ನಾನು ಹುಟ್ಟಿದ್ದು ೦೧ ನೆ ನವೆಂಬರ್ ೧೯೯೧.
ನನ್ನೂರು ಮೈಸೂರು ಜಿಲ್ಲೆ, ಕೃಷ್ಣರಾಜ ಸಾಗರದ ಹಿನ್ನೀರಿನ ತೀರದಲ್ಲಿರುವ ಕೃಷ್ಣರಾಜ ನಗರ ತಾಲೂಕಿನ, ವಿಶ್ವವಿಖ್ಯಾತ ಸಂತ ಅಂತೋಣಿಯವರು ದೊರೆತ ಪುಣ್ಯಕ್ಷೇತ್ರವಾದ ಡೋರ್ನಹಳ್ಳಿಯಲ್ಲಿ. ಕೊರತೆಯನ್ನೇ ತೋರದೆ ಮುದ್ದಾಗಿ ಸಾಕಿದ ತಂದೆ ನೋರ್ಬಟ್ ವಿಕ್ಟರ್, ಬುದ್ಧಿಯ ಜೊತೆಗೆ ಪ್ರೀತಿಯನ್ನು ತುಂಬಿದ ತಾಯಿ ಫಿಲೋಮಿನ.
ಸದಾ ನನ್ನ ಬಗ್ಗೆಯೇ ಹಂಬಲಿಸುವ ನನ್ನ ತಂಗಿ ಪ್ರತಿಮ ಹಾಗು ಮುದ್ದಿನ ಅಜ್ಜಿ ಚಿನ್ನಮ್ಮ.
ಎಲೆ ಮರೆಯ ಕಾಯಿಯಾಗಿದ್ದ ನನ್ನನ್ನು. . ಲೋಕದ ಬೆಳಕಿಗೆ ಕಾಣುವಂತೆ. ವಿದ್ಯಾರ್ಥಿಗಳ ಸ್ನೇಹಿತನಾಗುವಂತೆ ಮಾಡಿದ ನನ್ನ ಎಕ್ಸೆಲ್ ಪಬ್ಲಿಕ್ ಶಾಲೆ ಹಾಗು ನನ್ನ ನಲ್ಮೆಯ ಸಹ ಶಿಕ್ಷಕರಿಗೂ, ನನ್ನ ಕನ್ನಡ ವಿಭಾಗದ ಶಿಕ್ಷಕರಿಗೂ ನಾನು ಸದಾ ಚಿರಋಣಿ.
ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ನನ್ನೂರಾದ ಡೋರ್ನಹಳ್ಳಿ ಸಂತ ರೀತಮ್ಮ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣ ಸಂತ ಅಂತೋಣಿಯವರ ಪ್ರೌಢ ಶಾಲೆ, ಪದವಿ ಪೂರ್ವ ಶಿಕ್ಷಣ ಸಂತ ಅಂತೋಣಿಯವರಸಂಯುಕ್ತ ಪದವಿ ಪೂರ್ವ ಕಾಲೇಜು, ಹಾಗು ಪದವಿ - ಸಂತ ಜೋಸೇಫರ ಸಂಜೆ ಕಾಲೇಜು ಬೆಂಗಳೂರು, ಎಂ ಎ ಪದವಿ ಹಾಗು ಬಿ ಎಡ್ ವಿದ್ಯಾಭ್ಯಾಸ ಸಂತ ಜೋಸೇಫರ ಶಿಕ್ಷಣ ಮಹಾ ವಿದ್ಯಾಲಯ ಮೈಸೂರಿನಲ್ಲಿ ನಡೆಯಿತು.
ಪ್ರಸ್ತುತ ಶಿಕ್ಷಕನಾಗಿ ಹಾಗು ಕನ್ನಡ ವಿಭಾಗದ ಸಂಯೋಜಕರಾಗಿ
ಎಕ್ಸೆಲ್ ಪಬ್ಲಿಕ್ ಶಾಲೆ ಮೈಸೂರು, ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.