ಹುಟ್ಟಿದ್ದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಕ್ಕದ ಗಡಿನಾಡಾದ ಕಾಸರಗೋಡಿನಲ್ಲಿ. ಪ್ರಾಥಮಿಕ ಶಿಕ್ಷಣ ಕಾಸರಗೋಡಿನ ಕಯ್ಯಾರು ಗ್ರಾಮದಲ್ಲಿ.
ಪ್ರೌಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದೆ. ಪದವಿಯನ್ನು ಮುಗಿಸಿದ ಬಳಿಕ ಆರು ತಿಂಗಳು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿ ಈಗ ಕಳೆದ ನಾಲ್ಕು ವರ್ಷದಿಂದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದೇನೆ.
2019ಕ್ಕೂ ಮೊದಲು ಯಾವುದೇ ಕಾರಣಕ್ಕೂ ಎಲ್ಲೂ ಕೂಡ ಒಂದು ಸಣ್ಣ ಕವನವನ್ನು ಕೂಡ ಬರೆದಿರಲಿಲ್ಲ. 2019 ನೇ ವರ್ಷ ನನ್ನ ಬದುಕನ್ನು ಬದಲಾಯಿಸಿದ ವರ್ಷ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಪ್ರಯುಕ್ತ ವೀರ ಸೈನಿಕ ಎನ್ನುವ ಕವನದ ಮೂಲಕ ಪ್ರಾರಂಭವಾದ ನನ್ನ ಸಾಹಿತ್ಯ ಲೋಕಕ್ಕೆ ಹಲವಾರು ಮಿತ್ರರು ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಾ.
ಇದೆ ನಂಬಿಕೆಯಲ್ಲಿ ನವಂಬರ್ 1 2019 ರಂದು ಪ್ರಾರಂಭವಾದ ಅಂತರ್ ಚಕ್ಷು ಎಂಬ ಕಾದಂಬರಿಗೆ ನಿಮ್ಮ ಸಹಕಾರ ನಿರೀಕ್ಷಿಸಿದ್ದೇ. ಇದುವರೆಗೂ ನನ್ನ ನಂಬಿಕೆ ಸುಳ್ಳಾಗಲಿಲ್ಲ.
ಮುಂದೆ ಕೂಡ ಇದೆ ಸಹಕಾರ ಹಾಗೂ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದೇನೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ