ಸುಮಾರು ೧೯೮೫-೮೬ ನೇ ಇಸವಿಯಲ್ಲಿ ನಾನು ಧಾರವಾಡದ ಸಾಧನಕೇರಿ ಯಲ್ಲಿ ಇದ್ದಾಗ , ನಮ್ಮ ಮನೆಯ ಹತ್ತಿರವೇ ಇದ್ದ ಖ್ಯಾತ ಲೇಖಕರು ಶ್ರೀ ವರದರಾಜ ಹುಯಿಲಗೋಳ ಅವರ ಒಡನಾಟ ಶುರುವಾಯಿತು . ಅವರು ನಮ್ಮ ತಂದೆಗೆ ಕಲಿಸಿದ ಗುರುಗಳೂ ಹೌದು . ಅವರು ಬೆಳಿಗ್ಗೆ ವಾಕಿಂಗ್ ಗೆ ಹೋಗುವಾಗ ನಮ್ಮ ಮನೆ ಮುಂದೇನೇ ಹಾದು ಹೋಗುತ್ತಿದ್ದರು . ಎಷ್ಟೋ ಸಲ ನನ್ನನ್ನು ಮಾತಾಡಿಸಿಕೊಂಡೇ ಹೋಗುತ್ತಿದ್ದರು . ಅಷ್ಟೊಂದು ಸರಳತೆ ಅವರದು .
ಆವಾಗಿನಿಂದ ಕಥೆ , ಕವನಗಳನ್ನು ಬರೆಯಲು ಶುರು ಮಾಡಿದೆ . ನಾನು ಬರೆದ ಮೊದಲ ಕಥೆ "ಮಮತೆಯ ಕುಡಿ" ಯನ್ನು ಅವರಿಗೆ ಕೊಟ್ಟು ಅವರ ಅನಿಸಿಕೆಗಳೊಂದಿಗೆ ಏನಾದರೂ ತಿದ್ದು ಪಡಿಗಳು ಇದ್ದರೆ ಮಾಡಿ ಕೊಡಲು ಹೇಳಿದೆ. ೨-೩ ದಿನಗಳ ನಂತರ ಬಂದು , ಕಥೆ ಚೆನ್ನಾಗಿ ಬರೆದಿದ್ದೀಯ , ಕೆಲವೊಂದು ತಿದ್ದು ಪಡಿಗಳನ್ನು ಮಾಡಿದ್ದೇನೆ , ಗಮನದಲ್ಲಿಟ್ಟುಕೊಂಡು ಬರೆಯುವದನ್ನು ಮುಂದುವರೆಸು ಎಂದು ಹೇಳಿದರು .
ನಂತರ ಆ ಕಥೆಯನ್ನು ಕೆಲವೊಂದು ಕವನ ಗಳೊಂದಿಗೆ ನನ್ನ ಬಾಲ್ಯ ಸ್ನೇಹಿತ ಶ್ರೀ ವಿವೇಕ ಶಾನಭಾಗ್, ಖ್ಯಾತ ಕಥೆಗಾರ ನಿಗೆ ಕಳಿಸಿದೆ . ಆತನೂ ಕೂಡ, ನೀನು ಕಥೆ ಯನ್ನು ಚೆನ್ನಾಗಿ ಬರೆದಿದ್ದೀಯ ಹಾಗೂ ಒಳ್ಳೆಯ ಕಥೆಗಾರನಾಗಬಹುದು ಎಂದು ಹುರುದುಂಬಿಸಿ ಪತ್ರ ಮುಖೇನ ಬರೆದು ತಿಳಿಸಿದ . ಆಗಿನಿಂದ ಬರೆಯಲು ಬಹಳ ಉತ್ಸುಕನಾದೆ.
ಮುಂದೆ ಕಾರಣಾಂತರಗಳಿಂದ ಬರೆಯುವದನ್ನು ಮುಂದುವರೆಸಲು ಆಗಲಿಲ್ಲ .
ಈಗ ಬರೆಯಲು ಮತ್ತೆ ಶುರು ಮಾಡಿದ್ದೇನೆ .
ಬರವಣಿಗೆ ಒಂದು ಹದಕ್ಕೆ ಬರಲು ಸಮಯ ತೆಗೆದುಕೊಳ್ಳಬಹುದು .
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ