pratilipi-logo ಪ್ರತಿಲಿಪಿ
ಕನ್ನಡ

ಉರಿಲಿಂಗಪೆದ್ದಿಯ ವಚನಗಳು

4.1
1622

ತಂದೆ-ತಾಯಿ ಸಂಯೋಗಸಂಭೂತನಲ್ಲದವನು, ಶ್ವೇತ, ಪೀತ, ಕಪೋತ, ಹರೀತ, ಕೃಷ್ಣ ಮಾಂಜಿಷ್ಟವೆಂಬ ಷಡುವರ್ಣರಹಿತನು, ಆದಿಮಧ್ಯಾವಸಾನಂಗಳಿಲ್ಲದ ಸ್ವತಂತ್ರಮಹಿಮನು, ವೇದವಿಂತುಂಟೆಂದು ರೂಹಿಸಬಾರದವನು, ನಾ ಬಲ್ಲೆನೆಂಬ ಹಿರಿಯರ ಒಗ್ಗೆಗೂ ...

ಓದಿರಿ
ಲೇಖಕರ ಕುರಿತು
author
ಉರಿಲಿಂಗಪೆದ್ದಿ

ಮೂಲತ: ಚೋರವೃತ್ತಿಯವನಾಗಿದ್ದ ಈತ ಉರಿಲಿಂಗದೇವನ ಶಿಷ್ಯತ್ವ ವಹಿಸಿ, ಘನ ವಿದ್ವಾಂಸನೂ, ಅನುಭಾವಿಯೂ ಆಗಿ ಉತ್ತಮ ವಚನಗಳನ್ನು ರಚಿಸಿದ್ದಾನೆ. ಕಾಳವ್ವೆ ಈತನ ಸತಿ. ಉರಿಲಿಂಗದೇವರ ನಂತರ ಪೀಠವನ್ನು ಏರಿದ ಪೆದ್ದಣ್ಣ ಜಾತಿಯಿಂದ ಅಸ್ಪೃಶ್ಯನೆಂದು ತಿಳಿದುಬರುವುದರಿಂದ, ಈ ಪೀಠಾರೋಹಣ ಒಂದು ಕ್ರಾಂತಿಕಾರಿ ಘಟನೆಯೆಂದೇ ಹೇಳಬೇಕು. ಅಸ್ಪೃಶ್ಯ ಲಿಂಗಾಯತರ ಅನೇಕ ಮಠಗಳು ಕರ್ನಾಟಕದಲ್ಲಿ ಇದ್ದು ಅವುಗಳನ್ನು ಉರಿಲಿಂಗಪೆದ್ದಿ ಮಠಗಳೆಂದು ಕರೆಯುತ್ತಾರೆ. 'ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ' ಆಂಕಿತದಲ್ಲಿ ಈತ ರಚಿಸಿದ ೩೬೬ ವಚನಗಳು ದೊರೆತಿವೆ. ಅವುಗಳಲ್ಲಿ ಗುರುಮಹಿಮೆಗೆ ಅಗ್ರಸ್ಥಾನ ಸಂದಿದೆ. ಜೊತೆಗೆ ಲಿಂಗ-ಜಂಗಮ ತತ್ವದ ವಿಚಾರ, ಕುಲ-ಜಾತಿ ಸಮಸ್ಯೆ ನಿರೊಪಿತವಾಗಿವೆ. ವಚನಗಳ ಮಧ್ಯದಲ್ಲಿ ಬಳಸಿದ ಹೇರಳ ಸಂಸ್ಕೃತ ಉದ್ಧರಣೆಗಳು ಈತನ ಪಾಂಡಿತ್ಯಕ್ಕೆ ನಿದರ್ಶನವೆನಿಸಿವೆ. ಧರ್ಮ ಹಾಗೂ ಧರ್ಮದ ತತ್ವ, ಆಚರಣೆಗಳ ಪ್ರಚಾರ ಇವನ ವಚನಗಳ ಪ್ರಧಾನ ಆಶಯ. ವಚನಗಳ ನಡುವೆ ಬಳಸುವ ಯಥೇಚ್ಛ ಸಂಸ್ಕೃತ ಶ್ಲೋಕಗಳ ಆಧಾರದಿಂದ ಈತ ದೊಡ್ಡ ಜ್ಞಾನಿ ಎಂದು ಹೇಳಬಹುದು. ಹುಟ್ಟಿನಲ್ಲಿ ಅಂತ್ಯಜನಾಗಿ ಗುರುಪೀಠವನ್ನೇರಿದ ಸಂಗತಿ ಕ್ರಾಂತಿಕಾರಕವಾದುದು. ಈತನಲ್ಲಿ ಸಾಮಾಜಿಕ ವಿಡಂಬನೆ ತೀಕ್ಷ್ಣವಾಗಿದೆ. ತನಗೆ ಸರಿಕಾಣದ್ದನ್ನು ಮುಚ್ಚು ಮರೆಯಿಲ್ಲದೆ ಟೀಕಿಸಿರುವನು. ಇವನಲ್ಲಿ ವೈಚಾರಿಕತೆ ಪ್ರಧಾನವಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shyla C B
    17 ಜೂನ್ 2021
    ಉರಿಲಿಂಗ ಪೆದ್ದಿಯ ಬದುಕಿನ ಬಗ್ಗೆ ಸ್ವಲ್ಪ ಮಾಹಿತಿ ಕೊಟ್ಟಿದ್ದರೆ ಚೆನ್ನಾಗಿತ್ತು.
  • author
    18 ಜುಲೈ 2020
    ಉತ್ತಮ ಮಾಹಿತಿಯನ್ನು ‌ನೀಡಿರುವ ತಮಗೆ ನಮಸ್ಕಾರ
  • author
    viswa.nayaka09 viswa.nayaka09
    01 ಫೆಬ್ರವರಿ 2020
    yes
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shyla C B
    17 ಜೂನ್ 2021
    ಉರಿಲಿಂಗ ಪೆದ್ದಿಯ ಬದುಕಿನ ಬಗ್ಗೆ ಸ್ವಲ್ಪ ಮಾಹಿತಿ ಕೊಟ್ಟಿದ್ದರೆ ಚೆನ್ನಾಗಿತ್ತು.
  • author
    18 ಜುಲೈ 2020
    ಉತ್ತಮ ಮಾಹಿತಿಯನ್ನು ‌ನೀಡಿರುವ ತಮಗೆ ನಮಸ್ಕಾರ
  • author
    viswa.nayaka09 viswa.nayaka09
    01 ಫೆಬ್ರವರಿ 2020
    yes