
ಪ್ರತಿಲಿಪಿಆತ್ಮೀಯ ಸಾಹಿತ್ಯಾಭಿಮಾನಿಗಳೇ,
ಪ್ರತಿಲಿಪಿ ಕನ್ನಡ ಆಯೋಜಿಸಿದ್ದ ‘ಪ್ರತಿಲಿಪಿ ಕಥಾ ಅವಾರ್ಡ್ಸ್ ಸೀಸನ್ 2’ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಉತ್ಸಾಹ, ಪ್ರೀತಿ ಅಪಾರ. ಬರಹಗಾರರು ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರ ಮನಗೆಲ್ಲುವ ಉತ್ತಮ ಕೃತಿಗಳನ್ನು ರಚಿಸಿ, ಪ್ರಕಟಿಸಿ ಸ್ಪರ್ಧೆಯ ಉದ್ದೇಶವನ್ನು ಪೂರ್ಣಗೊಳಿಸಿದ್ದಾರೆ.
ವೈಜ್ಞಾನಿಕ, ಫ್ಯಾಂಟಸಿ, ಕೌಟುಂಬಿಕ, ಪ್ರೀತಿ, ಮಹಿಳೆ, ಸಾಮಾಜಿಕ, ಪೌರಾಣಿಕ, ಅಪರಾಧ, ಹಾರರ್ ಹೀಗೆ ವಿವಿಧ ಪ್ರಭೇದಗಳ ಮೇಲೆ ವಿಭಿನ್ನ ರೀತಿಯ ಕೃತಿಗಳು ರಚನೆಯಾಗಿವೆ. ಉತ್ತಮ ಕಥಾಹಂದರ, ಪಾತ್ರಪೋಷಣೆಗಳು ಕತೆಯನ್ನು ಇನ್ನಷ್ಟು ಸ್ವಾರಸ್ಯಕರವಾಗಿಸಿವೆ. ಪ್ರತಿಯೊಂದು ಕತೆಗಳು ತನ್ನದೇ ಆದ ವೈಶಿಷ್ಟ್ಯಪೂರ್ಣ ಪ್ರಭಾವವನ್ನು ಓದುಗರ ಮೇಲೆ ಬೀರುವಂತಿವೆ.
ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ, ಪರಿಶ್ರಮ ಮತ್ತು ಬದ್ಧತೆಯಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.
ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಎಲ್ಲ ಕೃತಿಗಳು ವಿಭಿನ್ನ ಕಥಾವಸ್ತು, ಕಥಾಹಂದರಗಳನ್ನೊಳಗೊಂಡು ಸ್ಪರ್ಧೆಗೆ ಮೆರಗು ತಂದುಕೊಟ್ಟಿವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರ ಪ್ರಯತ್ನವೂ ಶ್ಲಾಘನೀಯ. ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು. ಕೆಲವು ಕೃತಿಗಳು ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿರಲಿಲ್ಲ. ಅಂತಹ ಕತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿಲ್ಲ.
ಉಳಿದ ಕತೆಗಳಲ್ಲಿ ಸರಿಸುಮಾರು ಎಲ್ಲಾ ಕತೆಗಳು ಭಿನ್ನವಾಗಿ ರಚಿಸಲ್ಪಟ್ಟಿದ್ದವು. ಫ್ಯಾಂಟಸಿ, ಸೈನ್ಸ್ ಫಿಕ್ಷನ್, ಗೂಢಚಾರ, ಪತ್ತೇದಾರಿ, ಕ್ರೈಮ್ ಥ್ರಿಲ್ಲರ್, ಭಯಾನಕ, ಕೌಟುಂಬಿಕ, ಸಾಮಾಜಿಕ, ಕಾಲ್ಪನಿಕ ಪ್ರೇಮಕತೆಗಳು ಹೀಗೆ ವಿವಿಧ ರೀತಿಯ ಕತೆಗಳು ಸಲ್ಲಿಸಲ್ಪಟ್ಟು ಸ್ಪರ್ಧೆಯ ಉದ್ದೇಶವನ್ನು ಸಾರ್ಥಕಗೊಳಿಸಿವೆ.
ಧಾರಾವಾಹಿ ಬರೆಯುವಿಕೆ ಸುದೀರ್ಘ ಮತ್ತು ಸೃಜನಶೀಲ ಪ್ರಕ್ರಿಯೆ; ಸಂಕೀರ್ಣ ಮತ್ತು ಜಟಿಲವೂ ಹೌದು. ಕಥಾವಸ್ತುವಿನ ನಿರ್ವಹಣೆ, ಪ್ರಸ್ತುತಿಯಲ್ಲಿ ಸಾಕಷ್ಟು ತಾಳ್ಮೆ, ಬದ್ಧತೆ ಇರಬೇಕು. ಸೃಷ್ಟಿಸಿದ ಪಾತ್ರಗಳನ್ನು, ಸನ್ನಿವೇಶಗಳನ್ನು ನಿರಂತರವಾಗಿ ಬೆಳೆಸುವ, ತಿದ್ದುವ, ಪೋಷಿಸುವ ಸಹನೆ ಇರಬೇಕು. ಒಟ್ಟಾರೆ ಸುದೀರ್ಘ ಧಾರಾವಾಹಿ ಬರೆಯುವುದು ಮತ್ತು ಓದುವುದು ತಾಳ್ಮೆಯನ್ನು ಬೇಡುವ ಕೆಲಸ. ಹೀಗಿದ್ದೂ ಈ ಸ್ಪರ್ಧೆಗೆ ಅರವತ್ತಕ್ಕೂ ಅಧಿಕ ಧಾರಾವಾಹಿಗಳು ಪ್ರಕಟಗೊಂಡಿರುವುದು ಬರಹಗಾರರ ಹುಮ್ಮಸ್ಸನ್ನು ತೋರಿಸುತ್ತದೆ.
ಎಲ್ಲ ಬರಹಗಾರರಿಗೆ ಸಲಹೆಯೆಂದರೆ, ಒಂದು ಕತೆಯನ್ನು ರಚಿಸುವಾಗ ಅಂತ್ಯದವರೆಗೂ ಒಂದು ಸ್ಪಷ್ಟ ಚಿತ್ರಣವನ್ನು ಅಥವಾ ರೂಪುರೇಷೆಯನ್ನು ಹಾಕಿಕೊಂಡರೆ ಗೋಜಲುಗಳಿಲ್ಲದೆ ಅಧ್ಯಾಯಗಳನ್ನು ರಚಿಸಲು, ಧಾರಾವಾಹಿಯನ್ನು ಸುದೀರ್ಘವಾಗಿ ಬರೆಯಲು ಸುಲಭವಾಗಬಹುದು. ಕಥಾಪ್ರವೇಶಕ್ಕೂ ಮುನ್ನ ಹಲವು ರೀತಿಯ ಯೋಜನೆ, ಅಧ್ಯಯನಗಳು ಧಾರಾವಾಹಿ ರಚನೆಯನ್ನು ಪರಿಣಾಮಕಾರಿಯಾಗಿಸುತ್ತವೆ.
ಎಲ್ಲರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ; ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಂತಾಗಲಿ. ಎಲ್ಲಾ ಬರಹಗಾರರೂ ಸ್ಪರ್ಧೆಗೆ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸುವಂತಾಗಲಿ ಎಂದು ಆಶಿಸುತ್ತೇವೆ.
ಪ್ರಥಮ ಬಹುಮಾನ: 15,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಶತೃ ಅವರ ರುಧಿರ ದ್ವೀಪದ ಕರಾಳ ಛಾಯೆ
ಕೃತಿಯ ಕುರಿತು: ಆಯ್ಕೆ ಮಾಡಿಕೊಂಡ ಕಥಾವಸ್ತು ಬಹಳ ವಿಶಿಷ್ಟವಾಗಿದ್ದು, ಪ್ರತಿ ಅಧ್ಯಾಯದಲ್ಲಿ ಹೆಚ್ಚಿಸುವ ಕುತೂಹಲ, ಆಸಕ್ತಿದಾಯಕ ಅಂಶಗಳ ಬಳಕೆಯಿಂದ ಕತೆ ಓದುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಕಥಾಹಂದರವನ್ನು ಅಭಿವೃದ್ಧಿಪಡಿಸಿದ ರೀತಿ, ಪಾತ್ರಪೋಷಣೆ, ನಿರೂಪಣೆ ಎಲ್ಲವೂ ಕತೆಯ ಮೆರಗನ್ನು ಹೆಚ್ಚಿಸಿವೆ.
ದ್ವಿತೀಯ ಬಹುಮಾನ: 7,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಕೃತಿಯ ಕುರಿತು: ಸೈನ್ಸ್ ಫಿಕ್ಷನ್ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿ ಚಿತ್ರಿಸಿರುವುದು ಬಹಳ ಉತ್ತಮವಾಗಿ ಮೂಡಿಬಂದಿದೆ. ಕಥಾವಸ್ತು, ನಿರೂಪಣೆ, ಪಾತ್ರಗಳು ಎಲ್ಲವೂ ಹದವಾಗಿ ಕೂಡಿ; ಪ್ರತಿ ಹಂತದಲ್ಲಿಯೂ ಕುತೂಹಲವನ್ನು ಉಳಿಸಿಕೊಂಡು ಓದುಗರಿಗೆ ರೋಚಕ ಅನುಭವವನ್ನು ನೀಡುತ್ತದೆ.
ತೃತೀಯ ಬಹುಮಾನ: 5,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ರಾಮಚಂದ್ರ ಭಟ್ ಅವರ ಕೊಲ್ಲೆನ್ನ ಗೆಳತಿ... ನಿನ್ನ ಪ್ರೀತಿಯಲ್ಲಿ!
ಕೃತಿಯ ಕುರಿತು: ಸಸ್ಪೆನ್ಸ್ ಥ್ರಿಲ್ಲರ್ ಪ್ರಕಾರದಲ್ಲಿ ರಚಿತವಾದ ಈ ಕೃತಿ ಉತ್ತಮ ಪಾತ್ರಪೋಷಣೆ, ಗಟ್ಟಿ ನಿರೂಪಣೆ, ರೋಚಕ ತಿರುವುಗಳ ಮೂಲಕ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ನಾಲ್ಕನೆಯ ಬಹುಮಾನ: 3,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಐದನೆಯ ಬಹುಮಾನ: 3,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ವಾಣಿಶ್ರೀ ಹೆಚ್ ಎನ್ ಅವರ ಒಡತಿ ಆನ್ ಡ್ಯೂಟಿ...
ಆರನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ನವಿ ಅವರ ಅನಾದಿ - ಕಾಲಚಕ್ರ
ಏಳನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಜಯಶ್ರೀ ಅಂಗಡಿ ಅವರ ಶಾಂತಿ ಕ್ರಾಂತಿ
ಎಂಟನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಸ್ನೇಹ ಸೌರಭ ರತ್ನ ಅವರ ಕುಸುಮಾರ್ಪಿತ
ಒಂಬತ್ತನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಪ್ರಸನ್ನಾ ವಿ ಚೆಕ್ಕೆಮನೆ ಅವರ ಅನುರಾಗದ ಅಂತರ್ಜಲ
ಹತ್ತನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಕಾವ್ಯಾ ಹೆಗಡೆ ಅವರ ಮಹಾಲಕ್ಷ್ಮಿ ನಿಲಯದ ಮಾಣಿಕ್ಯ
ಈ ಕೃತಿಗಳ ಕರ್ತೃಗಳಿಗೆ ವಿಜೇತ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು ಮತ್ತು ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುವುದು.
|
ಕ್ರ.ಸಂ. |
ಕೃತಿ |
ಕರ್ತೃ |
|
೧೧ |
||
|
೧೨ |
||
|
೧೩ |
||
|
೧೪ |
||
|
೧೫ |
||
|
೧೬ |
ಶಮ್ನಾ | |
|
೧೭ |
||
|
೧೮ |
||
|
೧೯ |
||
|
೨೦ |
ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ಶ್ಲಾಘನೀಯ. ಬರಹಗಾರರು 100 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಅವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
ಇವುಗಳಲ್ಲಿ ರೀಡರ್ ಎಂಗೇಜ್ಮೆಂಟ್ ಆಧಾರದ ಮೇಲೆ ಟಾಪ್ 10 ಧಾರಾವಾಹಿಗಳ ಕರ್ತೃಗಳಿಗೆ ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿಯನ್ನು ಅವರು ನೀಡುವ ವಿಳಾಸಕ್ಕೆ ಕೋರಿಯರ್ ಮೂಲಕ ಕಳುಹಿಸಲಾಗುವುದು.
ಈ ಕೆಳಗೆ ಎಂಗೇಜ್ಮೆಂಟ್ ಸ್ಕೋರ್ ಆಧಾರದ ಮೇಲೆ ಧಾರಾವಾಹಿಗಳನ್ನು ಕ್ರಮವಾಗಿ ಪಟ್ಟಿ ಮಾಡಲಾಗಿದೆ.
|
ಕ್ರ.ಸಂ. |
ಕೃತಿ |
ಕರ್ತೃ |
|
೧ |
||
|
೨ |
||
|
೩ |
||
|
೪ |
||
|
೫ |
||
|
೬ |
||
|
೭ |
||
|
೮ |
||
|
೯ |
||
|
೧೦ |
||
|
೧೧ |
||
|
೧೨ |
||
|
೧೩ |
||
|
೧೪ |
||
|
೧೫ |
||
|
೧೬ |
||
|
೧೭ |
||
|
೧೮ |
||
|
೧೯ |
||
|
೨೦ |
||
|
೨೧ |
||
|
೨೨ |
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು!
- ಪ್ರತಿಲಿಪಿ ಕನ್ನಡ