ಮೊದಲಿಂದಲೂ ನನಗೆ ಪ್ರಕೃತಿ ಅಂದರೆ ತುಂಬಾ ಇಷ್ಟ... ಗಿಡ-ಮರ ,ನದಿ ಕಡಲು, ಆಕಾಶ ಭೂಮಿ, ರುಚಿ-ಅಭಿರುಚಿ,ಪ್ರಾಣಿ ಪಕ್ಷಿ ,ಸಂಗೀತ-ಸಾಹಿತ್ಯ , ಓದು-ಬರಹ,ಪರಿಶುದ್ಧವಾದ ಪ್ರೀತಿ ಹೀಗೆ ಪ್ರಕೃತಿ ಒಡಲಲ್ಲಿ ಯಾವಾಗಲೂ ಇರಬೇಕೆಂಬುದೇ ನನ್ನ ಆಸೆ....ಮಲೆನಾಡಿನ ರಮ್ಯ-ರಮಣೀಯವಾದ ಸ್ಥಳಗಳು ನನಗೆ ಅಚ್ಚು ಮೆಚ್ಚು ...ಹಾಗಂತ ನಾನು ಮಲೆನಾಡಿನವಳಲ್ಲ ,ರೇಷ್ಮೆನಾಡು ಎಂದೇ ಹೆಸರಾದ ರಾಮನಗರ ದವಳು..ಪ್ರಸ್ತುತ ದೇವನಹಳ್ಳಿಯಲ್ಲಿ ವಾಸ.ನನಗೆ ಕನ್ನಡ ಭಾಷೆ ಅಂದರೆ ತುಂಬಾ ಇಷ್ಟ, ಓದಿರುವುದು ಬಿ.ಎ ಕಲಾವಿಭಾಗ "ಐಚ್ಛಿಕ ಕನ್ನಡ"ಕಥೆ, ಕವನ,ಕಾದಂಬರಿ,ಕವಿತೆ ಹೀಗೆ ಯಾವುದಾದರೂ ಸರಿ ಓದುವುದು ಎಂದರೆ ತಂಬಾ ಇಷ್ಟ.. ಪ್ರತಿಲಿಪಿಯ ಬರವಣಿಗೆ ಮೂಲಕ ನನಗೆ ದಿನಕಳೆಯುವುದೆ ತಿಳಿಯುತ್ತಿಲ್ಲ..ಅಷ್ಟು ಅದ್ಭುತವಾಗಿ ಬರೆದಿದ್ದಾರೆ.. ನಾನು ಬರೆಯಬೇಕು ಎಂದೂ ಯಾವಾಗಲೂ ಅನಿಸುತ್ತಿತ್ತು,,ಈಗ ಒಂದು ಅದ್ಭುತ ವೇದಿಕೆ ಸಿಕ್ಕಿದೆ ಸಮಯ ಸಿಕ್ಕಾಗಲೆಲ್ಲ ಬರೆಯುವೆ..... ಓದಿ ಹರಸಿ,ಹಾರೈಸಿ,ತಪ್ಪಿದ್ದಲ್ಲಿ ತಿಳಿಸಿ ಧನ್ಯವಾದಗಳು.