ಗಡಿನಾಡು ಕಾಸರಗೋಡಿನ ಕಡಲ ತಡಿಯ ಕೂಡ್ಲು ಜನನ ಸ್ಥಳ . ಕಲಾವಿದರ ಕುಟುಂಬದಲ್ಲಿ ಜನಿಸಿದ ನನಗೆ , ಸಂಗೀತ , ಕಲೆ, ಸಾಹಿತ್ಯ ಅಚ್ಚು ಮೆಚ್ಚು. ರಾಗದ ಬಗ್ಗೆ ತಿಳುವಳಿಕೆಗಾಗಿ ಸಂಗೀತ ಕಲಿತೆ .
ಕನ್ನಡದ ಹೆಚ್ಚಿನ ಎಲ್ಲಾ ಪತ್ರಿಕೆಗೂ ಬರೆದ ನನಗೆ
ಮೂರ್ನಾಲ್ಕು ಪ್ರಶಸ್ತಿಗಳು ಲಭಿಸಿವೆ . ನಕ್ಸಲ್ ಬಗ್ಗೆ ಬರೆದ
" ಬಲಿ " ಕಥೆಗಾಗಿ ಉದಯೊನ್ಮುಖ ಸಾಹಿತ್ಯ ಪ್ರಶಸ್ತಿ ಲಭಿಸಿದೆ. . "ಒಳ ದನಿಯ ಪುಟಗಳು " ನನ್ನ ಕಥಾಸಂಕಲನ.
ಸಮಾಜವನ್ನು ತಿದ್ದಲು ನಮ್ಮಿಂದ ಅಸಾಧ್ಯ. ಆದರೆ
ಸಮಾಜದ ಆಗುಹೋಗುಗಳನ್ನು ಕಥೆ , ಕವನಗಳ
ಮೂಲಕ ಜನರಿಗೆ ಅರುಹ ಬಹುದೆನ್ನುವ ನಂಬಿಕೆ . ವಿನಃ
ಇನ್ನೊಬ್ಬರನ್ನು ಮೆಚ್ಚಿಸಲೋ,ಅಥವಾ ದ್ವೇಷ ಬಿತ್ತಲು ಅಲ್ಲ. ನಮಸ್ಕಾರಗಳೊಂದಿಗೆ..
ಸಂಗೀತ ಕೂಡ್ಲು.