
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
ಪ್ರತಿಲಿಪಿನೆಲೆಗಾಣದ ಹಕ್ಕಿ ( ಈ ಕಥೆಯ ಕಾಲಮಾನ ಸುಮಾರು 2000 ನೆಯ ಇಸವಿ ಎಂದು ಭಾವಿಸಬಹುದು. ಮೊಬೈಲ್ ಇಲ್ಲದ ಕಾಲ) ಹೊರಗೆ ಜೋರಾಗಿ ಕಾರಿನ ಹಾರನ್ ಶಬ್ದ ಕೇಳಿಸಿತು. ಮಹಡಿ ಮೇಲಿನ ತನ್ನ ಕೋಣೆಯ ಕಿಟಕಿಯಿಂದ, ತೆರೆ ಸರಿಸಿ ಬಗ್ಗಿ ನೋಡಿದಳು ಸೌದಾಮಿನಿ. ...

ನೆಲೆಗಾಣದ ಹಕ್ಕಿ 2 (ಇದುವರೆಗಿನ ಕಥೆ - ಕೃಷ್ಣ ಪ್ರಸಾದ್ ಮತ್ತು ಸೌದಾಮಿನಿ ನಡುವೆ ಅಂಥ ಸೌಹಾರ್ದತೆ ಇಲ್ಲದ ದಾಂಪತ್ಯ. 56 ವರ್ಷದ ಗಂಭೀರ - ಸ್ಟ್ರಿಕ್ಟ್ ಸ್ವಭಾವದ ಅವನಿಗೆ ಹದಿ ಹರೆಯದ ಸೌಂದರ್ಯದ ಗಣಿ ಸೌದಾಮಿನಿ ಹೆಂಡತಿ. ತನ್ನ...

ವೈ.ಕೆ.ಸಂಧ್ಯಾ ಶರ್ಮ -ಹಿರಿಯ ಸಾಹಿತಿ, ಕವಯಿತ್ರಿ, ಅಂಕಣಕಾರ್ತಿ ಮತ್ತು ರಂಗಕರ್ಮಿ ಶ್ರೀಮತಿ ವೈ.ಕೆ.ಸಂಧ್ಯಾ ಶರ್ಮ ಅವರು ಕನ್ನಡ ಸಾಹಿತ್ಯಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ-ನಾಟಕಗಳ ಖ್ಯಾತ ಕಲಾ ವಿಮರ್ಶಕಿ ಮತ್ತು ರಂಗಕರ್ಮಿ. ಕನ್ನಡ ಎಂ.ಎ.ಪದವೀಧರೆ( ಡಿಸ್ಟಿಂಕ್ಷ ನ್) ಯಾದ ಇವರು, ಈ ಹಿಂದೆ ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು, ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಪ್ರಾರಂಭಿಸಿ, ಕಳೆದ 56 ವರ್ಷಗಳಿಂದ ಸಾಹಿತ್ಯಕೃಷಿ ನಡೆಸುತ್ತ ಜನಪ್ರಿಯ ಲೇಖಕಿಯಾಗಿದ್ದಾರೆ. ಇವರು, ಸುಮಾರು ನೂರಾರು ಸಣ್ಣಕತೆಗಳು, 25 ಕಾದಂಬರಿಗಳು, ಇನ್ನೂರಕ್ಕೂ ಹೆಚ್ಚು ಕವನಗಳು, ಅನೇಕ ಹಾಸ್ಯಬರಹಗಳು, ನಾಟಕ, ಜೀವನಚರಿತ್ರೆಯನ್ನು ರಚಿಸಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರು ಬರೆದ ಸುಮಾರು 1500 ಕ್ಕೂ ಹೆಚ್ಚು ನಾಟಕ -ಮತ್ತು ನೃತ್ಯ ವಿಮರ್ಶಾ ಲೇಖನಗಳು ಹಾಗೂ ಇನ್ನಿತರ ವಿಷಯಗಳ ಬಗೆಗಿನ ಲೇಖನಗಳು ಪ್ರಕಟವಾಗಿವೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಮಾನ್ಯತೆ ಪಡೆದ ಕಲಾವಿದೆ. ನಲವತ್ತೈದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ತಮ್ಮದೇ ಆದ ‘ಸಂಧ್ಯಾ ಕಲಾವಿದರು’ ಹವ್ಯಾಸೀ ನಾಟಕ ತಂಡದ ಸ್ಥಾಪಕಿ ಅಧ್ಯಕ್ಷೆ ಇವರು. ಕುಚಿಪುಡಿ ನಾಟ್ಯ ಕಲಿತು ಅನೇಕ ಪ್ರದರ್ಶನಗಳನ್ನು ನೀಡಲಾಗಿದೆ. ‘’ಸಂಧ್ಯಾ ಪತ್ರಿಕೆ’’ ಎಂಬ ಅಂತರ್ಜಾಲದ ಸಾಂಸ್ಕೃತಿಕ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಇವರು ಯಶಸ್ವಿಯಾಗಿ ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ.. ಇವರ ಸಾಹಿತ್ಯ ಸಾಧನೆಗೆ ಬಂದಿರುವ ಪ್ರಶಸ್ತಿಗಳು ಅನೇಕ. ಅವುಗಳಲ್ಲಿ ಪ್ರಮುಖವಾದುವು- ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರಶಸ್ತಿ, ರಾಘವೇಂದ್ರ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ದಸರಾ ಪ್ರಶಸ್ತಿ, ಕನ್ನಡ ಲೇಖಕಿಯರ ಸಂಘದ ಪುಸ್ತಕ ಪ್ರಶಸ್ತಿ, ಪಂಜೆ ಮಂಗೇಶರಾಯರ ಪ್ರಶಸ್ತಿ, ಕೆನರಾ ಬ್ಯಾಂಕ್ ‘ ಮಹಿಳಾ ಸಾಧಕಿ’ ಪ್ರಶಸ್ತಿ ಮತ್ತು ಅಬ್ದುಲ್ ಕಲಾಮ್ ಪ್ರಶಸ್ತಿ, ‘’ಕನ್ನಡ ಸೇವಾ ರತ್ನ’’-ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲೆ. ಮಂಗಳೂರಿನ ಸಾಧನಾ ಸಾಂಸ್ಕೃತಿಕ ಪ್ರತಿಷ್ಟಾನದಿಂದ ‘’ ಸಾಧನಾ’’ ಪ್ರಶಸ್ತಿ ‘ಚಂದ್ರಕಲಾ ಸ್ವರಲಿಪಿ ಪ್ರತಿಷ್ಟಾನ’ದ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿಯನ್ನು ಬೆಂಗಳೂರಿನ ಗಾಯನ ಸಮಾಜವು ಕೊಡಮಾಡಿದೆ. ‘ಶಿವಪ್ರಿಯ’ ಅಂತರರಾಷ್ಟ್ರೀಯ ನೃತ್ಯ ಸಂಸ್ಥೆಯು ‘’ಸಾಹಿತ್ಯ ಭಾರತಿ’’ ಮತ್ತು ‘ವಾಕ್ಸರಸ್ವತಿ’ ಬಿರುದುಗಳನ್ನು ನೀಡಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ಅಂತರರಾಷ್ಟ್ರೀಯ ಮಹಿಳಾದಿನದಂದು ’ವಿಪ್ರ ಸಾಧಕಿ’’ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಪಂಕಜಶ್ರೀ’ ಪ್ರಶಸ್ತಿ, ನಾರೀಶಕ್ತಿ ಪ್ರಶಸ್ತಿಗಳು ಸಂದಿವೆ. ಇತ್ತೀಚಿಗೆ ಇವರ ಸಮಗ್ರ ಸಾಹಿತ್ಯ ಸೇವೆಗೆ ‘ವಿಶ್ವೇಶ್ವರಯ್ಯ ಜೀವಮಾನ ಸಾಧನೆ ಪ್ರಶಸ್ತಿ’ ಲಭಿಸಿದೆ. ಅಖಿಲ ಕರ್ನಾಟಕ ವಿಪ್ರ ವನಿತಾ ಸೇವಾ ಪ್ರತಿಷ್ಠಾನದಿಂದ ‘’ಗಾರ್ಗಿ’’ ಪ್ರಶಸ್ತಿ ಮತ್ತು ಕಲಾಸೇವೆಗೆ ‘ನಾಟ್ಯಸಂಪದ’ ಸಂಸ್ಥೆಯಿಂದ ‘ಕಲಾಭಿಸಾರಿಕೆ’’ ಪ್ರಶಸ್ತಿ ದೊರೆತಿದೆ. ಇತ್ತೀಚೆಗೆ ನಿರಂತರಂ ಸಂಸ್ಥೆಯಿಂದ ' ಸಂಭ್ರಮ'ಪ್ರಶಸ್ತಿ ದೊರಕಿದೆ. 2017 ರಲ್ಲಿ - ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ವಹಿಸಿದ ಗೌರವ ಪಡೆದಿದ್ದಾರೆ. ದೂರದರ್ಶನದ ನೃತ್ಯ ಕಲಾವಿದರ ಆಯ್ಕೆಯ ಆಡಿಷನ್ ಸಮಿತಿಯ ಸದಸ್ಯರು.
ವೈ.ಕೆ.ಸಂಧ್ಯಾ ಶರ್ಮ -ಹಿರಿಯ ಸಾಹಿತಿ, ಕವಯಿತ್ರಿ, ಅಂಕಣಕಾರ್ತಿ ಮತ್ತು ರಂಗಕರ್ಮಿ ಶ್ರೀಮತಿ ವೈ.ಕೆ.ಸಂಧ್ಯಾ ಶರ್ಮ ಅವರು ಕನ್ನಡ ಸಾಹಿತ್ಯಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ-ನಾಟಕಗಳ ಖ್ಯಾತ ಕಲಾ ವಿಮರ್ಶಕಿ ಮತ್ತು ರಂಗಕರ್ಮಿ. ಕನ್ನಡ ಎಂ.ಎ.ಪದವೀಧರೆ( ಡಿಸ್ಟಿಂಕ್ಷ ನ್) ಯಾದ ಇವರು, ಈ ಹಿಂದೆ ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು, ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಪ್ರಾರಂಭಿಸಿ, ಕಳೆದ 56 ವರ್ಷಗಳಿಂದ ಸಾಹಿತ್ಯಕೃಷಿ ನಡೆಸುತ್ತ ಜನಪ್ರಿಯ ಲೇಖಕಿಯಾಗಿದ್ದಾರೆ. ಇವರು, ಸುಮಾರು ನೂರಾರು ಸಣ್ಣಕತೆಗಳು, 25 ಕಾದಂಬರಿಗಳು, ಇನ್ನೂರಕ್ಕೂ ಹೆಚ್ಚು ಕವನಗಳು, ಅನೇಕ ಹಾಸ್ಯಬರಹಗಳು, ನಾಟಕ, ಜೀವನಚರಿತ್ರೆಯನ್ನು ರಚಿಸಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರು ಬರೆದ ಸುಮಾರು 1500 ಕ್ಕೂ ಹೆಚ್ಚು ನಾಟಕ -ಮತ್ತು ನೃತ್ಯ ವಿಮರ್ಶಾ ಲೇಖನಗಳು ಹಾಗೂ ಇನ್ನಿತರ ವಿಷಯಗಳ ಬಗೆಗಿನ ಲೇಖನಗಳು ಪ್ರಕಟವಾಗಿವೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಮಾನ್ಯತೆ ಪಡೆದ ಕಲಾವಿದೆ. ನಲವತ್ತೈದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ತಮ್ಮದೇ ಆದ ‘ಸಂಧ್ಯಾ ಕಲಾವಿದರು’ ಹವ್ಯಾಸೀ ನಾಟಕ ತಂಡದ ಸ್ಥಾಪಕಿ ಅಧ್ಯಕ್ಷೆ ಇವರು. ಕುಚಿಪುಡಿ ನಾಟ್ಯ ಕಲಿತು ಅನೇಕ ಪ್ರದರ್ಶನಗಳನ್ನು ನೀಡಲಾಗಿದೆ. ‘’ಸಂಧ್ಯಾ ಪತ್ರಿಕೆ’’ ಎಂಬ ಅಂತರ್ಜಾಲದ ಸಾಂಸ್ಕೃತಿಕ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಇವರು ಯಶಸ್ವಿಯಾಗಿ ಪತ್ರಿಕೆಯನ್ನು ನಿರ್ವಹಿಸುತ್ತಿದ್ದಾರೆ.. ಇವರ ಸಾಹಿತ್ಯ ಸಾಧನೆಗೆ ಬಂದಿರುವ ಪ್ರಶಸ್ತಿಗಳು ಅನೇಕ. ಅವುಗಳಲ್ಲಿ ಪ್ರಮುಖವಾದುವು- ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರಶಸ್ತಿ, ರಾಘವೇಂದ್ರ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ದಸರಾ ಪ್ರಶಸ್ತಿ, ಕನ್ನಡ ಲೇಖಕಿಯರ ಸಂಘದ ಪುಸ್ತಕ ಪ್ರಶಸ್ತಿ, ಪಂಜೆ ಮಂಗೇಶರಾಯರ ಪ್ರಶಸ್ತಿ, ಕೆನರಾ ಬ್ಯಾಂಕ್ ‘ ಮಹಿಳಾ ಸಾಧಕಿ’ ಪ್ರಶಸ್ತಿ ಮತ್ತು ಅಬ್ದುಲ್ ಕಲಾಮ್ ಪ್ರಶಸ್ತಿ, ‘’ಕನ್ನಡ ಸೇವಾ ರತ್ನ’’-ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲೆ. ಮಂಗಳೂರಿನ ಸಾಧನಾ ಸಾಂಸ್ಕೃತಿಕ ಪ್ರತಿಷ್ಟಾನದಿಂದ ‘’ ಸಾಧನಾ’’ ಪ್ರಶಸ್ತಿ ‘ಚಂದ್ರಕಲಾ ಸ್ವರಲಿಪಿ ಪ್ರತಿಷ್ಟಾನ’ದ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿಯನ್ನು ಬೆಂಗಳೂರಿನ ಗಾಯನ ಸಮಾಜವು ಕೊಡಮಾಡಿದೆ. ‘ಶಿವಪ್ರಿಯ’ ಅಂತರರಾಷ್ಟ್ರೀಯ ನೃತ್ಯ ಸಂಸ್ಥೆಯು ‘’ಸಾಹಿತ್ಯ ಭಾರತಿ’’ ಮತ್ತು ‘ವಾಕ್ಸರಸ್ವತಿ’ ಬಿರುದುಗಳನ್ನು ನೀಡಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ಅಂತರರಾಷ್ಟ್ರೀಯ ಮಹಿಳಾದಿನದಂದು ’ವಿಪ್ರ ಸಾಧಕಿ’’ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಪಂಕಜಶ್ರೀ’ ಪ್ರಶಸ್ತಿ, ನಾರೀಶಕ್ತಿ ಪ್ರಶಸ್ತಿಗಳು ಸಂದಿವೆ. ಇತ್ತೀಚಿಗೆ ಇವರ ಸಮಗ್ರ ಸಾಹಿತ್ಯ ಸೇವೆಗೆ ‘ವಿಶ್ವೇಶ್ವರಯ್ಯ ಜೀವಮಾನ ಸಾಧನೆ ಪ್ರಶಸ್ತಿ’ ಲಭಿಸಿದೆ. ಅಖಿಲ ಕರ್ನಾಟಕ ವಿಪ್ರ ವನಿತಾ ಸೇವಾ ಪ್ರತಿಷ್ಠಾನದಿಂದ ‘’ಗಾರ್ಗಿ’’ ಪ್ರಶಸ್ತಿ ಮತ್ತು ಕಲಾಸೇವೆಗೆ ‘ನಾಟ್ಯಸಂಪದ’ ಸಂಸ್ಥೆಯಿಂದ ‘ಕಲಾಭಿಸಾರಿಕೆ’’ ಪ್ರಶಸ್ತಿ ದೊರೆತಿದೆ. ಇತ್ತೀಚೆಗೆ ನಿರಂತರಂ ಸಂಸ್ಥೆಯಿಂದ ' ಸಂಭ್ರಮ'ಪ್ರಶಸ್ತಿ ದೊರಕಿದೆ. 2017 ರಲ್ಲಿ - ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ವಹಿಸಿದ ಗೌರವ ಪಡೆದಿದ್ದಾರೆ. ದೂರದರ್ಶನದ ನೃತ್ಯ ಕಲಾವಿದರ ಆಯ್ಕೆಯ ಆಡಿಷನ್ ಸಮಿತಿಯ ಸದಸ್ಯರು.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ