IT ಉದ್ಯೋಗಿಯಾದ ನಾನು, ಪೂರ್ವಜರಿಂದ ಬಳುವಳಿಯಾಗಿ ಬಂದ ಕೃಷಿಯ ಜ್ಞಾನ, ಕೃಷಿ ಭೂಮಿಯಒಡನಾಟದೊಂದಿಗೆ ಈಗ ವಾರಾಂತ್ಯದ ಸಾವಯವ ಕೃಷಿಕ. ಕೂಲಿ ಕಾರ್ಮಿಕರ ಮೊರೆಹೋಗದೆ ಸಾವಯವ ಕೃಷಿಯಲ್ಲಿ ತೆಂಗು, ಬಾಳೆ, ಬಟರ್ ಫ್ರೂಟ್, ಸೀಬೆ ಮತ್ತು ಸಿರಿಧಾನ್ಯಗಳ ಬೆಳೆದು ಮಿಶ್ರ ಬೇಸಾಯ ಮಾಡುತ್ತೇನೆ. ಆದುನಿಕ ಕೃಷಿಯಿಂದಾದ ಮಣ್ಣಿನ ಮಲಿನತೆಯನ್ನು ಹೋಗಲಾಡಿಸಲು ಸಾವಯವ ಕೃಷಿಮಾಡಿ, ಅದರ ಅರಿವನ್ನು ಮೂಡಿಸುವುದು ಹವ್ಯಾಸ. ಈ ಹವ್ಯಾಸಕ್ಕೆ ಅಕ್ಷರ ರೂಪಕೊಟ್ಟು "ಸುಲಭ ಸಾವಯವ" ಎಂಬ ಹೊತ್ತಿಗೆಯನ್ನು ಹೊರತಂದಿದ್ದೇನೆ. ಕನ್ನಡಪ್ರಭ ಪತ್ರಿಕಾ ಬಳಗವು, ನನ್ನ ಕೃಷಿ ಸೇವೆಯನ್ನು ಗುರುತಿಸಿ, "ಬಿತ್ತಿ ಬೆಳೆದು ಬೆಳಕಾದವರು" ಶೀರ್ಷಿಕೆಯ ಅಂಕಣದ 90ನೆಯ ಭಾಗವಾಗಿ ಬರೆದು ಪ್ರೋತ್ಸಾಯಿಸಿದ್ದಾರೆ. ಹಾಗೆಯೇ ವಿಜಯವಾಣಿ ಪತ್ರಿಕಾ ಬಳಗವು ಬಾನುವಾರದ "ನೇಗಿಲ ಯೋಗಿ" ಅಂಕಣದಲ್ಲಿ ನನ್ನ ಕೃಷಿಬದುಕಿನ ಬಗ್ಗೆ ಅಂಕಣ ಬರೆದು ಪ್ರೋತ್ಸಾಯಿಸಿದ್ದಾರೆ. ಜೊತೆಗೆ ಜ್ಞಾನಸಾಗರ ಬ್ಲಾಗ್ ತಂಡವೂ ನನ್ನ ಕೃಷಿ ಸೇವೆಯನ್ನು ಗುರುತಿಸಿ "ಸಾವಯವ ಕೃಷಿ ಸಾಧ್ಯವೇ?" ಶೀರ್ಷಿಕೆಯಡಿ ಜಾಲತಾಣದಲ್ಲಿ ಅಂಕಣ ಬರೆದು ಬೆನ್ನುತಟ್ಟಿದ್ದಾರೆ.
ರೈತರು, ಕೃಷಿ ಹಾಗೂ ಪ್ರೋತ್ಸಾಹದಾಯಕ ಕವನ ಬರೆಯುವುದು ಹವ್ಯಾಸ. ಹುಟ್ಟೂರಾದ ತೆಂಕಹಳ್ಳಿಯಲ್ಲಿ ಸಿರಿಧಾನ್ಯಗಳ ಉಪಯೋಗಗಳ ಅರಿವು ಮೂಡಿಸಲು 2022 ರ ನವೆಂಬರ್ ನಲ್ಲಿ ಸಿರಿಧಾನ್ಯಗಳ ರಾಜ್ಯಮಟ್ಟದ ಕವಿಗೋಷ್ಠಿಯ ಆಯೋಜಕರಲ್ಲಿ ಒಬ್ಬನಾಗಿ ದುಡಿದ ಹಿರಿಮೆ ನನ್ನದಾಗಿದೆ. ರಾಜ್ಯದಂತ ಸುಮಾರು 350 ಸಾಹಿತಿಗಳಿಂದ ಕವನಗಳನ್ನು ಬರೆಸಿ, 75 ಕವಿಗಳಿಗೆ ವಾಚಿಸಲು ಅವಕಾಶವಿತ್ತು, ಹಿರಿಯ ಸಾಹಿತಿಗಳಾದ ದೊಡ್ಡರಂಗೇಗೌಡರ ಅದ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಿದ್ದು ಹಿರಿಮೆ. ಅನುಭವಕ್ಕೆ ಅಕ್ಷರರೂಪಕೊಟ್ಟು ಜಾಲತಾಣದಲ್ಲಿ "ನಿನ್ನಿಂದಲೇ" ಎನ್ನುವ ಬ್ಲಾಗ್ ತೆರೆದು, ನಾಬರೆದ ಕವನಗಳನ್ನು ಕ್ರೂಡೀಕರಿಸುತ್ತೇನೆ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ