ಕೆ ಪಿ ಸತ್ಯನಾರಾಯಣ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರದವರು. ಈಗ ಹಾಸನದಲ್ಲಿ ನೆಲೆಸಿದ್ದಾರೆ. ಛಾಯಾಗ್ರಹಣ, ಚಾರಣ, ಪ್ರವಾಸ ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲರು. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಲಲಿತ ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ, ೨೦೧೯ರಲ್ಲಿ "ಅಮೂಲ್ಯ ಉಡುಗೊರೆ" ಕಥಾಸಂಕಲನ, ೨೦೨೩ರಲ್ಲಿ "ಅಟ್ಟ ಹತ್ತಿದ ಮೇಲೆ" ಕಥಾಸಂಕಲನ ಹಾಗೂ ೨೦೨೪ರಲ್ಲಿ "ಒಗ್ಗರಣೆ" ಲಲಿತ ಪ್ರಬಂಧ ಸಂಕಲನ ಪ್ರಕಟವಾಗಿವೆ. ಸ್ಪರ್ಧೆಗಳಲ್ಲಿ ಛಾಯಾಚಿತ್ರಗಳಿಗೆ, ಕಥೆ, ಕವನ, ಪ್ರಬಂಧಗಳಿಗೆ ಬಹುಮಾನ ಹಾಗೂ ಪಾಅರಿತೋಷಕಗಳು ಬಂದಿವೆ. ದೂರದರ್ಶನ ಚಂದನ ವಾಹಿನಿಯ ‘ಬೆಳಗು’ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪರಿಚಯಾತ್ಮಕ ಸಂದರ್ಶನ ಹಾಗೂ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿರುವ ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಉಜಿರೆ ಮತ್ತು ಚಿತ್ರದುರ್ಗ ಶಾಖೆಗಳಲ್ಲಿ ನೂರಾರು ಯುವಕರಿಗೆ ಉಚಿತವಾಗಿ ಛಾಯಾಚಿತ್ರಣ ತರಬೇತಿ ನೀಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ
ಮೊಬೈಲ್ ಸಂಖ್ಯೆ : ೯೪೪೯೨೪೮೩೫೫
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ