pratilipi-logo ಪ್ರತಿಲಿಪಿ
ಕನ್ನಡ
ಸೂಪರ್ ಸಾಹಿತಿ ಅವಾರ್ಡ್ಸ್ | ಸೀಸನ್ 10

‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 10’ ಸ್ಪರ್ಧೆಯ ಫಲಿತಾಂಶ

___________________________

 

ಭಾರತದ ಅತಿದೊಡ್ಡ ಕಥಾಸ್ಪರ್ಧೆಯ ಅಂತಿಮ ಆವೃತ್ತಿ! ಹಿಂದಿನ 9 ಆವೃತ್ತಿಗಳಲ್ಲಿ ಭಾಗವಹಿಸಿದ್ದ ಬರಹಗಾರರು ತಮ್ಮ ಅದ್ಭುತ ಕೃತಿಗಳ ಮೂಲಕ ಲಕ್ಷಾಂತರ ಓದುಗರ ಮೆಚ್ಚುಗೆ, ಜನಪ್ರಿಯತೆ ಗಳಿಸಿ ತಮ್ಮ ಮಾಸಿಕ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಈಗ ನೀವೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು!

ಈ ಆವೃತ್ತಿಯಲ್ಲಿ ಕೃತಿಗಳನ್ನು ರಚಿಸಿ ಪ್ರಕಟಿಸಲು ನೀವು 150 ಕ್ಕೂ ಅಧಿಕ ದಿನಗಳನ್ನು ಹೊಂದಿದ್ದೀರಿ! ನಿಮ್ಮಿಷ್ಟದ ಯಾವುದೇ ವಿಷಯದ ಮೇಲೆ ಧಾರಾವಾಹಿಯನ್ನು ರಚಿಸಿ ಪ್ರಕಟಿಸಿ.  

ಸೀಸನ್ 10 ಏಕೆ ಭಿನ್ನವಾಗಿದೆ?

1. ಎಲ್ಲ ಬರಹಗಾರರಿಗೂ ಅವಕಾಶ: ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿರುವ/ಹೊಂದಿರದ ಎಲ್ಲಾ ಬರಹಗಾರರಿಗೆ ಸ್ಪರ್ಧೆಯಲ್ಲಿ  ಭಾಗವಹಿಸಲು ಅವಕಾಶ ನೀಡುತ್ತಿದ್ದೇವೆ. ಎಲ್ಲಾ ಬರಹಗಾರರನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದ್ದೇವೆ! ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನಗಳು, ವಿವಿಧ ಸೌಲಭ್ಯಗಳು, ಖಚಿತ ಆದಾಯ ಗಳಿಸುವ ಅವಕಾಶ ಪಡೆಯಬಹುದು; ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸುದೀರ್ಘ ಕಥಾನಕಗಳನ್ನು ಧಾರಾವಾಹಿಯಾಗಿ ಸಕ್ರಿಯವಾಗಿ ಪ್ರಕಟಿಸಿ ಓದುಗರ ಮನಗೆಲ್ಲಲು ಈ ಮೂಲಕ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಬಹುದು! 

2. ಬಹುಮಾನಗಳು: ವಿಜೇತರಿಗೆ ನಗದು ಬಹುಮಾನ ಮತ್ತು ಹೊಸ ಬರಹಗಾರರಿಗೆ, ಸೂಪರ್ ಸಾಹಿತಿಗಳಿಗೆ ಅತ್ಯಾಕರ್ಷಕ ಬಹುಮಾನಗಳು! ಭಾಗವಹಿಸಿದ ಎಲ್ಲರಿಗೂ ವಿವಿಧ ರೀತಿಯ ಆಕರ್ಷಕ ಸೌಲಭ್ಯಗಳು ಲಭ್ಯವಾಗಲಿವೆ.  

3. ಡಿಜಿಟಲ್ ಮಾರ್ಗದರ್ಶಿ: ಮೊದಲ 15 ದಿನಗಳಲ್ಲಿ ನಿಮ್ಮ ಕೃತಿಯನ್ನು ಆರಂಭಿಸಿ ಮತ್ತು ನಿಮ್ಮ ಯಾವುದೇ ಕೃತಿಯನ್ನು ರಚಿಸಲು ಸಹಾಯಕವಾಗುವ ಡಿಜಿಟಲ್ ಮಾರ್ಗದರ್ಶಿಯನ್ನು ಪಡೆಯಿರಿ. 

ನಿಮ್ಮ ಕೃತಿಯನ್ನು ಅತ್ಯಾಕರ್ಷಕವಾಗಿ ರಚಿಸಲು ಸಲಹೆಗಳು ಬೇಕೇ? ಇಲ್ಲಿ ಕ್ಲಿಕ್ ಮಾಡಿ 

____________________________

ನೀವು ಈ ಅಂತಿಮ ಆವೃತ್ತಿಯಲ್ಲಿ ಏಕೆ ಭಾಗವಹಿಸಬೇಕು?

1. ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಿ: ಹಿಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ 90% ಬರಹಗಾರರ ಮಾಸಿಕ ಆದಾಯದಲ್ಲಿ ಗಣನೀಯ ಹೆಚ್ಚಳವಾಗಿರುವುದನ್ನು ನಾವು ಗಮನಿಸಿದ್ದೇವೆ! ಸ್ಪರ್ಧೆಗಳು ನೀವು ಹೆಚ್ಚು ಹೆಚ್ಚು ಬರಹ ರಚನಾ ಪ್ರಕ್ರಿಯೆಯಲ್ಲಿ ತೊಡಗಲು ಕಾರಣವಾಗುತ್ತದೆ. ಈ ಮೂಲಕ ಓದುಗರ, ಹಿಂಬಾಲಕರ ಸಬ್ಸ್ಕ್ರೈಬರ್ ಗಳ, ವಿಮರ್ಶಕರ ಸಂಖ್ಯೆ ಹೆಚ್ಚುವುದಷ್ಟೇ ಅಲ್ಲದೇ, ನಿಮ್ಮ  ಆದಾಯದಲ್ಲಿಯೂ ಗಣನೀಯ ಏರಿಕೆ ಕಂಡುಬರುತ್ತದೆ. 

2. ಹೆಚ್ಚಿನ ಓದುಗರನ್ನು ತಲುಪಿ: ಪ್ರತಿಲಿಪಿ ವೇದಿಕೆ ಮತ್ತು ಫೇಸ್ಬುಕ್ ಪೇಜ್’ಗಳಲ್ಲಿ ನಿಮ್ಮ ಕೃತಿಯು ಪ್ರಚಾರಗೊಳ್ಳುವುದರಿಂದ ಅಧಿಕ ಓದುಗರು, ಹಿಂಬಾಲಕರನ್ನು ಪಡೆಯಬಹುದು.

3. ಬದ್ಧತೆಯನ್ನು ಬೆಳೆಸಿಕೊಳ್ಳಿ: ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಬರಹಗಾರರಲ್ಲಿ ಬರವಣಿಗೆಯ ಶಿಸ್ತು, ಬದ್ಧತೆ ಮತ್ತು ನಿರಂತರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿರಂತರವಾಗಿ ಕಾದಂಬರಿಯ ಅಧ್ಯಾಯಗಳನ್ನು ಪ್ರಕಟಿಸುವಿಕೆ ಪ್ರತಿಲಿಪಿ ರೆಕಮೆಂಡೇಷನ್ ಸಿಸ್ಟಮ್ ಮೂಲಕ ನಿಮ್ಮ ಕೃತಿಗಳು ಹೆಚ್ಚು ಓದುಗರನ್ನು ತಲುಪಲು ಸಹಾಯಕವಾಗುತ್ತವೆ!

ವಿಶೇಷ ಸಲಹೆ: ನೀವು ಪ್ರತಿ 2 ದಿನಗಳಿಗೊಮ್ಮೆ ಕನಿಷ್ಠ ಒಂದು ಅಧ್ಯಾಯವನ್ನು ಬರೆದರೆ, 100-ಅಧ್ಯಾಯಗಳ ಧಾರಾವಾಹಿಯನ್ನು ಸುಲಭವಾಗಿ ರಚಿಸಬಹುದು!

__________________________________ 

ಬಹುಮಾನಗಳ ವಿವರ

1. ವಿಜೇತರಿಗೆ ಬಹುಮಾನಗಳು:

→ ಮೊದಲ 3 ಸ್ಥಾನ ವಿಜೇತರಿಗೆ: 5000 ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ + ವಿಜೇತ ಪ್ರಮಾಣಪತ್ರವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು + ಪ್ರತಿಲಿಪಿ ತಂಡದ ಕಡೆಯಿಂದ ವಿಶೇಷ ಪತ್ರ 

→ 4 ರಿಂದ 6 ಸ್ಥಾನ ವಿಜೇತರಿಗೆ:: 3000 ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ + ವಿಜೇತ ಪ್ರಮಾಣಪತ್ರವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು + ಪ್ರತಿಲಿಪಿ ತಂಡದ ಕಡೆಯಿಂದ ವಿಶೇಷ ಪತ್ರ 

→ 7 ರಿಂದ 10 ಸ್ಥಾನ ವಿಜೇತರಿಗೆ: 2000 ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ + ವಿಜೇತ ಪ್ರಮಾಣಪತ್ರವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು + ಪ್ರತಿಲಿಪಿ ತಂಡದ ಕಡೆಯಿಂದ ವಿಶೇಷ ಪತ್ರ 

→ 11 ರಿಂದ 25 ಸ್ಥಾನ ವಿಜೇತರಿಗೆ: ₹1,000 ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನ + ವಿಜೇತ ಪ್ರಮಾಣಪತ್ರವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು + ಪ್ರತಿಲಿಪಿ ತಂಡದ ಕಡೆಯಿಂದ ವಿಶೇಷ ಪತ್ರ

2. 100 ಕ್ಕೂ ಅಧಿಕ ಅಧ್ಯಾಯ ರಚಿಸುವ ಬರಹಗಾರರಿಗೆ:

ಸ್ಪರ್ಧೆಗೆ 100 ಕ್ಕೂ ಅಧಿಕ ಅಧ್ಯಾಯಗಳ ಸಂಪೂರ್ಣ ಧಾರಾವಾಹಿಯನ್ನು ಪ್ರಕಟಿಸುವ ಬರಹಗಾರರನ್ನು ಬ್ಲಾಗ್ ವಿಭಾಗದಲ್ಲಿ ವಿಶೇಷವಾಗಿ ಗುರುತಿಸಿ ಗೌರವಿಸಲಾಗುವುದು ಮತ್ತು ಪ್ರತಿಲಿಪಿ ಕಡೆಯಿಂದ ಪ್ರತಿಷ್ಠಿತ ‘ಸಾಹಿತ್ಯ ಸನ್ಮಾನ ಪತ್ರ’ವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು.

3. ಉದಯೋನ್ಮುಖ ಬರಹಗಾರರಿಗೆ:

ಪ್ರತಿಲಿಪಿಯ ತಮ್ಮ ಪ್ರೊಫೈಲ್’ನಲ್ಲಿ ಮೊದಲ ಬಾರಿಗೆ ಕನಿಷ್ಠ 80 ಅಧ್ಯಾಯಗಳ ಧಾರಾವಾಹಿ ರಚಿಸಿ ಪ್ರಕಟಿಸುವ ಎಲ್ಲಾ ಬರಹಗಾರರನ್ನು ಬ್ಲಾಗ್ ವಿಭಾಗದಲ್ಲಿ ವಿಶೇಷವಾಗಿ ಗುರುತಿಸಿ ಗೌರವಿಸಲಾಗುವುದು. ಪ್ರತಿಲಿಪಿ ಕಡೆಯಿಂದ ಪ್ರತಿಷ್ಠಿತ ಗೌರವ ಪ್ರಮಾಣಪತ್ರ’ವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು.  

 

4. ಭಾಗವಹಿಸುವ ಎಲ್ಲಾ ಬರಹಗಾರರಿಗೆ ಸಿಗುವ ಪ್ರಯೋಜನಗಳು: 

1. ಭಾಗವಹಿಸುವ ಎಲ್ಲರಿಗೂ ಭಾಗವಹಿಸುವಿಕೆಯ ಡಿಜಿಟಲ್ ಪ್ರಮಾಣಪತ್ರವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು.

2. ಸ್ಪರ್ಧೆಯ ಕೃತಿಗಳನ್ನು ಫೇಸ್ಬುಕ್ ಪೇಜ್’ನಲ್ಲಿ ಪ್ರಚಾರ ಮಾಡಲಾಗುವುದು.

3. ಸ್ಪರ್ಧೆಯ ಕೃತಿಗಳನ್ನು ಪ್ರತಿಲಿಪಿ ಅಪ್ಲಿಕೇಶನ್'ನ ಹೋಂ ಪೇಜಿನಲ್ಲಿ ಬ್ಯಾನರ್ ಮೂಲಕ ಪ್ರಚಾರ ಮಾಡಲಾಗುವುದು.

4. ಪ್ರತಿಲಿಪಿ ಪ್ರೀಮಿಯಂ ಅಡಿಯಲ್ಲಿ  ಕೃತಿಗಳನ್ನು ಬರೆಯುವುದರ ಮೂಲಕ ಪ್ರತಿ ತಿಂಗಳೂ ಆದಾಯ ಗಳಿಸುವ ಅವಕಾಶ.

5. ಡಿಜಿಟಲ್ ಮಾರ್ಗದರ್ಶಿ – ನಿಮ್ಮ ಯಾವುದೇ ಕೃತಿ ರಚನೆಗೆ ಸಹಾಯಕವಾಗಬಲ್ಲ ಬರವಣಿಗೆಯ ಸಲಹೆಗಳನ್ನೊಳಗೊಂಡ ಮಾರ್ಗದರ್ಶಿ ಪಡೆಯಬಹುದು

__________________________________

ಸ್ಪರ್ಧೆಯ ನಿಯಮಗಳು

1. ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಬರಹಗಾರರಿಗಾಗಿ: ನಿಮ್ಮ ಕೃತಿ ಸ್ಪರ್ಧೆಗೆ ಪರಿಗಣಿಸಲ್ಪಡಲು ಕಡ್ಡಾಯವಾಗಿ ಪ್ರೀಮಿಯಂ ಅಡಿಯಲ್ಲಿ ಪ್ರಕಟಿಸಬೇಕು. (ಕೃತಿಯನ್ನು ಪ್ರೀಮಿಯಂ ಧಾರಾವಾಹಿಯಾಗಿ ಪ್ರಕಟಿಸುವ ಮಾರ್ಗದರ್ಶಿ)

2. ಗೋಲ್ಡನ್ ಬ್ಯಾಡ್ಜ್ ಹೊಂದಿರದ ಬರಹಗಾರರಿಗಾಗಿ: ನೀವು ಗೋಲ್ಡನ್ ಬ್ಯಾಡ್ಜ್ ಹೊಂದಿರದ ಬರಹಗಾರರಾಗಿದ್ದರೂ ಸಹ ಎಲ್ಲಾ ನಿಯಮಗಳನ್ನು ಅನುಸರಿಸಿ ನಿಮ್ಮ ಕೃತಿಯನ್ನು ಧಾರಾವಾಹಿಯಾಗಿ ಪ್ರಕಟಿಸಬಹುದು. (ಕೃತಿಯನ್ನು ಧಾರಾವಾಹಿಯಾಗಿ ಪ್ರಕಟಿಸುವ ಮಾರ್ಗದರ್ಶಿ)

3. ಅಧ್ಯಾಯಗಳ ಮಿತಿ: ನಿಮ್ಮ ಧಾರಾವಾಹಿ ಕನಿಷ್ಠ 80 ಅಧ್ಯಾಯಗಳನ್ನು ಹೊಂದಿರಬೇಕು. ಗರಿಷ್ಠ ಮಿತಿಯಿಲ್ಲ. 

4. ಪದಮಿತಿ: ಪ್ರತಿ ಅಧ್ಯಾಯ ಕನಿಷ್ಠ 1000 ಪದಗಳನ್ನು ಹೊಂದಿರಬೇಕು. ಗರಿಷ್ಠ ಮಿತಿಯಿಲ್ಲ. (ಪದಸಂಖ್ಯೆಗಳನ್ನು ಗುರುತಿಸುವ ಮಾರ್ಗದರ್ಶಿ)

5. ಕೃತಿಗಳನ್ನು ಸಲ್ಲಿಸಲು ಕಡ್ಡಾಯ ಸೂಚನೆ: ಬರಹದ ವಿಧ -'ಕಥೆ' ಮತ್ತು ಪ್ರಭೇದ- 'ಸೂಪರ್ ಸಾಹಿತಿ- 10' ಆಯ್ಕೆ ಮಾಡಬೇಕು. ಈ ಪ್ರಭೇದವನ್ನು ಆಯ್ಕೆ ಮಾಡದಿದ್ದಲ್ಲಿ ಕೃತಿಯನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಇದರ ಜೊತೆಗೆ ಕತೆಗೆ ಸೂಕ್ತವೆನಿಸುವ ಇತರ ಎರಡು ಪ್ರಭೇದಗಳನ್ನು ಆಯ್ಕೆ ಮಾಡಬಹುದು. (ಪ್ರಭೇದಗಳನ್ನು ಆಯ್ಕೆ ಮಾಡುವ ಮಾರ್ಗದರ್ಶಿ)

6. ಕಥಾವಸ್ತು: ನಿಮ್ಮಿಷ್ಟದ ಯಾವುದೇ ವಿಷಯ, ಕಥಾಹಂದರದ ಮೇಲೆ ಧಾರಾವಾಹಿಗಳನ್ನು ರಚಿಸಬಹುದು. 

7. ವಿಶೇಷ ಸೂಚನೆ: ನಿಮ್ಮ ಕೃತಿ ಸ್ಪರ್ಧೆಯ ಸ್ಪರ್ಧೆಯ ಕಾಲಾವಧಿಯೊಳಗೆ ಪ್ರಕಟಗೊಳ್ಳಬೇಕು. ಸ್ಪರ್ಧೆಯ ಮುಕ್ತಾಯದ ದಿನಾಂಕದೊಳಗೆ ಎಲ್ಲಾ ನಿಯಮಗಳನ್ನು ಅನುಸರಿಸಿ ಮುಕ್ತಾಯಗೊಂಡಿರಬೇಕು; ಕೃತಿಯನ್ನು ಎಡಿಟ್ ಮಾಡುವಲ್ಲಿ ಹೋಗಿ ‘ಮುಗಿದಿದೆ’ ಎಂದು ಆಯ್ಕೆ ಮಾಡಿರಬೇಕು. ಅಪೂರ್ಣ ಕೃತಿಗಳನ್ನು ಸ್ಪರ್ಧೆಗೆ ಪರಿಗಣಿಸಲು ಸಾಧ್ಯವಾಗುವುದಿಲ್ಲ.  

8. ಮೊದಲ ಅಧ್ಯಾಯದಿಂದಲೇ ನಿಮ್ಮ ಕಥೆಯನ್ನು ಸ್ವಾಭಾವಿಕವಾಗಿ ಪ್ರಾರಂಭಿಸಿ. ಮುನ್ನುಡಿ, ಪರಿಚಯ ಮತ್ತು ಹೆಚ್ಚುವರಿ ಟಿಪ್ಪಣಿಗಳನ್ನು ಧಾರಾವಾಹಿಯ ಅಧ್ಯಾಯಗಳಾಗಿ ಪ್ರಕಟಿಸುವುದನ್ನು ತಪ್ಪಿಸಿ. (ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ)

_________________________________________________

ಪ್ರಮುಖ ದಿನಾಂಕಗಳು

ಸ್ಪರ್ಧೆಯ ಪ್ರಾರಂಭದ ದಿನಾಂಕ: 11 ಮಾರ್ಚ್ 2025

ಸ್ಪರ್ಧೆಯ ಮುಕ್ತಾಯದ ದಿನಾಂಕ: 15 ಆಗಸ್ಟ್ 2025 

ಫಲಿತಾಂಶ ಘೋಷಣೆಯ ದಿನಾಂಕ: 15 ಅಕ್ಟೋಬರ್ 2025 ಸಂಜೆ 5 ಗಂಟೆಯ ಒಳಗೆ. ಭಾಗವಹಿಸಿದ ಎಲ್ಲರಿಗೂ ಫಲಿತಾಂಶವನ್ನು ಈಮೇಲ್ ಮೂಲಕ ಕಳುಹಿಸಲಾಗುವುದು. (ಸ್ಪರ್ಧೆಯ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ?)

 

ಸೂಚನೆ: ಸ್ಪರ್ಧೆಯ ಮುಕ್ತಾಯದ ದಿನಾಂಕದ ನಂತರ ಸ್ಪರ್ಧೆಯ ಕೃತಿಗಳನ್ನು ಪ್ರತಿಲಿಪಿ ಅಪ್ಲಿಕೇಶನ್’ನ ಹೋಂ ಪೇಜ್ ಮತ್ತು ಫೇಸ್ಬುಕ್ ಪೇಜಿನಲ್ಲಿ ಪ್ರಚಾರ ಮಾಡಲಾಗುವುದು. 

_____________________

ಇತರ ಉಪಯುಕ್ತ ಮಾಹಿತಿಗಳು (FAQ)

 

1. ನಿಮ್ಮ ಕೃತಿಯನ್ನು ಪ್ರೀಮಿಯಂ ಅಡಿಯಲ್ಲಿ ಸೇರಿಸುವ ವಿಧಾನ, ಸ್ಪರ್ಧೆಯಲ್ಲಿ ಭಾಗವಹಿಸಲು ಅಗತ್ಯವಿರುವ ಮಾಹಿತಿಗಳು, ಇತರೆ ಅಂಶಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

2. ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮಹತ್ವ

3. ವಿಜೇತರು ಬಹುಮಾನಗಳನ್ನು ಪಡೆದುಕೊಳ್ಳುವುದು ಹೇಗೆ?

4. ಕೃತಿಯನ್ನು ಇತರರಿಗೆ ಹಂಚುವುದು ಹೇಗೆ?

5. ಪ್ರಸ್ತುತ ನಡೆಯುತ್ತಿರುವ ಸ್ಪರ್ಧೆಗಳ ಮಾಹಿತಿ ಪಡೆಯುವುದು ಹೇಗೆ?

6. ಸ್ಪರ್ಧೆಯ ವಿಜೇತ ಕೃತಿಗಳ ಆಯ್ಕೆಯ ವಿಧಾನ

_______________________________

ನೀವು ಯಾವುದೇ ಸಮಸ್ಯೆ, ಅನುಮಾನಗಳನ್ನು ಹೊಂದಿದ್ದಲ್ಲಿ [email protected] ಗೆ ಈಮೇಲ್ ಕಳುಹಿಸಿ. ನಮ್ಮ ತಂಡ 24 ಗಂಟೆಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಲು ಪ್ರಯತ್ನಿಸುತ್ತದೆ.

ಸಾವಿರಾರು ಲೇಖಕರು ಈಗಾಗಲೇ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಕೃತಿಗಳ ಪ್ರಕಟಣೆಯ ಮೂಲಕ ಯಶಸ್ಸನ್ನು ಕಂಡುಕೊಂಡಿದ್ದಾರೆ, ತಮ್ಮ ಪ್ರತಿಭೆಯನ್ನು ಆಕರ್ಷಕ ಕಥೆಗಳಾಗಿ ಪರಿವರ್ತಿಸಿ ಆ ಮೂಲಕ ಪ್ರತಿ ತಿಂಗಳೂ ಆದಾಯವನ್ನು ಗಳಿಸುತ್ತಿದ್ದಾರೆ. ನೀವೂ ಅವರೊಳಗೊಬ್ಬರಾಗಲು ಇಲ್ಲಿದೆ ಅವಕಾಶ! ಸ್ಪರ್ಧೆಯಲ್ಲಿ ಭಾಗವಹಿಸಿ ಸಾಹಿತ್ಯ ಲೋಕದಲ್ಲಿ ನಿಮ್ಮದೇ ಛಾಪು ಮೂಡಿಸುವ ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ!

 

ಶುಭವಾಗಲಿ!

ಪ್ರತಿಲಿಪಿಕನ್ನಡ ಸ್ಪರ್ಧಾ ವಿಭಾಗ