ಪ್ರತಿಲಿಪಿ ಬಳಗದವರೆಲ್ಲರಿಗೂ ನನ್ನ ನಮಸ್ಕಾರಗಳು.
ಹುಟ್ಟಿದ್ದು , ಬೆಳೆದಿದ್ದು ಮೈಸೂರು. ಅರ್ಧ ಶತಮಾನದಿಂದ ಬೆಂಗಳೂರೇ ನಮ್ಮೂರು . ಅಚ್ಚುಮೆಚ್ಚಿನ ಹವ್ಯಾಸ ಕಥೆ ಬರೆಯುವುದು. ಅಪರಂಜಿ ಹಾಸ್ಯ ಪತ್ರಿಕೆಯ ಮೂಲಕ ನನ್ನ ಬರಹಗಳು ಆಗಿಂದಾಗ್ಗೆ ಬೆಳಕುಗಾಣುತ್ತಿವೆ. ಸುಧಾ ಮತ್ತು ಮಯೂರ ಪತ್ರಿಕೆಗಳಲ್ಲಿ ಕೆಲವು ಬರಹಗಳು ಪ್ರಕಟವಾಗಿವೆ. ಮಕ್ಕಳಿಗಾಗಿಯೂ ಯುವ ಓದುಗರಿಗಾಗಿಯೂ ಮನರಂಜನೆಯ ಕಥೆಗಳು, ಪದ್ಯಗಳು, ಪ್ರವಾಸ ಪ್ರಬಂಧಗಳು ಮತ್ತು ಇನ್ನಿತರ ಸ್ವಾರಸ್ಯಕರ ವಿಷಯಗಳನ್ನು ಬರೆದು, ನನ್ನಸೋದರಿ ವಿದ್ಯಾ ಮುರಳಿ ಅವರು ರಚಿಸುವ ಚಿತ್ರಗಳೊಂದಿಗೆ 'ಗಿರಿಗಿಟ್ಟಲೇ' ಎಂಬ ನಮ್ಮ ಬ್ಲಾಗಲ್ಲಿಪೋಸ್ಟ್ ಮಾಡುತ್ತಿದ್ದೇವೆ. ಶಿಲಾ ಶಾಸನಗಳನ್ನು ಆಧರಿಸಿ ಬರೆದಿರುವ ಕಾಲ್ಪನಿಕ ಕಥೆಗಳು ಮೆಚ್ಚುಗೆ ಪಡೆದಿವೆ. ನನ್ನ ಕೆಲವು ಕಥೆಗಳನ್ನು 'ಪುಸ್ತಕ ಡಿಜಿಟಲ್ ಮೀಡಿಯಾ' ಇ -ಪುಸ್ತಕಗಳಾಗಿ ಹೊರತಂದಿದೆ. 'ಚಿತ್ರಾ ಅಮ್ಮಾಸ್ ಕಿಚನ್' ಎಂಬ ನನ್ನ ಫುಡ್ ಬ್ಲಾಗ್ ಸಾಕಷ್ಟು ಜನಪ್ರಿಯವಾಗಿದೆ. ಪ್ರತಿಲಿಪಿ ವೇದಿಕೆಯಲ್ಲಿ ಇದೀಗ ಮೊದಲನೇ ಬಾರಿ ಪ್ರವೇಶಿಸುತ್ತಿರುವೆ . ಪ್ರತಿಲಿಪಿಯಲ್ಲಿ ನನ್ನ ಬರಗಗಳಿಗೆ ಅವಕಾಶ ಮಾಡಿಕೊಟ್ಟ ಸಂಪಾದಕರಿಗೂ ಅವರ ತಂಡಕ್ಕೂ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು. ಪ್ರತಿಲಿಪಿ ತಂಡ ಮತ್ತು ಓದುಗರ ಪ್ರೋತ್ಸಾಹ ಮತ್ತು ಬೆಂಬಲವಿದ್ದರೆ ಇನ್ನೂಅನೇಕ ಕಥೆಗಳನ್ನು ಬರೆಯುವ ಉತ್ಸಾಹವಿದೆ. ನನ್ನ ಎಲ್ಲ ಬರಹಗಳಿಗೂ ವಿದ್ಯಾ ಮುರಳಿ ಅವರು ಚಿತ್ರಗಳನ್ನು ರಚಿಸುತ್ತಾರೆ.
ಕಥೆಗಳನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಪ್ರೋತ್ಸಾಹಿಸಿ.
ಧನ್ಯವಾದಗಳೊಂದಿಗೆ ,
ಚಿತ್ರಾ ರಾಮಚಂದ್ರನ್.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ