
ಪ್ರತಿಲಿಪಿಆತ್ಮೀಯ ಸಾಹಿತ್ಯಾಭಿಮಾನಿಗಳೇ,
ಪ್ರತಿಲಿಪಿ ಕನ್ನಡ ಆಯೋಜಿಸಿದ್ದ ‘ಪ್ರತಿಲಿಪಿ ಕಥಾ ಅವಾರ್ಡ್ಸ್ ಸೀಸನ್ 1’ ಸ್ಪರ್ಧೆಗೆ ಬರಹಗಾರರು ತೋರಿಸಿರುವ ಉತ್ಸಾಹ, ಪ್ರೀತಿ ಅಪಾರ. ಬರಹಗಾರರು ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರ ಮನಗೆಲ್ಲುವ ಉತ್ತಮ ಕೃತಿಗಳನ್ನು ರಚಿಸಿ, ಪ್ರಕಟಿಸಿ ಸ್ಪರ್ಧೆಯ ಉದ್ದೇಶವನ್ನು ಪೂರ್ಣಗೊಳಿಸಿದ್ದಾರೆ.
ಕೌಟುಂಬಿಕ, ಪ್ರೀತಿ, ಮಹಿಳೆ, ಸಾಮಾಜಿಕ, ಪೌರಾಣಿಕ, ಅಪರಾಧ, ವೈಜ್ಞಾನಿಕ ಫ್ಯಾಂಟಸಿ, ಹಾರರ್ ಹೀಗೆ ವಿವಿಧ ಪ್ರಭೇದಗಳ ಮೇಲೆ ವಿಭಿನ್ನ ರೀತಿಯ ಕೃತಿಗಳು ರಚನೆಯಾಗಿವೆ. ಉತ್ತಮ ಕಥಾಹಂದರ, ಪಾತ್ರಪೋಷಣೆಗಳು ಕತೆಯನ್ನು ಇನ್ನಷ್ಟು ಸ್ವಾರಸ್ಯಕರವಾಗಿಸಿವೆ. ಪ್ರತಿಯೊಂದು ಕತೆಗಳು ತನ್ನದೇ ಆದ ವೈಶಿಷ್ಟ್ಯಪೂರ್ಣ ಪ್ರಭಾವವನ್ನು ಓದುಗರ ಮೇಲೆ ಬೀರುವಂತಿವೆ.
ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ, ಪರಿಶ್ರಮ ಮತ್ತು ಬದ್ಧತೆಯಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.
‘ಪ್ರತಿಲಿಪಿ ಕಥಾ ಅವಾರ್ಡ್ಸ್’ ಸ್ಪರ್ಧೆಯ ಉದ್ದೇಶ - ಉದಯೋನ್ಮುಖ ಮತ್ತು ಜನಪ್ರಿಯ ಬರಹಗಾರರನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ಕತೆಗಳನ್ನು ಸುದೀರ್ಘ ಧಾರಾವಾಹಿಗಳ ರೂಪದಲ್ಲಿ ಸಕ್ರಿಯವಾಗಿ ಬರೆದು ಪ್ರಕಟಿಸಲು ಪ್ರೇರೇಪಿಸುವುದಾಗಿತ್ತು. ಜೊತೆಗೆ ಅವರ ಓದುಗರು, ಹಿಂಬಾಲಕರು, ಸಬ್ಸ್ಕ್ರೈಬರ್ ಗಳನ್ನು ಅಧಿಕಗೊಳಿಸಿ, ನಿರಂತರ ಆದಾಯ ಗಳಿಕೆಯನ್ನು ಖಾತ್ರಿಪಡಿಸುವುದಾಗಿತ್ತು! ಸ್ಪರ್ಧೆಯ ಕೃತಿಗಳನ್ನು ಗಮನಿಸಿದಾಗ ಸ್ಪರ್ಧೆಯ ಉದ್ದೇಶ ತಕ್ಕಮಟ್ಟಿಗೆ ಸಫಲವಾಗಿದೆ ಎನ್ನಬಹುದು.
ಧಾರಾವಾಹಿ ಬರೆಯುವಿಕೆ ಸುದೀರ್ಘ ಮತ್ತು ಸೃಜನಶೀಲ ಪ್ರಕ್ರಿಯೆ; ಸಂಕೀರ್ಣ ಮತ್ತು ಜಟಿಲವೂ ಹೌದು. ಕಥಾವಸ್ತುವಿನ ನಿರ್ವಹಣೆ, ಪ್ರಸ್ತುತಿಯಲ್ಲಿ ಸಾಕಷ್ಟು ತಾಳ್ಮೆ, ಬದ್ಧತೆ ಇರಬೇಕು. ಸೃಷ್ಟಿಸಿದ ಪಾತ್ರಗಳನ್ನು, ಸನ್ನಿವೇಶಗಳನ್ನು ನಿರಂತರವಾಗಿ ಬೆಳೆಸುವ, ತಿದ್ದುವ, ಪೋಷಿಸುವ ಸಹನೆ ಇರಬೇಕು. ಒಟ್ಟಾರೆ ಸುದೀರ್ಘ ಧಾರಾವಾಹಿ ಬರೆಯುವುದು ಮತ್ತು ಓದುವುದು ತಾಳ್ಮೆಯನ್ನು ಬೇಡುವ ಕೆಲಸ. ಹೀಗಿದ್ದೂ ಈ ಸ್ಪರ್ಧೆಗೆ ಅರವತ್ತಕ್ಕೂ ಅಧಿಕ ಧಾರಾವಾಹಿಗಳು ಪ್ರಕಟಗೊಂಡಿರುವುದು ಬರಹಗಾರರ ಹುಮ್ಮಸ್ಸನ್ನು ತೋರಿಸುತ್ತದೆ. ಬರಹಗಾರರು ಧಾರಾವಾಹಿ ರಚನಾ ಕೌಶಲ್ಯದಲ್ಲಿ ಪಳಗುತ್ತಿರುವುದು ಅವರ ಕೃತಿಗಳಲ್ಲಿ ಕಂಡುಬರುತ್ತಿದೆ. ಆದರೂ ಹಲವು ವಿಚಾರಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ಮಾಡಿಕೊಂಡರೆ ಇನ್ನಷ್ಟು ಅದ್ಭುತ ಕೃತಿಗಳು ಕನ್ನಡ ಸಾಹಿತ್ಯ ಪ್ರೇಮಿಗಳ ಹೃದಯವನ್ನಾಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಒಂದು ಕತೆಯನ್ನು ರಚಿಸುವಾಗ ಅಂತ್ಯದವರೆಗೂ ಒಂದು ಸ್ಪಷ್ಟ ಚಿತ್ರಣವನ್ನು ರೂಪಿಸಿಕೊಂಡರೆ ಗೊಂದಲ, ಗೋಜಲುಗಳಿಲ್ಲದೆ ಅಧ್ಯಾಯಗಳನ್ನು ರಚಿಸಲು ಸುಲಭವಾಗಬಹುದು. ಕೇವಲ ಸಂಭಾಷಣೆಗಳ ಮೂಲಕ ಕತೆಯನ್ನು ಹೇಳುವುದಕ್ಕಿಂತ ಸಂದರ್ಭಾನುಸಾರ ವಿವರಣೆಗಳು ಕತೆಯ ಮೆರುಗನ್ನು ಹೆಚ್ಚಿಸುತ್ತವೆ. ಕಥಾಪ್ರವೇಶಕ್ಕೂ ಮುನ್ನ ಹಲವು ರೀತಿಯ ಯೋಜನೆ, ಅಧ್ಯಯನಗಳು ಧಾರಾವಾಹಿ ರಚನೆಯನ್ನು ಪರಿಣಾಮಕಾರಿಯಾಗಿಸುತ್ತವೆ. ಭಾಷಾ ಶುದ್ಧತೆಯ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ.
ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಎಲ್ಲಾ ಬರಹಗಾರರೂ ಸ್ಪರ್ಧೆಯಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸುತ್ತೇವೆ. ಬರಹಗಾರರ ಕೃತಿ ರಚನಾ ಕೌಶಲ್ಯ ಇನ್ನಷ್ಟು ಸುಧಾರಿಸಿ ಅತ್ಯುತ್ತಮ ಕೃತಿಗಳ ಮೂಲಕ ಅವರು ಕನ್ನಡ ಸಾಹಿತ್ಯಾಸಕ್ತರನ್ನು ಮನರಂಜಿಸುವಂತಾಗಲಿ ಎಂಬುದು ನಮ್ಮ ಆಶಯ.
ಪ್ರಥಮ ಬಹುಮಾನ: 15,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಕೃತಿಯ ಕುರಿತು: ಆಯ್ಕೆ ಮಾಡಿಕೊಂಡ ಕಥಾವಸ್ತು ಬಹಳ ವಿಭಿನ್ನವಾಗಿದ್ದು, ನಿರೂಪಣಾ ಶೈಲಿ ಓದುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಆಂಗ್ಲ ಪದಗಳ ಬಳಕೆಯನ್ನು ಕನ್ನಡದಲ್ಲಿ ಲಿಪ್ಯಂತರಣ ಮಾಡಿರದಿದ್ದಲ್ಲಿ ಓದು ಇನ್ನಷ್ಟು ಸರಾಗವಾಗಿ ಆಗಬಹುದಿತ್ತು. ಅದರ ಹೊರತಾಗಿ ಕಥಾಹಂದರವನ್ನು ಅಭಿವೃದ್ಧಿಪಡಿಸಿದ ರೀತಿ, ಪಾತ್ರಪೋಷಣೆ, ವೈಜ್ಞಾನಿಕ, ವೈದ್ಯಕೀಯ ವಿಷಯಗಳ ಸರಳ ನಿರೂಪಣೆ ಎಲ್ಲವೂ ಕತೆಯ ಮೆರಗನ್ನು ಹೆಚ್ಚಿಸಿವೆ.
ದ್ವಿತೀಯ ಬಹುಮಾನ: 7,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಕೃತಿಯ ಕುರಿತು: ವೈಜ್ಞಾನಿಕ ಫ್ಯಾಂಟಸಿ ಕಥಾಹಂದರವನ್ನು ಸಾಹಸಮಯವಾಗಿ ಚಿತ್ರಿಸಿರುವುದು ಬಹಳ ಉತ್ತಮವಾಗಿ ಮೂಡಿಬಂದಿದೆ. ಕಥಾವಸ್ತು, ನಿರೂಪಣೆ, ಪಾತ್ರಗಳು ಎಲ್ಲವೂ ಹದವಾಗಿ ಬೆರೆತು; ಪ್ರತಿ ಹಂತದಲ್ಲಿಯೂ ಕುತೂಹಲವನ್ನು ಉಳಿಸಿಕೊಂಡು ಓದುಗರಿಗೆ ರೋಚಕ ಪ್ರಯಾಣವನ್ನು ಮೂಡಿಸುತ್ತದೆ.
ತೃತೀಯ ಬಹುಮಾನ: 5,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಕೃಷ್ಣಪ್ರಿಯೆ ಕೆ.ವಿ.ಕೆ ಅವರ ಮಾಯಾಪುರ... ದಿ ಹಿಡನ್ ಹ್ಯಾಬಿಟೇಟ್
ಕೃತಿಯ ಕುರಿತು: ವೈಜ್ಞಾನಿಕ, ಸಾಮಾಜಿಕ, ಪ್ರೇಮ ಪ್ರಭೇದಗಳನ್ನು ಮೇಳೈಸಿ ಸಾಹಸಮಯವಾದ ಕೃತಿಯನ್ನು ರಚಿಸಿರುವುದು ಒಂದು ವಿಭಿನ್ನ ಪ್ರಯೋಗದಂತೆ ಭಾಸವಾಗುತ್ತದೆ. ಉತ್ತಮ ಪಾತ್ರಪೋಷಣೆ, ಗಟ್ಟಿ ನಿರೂಪಣೆ, ರೋಚಕ ತಿರುವುಗಳ ಮೂಲಕ ಓದುಗರನ್ನು ಸೆಳೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ನಾಲ್ಕನೆಯ ಬಹುಮಾನ: 3,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಐದನೆಯ ಬಹುಮಾನ: 3,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಆರನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಏಳನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ವಿನುತಾಮುರಳಿ ಅವರ ಅಗರ್ತಲ (ಅರಣ್ಯದಲ್ಲಿ ಆರಂಭವಾದ ಯುಗಾಂತರದ ಸಮರ)
ಎಂಟನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಅಶೋಕ್ ಕುಮಾರ್ ಜಿ. ಎಸ್ ಅವರ ಸ್ವರ್ಗಕ್ಕೆ ಕಿಚ್ಚು ಹಚ್ಚಿದ
ಒಂಬತ್ತನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ಹತ್ತನೆಯ ಬಹುಮಾನ: 1,000 ರೂಪಾಯಿಗಳ ನಗದು ಬಹುಮಾನ + ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿ + ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ
ನಾಗಲಕ್ಷ್ಮಿ ಪ್ರಸನ್ನ ಕುಮಾರ್ ಅವರ ಕಾಡುತಿವೆ ನೆನ್ನೆಗಳು
ಈ ಕೃತಿಗಳ ಕರ್ತೃಗಳಿಗೆ ವಿಜೇತ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು ಮತ್ತು ವಿಶೇಷ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುವುದು.
|
ಸ್ಥಾನ |
ಕೃತಿ |
ಕರ್ತೃ |
|
11 |
||
|
12 |
||
|
13 |
||
|
14 |
||
|
15 |
||
|
16 |
||
|
17 |
||
|
18 |
||
|
19 |
||
|
20 |
ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 100 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಅವರ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
ಇವುಗಳಲ್ಲಿ ರೀಡರ್ ಎಂಗೇಜ್ಮೆಂಟ್ ಆಧಾರದ ಮೇಲೆ ಟಾಪ್ 10 ಧಾರಾವಾಹಿಗಳ ಕರ್ತೃಗಳಿಗೆ ಪ್ರತಿಷ್ಠಿತ ಪ್ರತಿಲಿಪಿ ಅವಾರ್ಡ್ ಟ್ರೋಫಿಯನ್ನು ಅವರು ನೀಡುವ ವಿಳಾಸಕ್ಕೆ ಕೋರಿಯರ್ ಮೂಲಕ ಕಳುಹಿಸಲಾಗುವುದು.
ಈ ಕೆಳಗೆ ಎಂಗೇಜ್ಮೆಂಟ್ ಸ್ಕೋರ್ ಆಧಾರದ ಮೇಲೆ ಧಾರಾವಾಹಿಗಳನ್ನು ಕ್ರಮವಾಗಿ ಪಟ್ಟಿ ಮಾಡಲಾಗಿದೆ.
|
ಕ್ರ.ಸಂ. |
ಕೃತಿ |
ಕರ್ತೃ |
|
1 |
||
|
2 |
||
|
3 |
||
|
4 |
||
|
5 |
||
|
6 |
||
|
7 |
||
|
8 |
||
|
9 |
||
|
10 |
||
|
11 |
||
|
12 |
||
|
13 |
||
|
14 |
||
|
15 |
||
|
16 |
||
|
17 |
||
|
18 |
||
|
19 |
||
|
20 |
||
|
21 |
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು!
- ಪ್ರತಿಲಿಪಿ ಕನ್ನಡ