ಶ್ರೀ ದಯಾನಂದ ಎಮ್ ಹಿರೇಮಠ ಅಂತಿರುವ ಇವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಒಂದು ಪಟ್ಟಣವೆನಿಸಿಹ ಚಡಚಣ ಗ್ರಾಮದ ಪ್ರಮುಖ ಮಠ ಶ್ರೀ ವಿರಕ್ತಮಠದ ಮೇನೇಜ್ಮೆಂಟ್ (ಸೇವೆ)ಮಾಡಿಕೊಂಡಿರುತ್ತಾರೆ.ಸರಿ, ಹೀಗಿರುವ ಇವರು,ಹ್ಮವ್ಯಾಸೀ ಬರಹಗಾರರು.ಸುಮಾರು.ಹತ್ತಾರು ಬರಹ ಸಂಗ್ರಹಗಳಲ್ಲಿ.ಸಹಸ್ರಾರು ವಚನಗಳು.ಗದ್ಯ ಪದ್ಯ ತ್ರಿಪದಿ ಚೌಪದಿ ಷಟ್ಪದಿ ಗಳು ಇದಲ್ಲದೆ ಕವಿತೆ ಕವನ.ಸಂಲನಗಳು ಕತೇ ಹೀಗೆಲ್ಲಾ ರಚಿಸುತ್ತಲೂ ಇದಾರೆ. ಹಿಂದೊಮ್ಮೆ ವಿಜಯ ಸಂಕೇಶ್ವರರು ಕರ್ನಾಟಕ ಪಾರ್ಟಿ ಕಟ್ಟಿದಾಗ,ಚುನಾವಣೆಯ ಪ್ರಚಾರ ಗೀತೆಗಳನ್ನು ರಚಿಸಿ ಕೊಟ್ಟು ರಾಜ್ಯದ್ಯಂತ ಪ್ರಚಾರ ವಾಗಿತ್ತು.ದುರದ್ರಷ್ಟ ವಶಾಂತ್ ಪಾರ್ಟಿ ಗೆದ್ದು ಬರಲಿಲ್ಲ. ಇವರಲ್ಲಿ ಇನ್ನೊಂದು ವಿಶೇಷವಿದೆ. ಅದೆಂದರೆ, ಒಂದು ವಿಶಿಷ್ಟ ರೀತಿಯ ಪದ್ಯ ರಚಿಸುವ ಕಲೆ. ದ್ರಶ್ಯ ವ್ಯಕ್ತಿ ಸಂದರ್ಭ ವಿಷಯಕ್ಕೆ ಸಂಬಂಧಿಸಿದಂತೆ ಚರಿತ್ರೆಯ ಕೇಳಿ ಆಗಿಂದಾಗ್ಗೆ ಪದ್ಯ ಬರೆಯುವ ಸಾಮರ್ಥ್ಯವಿದೆ. ಇವರು ಓದಿದ್ದು ಅಷ್ಟೇ.ಅಲ್ಪಸ್ವಲ್ಪ ಸದ್ಯ ತಾವಿರುವ ಶ್ರೀ ವಿರಕ್ತಮಠದ ಮೂಲ ಗುರುಗಳಾದ ಶ್ರೀ ಗುರು ಸಾರ್ವಭೌಮ ಷಡಕ್ಷರೇಶಾ...ಎಂಬ ನಾಮಮುಕ್ತ ಪದದ ಆಧಾರದ ಮೇಲೆ ಸಹಸ್ರಾರು ವಚನಗಳನ್ನು ರಚಿಸಿದ್ದಾರೆ. ಅವೆಲ್ಲಾ ಇನ್ನೂ ಅಚ್ಚಾಗಬೇಕಾಗಿವೆ. ಸೇವಾರ್ಥಿಗಳ ಹಣಕಾಸಿನ ಧಾನಿಗಳನ್ನು ಎದುರು ನೋಡುತ್ತಾ ಕೂತಿದ್ದಾರೆ. ಅವರು ಅಪ್ಪಟ ಯೋಗ ಮತ್ತು ಪ್ರಕೃತಿ ಸೌಂದರ್ಯ ಆರಾಧಕರು ಹೌದು. ಇಂತೆಲ್ಲಾ ಬರೆದ ಬರಹಗಳ ಕುರಿತು ಬಹಳ ಮಾರ್ಮಿಕರಾಗಿ ಹೇಳುತ್ತಾರೆ. ನೋಡಿ, ನಾನು ಇವೆಲ್ಲಾ ಬರೆದಿರುವುದು ಪ್ರಿಂಟ್ ಮಾಡ್ಸಿ ಹಣ ಹೆಸರು ಮಾಡಲಲ್ಲ...ಬರೀ ಗುರು ಕ್ರಪೆಗಾಗಿ (ಸೇವೆ) ಮಾಡಿದ್ದೇನೆ. ಪ್ರಿಂಟ್ ಮಾಡುವುದು ಬಿಡುವುದು ಶ್ರೀ ಮಠಕ್ಕೆ ಸೇರಿದ್ದು ಅಂತ ಮಾರ್ಮಿಕವಾಗಿ ಹೇಳುತ್ತಾರೆ
ಬಹುಷಃ ಓದುಗರ ಸಂಖ್ಯೆಯೂ ಕ್ಷೀಣಿಸಿದ್ದರಿಂದ ಈ ಭಾವ ತಂದಿರಬಹುದಾ? ಇರಲಿ, ಮಹನೀಯರ ಕ್ರತಿಗಳು ಅಚ್ಚಾಗಿ ಬಂದು ಎಲ್ಲಾಕಡೆ ಪಸರಿಸಿ ಎಲ್ಲಾ ಮಾನವ ಜನಾಂಗಕ್ಕೆ ಕೈಸೇರಿ ಅಭ್ಯಸಿಸುವ ವಂತಾಗಲೆಂದಾಸಿಸುತ್ತ ಕವಿಗಳ ಪರಿಚಿತ ಕಿರುಬರಹಕ್ಕೆ ವಿರಾಮ ಮಾಡುತ್ತೇನೆ ...(ಇವರ ಕಾವ್ಯ ನಾಮ MDS 🌹).ಅಂತ ಇದೆ. ಗುರುತಿಸಿರಿ. ಓದಿರಿ ಧನ್ಯವಾದಗಳು ಶುಭವಾಗಲಿ 🌹.
ಸಮಸ್ಯೆಯನ್ನು ವರದಿ ಮಾಡಿ