
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
ಪ್ರತಿಲಿಪಿನಾನು ತ್ರಿಕಾಲ ಜ್ಞಾನಿಯಾಗಿದ್ದರೆ ಕಣ್ಣು ಮುಚ್ಚಿ ಕುಳಿತು, ಒಳಗಣ್ಣನ್ನು ತೆರೆದು, ಮೂರು ಲೋಕಗಳನ್ನು ಸುತ್ತಾಡಿ ಬರುತ್ತಿದ್ದೆ. ನಾನು ತ್ರಿಕಾಲ ಜ್ಞಾನಿಯಾಗಿದ್ದರೆ ಭೂತ ವರ್ತಮಾನ ಭವಿಷ್ಯತ್ ನ ಆಗು ಹೋಗುಗಳನ್ನು ಅಂಗೈ ನೆಲ್ಲಿಕಾಯಿಯಂತೆ ...

ಪ್ರತಿಲಿಪಿಯ ನನ್ನ ಪಯಣ. ಪ್ರತಿಲಿಪಿಯಲ್ಲಿ ನನ್ನ ಸಾಹಿತ್ಯ ಪ್ರಯಾಣ ಶುರುವಾಗಿ ಐದು ವರ್ಷಗಳು ಕಳೆದಿವೆ. ಈ ಐದು ವರ್ಷಗಳಲ್ಲಿ ನಾನು ಪ್ರತಿಲಿಪಿಯಿಂದ ಪಡೆದಿರುವ ಅನುಭವಗಳು ಅಪಾರ. ಲಿಪಿಯಲ್ಲಿ ನನ್ನ ಬರಹದ ಪಯಣ ಶುರುವಾಗುವ ಮೊದಲು ನನ್ನ ಆರಂಭಿಕ ಹಂತದ ಬರವಣಿಗೆಯ ಬಗ್ಗೆ ಒಂದೆರಡು ವಿಷಯಗಳನ್ನು ತಿಳಿಸಲು ಇಷ್ಟಪಡುತ್ತೇನೆ . ಬಹಳ ಚಿಕ್ಕವಯಸ್ಸಿನಿಂದಲೂ ಓದುವ ಹವ್ಯಾಸವನ್ನು ಅಭ್ಯಾಸ ಮಾಡಿಕೊಂಡಿದ್ದ ನಾನು , ೧೯೮೨ ರಿಂದ ಸಣ್ಣದಾಗಿ ಬರವಣಿಗೆಯನ್ನು ಶುರು ಮಾಡಿಕೊಂಡೆ. ಮುಂದೆ ಬರವಣಿಗೆ ಒಂದು ಹವ್ಯಾಸವಾಗಿ , ಇಂದು ಗೀಳಾಗಿ ನನ್ನನ್ನು ಅಂಟಿಕೊಂಡು ಬಿಟ್ಟಿದೆ ಅನ್ನುವುದಂತೂ ನಿಜ. ಸುಮಾರು ನನ್ನ ಇಪ್ಪತ್ತೆರಡನೆ ವಯಸ್ಸಿನಲ್ಲಿ ಬರೆದ ಸಣ್ಣ ಕಥೆಗಳನ್ನು ಆಗೊಮ್ಮೆ ಈಗೊಮ್ಮೆ ಕನ್ನಡ ದಿನ ಪತ್ರಿಕೆ ವಾರ ಪತ್ರಿಕೆಗಳಿಗೆ (ಕನ್ನಡ ಪ್ರಭ, ಸುಧ, ಮಂಗಳ, ವನಿತಾ, ರಾಗಸಂಗಮ )ಕಳುಹಿಸುತ್ತಿದ್ದೆ. ನಾನು ಕಳುಹಿಸಿದ್ದ ನನ್ನ ಮೊದಲ ಕಿರುಕಥೆ "ಸಮಸ್ಯೆ " ಕನ್ನಡದ ಮಾಸಿಕ ಪತ್ರಿಕೆ "ವನಿತಾ " ದಲ್ಲಿ ಪ್ರಕಟಗೊಂಡಾಗ, ನನಗಾದ ಖುಷಿ ಹೇಳತೀರದಾಗಿತ್ತು. ನನ್ನ ಕೈಬರಹದ ಅಕ್ಷರಗಳು, ಬಿಳಿಯ ಹಾಳೆಯ ಮೇಲೆ ಅಚ್ಚಾಗಿ ಸುಂದರ ಚಿತ್ರದೊಂದಿಗೆ ಕಾಣಿಸಿಕೊಂಡಾಗ ಆಗುವ ಆ ಸಂತೋಷವೇ ಬೇರೆ. ಇಲ್ಲಿಂದ ಪ್ರಾರಂಭಗೊಂಡ ನನ್ನ ಬರಹದ ಪಯಣ ನಿರಂತರವಾಗಿ ಮುಂದುವರೆಯಿತು. ನನ್ನ ಮೊದಲ ಕಥೆ ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ಮತ್ತೆರಡು ಸಣ್ಣಕಥೆಗಳು ಒಂದೊಂದಾಗಿ ಪ್ರಕಟಗೊಂಡವು. ಇದರಿಂದ ನನ್ನ ಬರೆಯುವ ಉತ್ಸಾಹ ಹೆಚ್ಚುತ್ತಾ ಹೋಯಿತು. ಮುಂದೆ ಪತ್ರಿಕೆಗಳಿಗಾಗಿ ಸಾಂದರ್ಭಿಕ ಲೇಖನಗಳನ್ನು ಬರೆಯುತ್ತಾ ಹೋದೆ. ಕನ್ನಡ ಪ್ರಭ ದೈನಿಕದಲ್ಲಿ "ಮಹಿಳಾ ಲೋಕ","ಇಪ್ಪ ತ್ತೈದು ವರ್ಷಗಳ ನಂತರ" ಮುಂತಾದ ಶಿರ್ಷಿಕೆಗಾಗಿ ಬರೆದು ಕಳುಹಿಸುತ್ತಿದ್ದೆ.ಹಾಗೂ " ಸುಧಾ" ಮತ್ತು "ಮಂಗಳ" ಪತ್ರಿಕೆಗಳಿಗೂ ಕೆಲವು ಕಥೆಗಳನ್ನು ಹಾಗೂ ಲೇಖನಗಳನ್ನು ಕಳುಹಿಸುತ್ತಿದ್ದೆ. ಎಲ್ಲವೂ ಪ್ರಕಟವಾಗುತ್ತ ಹೋಗುತ್ತಿದ್ದವು. ನಾನು ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಾ ಹೋದಾಗ, ನನ್ನ ಬರವಣಿಗೆಯ ಹಂಬಲ ಹಾಗೂ ಉತ್ಸಾಹಗಳು ಹೆಚ್ಚಾಗಿದ್ದರೂ, ಉದ್ಯೋಗಸ್ಥ ಗೃಹಿಣಿಯಾಗಿದ್ದ ನನಗೆ ಹೆಚ್ಚು ಹೆಚ್ಚು ಬರೆಯುವುದಕ್ಕೆ ಸಮಯ ಸಿಗುತ್ತಿರಲಿಲ್ಲ. ಮುಂದೆ ಸಣ್ಣ ಕಥೆಯಿಂದ ಕಿರುಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದೆ , ಮೊದಲ ಬಾರಿಗೆ ನನ್ನ ಕಿರುಕಥೆ "ಸಮಾನ ದುಃಖಿಗಳು " ರಾಗಸಂಗಮ ಮಾಸಿಕ ಪತ್ರಿಕೆಯಲ್ಲಿ ಪ್ರಕಟಗೊಂಡಾಗ, ನನ್ನ ಆತ್ಮವಿಶ್ವಾಸ ಹೆಚ್ಚಾಯಿತು. ಉದ್ಯೋಗಸ್ಥೆಯಾಗಿದ್ದ ನನಗೆ ಮನೆಯ ಒಳಹೊರಗಿನ ಕೆಲಸ ನಿಭಾಯಿಸಿಕೊಂಡು ಹೋಗುತ್ತಿದ್ದಾಗ, ಸಮಯದ ಅಭಾವದಿಂದ ಹೆಚ್ಚು ಬರೆಯಲು ಆಗುತ್ತಿರಲಿಲ್ಲ. ಆದರೂ ಹೇಗೋ ಸಮಯ ಮಾಡಿಕೊಂಡು ಆಗಾಗ ಸ್ವಲ್ಪ ಸ್ವಲ್ಪ ಬರೆಯುತ್ತಿದ್ದೆ. ಮುಂದೆ ಎರಡು ಸಾವಿರದ ದಶಕಗಳ ಮೊದಲ ವರ್ಷಗಳಲ್ಲಿ ನಾನು ಕಳುಹಿಸಿದ ಒಂದೆರಡು ಕಾದಂಬರಿಗಳು "ರಾಗಸಂಗಮ" ಪತ್ರಿಕೆಯಲ್ಲಿ ಪ್ರಕಟಗೊಳ್ಳಲು ಶುರುವಾದಾಗ ನನ್ನ ಬರೆಯುವ ಉತ್ಸಾಹವೂ ಹೆಚ್ಚಾಗುತ್ತಾ ಹೋಯಿತು . ಮುಂದೆ, ನಾನು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ,"ಕರ್ನಾಟಕ ಮುಕ್ತವಿಶ್ವವಿದ್ಯಾಲಯ ಮೈಸೂರ್" ನಲ್ಲಿ ಕರ್ರೆಸ್ಪಾಂಡೆನ್ಸ್ ಕೋರ್ಸ್ ನಲ್ಲಿ ಕನ್ನಡ ಎಂ.ಎ ಮಾಡಿಕೊಂಡ ನಂತರ ,ನನ್ನ ಒಳಗೆ ಸುಪ್ತವಾಗಿ ಕುಳಿತಿದ್ದ ಬರವಣಿಗೆ ಮತ್ತೆ ಚಿಗುರೊಡೆಯುತ್ತಾ ಹೋಯಿತು. ಇದರ ಫಲಿತವಾಗಿ ನನ್ನ ಬರವಣಿಗೆಯಲ್ಲಿ ಅನೇಕ ಸುಧಾರಣೆಗಳಾದವು. ಕವನಗಳಿಗೂ ಗಮನ ಕೊಡುತ್ತಾ ಹೋದೆ. ಆದರೆ ಕಥಾಪ್ರಾಕಾರವೇ ನನ್ನ ಆಯ್ಕೆಯಾಯಿತು. ಹೀಗಾಗಿ ಕಿರುಕಾದಂಬರಿಗಳು ಒಂದೊಂದಾಗಿ ರೂಪುಗೊಳ್ಳುತ್ತಾ ಹೋದವು. ನನ್ನ ಕಣ್ಣೆದುರು ಕಾಣುತ್ತಿದ್ದ ಸುತ್ತಲಿನ ಸಾಮಾಜಿಕ ಸಮಸ್ಯೆಗಳಿಗೆ, ಅಕ್ಷರ ರೂಪವನ್ನು ಕೊಡುತ್ತಾ ಹೋಗಿ, ಕಿರು ಕಾದಂಬರಿಗಳ ಕಡೆ ಹೆಚ್ಚು ಗಮನ ಕೊಡುತ್ತಾ ಬಂದೆ. ಹೀಗಾಗಿ ಎರಡು ಸಾವಿರದ ಮಧ್ಯ ಭಾಗದಲ್ಲಿ (೨೦೦೬ ರಿಂದ) "ಕಿರು ಕಾದಂಬರಿ" ಗಳನ್ನು ಬಿಳಿಯ ಹಾಳೆಯ ಮೇಲೆ ಬರೆಯುತ್ತಾ ಹೋದೆ. ಆಗಿನ ಕಾಲದಲ್ಲಿ ಪುಟಗಟ್ಟಲೆ ಬರೆಯ ಬೇಕಾಗಿತ್ತು. ಒಂದು ಬಾರಿ ಕಚ್ಚಾ ಬರವಣಿಗೆ ಮತ್ತೊಂದು ಬಾರಿ ಅದನ್ನೇ ಸುಂದರವಾಗಿ ಕೈಯ್ಯಲ್ಲಿ ಬರೆದು ಕಳುಹಿಸುತ್ತಿದ್ದೆ. ಸುಮಾರು ನಾಲ್ಕೈದು ಕಿರುಕಾದಂಬರಿಗಳನ್ನು ಬರೆದು , "ರಾಗ ಸಂಗಮ" ಪತ್ರಿಕೆಗಳಿಗೆ ಕಳುಹಿಸುತ್ತಾ ಹೋದೆ. ನಾನು ಕಳುಹಿಸುತ್ತಿದ್ದ ಎಲ್ಲಾ ಕಥೆಗಳು ಪ್ರಕಟವಾಗುತ್ತಾ ಹೋದಾಗ, ನನ್ನ ಕಥೆಗಳು ಪುಸ್ತಕದ ಹಾಳೆಗಳಲ್ಲಿ ಅಚ್ಚಾಗಿ ಬಂದಾಗ, ವಿಶೇಷವಾಗಿ ನನ್ನ ಹೆಸರು ಮುದ್ರಣ ರೂಪದಲ್ಲಿ ಅಚ್ಚಾಗಿರುವುದನ್ನು ನೋಡುವಾಗ ನನಗೆ ಅದೇನೋ ಸಂತೋಷವಾಗುತ್ತಿತ್ತು ಹಾಗೂ ಒಂದು ರೀತಿಯ ಸಮಾಧಾನ ಹಾಗೂ ಬರೆಯುವುದಕ್ಕೆ ಸ್ಪೂರ್ತಿ ದೊರಕಿತು. ಮತ್ತೆ ಒಂದು ದಶಕದಲ್ಲಿ ಇದ್ದಕ್ಕಿದಂತೆ ನನ್ನ ಕುಟುಂಬ ಜೀವನದಲ್ಲಿ ದೊಡ್ಡ ಬಿರುಗಾಳಿ ಎದ್ದು, ಕೌಟುಂಬಿಕ ಸಮಸ್ಯೆಗಳು ಧುತ್ತೆಂದು ಎದುರಾದಾಗ, ನನ್ನ ಬರವಣಿಗೆ ಸ್ಥಗಿತ ಗೊಂಡಿತ್ತು. ಅತಿಯಾದ ಸಾಂಸಾರಿಕ ಜವಾಬ್ದಾರಿಗಳಿಂದ ೨೦೦೯ ರಿಂದ ೧೮ ರವರೆಗೆ ನಾನು ಪೆನ್ ಹಿಡಿಯುವುದನ್ನೇ ಬಿಟ್ಟು ಬಿಟ್ಟಿದ್ದೆ. ನನ್ನ ಜೀವನದಲ್ಲಿ ಸಾಂಸಾರಿಕ ಜವಾಬ್ದಾರಿಗಳು ಮುಗಿದು, ಎಲ್ಲವೂ ಒಂದು ಹಂತ ತಲುಪಿ ಸ್ವಲ್ಪ ವಿರಾಮ ದೊರಕಿದಾಗ ಮತ್ತೆ ನನ್ನ ಕೈಯ್ಯಲ್ಲಿ ಪೆನ್ ಹಿಡಿಸಿದ್ದು ಸಾಮಾಜಿಕ ಜಾಲತಾಣದ ಸಾಹಿತ್ಯಿಕ ಗುಂಪುಗಳು ಎಂದರೆ ತಪ್ಪಾಗಲಾರದು. ಮುಂದೆ ೨೦೧೮ ರಲ್ಲಿ, ನನ್ನ ಗೆಳತಿ ಹಾಗೂ ಬರಹಗಾರ್ತಿಯಾಗಿದ್ದ ಡಾ. ಉಷ ಪಾಟಕ್ ಅವರು ನನ್ನನ್ನು ಸಾಮಾಜಿಕ ಜಾಲತಾಣ ವಾದ ಫ಼ೇಸ್ ಬುಕ್ ನಲ್ಲಿ ಪ್ರಾರಂಭವಾಗಿದ್ದ ಕಥಾಗುಚ್ಛ ಕ್ಕೆ ಬರೆಯುವಂತೆ ಪ್ರೇರೇಪಿಸಿದರು . ಹೀಗೆ , ೨೦೧೮ ರಿಂದ ಕಥಾಗುಚ್ಛ ದ ಬರಹಗಾರರ ಗುಂಪಿಗೆ ನಾನು ಸೇರಿಕೊಂಡು ಬರೆಯಲು ಮತ್ತೆ ಪ್ರಾರಂಭಿಸಿದೆ. ನನ್ನ ಸಾಣೆ ಹಿಡಿದ ಲೇಖನಿ ಮತ್ತೆ ಚುರುಕಾಯಿತು. ನಂತರ ಕಥಾಕವನಗಳ ಸಂಕಲನ, ಕನ್ನಡಿ, ಕಥಾ ಅರಮನೆ ಗಳಿಗೂ ಆಗೊಮ್ಮೆ ಈಗೊಮ್ಮೆ ಕವನಗಳು ನ್ಯಾನೊ ಕಥೆಗಳನ್ನು ಬರೆಯುತ್ತಾ ಸಾಗಿದೆ. ಮೊಬೈಲ್ ನಲ್ಲೇ ಕಷ್ಟಪಟ್ಟು ಬರೆಯುತ್ತಿದ್ದ ನಾನು ಕ್ರಮೇಣ ಲಾಪ್ಟಾಪ್ ನಲ್ಲಿ ನುಡಿ, ಬರಹ ಸಾಫ಼್ಟ್ವೇರ್ ಗಳನ್ನು ಹಾಕಿಕೊಂಡು ಟೈಪಿಸತೊಡಗಿದೆ. ಲ್ಯಾಪ್ ಟಾಪ್ ನ ದೊಡ್ಡ ಸ್ಕ್ರೀನ್ ನಲ್ಲಿ ಬರೆಯುವುದು ಸುಲಭವೆನಿಸಿತು. ಕಥಾಗುಚ್ಚದ ರೂವಾರಿಗಳಾದ ಶ್ರಿಮತಿ ಲತಾಜೋಶಿ ,ಮತ್ತು ಸುಮ ಕಳಸಾಪುರ್ ಅವರಿಬ್ಬರೂ ನನಗೆ ಪ್ರತಿಲಿಪಿಯ ಬಗ್ಗೆ ತಿಳಿಸಿ, ಅದರಲ್ಲಿ ನನ್ನ ಕಥೆಗಳನ್ನು ಹಾಕುವಂತೆ ನೀಡಿದ ಪ್ರೋತ್ಸಾಹವೇ ನಾನು ಪ್ರತಿಲಿಪಿಗೆ ಬರೆಯಲು ಮೂಲ ಕಾರಣವಾಯಿತು. ಅವರ ಈ ಸಹಾಯವನ್ನು ನಾನು ಮರೆಯಲಾರೆ. ಹೀಗೆ ಪ್ರತಿಲಿಪಿಯಲ್ಲಿ ನನ್ನ ಬರಹದ ಪಯಣ ಶುರುವಾಯಿತು. ಕಥಾಗುಚ್ಚದ ಜೊತೆ ಜೊತೆಗೆ ಕಥಾಕವನ ಸಂಕಲನ, ಕನ್ನಡಿ ಮುಂತಾದ ಸಾಹಿತ್ಯಿಕ ಗುಂಪುಗಳಿಗೂ ಕೆಲವು ಬರಹಗಳನ್ನು ಪೋಸ್ಟ್ ಮಾಡುತ್ತಿದ್ದೆ. ಇನ್ನು ಪ್ರತಿಲಿಪಿಯಲ್ಲಿ ನನ್ನ ಮೊದಲ ಬರಹ ದ ಬಗ್ಗೆ ನೆನಪು ಮಾಡಿಕೊಳ್ಳುವುದಾದರೆ, ಕರೋನಾ ಸಮಯದಲ್ಲಿ (ಮಾರ್ಚ್ ೨೦೨೦ ) ರಲ್ಲಿ ನಾನು ನನ್ನ ಮೊದಲ ಕಿರುಕಾದಂಬರಿ "ಪುನರ್ಮಿಲನ" ಕಥೆಯನ್ನು ಸ್ಪರ್ಧೆಗಾಗಿ ಕಳುಹಿಸಿದೆ. ಆ ಕಥೆ ಸ್ಪರ್ಧೆಯಲ್ಲಿ ಗೆಲುವು ಸಾಧಿಸದಿದ್ದರೂ, ಓದುಗರ ಮನಸ್ಸನ್ನು ಗೆಲ್ಲುವುದರಲ್ಲಿ ಸಫಲವಾಯಿತೆನ್ನುವುದಕ್ಕೆ ಅದನ್ನು ೨೭೧೨೯ ಜನ ಓದುಗರು ಆ ಕಥೆಯನ್ನು ಓದಿ,ನೀಡುತ್ತಿದ್ದ ನೂರಾರು ವಿಮರ್ಶೆಗಳು ಹಾಗೂ ಪ್ರತಿಕ್ರಿಯೆಗಳು. (೩೫೦ ಕ್ಕೂ ಅಧಿಕ ) ಆ ಕಥೆಯ ಪಾತ್ರಗಳು ಅದೆಷ್ಟೋ ಓದುಗರಿಗೆ ಹತ್ತಿರವಾಯಿತು ಎನ್ನುವುದು ಅದೆಷ್ಟೋ ಓದುಗರು ಆ
ಪ್ರತಿಲಿಪಿಯ ನನ್ನ ಪಯಣ. ಪ್ರತಿಲಿಪಿಯಲ್ಲಿ ನನ್ನ ಸಾಹಿತ್ಯ ಪ್ರಯಾಣ ಶುರುವಾಗಿ ಐದು ವರ್ಷಗಳು ಕಳೆದಿವೆ. ಈ ಐದು ವರ್ಷಗಳಲ್ಲಿ ನಾನು ಪ್ರತಿಲಿಪಿಯಿಂದ ಪಡೆದಿರುವ ಅನುಭವಗಳು ಅಪಾರ. ಲಿಪಿಯಲ್ಲಿ ನನ್ನ ಬರಹದ ಪಯಣ ಶುರುವಾಗುವ ಮೊದಲು ನನ್ನ ಆರಂಭಿಕ ಹಂತದ ಬರವಣಿಗೆಯ ಬಗ್ಗೆ ಒಂದೆರಡು ವಿಷಯಗಳನ್ನು ತಿಳಿಸಲು ಇಷ್ಟಪಡುತ್ತೇನೆ . ಬಹಳ ಚಿಕ್ಕವಯಸ್ಸಿನಿಂದಲೂ ಓದುವ ಹವ್ಯಾಸವನ್ನು ಅಭ್ಯಾಸ ಮಾಡಿಕೊಂಡಿದ್ದ ನಾನು , ೧೯೮೨ ರಿಂದ ಸಣ್ಣದಾಗಿ ಬರವಣಿಗೆಯನ್ನು ಶುರು ಮಾಡಿಕೊಂಡೆ. ಮುಂದೆ ಬರವಣಿಗೆ ಒಂದು ಹವ್ಯಾಸವಾಗಿ , ಇಂದು ಗೀಳಾಗಿ ನನ್ನನ್ನು ಅಂಟಿಕೊಂಡು ಬಿಟ್ಟಿದೆ ಅನ್ನುವುದಂತೂ ನಿಜ. ಸುಮಾರು ನನ್ನ ಇಪ್ಪತ್ತೆರಡನೆ ವಯಸ್ಸಿನಲ್ಲಿ ಬರೆದ ಸಣ್ಣ ಕಥೆಗಳನ್ನು ಆಗೊಮ್ಮೆ ಈಗೊಮ್ಮೆ ಕನ್ನಡ ದಿನ ಪತ್ರಿಕೆ ವಾರ ಪತ್ರಿಕೆಗಳಿಗೆ (ಕನ್ನಡ ಪ್ರಭ, ಸುಧ, ಮಂಗಳ, ವನಿತಾ, ರಾಗಸಂಗಮ )ಕಳುಹಿಸುತ್ತಿದ್ದೆ. ನಾನು ಕಳುಹಿಸಿದ್ದ ನನ್ನ ಮೊದಲ ಕಿರುಕಥೆ "ಸಮಸ್ಯೆ " ಕನ್ನಡದ ಮಾಸಿಕ ಪತ್ರಿಕೆ "ವನಿತಾ " ದಲ್ಲಿ ಪ್ರಕಟಗೊಂಡಾಗ, ನನಗಾದ ಖುಷಿ ಹೇಳತೀರದಾಗಿತ್ತು. ನನ್ನ ಕೈಬರಹದ ಅಕ್ಷರಗಳು, ಬಿಳಿಯ ಹಾಳೆಯ ಮೇಲೆ ಅಚ್ಚಾಗಿ ಸುಂದರ ಚಿತ್ರದೊಂದಿಗೆ ಕಾಣಿಸಿಕೊಂಡಾಗ ಆಗುವ ಆ ಸಂತೋಷವೇ ಬೇರೆ. ಇಲ್ಲಿಂದ ಪ್ರಾರಂಭಗೊಂಡ ನನ್ನ ಬರಹದ ಪಯಣ ನಿರಂತರವಾಗಿ ಮುಂದುವರೆಯಿತು. ನನ್ನ ಮೊದಲ ಕಥೆ ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ಮತ್ತೆರಡು ಸಣ್ಣಕಥೆಗಳು ಒಂದೊಂದಾಗಿ ಪ್ರಕಟಗೊಂಡವು. ಇದರಿಂದ ನನ್ನ ಬರೆಯುವ ಉತ್ಸಾಹ ಹೆಚ್ಚುತ್ತಾ ಹೋಯಿತು. ಮುಂದೆ ಪತ್ರಿಕೆಗಳಿಗಾಗಿ ಸಾಂದರ್ಭಿಕ ಲೇಖನಗಳನ್ನು ಬರೆಯುತ್ತಾ ಹೋದೆ. ಕನ್ನಡ ಪ್ರಭ ದೈನಿಕದಲ್ಲಿ "ಮಹಿಳಾ ಲೋಕ","ಇಪ್ಪ ತ್ತೈದು ವರ್ಷಗಳ ನಂತರ" ಮುಂತಾದ ಶಿರ್ಷಿಕೆಗಾಗಿ ಬರೆದು ಕಳುಹಿಸುತ್ತಿದ್ದೆ.ಹಾಗೂ " ಸುಧಾ" ಮತ್ತು "ಮಂಗಳ" ಪತ್ರಿಕೆಗಳಿಗೂ ಕೆಲವು ಕಥೆಗಳನ್ನು ಹಾಗೂ ಲೇಖನಗಳನ್ನು ಕಳುಹಿಸುತ್ತಿದ್ದೆ. ಎಲ್ಲವೂ ಪ್ರಕಟವಾಗುತ್ತ ಹೋಗುತ್ತಿದ್ದವು. ನಾನು ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಾ ಹೋದಾಗ, ನನ್ನ ಬರವಣಿಗೆಯ ಹಂಬಲ ಹಾಗೂ ಉತ್ಸಾಹಗಳು ಹೆಚ್ಚಾಗಿದ್ದರೂ, ಉದ್ಯೋಗಸ್ಥ ಗೃಹಿಣಿಯಾಗಿದ್ದ ನನಗೆ ಹೆಚ್ಚು ಹೆಚ್ಚು ಬರೆಯುವುದಕ್ಕೆ ಸಮಯ ಸಿಗುತ್ತಿರಲಿಲ್ಲ. ಮುಂದೆ ಸಣ್ಣ ಕಥೆಯಿಂದ ಕಿರುಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದೆ , ಮೊದಲ ಬಾರಿಗೆ ನನ್ನ ಕಿರುಕಥೆ "ಸಮಾನ ದುಃಖಿಗಳು " ರಾಗಸಂಗಮ ಮಾಸಿಕ ಪತ್ರಿಕೆಯಲ್ಲಿ ಪ್ರಕಟಗೊಂಡಾಗ, ನನ್ನ ಆತ್ಮವಿಶ್ವಾಸ ಹೆಚ್ಚಾಯಿತು. ಉದ್ಯೋಗಸ್ಥೆಯಾಗಿದ್ದ ನನಗೆ ಮನೆಯ ಒಳಹೊರಗಿನ ಕೆಲಸ ನಿಭಾಯಿಸಿಕೊಂಡು ಹೋಗುತ್ತಿದ್ದಾಗ, ಸಮಯದ ಅಭಾವದಿಂದ ಹೆಚ್ಚು ಬರೆಯಲು ಆಗುತ್ತಿರಲಿಲ್ಲ. ಆದರೂ ಹೇಗೋ ಸಮಯ ಮಾಡಿಕೊಂಡು ಆಗಾಗ ಸ್ವಲ್ಪ ಸ್ವಲ್ಪ ಬರೆಯುತ್ತಿದ್ದೆ. ಮುಂದೆ ಎರಡು ಸಾವಿರದ ದಶಕಗಳ ಮೊದಲ ವರ್ಷಗಳಲ್ಲಿ ನಾನು ಕಳುಹಿಸಿದ ಒಂದೆರಡು ಕಾದಂಬರಿಗಳು "ರಾಗಸಂಗಮ" ಪತ್ರಿಕೆಯಲ್ಲಿ ಪ್ರಕಟಗೊಳ್ಳಲು ಶುರುವಾದಾಗ ನನ್ನ ಬರೆಯುವ ಉತ್ಸಾಹವೂ ಹೆಚ್ಚಾಗುತ್ತಾ ಹೋಯಿತು . ಮುಂದೆ, ನಾನು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ,"ಕರ್ನಾಟಕ ಮುಕ್ತವಿಶ್ವವಿದ್ಯಾಲಯ ಮೈಸೂರ್" ನಲ್ಲಿ ಕರ್ರೆಸ್ಪಾಂಡೆನ್ಸ್ ಕೋರ್ಸ್ ನಲ್ಲಿ ಕನ್ನಡ ಎಂ.ಎ ಮಾಡಿಕೊಂಡ ನಂತರ ,ನನ್ನ ಒಳಗೆ ಸುಪ್ತವಾಗಿ ಕುಳಿತಿದ್ದ ಬರವಣಿಗೆ ಮತ್ತೆ ಚಿಗುರೊಡೆಯುತ್ತಾ ಹೋಯಿತು. ಇದರ ಫಲಿತವಾಗಿ ನನ್ನ ಬರವಣಿಗೆಯಲ್ಲಿ ಅನೇಕ ಸುಧಾರಣೆಗಳಾದವು. ಕವನಗಳಿಗೂ ಗಮನ ಕೊಡುತ್ತಾ ಹೋದೆ. ಆದರೆ ಕಥಾಪ್ರಾಕಾರವೇ ನನ್ನ ಆಯ್ಕೆಯಾಯಿತು. ಹೀಗಾಗಿ ಕಿರುಕಾದಂಬರಿಗಳು ಒಂದೊಂದಾಗಿ ರೂಪುಗೊಳ್ಳುತ್ತಾ ಹೋದವು. ನನ್ನ ಕಣ್ಣೆದುರು ಕಾಣುತ್ತಿದ್ದ ಸುತ್ತಲಿನ ಸಾಮಾಜಿಕ ಸಮಸ್ಯೆಗಳಿಗೆ, ಅಕ್ಷರ ರೂಪವನ್ನು ಕೊಡುತ್ತಾ ಹೋಗಿ, ಕಿರು ಕಾದಂಬರಿಗಳ ಕಡೆ ಹೆಚ್ಚು ಗಮನ ಕೊಡುತ್ತಾ ಬಂದೆ. ಹೀಗಾಗಿ ಎರಡು ಸಾವಿರದ ಮಧ್ಯ ಭಾಗದಲ್ಲಿ (೨೦೦೬ ರಿಂದ) "ಕಿರು ಕಾದಂಬರಿ" ಗಳನ್ನು ಬಿಳಿಯ ಹಾಳೆಯ ಮೇಲೆ ಬರೆಯುತ್ತಾ ಹೋದೆ. ಆಗಿನ ಕಾಲದಲ್ಲಿ ಪುಟಗಟ್ಟಲೆ ಬರೆಯ ಬೇಕಾಗಿತ್ತು. ಒಂದು ಬಾರಿ ಕಚ್ಚಾ ಬರವಣಿಗೆ ಮತ್ತೊಂದು ಬಾರಿ ಅದನ್ನೇ ಸುಂದರವಾಗಿ ಕೈಯ್ಯಲ್ಲಿ ಬರೆದು ಕಳುಹಿಸುತ್ತಿದ್ದೆ. ಸುಮಾರು ನಾಲ್ಕೈದು ಕಿರುಕಾದಂಬರಿಗಳನ್ನು ಬರೆದು , "ರಾಗ ಸಂಗಮ" ಪತ್ರಿಕೆಗಳಿಗೆ ಕಳುಹಿಸುತ್ತಾ ಹೋದೆ. ನಾನು ಕಳುಹಿಸುತ್ತಿದ್ದ ಎಲ್ಲಾ ಕಥೆಗಳು ಪ್ರಕಟವಾಗುತ್ತಾ ಹೋದಾಗ, ನನ್ನ ಕಥೆಗಳು ಪುಸ್ತಕದ ಹಾಳೆಗಳಲ್ಲಿ ಅಚ್ಚಾಗಿ ಬಂದಾಗ, ವಿಶೇಷವಾಗಿ ನನ್ನ ಹೆಸರು ಮುದ್ರಣ ರೂಪದಲ್ಲಿ ಅಚ್ಚಾಗಿರುವುದನ್ನು ನೋಡುವಾಗ ನನಗೆ ಅದೇನೋ ಸಂತೋಷವಾಗುತ್ತಿತ್ತು ಹಾಗೂ ಒಂದು ರೀತಿಯ ಸಮಾಧಾನ ಹಾಗೂ ಬರೆಯುವುದಕ್ಕೆ ಸ್ಪೂರ್ತಿ ದೊರಕಿತು. ಮತ್ತೆ ಒಂದು ದಶಕದಲ್ಲಿ ಇದ್ದಕ್ಕಿದಂತೆ ನನ್ನ ಕುಟುಂಬ ಜೀವನದಲ್ಲಿ ದೊಡ್ಡ ಬಿರುಗಾಳಿ ಎದ್ದು, ಕೌಟುಂಬಿಕ ಸಮಸ್ಯೆಗಳು ಧುತ್ತೆಂದು ಎದುರಾದಾಗ, ನನ್ನ ಬರವಣಿಗೆ ಸ್ಥಗಿತ ಗೊಂಡಿತ್ತು. ಅತಿಯಾದ ಸಾಂಸಾರಿಕ ಜವಾಬ್ದಾರಿಗಳಿಂದ ೨೦೦೯ ರಿಂದ ೧೮ ರವರೆಗೆ ನಾನು ಪೆನ್ ಹಿಡಿಯುವುದನ್ನೇ ಬಿಟ್ಟು ಬಿಟ್ಟಿದ್ದೆ. ನನ್ನ ಜೀವನದಲ್ಲಿ ಸಾಂಸಾರಿಕ ಜವಾಬ್ದಾರಿಗಳು ಮುಗಿದು, ಎಲ್ಲವೂ ಒಂದು ಹಂತ ತಲುಪಿ ಸ್ವಲ್ಪ ವಿರಾಮ ದೊರಕಿದಾಗ ಮತ್ತೆ ನನ್ನ ಕೈಯ್ಯಲ್ಲಿ ಪೆನ್ ಹಿಡಿಸಿದ್ದು ಸಾಮಾಜಿಕ ಜಾಲತಾಣದ ಸಾಹಿತ್ಯಿಕ ಗುಂಪುಗಳು ಎಂದರೆ ತಪ್ಪಾಗಲಾರದು. ಮುಂದೆ ೨೦೧೮ ರಲ್ಲಿ, ನನ್ನ ಗೆಳತಿ ಹಾಗೂ ಬರಹಗಾರ್ತಿಯಾಗಿದ್ದ ಡಾ. ಉಷ ಪಾಟಕ್ ಅವರು ನನ್ನನ್ನು ಸಾಮಾಜಿಕ ಜಾಲತಾಣ ವಾದ ಫ಼ೇಸ್ ಬುಕ್ ನಲ್ಲಿ ಪ್ರಾರಂಭವಾಗಿದ್ದ ಕಥಾಗುಚ್ಛ ಕ್ಕೆ ಬರೆಯುವಂತೆ ಪ್ರೇರೇಪಿಸಿದರು . ಹೀಗೆ , ೨೦೧೮ ರಿಂದ ಕಥಾಗುಚ್ಛ ದ ಬರಹಗಾರರ ಗುಂಪಿಗೆ ನಾನು ಸೇರಿಕೊಂಡು ಬರೆಯಲು ಮತ್ತೆ ಪ್ರಾರಂಭಿಸಿದೆ. ನನ್ನ ಸಾಣೆ ಹಿಡಿದ ಲೇಖನಿ ಮತ್ತೆ ಚುರುಕಾಯಿತು. ನಂತರ ಕಥಾಕವನಗಳ ಸಂಕಲನ, ಕನ್ನಡಿ, ಕಥಾ ಅರಮನೆ ಗಳಿಗೂ ಆಗೊಮ್ಮೆ ಈಗೊಮ್ಮೆ ಕವನಗಳು ನ್ಯಾನೊ ಕಥೆಗಳನ್ನು ಬರೆಯುತ್ತಾ ಸಾಗಿದೆ. ಮೊಬೈಲ್ ನಲ್ಲೇ ಕಷ್ಟಪಟ್ಟು ಬರೆಯುತ್ತಿದ್ದ ನಾನು ಕ್ರಮೇಣ ಲಾಪ್ಟಾಪ್ ನಲ್ಲಿ ನುಡಿ, ಬರಹ ಸಾಫ಼್ಟ್ವೇರ್ ಗಳನ್ನು ಹಾಕಿಕೊಂಡು ಟೈಪಿಸತೊಡಗಿದೆ. ಲ್ಯಾಪ್ ಟಾಪ್ ನ ದೊಡ್ಡ ಸ್ಕ್ರೀನ್ ನಲ್ಲಿ ಬರೆಯುವುದು ಸುಲಭವೆನಿಸಿತು. ಕಥಾಗುಚ್ಚದ ರೂವಾರಿಗಳಾದ ಶ್ರಿಮತಿ ಲತಾಜೋಶಿ ,ಮತ್ತು ಸುಮ ಕಳಸಾಪುರ್ ಅವರಿಬ್ಬರೂ ನನಗೆ ಪ್ರತಿಲಿಪಿಯ ಬಗ್ಗೆ ತಿಳಿಸಿ, ಅದರಲ್ಲಿ ನನ್ನ ಕಥೆಗಳನ್ನು ಹಾಕುವಂತೆ ನೀಡಿದ ಪ್ರೋತ್ಸಾಹವೇ ನಾನು ಪ್ರತಿಲಿಪಿಗೆ ಬರೆಯಲು ಮೂಲ ಕಾರಣವಾಯಿತು. ಅವರ ಈ ಸಹಾಯವನ್ನು ನಾನು ಮರೆಯಲಾರೆ. ಹೀಗೆ ಪ್ರತಿಲಿಪಿಯಲ್ಲಿ ನನ್ನ ಬರಹದ ಪಯಣ ಶುರುವಾಯಿತು. ಕಥಾಗುಚ್ಚದ ಜೊತೆ ಜೊತೆಗೆ ಕಥಾಕವನ ಸಂಕಲನ, ಕನ್ನಡಿ ಮುಂತಾದ ಸಾಹಿತ್ಯಿಕ ಗುಂಪುಗಳಿಗೂ ಕೆಲವು ಬರಹಗಳನ್ನು ಪೋಸ್ಟ್ ಮಾಡುತ್ತಿದ್ದೆ. ಇನ್ನು ಪ್ರತಿಲಿಪಿಯಲ್ಲಿ ನನ್ನ ಮೊದಲ ಬರಹ ದ ಬಗ್ಗೆ ನೆನಪು ಮಾಡಿಕೊಳ್ಳುವುದಾದರೆ, ಕರೋನಾ ಸಮಯದಲ್ಲಿ (ಮಾರ್ಚ್ ೨೦೨೦ ) ರಲ್ಲಿ ನಾನು ನನ್ನ ಮೊದಲ ಕಿರುಕಾದಂಬರಿ "ಪುನರ್ಮಿಲನ" ಕಥೆಯನ್ನು ಸ್ಪರ್ಧೆಗಾಗಿ ಕಳುಹಿಸಿದೆ. ಆ ಕಥೆ ಸ್ಪರ್ಧೆಯಲ್ಲಿ ಗೆಲುವು ಸಾಧಿಸದಿದ್ದರೂ, ಓದುಗರ ಮನಸ್ಸನ್ನು ಗೆಲ್ಲುವುದರಲ್ಲಿ ಸಫಲವಾಯಿತೆನ್ನುವುದಕ್ಕೆ ಅದನ್ನು ೨೭೧೨೯ ಜನ ಓದುಗರು ಆ ಕಥೆಯನ್ನು ಓದಿ,ನೀಡುತ್ತಿದ್ದ ನೂರಾರು ವಿಮರ್ಶೆಗಳು ಹಾಗೂ ಪ್ರತಿಕ್ರಿಯೆಗಳು. (೩೫೦ ಕ್ಕೂ ಅಧಿಕ ) ಆ ಕಥೆಯ ಪಾತ್ರಗಳು ಅದೆಷ್ಟೋ ಓದುಗರಿಗೆ ಹತ್ತಿರವಾಯಿತು ಎನ್ನುವುದು ಅದೆಷ್ಟೋ ಓದುಗರು ಆ
ಸಮಸ್ಯೆಯನ್ನು ವರದಿ ಮಾಡಿ