ಮನದ ಮಾತು,
ಸ್ನೇಹಿತರೆ, ಬರಹ ನನ್ನ ಅಚ್ಚು ಮೆಚ್ಚಿನ ಸ್ನೇಹಿತ, ನನ್ನ ನೋವು ನಲಿವುಗಳಲ್ಲಿ ನನ್ನೊಟ್ಟಿಗಿದ್ದು ಧೈರ್ಯ ತುಂಬುವುದೇ ನನ್ನ ಬರಹ. ಜಂಜಾಟದ ಬದುಕಿನ ನಡುವೆ ನನ್ನ ಮನಸ್ಸಿನ ತೃಪ್ತಿಗಾಗಿ ಒಂದಷ್ಟು ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದೇನೆ. ಆಧುನಿಕ ಯಾಂತ್ರಿಕ ಯುಗದ ಬದುಕಿನ ಭರಾಟೆ ವಿಶ್ವ ಪಥವನ್ನು ಹೊಸ ಮಜಲಿನೆಡೆಗೆ ಕರೆದೊಯುತ್ತಿರುವಾಗ ನಾವು ಬರೆದದ್ದನ್ನು ಯಾರಾದರೂ ಓದಿದರೆ ಸಾಕು ಎನ್ನುವ ದಯನೀಯ ಪರಿಸ್ಥಿತಿ ಬರಹಗಾರನದ್ದು. ಕನ್ನಡ ಉಳಿಯಬೇಕಾದರೆ ಬರಹಗಾರನಿಗೆ ಮತ್ತು ಬರಹಗಳಿಗೆ ಬೆಲೆ ಸಿಗಬೇಕು. ಕನ್ನಡ ಕೃಷಿಯಲ್ಲಿ ಉತ್ತಮ ಬೆಳೆ ಬೆಳೆಯಬೇಕು, ಜನ ಪ್ರಿಯತೆ ಗುಂಗಿನಲ್ಲಿ ಸಮಾಜದ ಸ್ವಾಸ್ಥ ವನ್ನು ಬರಹಗಾರ ಹಾಳುಗೆಡವಬಾರದು. ಕನ್ನಡ ಕನ್ನಡವಾಗಿ ಉಳಿಯಲಿ, ಕನ್ನಡದ ಸಾಹಿತ್ಯ ಶ್ರೀಮಂತಿಕೆಗೆ ದಾರಿದ್ರ್ಯ ಹತ್ತದೆ ಸದಾ ಕಂಗೊಳಿಸುತ್ತಿರಲಿ. ಕನ್ನಡ ಮತ್ತು ಕನ್ನಡಿಗ ಅಳಿಯದಿರಲಿ. ಪ್ರತಿಲಿಪಿಯ ಉದ್ದಿಶ್ಯ ಸಾರ್ಥಕವಾಗಲಿ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ