ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನ ಹೊಸಹಳ್ಳಿಯಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ
M A, ಕನ್ನಡ ವಿಶ್ವವಿದ್ಯಾಲಯದಿಂದ M Phil, Ph D ಪದವಿ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ, ದಾವಣಗೆರೆ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಚಿತ್ರದುರ್ಗ ಹಾಗೂ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಚಿತ್ರದುರ್ಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಚಿತ್ರದುರ್ಗ ಇತಿಹಾಸ ಕೂಟ, ಸಂಸ್ಕಾರ ಭಾರತಿ ಸಂಸ್ಥೆಗಳ ಸದಸ್ಯರಾಗಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಿಗೆ ಸಂಶೋಧನ ಮಾರ್ಗದರ್ಶಕರಾಗಿ ೪೦ ವಿವಿಧ ವಿಷಯಗಳ ಸಂಶೋಧನ ಸಂಪ್ರಬಂಧಗಳು ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿವೆ. ಪಿಹೆಚ್.ಡಿ ಸಹ ಮಾರ್ಗದರ್ಶಕರು ಆಗಿದ್ದು. ಇವರ ಅನೇಕ ಲೇಖನಗಳು ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಪ್ರಕಟಿಸಿದ ಕೃತಿಗಳು: "ಸ್ಕಂದಸಿರಿ (ಸಂಪಾದನೆ), ಅರಿವಿನ ಅನುಸಂಧಾನ (ಸಂಶೋಧನೆ), ಅವಾಜು (ವಿಮರ್ಶೆ), ತಿಳಿದು ನೋಡವ ಪರಿ (ಸಂಶೋಧನೆ), ಬಹುಮುಖಿ (ವಿಮರ್ಶೆ), ಭಾರತೀಯ ಸಮಾಜ ಸುಧಾರಕರು (೨೫ ಮಹನೀಯರ ಜೀವನ ಸಂಕಥನ), ಕನ್ನಡ ಕಾಲಜ್ಞಾನ ಸಾಹಿತ್ಯ ( ಸಮಗ್ರ ಸಂಪಾದನೆ, ೭೯೦ ಪುಟಗಳು, ಸುದೀರ್ಘವಾದ ೬೪ ಪುಟಗಳ ಪ್ರಸ್ತಾವನೆಯೊಂದಿಗೆ) ಪ್ರಕಟವಾಗಿವೆ.
ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ, ಮಟ್ಟದ ನೂರಕ್ಕೂ ಹೆಚ್ಚು ಸೆಮಿನಾರ್ ಗಳಲ್ಲಿ ಭಾಗವಹಿಸಿದ್ದಾರೆ. ವಿಚಾರ ಮಂಡನೆ ಮಾಡಿದ್ದಾರೆ. ಸಂಶೋಧನೆ, ಸಂಪಾದನೆ, ವಿಮರ್ಶೆ, ಕಾವ್ಯ, ಸಂಸ್ಕೃತಿ ಕುರಿತ ಬರಹಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಈ ಕುರಿತು ನಿರಂತರ ಪಾಠ ಮಾಡುವುದು ಇವರ ಇಷ್ಟದ ಕೆಲಸ.