕದ್ದು...!

ವೇದಾ ಮಂಜುನಾಥನ್

18

ಆತ್ಮ ಬಂಧನ

ಕೃಷ್ಣ ತುಳಸಿ

19

ಬಾಳ ನಗುವಿನ ಬೆಳಕು ನೀನೇ

ಅಶ್ವಿನಿ ಜೈನ್

20

ಪ್ರೇಮದ ಕಾದಂಬರಿ

ಕ್ಷಿತಿಜಾ

21

ಹರೆಯದ ಪ್ರೀತಿ..!

ರಾಧಾ ಸನಾ

22

ಒಲವಿನಂತರಾಳದಿ(ಕೇಳದೆ ಹೃದಯದ ಪಿಸುಮಾತು?)

ಮಾಲಾ ಶ್ರೀನಿವಾಸ್ ಭಟ್

23

ನೀನಾದೆ ನನ್ನ ಬಾಳ ರತ್ನ ಮಂಜರಿ

ರಶ್ಮಿ ಅಂಗಡಿ

24

ಅನುರಾಗ ಮತ್ತೆ ಅರಳಿದಾಗ

ವಿದ್ಯಾ ವೈ. ಎಸ್

25

ಸದ್ದಿಲ್ಲದ ಮೆರವಣಿಗೆ...!!

ರೂಪಾ ರೈ



100 ಕ್ಕೂ ಅಧಿಕ ಅಧ್ಯಾಯಗಳನ್ನು ರಚಿಸಿದವರ ಯಾದಿ

 

ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 100 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಅವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.

 

ಕ್ರ.ಸಂ.

ಕೃತಿ 

ಕರ್ತೃ

1

ಪುಟ್ಟ ಗೌರಿ ಮದುವೆ

ರೇಖಾ ಕೆ ಎಸ್

2

ಜೀವನ ಸಾಹಿತ್ಯ

ಶ್ರೀಲೇಖ

3

ಬಾಳ ನಗುವಿನ ಬೆಳಕು ನೀನೇ

ಅಶ್ವಿನಿ ಜೈನ್

4

ಕಲ್ಲು ಗುಲಾಬಿ

ಚೈತ್ರ ಭಟ್

5

ಕಾರ್ಮೋಡ ಕರಗಿತು ಸೀಸನ್ 2

ವಿದ್ಯಾ ವಾಮಂಜೂರು

6

ಈ ಉಸಿರಿರುವವರೆಗೂ ಕಾಯುವೆ ನಿನ್ನ ಪ್ರೀತಿಗಾಗಿ

ಲಕ್ಷ್ಮೀ ಬೀರರಾಜು

7

ಪುಷ್ಪಕ ವಿಮಾನ

ನವಿ

8

ಬಾಳ್ವೆಯ ತೆನೆ ತೂಗುವುದೇ..?

ಉಮಾ ಶಂಕರಿ

9

ಸಂಗಾತಿ ನಿನ್ನ ಸಂಪ್ರೀತಿಯಲ್ಲಿ...

ಕಾವ್ಯಶ್ರೀ ಹನುಮಂತ್ ರಾಜ್

10

ಆಂತರ್ಯದ ಒಲವು (ಒಡೆದ ಮನಸ್ಸುಗಳ ಪುನರ್ಮಿಲನ)

ಮಧುಸೂರ್ಯ ಭಟ್

11

ನೀ ನನ್ನ ಪ್ರಾಣವು...

ಶ್ರೀ ಭಾಗ್ಯ ಪೂಜಾರಿ

12

ಸಿತಾರಾ...

ಅಜೇಯ ನೀರ್ಕಜೆ

13

ಸದ್ದಿಲ್ಲದ ಮೆರವಣಿಗೆ...!!

ರೂಪಾ ರೈ

14

ಪ್ರೇಮಂ ಶರಣಂ ಗಚ್ಛಾಮಿ

ದಿವ್ಯ ಹೇಮಂತ್

15

ನಿನ್ನಿಂದಲೇ

ಪಿ. ಎ. ರೆಡ್ಡಿ

16

ಧಾರವ - ಸಮುದ್ರ ಗುಪ್ತ ಪರಾಕ್ರಮಾಂಕ

ಶ್ರೀನಿವಾಸ್ ಸಂಡೂರ್

17

ಬಂದೆಯಾ ಬಾಳಿಗೆ ಬೆಳಕಾಗಿ

ಜ್ಯೋತಿ ಬಾಳಿಗಾ

18

ಮುಡಿಯ ಜಾರಿದ ಹೂವಿದು!

ನಾಗರತ್ನ ಗೌಡ

19

ಪ್ರೀತಿಕೊಟ್ಟ ಸತಿಗೆ ತನ್ನನ್ನಿತ್ತನೇ ಶಿವ

ನಾಗರತ್ನ ನಾಯ್ಕ್

20

ಕೊಳಲಿನ ಕರೆ

ವಿಜಯ ಭಾರತಿ

21

ಒಲವಿನಂತರಾಳದಿ(ಕೇಳದೆ ಹೃದಯದ ಪಿಸುಮಾತು?)

ಮಾಲಾ ಶ್ರೀನಿವಾಸ್ ಭಟ್

22

ನೀನಾದೆ ನನ್ನ ಬಾಳ ರತ್ನ ಮಂಜರಿ

ರಶ್ಮಿ ಅಂಗಡಿ

23

ಹೈಜಾಕ್

ಅಭಿವ್ಯಕ್ತಿ

24

ಉಸಿರೆನ್ನಲೇ ನಾ ನಿನ್ನ ಸೀಸನ್-೨

ಶುಭಸರಳ ಜೆ

25

ಸಾಧನೆಯ ಹಾದಿಯಲ್ಲಿ

ರಂಗವಲ್ಲಿಸುತೆ

26

ಅಗಲಿ ನಿನ್ನನು ಬಾಳಲಾರೇನು

ಕೃಷ್ಣಾ

 

ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ: ರೇಖಾ ಕೆ ಎಸ್ ಅವರ ೧೭೦ ಅಧ್ಯಾಯಗಳ ಪುಟ್ಟ ಗೌರಿ ಮದುವೆ

 

ಉದಯೋನ್ಮುಖ ಬರಹಗಾರರ ಯಾದಿ

 

ಪ್ರತಿಲಿಪಿಯ ತಮ್ಮ ಪ್ರೊಫೈಲ್’ನಲ್ಲಿ ಮೊದಲ ಬಾರಿಗೆ ಕನಿಷ್ಠ 80 ಅಧ್ಯಾಯಗಳ ಧಾರಾವಾಹಿ ರಚಿಸಿ ಪ್ರಕಟಿಸಿರುವ ಎಲ್ಲ ನವ ಬರಹಗಾರರ ಉತ್ಸಾಹ ಮತ್ತು ಪ್ರಯತ್ನ ಸಂತಸ ನೀಡಿದೆ. ಈ ಬರಹಗಾರರ ಸಾಹಿತ್ಯ ಪ್ರಯಾಣ ಎಲ್ಲಿಯೂ ವಿರಮಿಸದೇ ಮುಂದುವರೆಯಲಿ ಎಂದು ಆಶಿಸುತ್ತೇವೆ. ಈ ಬರಹಗಾರರಿಗೆ ಗೌರವ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು.

 

ಕ್ರ.ಸಂ.

ಕೃತಿ 

ಕರ್ತೃ

1

ಗಗನ ಕುಸುಮ

ವಿಜಯಲಕ್ಷ್ಮಿ ಎಸ್.

2

ಸಂಗಾತಿ ನಿನ್ನ ಸಂಪ್ರೀತಿಯಲ್ಲಿ...

ಕಾವ್ಯಶ್ರೀ ಹನುಮಂತ್ ರಾಜ್

3

ಅತೀತದ ನೆರಳು

ಹಂಸವೇಣಿ

4

ಫೇಸ್ಬುಕ್ ಸೋದರಿ

ವಿನಯ ಮುರಳಿ ಕೃಷ್ಣ

5

ಅತ್ತೆಯ ಬಲೆ

ರವಿ ಬೂಕನಬೆಟ್ಟ 

6

ನಿನಗಾಗಿ ತೆರೆದಿದೆ ನನ್ನ ಮನ

ಕೃಷ್ಣಪ್ರಿಯೇ

7

ಪ್ರೇಮದ ಕಾದಂಬರಿ

ಕ್ಷಿತಿಜಾ

8

ಮರೆತಿಲ್ಲದ ನೆನಪು

ನಿಧಿ

9

ಭಾರ್ಗವ್ಯಾಚ್ಯುತ

ಸ್ವಾತಿ ಭೂಷಣ್

10

ನೀನಾದೆ ನನ್ನ ಬಾಳ ರತ್ನ ಮಂಜರಿ

ರಶ್ಮಿ ಅಂಗಡಿ

11

ಮುಡಿಯ ಜಾರಿದ ಹೂವಿದು!

ನಾಗರತ್ನ ಗೌಡ

 

ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು!

- ಪ್ರತಿಲಿಪಿ ಕನ್ನಡ