ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಶ್ರೀನಿವಾಸಮೂರ್ತಿ. ಮಲೆನಾಡ ಸಿರಿಯಾದ, ತಾಯಿ ಶಾರದೆಯ ನೆಲೆವೀಡಾದ ಶೃಂಗೇರಿ ನನ್ನ ಊರು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದರೂ ಸಾಹಿತ್ಯ, ವನ್ಯಜೀವಿ ಛಾಯಾಗ್ರಹಣ, ಭೌತಶಾಸ್ತ್ರ ಮತ್ತು ಗಣಿತಗಳು ನನ್ನಿಷ್ಟದ ಹವ್ಯಾಸಗಳು. ಬರವಣಿಗೆ ನನ್ನ ಅಚ್ಚುಮೆಚ್ಚಿನ ಹವ್ಯಾಸಗಳಲ್ಲೊಂದು. 'ತರಂಗ' ವಾರಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾಗುತ್ತಿರುತ್ತವೆ. 'ಬಾಹ್ಯಾಕಾಶದ ಅದ್ಭುತಗಳು' ಹಾಗೂ 'ಜೀವಜಾಲ' ಎಂಬ ಎರಡು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದೇನೆ. ನನ್ನ ಸಂಪರ್ಕ ಸಂಖ್ಯೆ 8660667393 ಹಾಗೂ ವಾಟ್ಸಪ್ ಸಂಖ್ಯೆ 7411982346. ಜಿಮೇಲ್ ವಿಳಾಸ [email protected].