ವೃತ್ತಿಯಿಂದ ವೈದ್ಯ, ಪ್ರವೃತ್ತಿಯಿಂದ ಬರಹಗಾರ. ಕಾವ್ಯ ಮಾಣಿಕ್ಯ, ಬಸವ ಪುರಸ್ಕಾರ, ತರಾಸು ರತ್ನ, ಗುರುಕುಲ ಸಾಹಿತ್ಯ ಶರಭ, ಪಂ ಪುಟ್ಟರಾಜ ಗವಾಯಿ ಕೃತಿರತ್ನ- ಪ್ರಶಸ್ತಿಗಳು. ೧೪ನೇ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.
ಕಥಾಭರಣ- ಸಂಪಾದಿತ ಕಥಾಸಂಕಲನ. ಪ್ರಕಟಿತ ಕಥಾಸಂಕಲನಗಳು - ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ. ಸಂಪಾದಿತ ಕಥಾಸಂಕಲನ- ಕಥಾಭರಣ
ಕವನ ಸಂಕಲನಗಳು - ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು ಮತ್ತು ಕನಸಿನ ದನಿ. ಕೃತಿಕರ್ಷ - ವಿಮರ್ಶಾ ಸಂಕಲನ.
'ಆರೋಗ್ಯದ ಅರಿವು' ವೈದ್ಯಕೀಯ ಲೇಖನಗಳ ಸಂಗ್ರಹದ ಕೃತಿ ಲೋಕಾರ್ಪಣೆಗೊಂಡಿವೆ.
ಕನ್ನಡಿಗಂಟಿದ ಬಿಂದಿ ಕಥೆಗೆ ಮುಂಬೈ ಕನ್ನಡ ಭವನ ಎಜುಕೇಶನ್ ಸೊಸೈಟಿಯವರು ಆಯೋಜಿಸಿದ್ದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ.
ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ತಾಯಿ ಕಥೆ ಮೊದಲ ಸ್ಥಾನ ಪಡೆದಿದೆ.
ಪ್ರತಿಲಿಪಿ ರಾಷ್ಟ್ರೀಯ ಕನ್ನಡ ಕಥಾ ಮಹೋತ್ಸವ ಸ್ಪರ್ಧೆಯಲ್ಲಿ ಮರಳಿ ಮಣ್ಣಿಗೆ ಕಥೆಯು ಪ್ರಥಮ ಬಹುಮಾನ ಪಡೆದಿದೆ. ಸೆಲೆ,ಕಾಮೋಲ, ಆಯಿ ಕಥೆಗಳು ಇತರ ಬಹುಮಾನ ಪಡೆದಿವೆ.
ಹುತ ಕಥೆ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ.
ನ್ಯಾಸಾಂತರ ಕವನ ತೀರ್ಪುಗಾರರ ಮೆಚ್ಚುಗೆ ಪಡೆದಿದೆ.
ವಿಗತ ಕವನವು ಸಂಪದ ಸಾಲು ಪತ್ರಿಕೆಯ ಕವನ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿದೆ.
ಗುಪ್ತಗಮನ, ಆತ್ಮರತಿ, ಸಂಧಾನ ಕಥೆಗಳನ್ನು ಪ್ರತಿಲಿಪಿಯ ಆಡಿಯೋ ಕಥೆಗಳಿಗೆ ಆಯ್ಕೆ ಮಾಡಲಾಗಿದೆ.
ಪರಿವರ್ತನೆ ಕವನವು ಕಥನ ಕವನ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಿದೆ.
ಸಮಸ್ಯೆಯನ್ನು ವರದಿ ಮಾಡಿ