ಪವಿತ್ರ ಶುಕ್ರವಾರ ಪ್ರಭು ಯೇಸುವಿನ ಪೂಜ್ಯ ಯಾತನೆಯ ಆಚರಣೆಯ ದಿನ. ಯೆಶಾಯ ಪ್ರವಾದಿ ಬೈಬಲ್ ಶ್ರೀ ಗ್ರಂಥದಲ್ಲಿ 52ನೇ ಅಧ್ಯಾಯದಲ್ಲಿ ನುಡಿಯುವಂತೆ ,"ಗಾಯಗೊಂಡನಾತ ನಮ್ಮ ಪಾಪಗಳ ನಿಮಿತ್ತ." ಪ್ರಭು ಯೇಸು ಇಂದು ತಂದೆ ದೇವರ ಇಚ್ಛೆಯಂತೆ ...
"ಗುಡ್ ಫ್ರೈಡೇ" ಎಂಬುದು ಏಸುಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದ ದಿನ. ಇದು ಸಾಮಾನ್ಯವಾಗಿ ಕ್ರೈಸ್ತರಿಗೆ ಸೂತಕದ ದಿನವಾಗಬೇಕಿತ್ತು. ಆದರೆ "ಶುಭ" ವಾಗಿರುವುದು ಏಕೆ.? ಕ್ರಿಸ್ತ ಜೀವಿಸಿದ್ದು ಇಸ್ರೇಲ್ ರೋಮ್ ಸಾಮ್ರಾಜ್ಯದ ವಸಾಹತುವಾಗಿದ್ದ ಕಾಲಘಟ್ಟದಲ್ಲಿ. ಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶೋಷಿಸುತ್ತಿದ್ದ ರೋಮ್ ಚಕ್ರಾಧಿಪತ್ಯ ಒಂದೆಡೆಯಾದರೆ, ತಮ್ಮದೇ ಜನರನ್ನು ಕಠಿಣ ಧಾರ್ಮಿಕ ಕಾನೂನು ಆಚರಣೆಗಳ ಮೂಲಕ ಹಿಂಸಿಸುತ್ತಿದ್ದ ಯಹೂದ್ಯ ಧಾರ್ಮಿಕ ವರ್ಗ ಮತ್ತೊಂದೆಡೆ. ಇವರಿಬ್ಬರ ನಡುವೆ ಸಾಮಾನ್ಯ ಜನ ನಲುಗಿ, ಕನಲಿ ಹೋಗಿದ್ದರು. ತಮ್ಮನ್ನು ಈ ಎಲ್ಲಾ ಸಂಕೋಲೆಗಳಿಂದ ಬಿಡಿಸುವ 'ಮೆಸ್ತಾಯ'(ಉದ್ಧಾರಕನ)ನ ಇರುವಿಕೆಯನ್ನು ನಿರೀಕ್ಷಿಸುತ್ತಿದ್ದರು. ಆಗ ಬಂದ ಏಸು ಕ್ರಿಸ್ತರು ಯಹೂದ್ಯ ಧಾರ್ಮಿಕ ನೇತಾರರ ಡಂಭಾಚಾರ, ಜನರನ್ನು ಮಾನಸಿಕವಾಗಿ ಹಿಂಸಿಸುವ ಕಟು ಆಚರಣೆಗಳನ್ನು ಖಂಡಿಸಿದರು; ದೇವರು ಮನುಷ್ಯನ ಹೃದಯದಲ್ಲಿದ್ದಾನೆ, ನಿಮ್ಮಂತೆಯೇ ಪರರನ್ನು ಪ್ರೀತಿಸಿದರೆ ಅದು ದೇವರನ್ನೇ ಪ್ರೀತಿಸಿದಂತೆ, ಎಂಬ ಮಾನವತೆಯ ಸಂದೇಶವನ್ನು ಸಾರಿದರು. ಯಹೂದ್ಯ ಸಮಾಜವು ಪಾಪಿಗಳು ಎಂದು ಕರೆದು ಊರ ಹೊರಗೆ ಹಾಕಿದ್ದ ದೀನರ ಒಡನಾಡಿಯಾದ ಕ್ರಿಸ್ತ, ಅವರ ಜೊತೆ ಊಟ ಮಾಡಿದರು, ಅವರ ಮನೆಗಳಲ್ಲಿ ತಂಗಿದರು, ಅವರ ನೋವು ನಲಿವುಗಳಿಗೆ ಸ್ಪಂದಿಸಿ, ಅವರನ್ನು ತನ್ನ ಸ್ನೇಹಿತರು, ಸಹೋದರರು ಎಂದು ಕರೆದರು. ಕ್ರಿಸ್ತನ ಈ ಕ್ರಿಯೆಗಳು ಸಾವಿರಾರು ಜನರ ಬದುಕಿನಲ್ಲಿ ಸಮಧಾನ, ಸಾಂತ್ವಾನದ ನಿಟ್ಟುಸಿರಿಗೆ ಕಾರಣವಾಯಿತು. ಕ್ರಿಸ್ತನ ಈ ಸಾಮಾಜಿಕ ಕ್ರಾಂತಿಗೆ ಹೆದರಿದ ಅಲ್ಲಿಯ ಧಾರ್ಮಿಕ ನಾಯಕರು, ಆತನ ಕೊಲೆಗೆ ಸಂಚು ರೂಪಿಸಿದರು. ಈ ಸಂಚಿನ ಭಾಗವಾಗಿ ಏಸುವಿನ ಹನ್ನೆರಡು ಶಿಷ್ಯಂದೀರಲ್ಲಿ ಒಬ್ಬನಾದ ಜೂಜುದಾಸನು ಮೂವತ್ತು ಬೆಳ್ಳಿ ನಾಣ್ಯಗಳಿಗೆ ಏಸುವಿಗೆ ದ್ರೋಹ ಬಗೆದು, ಏಸುವನ್ನು ಯಹೂದ್ಯರಿಗೆ ಹಿಡಿದುಕೊಟ್ಟನು. ನಂತರ ಅವರು ಏಸುವನ್ನು ಶಿಲುಬೆಗೆ ಏರಿಸಿದರು. ಶುಭ ಶುಕ್ರವಾರ ಪ್ರಮುಖವಾಗಿ ಪ್ರೀತಿ, ತ್ಯಾಗ ಮತ್ತು ಕ್ಷಮೆ ಎಂಬ ಮೂರು ಸಂದೇಶಗಳನ್ನು ಸಾರುತ್ತದೆ. ಕ್ರಿಸ್ತ ತನ್ನ ಜನರನ್ನು ಅಪರಿಮಿತವಾಗಿ ಪ್ರೀತಿಸಿದ್ದು ಮಾತ್ರವಲ್ಲದೆ, ಅವರ ಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸಿದ. ತನ್ನ ಜನರ ರೋಗ-ರುಜಿನಗಳನ್ನು ವಾಸಿ ಮಾಡಿ, ಅವರಲ್ಲಿ ಬದುಕುವ ಸ್ಪೂರ್ತಿಯನ್ನು ತುಂಬಿದ. ದೇವರು ಹಾಗೂ ಪರರನ್ನು ಪ್ರೀತಿಸುವಂತೆ ಪ್ರೇರಿಪಿಸಿದ. ಇದಕ್ಕೆ ಪ್ರತಿಯಾಗಿ ಆತನಿಗೆ ದ್ರೋಹ ಬಗೆದಾಗಲೂ ಆತ ಹತಾಶನಾಗಿ, ಹಲುಬಲಿಲ್ಲ. ಶುಕ್ರವಾರದ ನಡು ಮಧ್ಯಾಹ್ನ ಕ್ರಿಸ್ತನನ್ನು ಶಿಲುಬೆಗೇರಿಸಿದಾಗ ಅಲ್ಲಿನ ಜನರು ಮತ್ತು ಸೈನಿಕರು ಕ್ರಿಸ್ತನನ್ನು ಪರಿಹಾಸ್ಯ ಮಾಡುತ್ತಿದ್ದರು. ಆಗಲೂ ಕ್ರಿಸ್ತ "ತಂದೆಯೇ", ಇವರನ್ನು ಕ್ಷಮಿಸು, ಇವರೇನು ಮಾಡುತ್ತಿದ್ದಾರೆಂದು ಅರಿಯರು, ಎಂದು ಅವರನ್ನು ಕ್ಷಮಿಸಿದ. ಇದಲ್ಲದೆ, ಹಿಂದಿನ ರಾತ್ರಿ ತಮ್ಮನ್ನು ಅಲ್ಲಗಳೆದಿದ್ದ ತಮ್ಮ ಆಪ್ತ ಶಿಷ್ಯ ಸಿಮೋನ್ ಪೇತ್ರನನ್ನು ಸಹ ಕ್ಷಮಿಸುವ ಮೂಲಕ, ಕ್ಷಮೆ ಎಂಬ ದೈವಮೌಲ್ಯದ ಪ್ರಾಮುಖ್ಯತೆಯನ್ನು ತಿಳಿಸಿದ. " ಗೆಳೆಯರಿಗಾಗಿ ತಮ್ಮ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾವುದೂ ಇಲ್ಲ" ಎಂದಿದ್ದ ಏಸುಕ್ರಿಸ್ತ, ತನ್ನ ಸ್ನೇಹಿತರಿಗಾಗಿ ಹಾಗೂ ತನ್ನ ಜನರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ. ಒಬ್ಬ ಮನುಷ್ಯ ತನ್ನ ಪ್ರಾಣಕ್ಕಿಂತ ಮಿಗಿಲಾಗಿ ಯಾವ ತ್ಯಾಗವನ್ನು ಮಾಡಲು ಸಾಧ್ಯ.? ಹೀಗೆ ಕ್ರೈಸ್ತ ಸಾರಿದ ಪ್ರೀತಿ, ಕ್ಷಮೆ ಮತ್ತು ತ್ಯಾಗಗಳು ಶುಭ ಶುಕ್ರವಾರದಂದು ಆತನ ಮರಣದಲ್ಲಿ ಅವುಗಳ ಪ್ರಸ್ತುತತೆಯನ್ನು ನೆನಪಿಸುವ ಕಾರಣ ಆತನ ಮರಣ ಕ್ರೈಸ್ತರಿಗೆ ಶುಭವಾಗಿದೆ.
ಜಗತ್ತಿನ ನನ್ನೆಲ್ಲಾ ಆತ್ಮಿಯ ಕ್ರೈಸ್ತ ಬಾಂಧವರಿಗೆ ಶುಭ ಶುಕ್ರವಾರದ ಶುಭಾಶಯಗಳು.🌼🌼🌼🌼🌼🌼🌼
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
"ಗುಡ್ ಫ್ರೈಡೇ" ಎಂಬುದು ಏಸುಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದ ದಿನ. ಇದು ಸಾಮಾನ್ಯವಾಗಿ ಕ್ರೈಸ್ತರಿಗೆ ಸೂತಕದ ದಿನವಾಗಬೇಕಿತ್ತು. ಆದರೆ "ಶುಭ" ವಾಗಿರುವುದು ಏಕೆ.? ಕ್ರಿಸ್ತ ಜೀವಿಸಿದ್ದು ಇಸ್ರೇಲ್ ರೋಮ್ ಸಾಮ್ರಾಜ್ಯದ ವಸಾಹತುವಾಗಿದ್ದ ಕಾಲಘಟ್ಟದಲ್ಲಿ. ಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶೋಷಿಸುತ್ತಿದ್ದ ರೋಮ್ ಚಕ್ರಾಧಿಪತ್ಯ ಒಂದೆಡೆಯಾದರೆ, ತಮ್ಮದೇ ಜನರನ್ನು ಕಠಿಣ ಧಾರ್ಮಿಕ ಕಾನೂನು ಆಚರಣೆಗಳ ಮೂಲಕ ಹಿಂಸಿಸುತ್ತಿದ್ದ ಯಹೂದ್ಯ ಧಾರ್ಮಿಕ ವರ್ಗ ಮತ್ತೊಂದೆಡೆ. ಇವರಿಬ್ಬರ ನಡುವೆ ಸಾಮಾನ್ಯ ಜನ ನಲುಗಿ, ಕನಲಿ ಹೋಗಿದ್ದರು. ತಮ್ಮನ್ನು ಈ ಎಲ್ಲಾ ಸಂಕೋಲೆಗಳಿಂದ ಬಿಡಿಸುವ 'ಮೆಸ್ತಾಯ'(ಉದ್ಧಾರಕನ)ನ ಇರುವಿಕೆಯನ್ನು ನಿರೀಕ್ಷಿಸುತ್ತಿದ್ದರು. ಆಗ ಬಂದ ಏಸು ಕ್ರಿಸ್ತರು ಯಹೂದ್ಯ ಧಾರ್ಮಿಕ ನೇತಾರರ ಡಂಭಾಚಾರ, ಜನರನ್ನು ಮಾನಸಿಕವಾಗಿ ಹಿಂಸಿಸುವ ಕಟು ಆಚರಣೆಗಳನ್ನು ಖಂಡಿಸಿದರು; ದೇವರು ಮನುಷ್ಯನ ಹೃದಯದಲ್ಲಿದ್ದಾನೆ, ನಿಮ್ಮಂತೆಯೇ ಪರರನ್ನು ಪ್ರೀತಿಸಿದರೆ ಅದು ದೇವರನ್ನೇ ಪ್ರೀತಿಸಿದಂತೆ, ಎಂಬ ಮಾನವತೆಯ ಸಂದೇಶವನ್ನು ಸಾರಿದರು. ಯಹೂದ್ಯ ಸಮಾಜವು ಪಾಪಿಗಳು ಎಂದು ಕರೆದು ಊರ ಹೊರಗೆ ಹಾಕಿದ್ದ ದೀನರ ಒಡನಾಡಿಯಾದ ಕ್ರಿಸ್ತ, ಅವರ ಜೊತೆ ಊಟ ಮಾಡಿದರು, ಅವರ ಮನೆಗಳಲ್ಲಿ ತಂಗಿದರು, ಅವರ ನೋವು ನಲಿವುಗಳಿಗೆ ಸ್ಪಂದಿಸಿ, ಅವರನ್ನು ತನ್ನ ಸ್ನೇಹಿತರು, ಸಹೋದರರು ಎಂದು ಕರೆದರು. ಕ್ರಿಸ್ತನ ಈ ಕ್ರಿಯೆಗಳು ಸಾವಿರಾರು ಜನರ ಬದುಕಿನಲ್ಲಿ ಸಮಧಾನ, ಸಾಂತ್ವಾನದ ನಿಟ್ಟುಸಿರಿಗೆ ಕಾರಣವಾಯಿತು. ಕ್ರಿಸ್ತನ ಈ ಸಾಮಾಜಿಕ ಕ್ರಾಂತಿಗೆ ಹೆದರಿದ ಅಲ್ಲಿಯ ಧಾರ್ಮಿಕ ನಾಯಕರು, ಆತನ ಕೊಲೆಗೆ ಸಂಚು ರೂಪಿಸಿದರು. ಈ ಸಂಚಿನ ಭಾಗವಾಗಿ ಏಸುವಿನ ಹನ್ನೆರಡು ಶಿಷ್ಯಂದೀರಲ್ಲಿ ಒಬ್ಬನಾದ ಜೂಜುದಾಸನು ಮೂವತ್ತು ಬೆಳ್ಳಿ ನಾಣ್ಯಗಳಿಗೆ ಏಸುವಿಗೆ ದ್ರೋಹ ಬಗೆದು, ಏಸುವನ್ನು ಯಹೂದ್ಯರಿಗೆ ಹಿಡಿದುಕೊಟ್ಟನು. ನಂತರ ಅವರು ಏಸುವನ್ನು ಶಿಲುಬೆಗೆ ಏರಿಸಿದರು. ಶುಭ ಶುಕ್ರವಾರ ಪ್ರಮುಖವಾಗಿ ಪ್ರೀತಿ, ತ್ಯಾಗ ಮತ್ತು ಕ್ಷಮೆ ಎಂಬ ಮೂರು ಸಂದೇಶಗಳನ್ನು ಸಾರುತ್ತದೆ. ಕ್ರಿಸ್ತ ತನ್ನ ಜನರನ್ನು ಅಪರಿಮಿತವಾಗಿ ಪ್ರೀತಿಸಿದ್ದು ಮಾತ್ರವಲ್ಲದೆ, ಅವರ ಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸಿದ. ತನ್ನ ಜನರ ರೋಗ-ರುಜಿನಗಳನ್ನು ವಾಸಿ ಮಾಡಿ, ಅವರಲ್ಲಿ ಬದುಕುವ ಸ್ಪೂರ್ತಿಯನ್ನು ತುಂಬಿದ. ದೇವರು ಹಾಗೂ ಪರರನ್ನು ಪ್ರೀತಿಸುವಂತೆ ಪ್ರೇರಿಪಿಸಿದ. ಇದಕ್ಕೆ ಪ್ರತಿಯಾಗಿ ಆತನಿಗೆ ದ್ರೋಹ ಬಗೆದಾಗಲೂ ಆತ ಹತಾಶನಾಗಿ, ಹಲುಬಲಿಲ್ಲ. ಶುಕ್ರವಾರದ ನಡು ಮಧ್ಯಾಹ್ನ ಕ್ರಿಸ್ತನನ್ನು ಶಿಲುಬೆಗೇರಿಸಿದಾಗ ಅಲ್ಲಿನ ಜನರು ಮತ್ತು ಸೈನಿಕರು ಕ್ರಿಸ್ತನನ್ನು ಪರಿಹಾಸ್ಯ ಮಾಡುತ್ತಿದ್ದರು. ಆಗಲೂ ಕ್ರಿಸ್ತ "ತಂದೆಯೇ", ಇವರನ್ನು ಕ್ಷಮಿಸು, ಇವರೇನು ಮಾಡುತ್ತಿದ್ದಾರೆಂದು ಅರಿಯರು, ಎಂದು ಅವರನ್ನು ಕ್ಷಮಿಸಿದ. ಇದಲ್ಲದೆ, ಹಿಂದಿನ ರಾತ್ರಿ ತಮ್ಮನ್ನು ಅಲ್ಲಗಳೆದಿದ್ದ ತಮ್ಮ ಆಪ್ತ ಶಿಷ್ಯ ಸಿಮೋನ್ ಪೇತ್ರನನ್ನು ಸಹ ಕ್ಷಮಿಸುವ ಮೂಲಕ, ಕ್ಷಮೆ ಎಂಬ ದೈವಮೌಲ್ಯದ ಪ್ರಾಮುಖ್ಯತೆಯನ್ನು ತಿಳಿಸಿದ. " ಗೆಳೆಯರಿಗಾಗಿ ತಮ್ಮ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾವುದೂ ಇಲ್ಲ" ಎಂದಿದ್ದ ಏಸುಕ್ರಿಸ್ತ, ತನ್ನ ಸ್ನೇಹಿತರಿಗಾಗಿ ಹಾಗೂ ತನ್ನ ಜನರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ. ಒಬ್ಬ ಮನುಷ್ಯ ತನ್ನ ಪ್ರಾಣಕ್ಕಿಂತ ಮಿಗಿಲಾಗಿ ಯಾವ ತ್ಯಾಗವನ್ನು ಮಾಡಲು ಸಾಧ್ಯ.? ಹೀಗೆ ಕ್ರೈಸ್ತ ಸಾರಿದ ಪ್ರೀತಿ, ಕ್ಷಮೆ ಮತ್ತು ತ್ಯಾಗಗಳು ಶುಭ ಶುಕ್ರವಾರದಂದು ಆತನ ಮರಣದಲ್ಲಿ ಅವುಗಳ ಪ್ರಸ್ತುತತೆಯನ್ನು ನೆನಪಿಸುವ ಕಾರಣ ಆತನ ಮರಣ ಕ್ರೈಸ್ತರಿಗೆ ಶುಭವಾಗಿದೆ.
ಜಗತ್ತಿನ ನನ್ನೆಲ್ಲಾ ಆತ್ಮಿಯ ಕ್ರೈಸ್ತ ಬಾಂಧವರಿಗೆ ಶುಭ ಶುಕ್ರವಾರದ ಶುಭಾಶಯಗಳು.🌼🌼🌼🌼🌼🌼🌼
ಸಮಸ್ಯೆಯನ್ನು ವರದಿ ಮಾಡಿ
ಸೂಪರ್ಫ್ಯಾನ್
ಈ ಬ್ಯಾಡ್ಜ್ ಹೊಂದಿರುವ ಎಲ್ಲಾ ಸಾಹಿತಿಗಳೂ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದಡಿಯಲ್ಲಿ ಬರುತ್ತಾರೆ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ