ವೈಲೇಶ್ ಪಿ ಎಸ್ ಕೊಡಗು
೨) ಕಾವ್ಯನಾಮ: ಶಿವೈ ವೈಲೇಶ್ ಪಿ ಎಸ್ ಕೊಡಗು.
೩) ಜನ್ಮದಿನಾಂಕ:- ೧/೬/೧೯೬೫
೪) ಜನ್ಮ ಸ್ಥಳ:- ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ಗ್ರಾಮ
೫) ಜನನಿ ಜನಕರು:- ಪೌತಿ ಪಿ ಕೆ ಸಿಡ್ಲಯ್ಯ. ಪೌತಿ ಪಿ ಎಸ್ ಕಾಳಮ್ಮ.
೬) ಹಾಲಿ ವಾಸ:- ವಿರಾಜಪೇಟೆ
೭) ವೃತ್ತಿ :- ಕರಾರಸಾಸಂಸ್ಥೆಯ ಚಾಲಕ. ಮಡಿಕೇರಿ ಘಟಕ.
೮) ಪ್ರವೃತ್ತಿ:- ಓದು, ಬರಹ, ಸಾಹಿತ್ಯ ಸಂಘಟನೆ, ಸಾಹಿತ್ಯ ರಚನೆ.
೯) ಸಾಹಿತ್ಯದ ಸೇವೆಯ ವಿವರ:- ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು, ಛಂದೋಬದ್ಧ ಕಾವ್ಯ ಸಂವರ್ಧಕ ಪರಿಷತ್ತು, ಸಾಹಿತ್ಯ ಸಂವರ್ಧಕ ಪರಿಷತ್ತು ಎಂಬ ಮೂರು ಮುಖ್ಯ ಬಳಗದ ವತಿಯಿಂದ ಅನೇಕ ಯುವ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ. ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನ ವತಿಯಿಂದ ಹದಿನಾರು ಜಿಲ್ಲಾ ಮಟ್ಟದ ಪ್ರತ್ಯಕ್ಷ ಕವಿಗೋಷ್ಠಿಗಳು, ಎಂಟು ರೇಡಿಯೋ ಕವಿಗೋಷ್ಠಿಗಳು ಅಂತರ್ಜಾಲ ತಾಣದ ವಾಟ್ಸ್ ಆಪ್ ಗ್ರೂಪ್ನ ೨೦ನೆಯ ಕವಿಗೋಷ್ಠಿ ನಡೆಯುತ್ತಿದೆ. ಸಾಹಿತ್ಯ ಸಂವರ್ಧಕ ಪರಿಷತ್ತು ವಾಟ್ಸ್ಆಪ್ ಬಳಗದಲ್ಲಿ ಪ್ರತಿ ಮಂಗಳವಾರದಂದು ಸ್ಪರ್ಧೆಯನ್ನು ಏರ್ಪಡಿಸುತ್ತೇವೆ. ಕೊಡಗಿನ ಶಕ್ತಿ ಪತ್ರಿಕೆಯಲ್ಲಿ ಕೊಡಗಿನ ಕವಿ ಸಾಹಿತಿ ಕಲಾವಿದರ ಪರಿಚಯ ಮಾಲಿಕೆ ಪ್ರಕಟವಾಗುತ್ತಿದೆ. ಹಾಸನದ ಪ್ರತಿನಿಧಿ ಪತ್ರಿಕೆಯಲ್ಲಿ ಮುಕ್ತಕದ ಅಲೆ ಎಂಬ ಹೆಸರಿನಲ್ಲಿ ಪ್ರತಿದಿವೂ ಒಂದು ಮುಕ್ತಕ ಮತ್ತು ಬೆಂಗಳೂರಿನ "ಪ್ರಜಾಮುಖಿ" ಪಾಕ್ಷಿಕ ಪತ್ರಿಕೆ ಹಾಸನದ "ಕಂದಾಯ ಸಮೂಹ" ಮಾಸ ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾಗುತ್ತಿವೆ.
೧೦) ಪ್ರಶಸ್ತಿ ಸನ್ಮಾನಗಳು:- ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಕೊಡಗು ಜಿಲ್ಲೆಯ ಜಾನಪದ ಪರಿಷತ್ತಿನ ವತಿಯಿಂದ ನಡೆದ ೨೦೧೯ರ ಮಡಿಕೇರಿ ದಸರಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
೧೧) ಕೃತಿಗಳು ಅಮ್ಮ ನಿಮಗಾಗಿ ಕವನ ಸಂಕಲನ "ಕಣ್ಮರೆಯಾದ ಹಳ್ಳಿ" ಕವನ ಸಂಕಲನ "ಬೊಮ್ಮಲಿಂಗನ ಸಗ್ಗ" ಮುಕ್ತಕ ಕುಸುಮ ಕೃತಿಯು ಜನವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು. ಇನ್ನೂ ಐದು ಕೃತಿಗಳನ್ನು ತಯಾರಿಸಲು ಬೇಕಾದ ಬರಹಗಳು ಶೇಖರವಾಗಿವೆ.
೧೨)ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದೇನೆ
೫,೬,೭,/೦೨/೨೦೨೦ ರಂದು ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುತ್ತೇನೆ.