ನನ್ನೂರು ಉಡುಪಿ ಜಿಲ್ಲೆಯ ಕುಂದಾಪುರ. ಕುಂದಾಪ್ರ ಕನ್ನಡವೇ ಮನೆಮಾತು. ನನ್ನ ಬಗ್ಗೆ ಹೇಳಿಕೊಳ್ಳುವಂತಹದ್ದೇನಿಲ್ಲ, ಸಾಮಾನ್ಯ ಗೃಹಿಣಿ . ಜೀವನದಲ್ಲಿ ಕಂಡು ಕೇಳಿದಂಥ ಅನುಭವಗಳೇ ನನ್ನ ಬರಹದ ಕಥಾವಸ್ತುಗಳು... ಬರೆದಿರುವ ಕಥೆಗಳಲ್ಲೂ ಹೆಚ್ಚಾಗಿ, ಗ್ರಾಮೀಣ ಸೊಗಡಿದೆ . ಕರಾವಳಿ ತೀರದ ಹಳ್ಳಿಗಳಲ್ಲಿ ಬೆಳೆದ ಮುಗ್ದ ಹೆಂಗಳೆಯರ ಜೀವನ ಶೈಲಿ ; ದಾಂಪತ್ಯದಲ್ಲಿ ನಿರಂತರ ಶೋಷಣೆಗೊಳಗಾದ ಮಹಿಳೆಯರ ಬಗ್ಗೆ ಬರೆಯಲು ಹೆಚ್ಚು ಆಸಕ್ತಿ !! ಬಹಳಷ್ಟು ಓದುವ ಹವ್ಯಾಸದ ನನ್ನ ಸೀದಾಸಾದಾ ಬರವಣಿಗೆಗೆ, ಆತ್ಮವಿಶ್ವಾಸದಿಂದ ಬರೆಯಲು ಒಂದು ವೇದಿಕೆ ಕಲ್ಪಿಸಿ ಕೊಟ್ಟಂಥ ಪ್ರತಿಲಿಪಿ ; ಹಾಗೂ ಅದರ ನಿವ೯ಹಣಾಧಿಕಾರಿಗಳಾದ ಅಕ್ಷಯ್ ಬಾಳೆಗೆರೆಯವರಿಗೆ ನನ್ನ ಮನಃಪೂರ್ವಕ ಧನ್ಯವಾದಗಳು . ನನ್ನ ಕಥೆಗಳನ್ನು ಓದಿ ನನ್ನನ್ನು ಪ್ರೋತ್ಸಾಹಿಸುತ್ತಿರುವ ನನ್ನೆಲ್ಲಾ ಅಭಿಮಾನಿ ವೃಂದಕ್ಕೂ ತುಂಬು ಹೃದಯದ ವಂದನೆಗಳು . ಬರವಣಿಗೆಯಲ್ಲಿ ಅರಿಯದೇ ತಪ್ಪಾಗಿದ್ದಲ್ಲಿ ತಿಳಿಸಿ, ತಿದ್ದಿ ಬೆಳೆಸಿ.
ವೃಂದಾ.ವಿ.ಶೆಟ್ಟಿ (ನಿರೀಕ್ಷಾ )
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ