<p><span style="color: #333333; font-family: 'Helvetica Neue', Helvetica, Arial, sans-serif; line-height: 20px;">೧೨ನೇ ಶತಮಾನದಲ್ಲಿ ಆಗಿಹೋದ ವಚನಕಾರ್ತಿಯರ ಪೈಕಿ ಆಯ್ದಕ್ಕಿ ಲಕ್ಕಮ್ಮಳೂ ಒಬ್ಬಳು. ಈಕೆ ಆಯ್ಕಕ್ಕಿ ಮಾರಯ್ಯನ ಪತ್ನಿ. ಮೂಲತಃ ರಾಯಚೂರ ಜಿಲ್ಲೆ ಲಿಂಗಸೂರ ತಾಲೂಕಿನ ಅಮರೇಶ್ವರ ಗ್ರಾಮಕ್ಕೆ ಸೇರಿದ ಈ ದಂಪತಿಗಳು ಬಸವಣ್ಣನವರ ಕೀರ್ತಿವಾತೆ೯ ಕೇಳಿ ಕಲ್ಯಾಣಕ್ಕೆ ಬಂದು ಅಕ್ಕಿಯನ್ನು ಆಯುವ ಕಾಯಕ ಕೈಗೊಳ್ಳುತ್ತಾರೆ. ಇವರ ಇಷ್ಟದೈವ-ಅಮರೇಶ್ವರ. "ಮಾರಯ್ಯಪ್ರಿಯ ಅಮರೇಶ್ವರಲಿಂಗ" ಅಂಕಿತದಲ್ಲಿ ಬರೆದ ೨೫ ವಚನಗಳು ಈಗ ದೊರೆತಿವೆ. ಎಲ್ಲವೂ ಕಾಯಕ ಮತ್ತು ದಾಸೋಹದ ಮಹಿತಿಯನ್ನು ಎತ್ತಿ ಹೇಳುತ್ತವೆ. ’ಶೂನ್ಯ ಸಂಪಾದನೆಯಲ್ಲಿ ಈ ದಂಪತಿಗಳ ಕಾಯಕ ನಿಷ್ಠೆಯ ಕಥೆ ತುಂಬಾ ಸೊಗಸಾಗಿ ನಿರೂಪಿತವಾಗಿದೆ. </span></p>
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ