ಏಳು ಹೆಜ್ಜೆಗಳ ಒಡತಿ...
" ನಾಳೆ ನಿನ್ನ ಮದುವೆ ತಯಾರಾಗು " ಎಂದು ಗಂಭೀರವಾಗಿ ನುಡಿದು ಹೋದರು ವಸುಧಾ..
" ಅಮ್ಮಾ ಹೀಗೆ ದಿಢೀರ್ ಅಂತ ಮದುವೆ ಎಂದರೆ ಎನು ಅರ್ಥ ?. ಯಾವನು ಅವನು ಗೂಬೆ ನನ್ನ ಮಗ ?. ಹುಡುಗಿಯ ಒಂದು ಮಾತು ಕೇಳದೆ, ನೋಡಲು ಕೂಡ ಬಾರದೆ ಮದುವೆ ಒಪ್ಪಿರುವ ಭೂಪ. ಸುಮ್ನೆ ಹೋಗಿ ನೀನು ನೋಡಿರುವ ಕಪ್ಪೇರಾಯ ಹುಡುಗನಿಗೆ ಮತ್ತು ಅವನ ಕುಟುಂಬಕ್ಕೆ ಹೋಗಿ ಹೇಳು ಈ ಡೆವಿಲ್ ಭಕ್ತಿಗೆ ಮದುವೆ ಬೇಡವಂತೆ ಅಂತಾ " ಎಂದು ಕೋಪದಲ್ಲಿ ಹೇಳಿದಳು ಭಕ್ತಿ..
" ಮೆಲ್ಲಗೆ ಮಾತನಾಡು ಭಕ್ತಿ. ಕತ್ತೆಯಂತೆ ಕಿರುಚಾಡ ಬೇಡ. ಯಾರಾದರೂ ನಿನ್ನ ಮಾತನ್ನು ಕೇಳಿಸಿ ಕೊಂಡರೆ ಕಷ್ಟ " ಎಂದು ಮಗಳ ಕಡೆಗೆ ಕೆಂಗಣ್ಣು ಬೀರುತ್ತಾ ಹೇಳಿದರು..
" ನೋಡಮ್ಮ ಸುಮ್ನೆ ಹೋಗಿ ಮದುವೆ ನಿಲ್ಲಿಸು. ನಾನಂತೂ ಮದುವೆ ಆಗಲ್ಲ ಅಂದರೆ ಆಗಲ್ಲ. ಆಕಾಶ ಮೇಲಾಗಲಿ ಭೂಮಿ ಕೇಳಗಾಗಲಿ ಈ ಡೆವಿಲ್ ಭಕ್ತಿ ಮಾತ್ರ ಮದುವೆ ಆಗಲ್ಲ " ಎಂದು ರೋಷವೇಶದಿಂದ ಸೊಂಟದ ಮೇಲೆ ಕೈ ಹೊತ್ತು ಹೇಳಿದಳು..
" ಆಕಾಶ ಮೇಲೆ ಭೂಮಿ ಕೆಳಗೆ ಇರುವುದು ಪುಟ್ಟ " ಎಂದು ಕೊಠಡಿಯನ್ನು ಪ್ರವೇಶಿಸಿ ಚಿಲಕ ಭದ್ರ ಪಡಿಸಿದ ಭುವನ್...
" ಭುವಿ ಅಣ್ಣಾ " ಎಂದು ಭುವನ್ ಕಡೆಗೆ ಉರಿ ನೋಟ ಬೀರುತ್ತಾ ಹೇಳಿದಳು ಭಕ್ತಿ..
" ಭಕ್ತಿ ಮದುವೆಗೆ ಎಲ್ಲಾ ತಯಾರಾಗಿ ಆಗಿದೆ ಕಣೇ. ಈವಾಗ ನೀನು ಮದುವೆ ಬೇಡ ಅಂತ ಹಠ ಮಾಡಿದರೆ ನಮ್ಮ ಮನೆಯ ಮನ ಮರ್ಯಾದೆ ಎಲ್ಲಾ ಹರಾಜು ಆಗುತ್ತೆ. ದಯವಿಟ್ಟು ಮದುವೆಯಾಗಿ ಮನೆಯ ಗೌರವ ಕಾಪಾಡು. ಹೆತ್ತು ಒಡಲ ಉರಿಸಬೇಡ ಭಕ್ತಿ. ಹೆತ್ತಮ್ಮನ ಒಡಲ ಸಂಕಟ ನಿನಗೆ ಎಲ್ಲಿ ಅರ್ಥ ಆಗಬೇಕು. ನಿನ್ನ ಹೆತ್ತ ಒಡಲ ಬೆಂಕಿ ಹಾರಿಸಲು ನಮಗಾಗಿ ಈ ಮದುವೆ ಮಾಡಿಕೊ ಭಕ್ತಿ. ಹುಡುಗ ಅಪರಂಜಿ ಕಣೇ " ಎಂದು ತಮ್ಮ ಸೆರಗಿನಿಂದ ಜಿನುಗಿದ ಕಣ್ಣೀರು ತೊಡೆದು ಕೊಂಡರು ವಸುಧಾ..
" ಸರಿ ಬಿಡು ತಾಯಿ. ಕಣ್ಣೀರು ಕೊಡಿ ಹರಿವುವಂತೆ ಕಣ್ಣೀರು ಹಾಕಬೇಡ. ನಾನು ಕೊಚ್ಚಿಕೊಂಡು ಹೋದರೆ ಕಷ್ಟ. ಮದುವೆ ಬೇರೆ ಚಿಂಪಾಂಜಿ ಚೀ ಅಪರಂಜಿ ಅಂತ ಹುಡುಗ ಬೇರೆ ಹುಡುಕಿದ್ದಿಯಾ ?. ನಾನು ಸತ್ತರೆ ಮದುವೆ ದಿನವೇ ವಿಧುರ ಆಗಿ ಬಿಡುತ್ತಾನೆ " ಎಂದು ವಸುಧಾ ಅವರ ಕಣ್ಣೀರು ತೊಡೆದಳು ಭಕ್ತಿ. ಅಮ್ಮ ಮಗ ಹೆಬ್ಬೆಟ್ಟು ತೋರಿಸಿ ಕೊಂಡಿದ್ದು ನೋಡಲಿಲ್ಲ ಹುಡುಗಿ. ಅಮ್ಮನ ಭಾವನಾತ್ಮಕ ಮಾತಿಗೆ ಕರಗಿ ನೀರಾಗಿ ಬಿಟ್ಟಳು..
" ಹಾಗಾದರೆ ಮದುವೆಗೆ ಒಪ್ಪಿಗೆ ಅನ್ನೂ ? " ಎಂದು ಕಣ್ಣು ಅರಳಿಸಿ ಕೇಳಿದನು ಭುವನ್..
" ಮತ್ತೆ ಇನ್ನೂ ಎನು ಮಾಡಲಾಗುತ್ತದೆ. ಮದುವೆ ಛತ್ರ ನೋಡಿಯಾಗಿದೆ. ಪತ್ರಿಕೆ ಹಂಚಿಯಾಗಿದೆ. ಅಡುಗೆಗೆ ಹೇಳಿ ಆಗಿದೆ. ಮದುವೆಗೆ ವಸ್ತ್ರ ಆಭರಣ ತಂದು ಆಗಿದೆ. ಇನ್ನೂ ಎನು ಮಾಡಲು ಆಗುತ್ತೆ ಹೇಳು. ಮದುವೆ ಆಗಲೇ ಬೇಕು ತಾನೇ. ನೀನು ನೋಡಿರುವ ವಂಡರಗಪ್ಪೆ ಕೈಯಲ್ಲಿ ತಾಳಿ ಕಟ್ಟಿಸಿಕೊಳ್ಳುತ್ತೇನೆ ಬಿಡು " ಎಂದು ಹಾಸಿಗೆ ಮೇಲೆ ಕುಳಿತು ನೀಡಿದಾದ ಉಸಿರು ಬಿಟ್ಟು ಹೇಳಿದಳು...
ಮತ್ತೆ ಎನು ಮರು ಪ್ರಶ್ನೆ ಎಸಗದೆ " ಬೇಗ ತಯಾರಾಗಿ ಬಾ ಹಳದಿ ಶಾಸ್ತ್ರ ಮಾಡಬೇಕು " ಎಂದು ಅವಸರದಲ್ಲಿ ಹೋದರು ವಸುಧಾ. ಅಮ್ಮನನ್ನು ಹಿಂಬಾಲಿಸಿದ ಭುವನ್...
ಎಲ್ಲಿ ನಿರ್ಧಾರ ಬದಲಾಯಿಸಿ ಬೀಡುವಳು ಎಂಬ ಭಯಕ್ಕೆ ಕ್ಷಣದಲ್ಲಿ ಮಾಯವಾಗಿದ್ದರು. ಭಕ್ತಿಯ ಕೋಪಕ್ಕೆ ತನ್ನ ಪಕ್ಕದಲ್ಲಿದ್ದ ಗೊಂಬೆಗಳ ಕಿವಿ ಬಲಿ ಪಶುವಾಗಿತ್ತು..
" ಗಂಡ ಅನ್ನುವ ದಂಡ ಪಿಂಡ ನೀನು ಬದುಕಿರುವಾಗಲೆ ಪಿಂಡ ಪ್ರದಾನ ಮಾಡಲಿಲ್ಲ ಅಂದರೆ ನಾನು ಡೆವಿಲ್ ಭಕ್ತಿನೆ ಅಲ್ಲಾ. ಇವತ್ತು ಒಂದು ದಿನ ಎಷ್ಟು ಬೇಕೋ ಅಷ್ಟು ಚೆನ್ನಾಗಿ ಸಂತೋಷವಾಗಿರು " ಎಂದು ನಿರ್ಜೀವ ಗೊಂಬೆಗೆ ಹಿಗ್ಗ ಮುಗ್ಗ ಚೆಚ್ಚಿ ಸಣ್ಣ ಸ್ನಾನ ಮುಗಿಸಲು ಬಟ್ಟೆ ತೆಗೆದು ಕೊಂಡು ಹೊರಟಳು ಭಕ್ತಿ...
ಇವಳೇ ನಮ್ಮ ಕಥಾನಾಯಕಿ ಭಕ್ತಿ ಉರ್ಪು ಡೆವಿಲ್ ಭಕ್ತಿ.ವಸುಧಾ ಮತ್ತು ವರುಣ್ ಅವರ ಎರಡನೇ ಮಗಳು. ವಸುಧಾ ಅವರು ಸ್ತ್ರೀ ರೋಗ ತಜ್ಞೆ. ವರುಣ್ ಅವರು ವಕೀಲರು. ಭುವನ್. ನಗರದ ಪ್ರತಿಷ್ಠಿತ ಹಾಸ್ಪಿಟಲ್ ನಲ್ಲಿ ಹೃದ್ರೋಗ ತಜ್ಞ..
ಎಂಬಿಎ ಮುಗಿಸಿ ಲಂಡನ್ ನಿಂದ ಬಂದು ತಿಂಗಳು ಕಳೆದಿವೆ. ವಾರದ ಹಿಂದೆ ಪ್ರವಾಸಕ್ಕೆ ತೆರಳಿದ್ದಳು. ಇಂದು ಪ್ರವಾಸ ಮುಗಿಸಿ ಮನೆಗೆ ಬಂದವಳ ಸ್ವಾಗತ ಮಾಡಿದ್ದು ಮದುವಣಿತ್ತಿಯಂತೆ ತಯಾರಾದ ಮನೆ. ನಂತರ ನಡೆದಿದ್ದು ಈ ಸಂಭಾಷಣೆ...
❣️❣️❣️
" ಅಮ್ಮಾ ನಾನು ಮದುವೆ ಆಗಲ್ಲ ಅಂದರೆ ಆಗಲ್ಲ. ನನಗೆ ತಿಳಿಸದೆ ಹೇಗೆ ಮದುವೆ ನಿಶ್ಚಯ ಮಾಡಿದ್ದೀರಿ ?. ಅ ಹುಡುಗಿಗೆ ಆದರೂ ಬುದ್ದಿ ಬೇಡವಾ ?. ಮದುವೆ ಹುಡುಗನ ಜೊತೆಗೆ ಮಾತನಾಡದೆ ಅದು ಹೇಗೆ ಮದುವೆಗೆ ಒಪ್ಪಿಗೆ ನೀಡಿದಳು. ನಾನು ವ್ಯವಹಾರದ ಮೇಲೆ ಹೋಗಿದ್ದ ಪ್ರವಾಸ ಮುಗಿಸಿ ಬರುವ ಮುನ್ನವೇ ಹೇಗೆ ಮದುವೆ ನಿಶ್ಚಯ ಮಾಡಿದ್ದೀರಿ ?. ನಾನು ಕಡ ಕಂಡಿತವಾಗಿ ಮದುವೆ ಆಗಲ್ಲ " ಎಂದು ಮುಖ ಬಿಗಿದು ಕೊಂಡು ಹೇಳಿದನು ಸೂರ್ಯ ರಾಥೋಡ್ . ಕೋಪದಲ್ಲಿ ಉರಿಯುವ ಸೂರ್ಯನಿಗೆ ಕೂಡ ಪೈಪೋಟಿ ಕೊಡುತ್ತಿದ್ದ...
" ಸೂರ್ಯ ಮದುವೆಯಾಗಿ ನಮ್ಮ ಗೌರವ ಕಾಪಡುತ್ತಿಯಾ ?. ಅಥವಾ ಎಲ್ಲಾರ ಮುಂದೆ ನಿನ್ನ ತಂದೆ ತಾಯಿ ತಲೆ ತಗ್ಗಿಸುವಂತೆ ಮಾಡುತ್ತೀಯಾ ?. ಆಯ್ಕೆ ನಿನಗೆ ಬಿಟ್ಟಿದು. ಆದರೆ ನನ್ನ ಮಗ ಯಾವತ್ತೂ ಕೂಡ ಹೆತ್ತ ತಂದೆ ತಾಯಿಯ ತಲೆ ತಗ್ಗಿಸುವಂತೆ ಮಾಡುವುದಿಲ್ಲ ಎಂದು ನಂಬುತ್ತೇನೆ " ಎಂದು ಗಂಭೀರವಾಗಿ ನುಡಿದರು ಶಂಕರ್ ರಾಥೋಡ್..
" ಜಾಸ್ತಿ ಸಮಯವಿಲ್ಲ ಮಗನೇ. ಆದಷ್ಟು ಬೇಗ ನಿನ್ನ ನಿರ್ಧಾರ ತಿಳಿಸು. ಹುಡುಗಿ ಮನೆಯವರು ಇನ್ನೂ ಎನು ಛತ್ರಕ್ಕೆ ಬಂದು ಬಿಡುತ್ತಾರೆ. ಮೊದಲೇ ವಿಷಯ ತಿಳಿಸುವುದು ಒಳ್ಳೆಯದು " ಎಂದು ಸೂರ್ಯನ ಕಣ್ಣುಗಳನ್ನೇ ನೋಡುತ್ತಾ ಹೇಳಿದರು ಪಾರ್ವತಿ ರಾಥೋಡ್..
ಯಾವುದೋ ಕೌತುಕ ಚಲನಚಿತ್ರದಂತೆ ಎಲ್ಲರನ್ನು ಬದಲಿಸಿ ಬದಲಿಸಿ ನೋಡುತ್ತಾ ಉಳಿದಳು ಶಾನ್ವಿ ರಾಥೋಡ್..
" ಎಲ್ಲಾ ಕಡೆಯಿಂದ ಸರಿಯಾಗಿ ಬಂಧಿಸಿ ತಪ್ಪಿಸಿ ಕೊಂಡು ಹೋಗು ಅಂದರೆ ಹೇಗೆ ?. ಸರಿ ನೀವು ನೋಡಿದ ಕೋಡಂಗಿಯನ್ನೆ ಮದುವೆ ಆಗುತ್ತೇನೆ " ಎಂದು ಮುಖ ಸಿಂಡರಿಸಿ ಹೇಳಿದನು ಸೂರ್ಯ..
" ಹುಡುಗಿ ಬಂಗಾರ ಕಣೋ " ಎಂದು ಮಗನ ಮಾತಿಗೆ ನಕ್ಕು ಹೇಳಿದರು ಶಂಕರ್ ರಾಥೋಡ್..
" ಹುಡುಗಿ ಬಂಗಾರವೋ ? ಅಥವಾ ತಗಡೋ ಅಂತ ಯಾರಿಗೆ ಗೊತ್ತು" ಎಂದು ಹಾಸಿಗೆ ಮೇಲೆ ಕುಳಿತು ಕಣ್ಣು ತೆಳೆಸಿದ ಸೂರ್ಯ..
❣️❣️❣️
" ನನ್ನ ಗಂಡ ದಂಡ ಪಿಂಡ. ನಿನಗೂ ಕೂಡ ಈವಾಗ ಹಳದಿ ಅಚ್ಚುತ್ತ ಇರುತ್ತಾರೆ ಅಲ್ವಾ ?. ಮದುವೆ ಆಗುವ ಹಳದಿ ಏನಕ್ಕೆ ಹಚ್ಚುತ್ತಾರೆ ಗೊತ್ತಾ ?. ಮದುವೆ ಅನ್ನುವುದು ಗಾಯ. ಯಾವಾಗಲೂ ಗಾಯಕ್ಕೆ ಮೊದಲು ಹಚ್ಚುವುದು ಅರಿಶಿಣ. ಗಂಡನೇ ನೀನು ಸ್ವಲ್ಪ ಜಾಸ್ತಿನೇ ಹಳದಿ ಹಚ್ಚಿಸಿಕೊ. ನಿನ್ನ ಜೀವನಕ್ಕೆ ಬರುತ್ತಿರುವುದು ಡೆವಿಲ್ ಭಕ್ತಿ " ಎಂದು ಮನದಲ್ಲಿ ಮಂಡಕ್ಕಿ ತಿನ್ನುತ್ತಾ ತನ್ನನ್ನು ಹಳದಿ ಶಾಸ್ತ್ರಕ್ಕೆ ಹೋಡ್ಡಿದ್ದಳು. ಮುಖದ ಮೇಲೆ ನೀರು ಬಿದ್ದಾಗ ಇಹಕ್ಕೆ ಮರಳಿದಳು ಹುಡುಗಿ..
❣️❣️❣️
ಮತ್ತೊಂದು ಕಡೆ ಮುಜುಗರದಲ್ಲಿ ಮುದುರಿ ಕುಳಿತು ಹಳದಿ ಶಾಸ್ತ್ರಕ್ಕೆ ಕುಳಿತ್ತಿದ್ದ ಹುಡುಗನ ತಲೆಯಲ್ಲಿ ಹಲವು ಯೋಚನೆಗಳು..
" ಮದುವೆಗೆ ಒಪ್ಪಿಗೆ ನೀಡಿ ತಪ್ಪು ಮಾಡಿದ್ದೇನೆ ಅನ್ನಿಸುತ್ತಿದೆ. ನನ್ನಿಂದ ಅ ಹುಡುಗಿಯ ಸುಂದರ ಭವಿಷ್ಯದ ಜೀವನ ಹಾಳಾದರೆ. ಹುಡುಗನ ಜೊತೆ ಮಾತನಾಡದೆ ನೋಡದೆ ಹೇಗೆ ಒಪ್ಪಿ ಕೊಂಡಳು ಅ ಗೂಬೆ. ನನ್ನ ಆಸ್ತಿ ನೋಡಿ ಒಪ್ಪಿಕೊಂಡಿದ್ದಾಳೆ. ಇಲ್ಲ ಅಂದರೆ ಯಾವ ಹುಡುಗಿ ತಾನೇ ಒಮ್ಮೆ ಕೂಡ ಹುಡುಗನ ಬಳಿ ಮನ ಬಿಚ್ಚಿ ಮಾತನಾಡದೆ ಮದುವೆಗೆ ಒಪ್ಪಿಗೆ ಕೊಡುತ್ತಾಳೆ. ಇದೇ ಕಣೇ ನಿನಗೆ. ಇವತ್ತು ನಗು ನಗುತ್ತಾ ಕಳಿ. ತಾಳಿ ಕಟ್ಟಿದ ತಕ್ಷಣ ಶುರು ನಿನಗೆ ಈ ಶನಿಯ ಕಾಟ. ಥೂ ಥೂ ಸೂರ್ಯನ ಕಾಟ " ಎಂದು ಮನದಲ್ಲಿ ಕರುಬಿ ಹಲ್ಲು ಮಸೆದನು..
ಸೂರ್ಯ ರಾಥೋಡ್. ರಾಥೋಡ್ ಇಂಡಸ್ಟೀಸ್ ವ್ಯವಹಾರದ ಸಂಪೂರ್ಣ ಚುಕ್ಕಾಣಿ ಹಿಡಿದಿರುವನು. ಶಂಕರ್ ರಾಥೋಡ್ ಮತ್ತು ಪಾರ್ವತಿ ರಾಥೋಡ್ ಅವರ ಒಬ್ಬನೇ ಮಗ. ಶಾನ್ವಿ. ಕೊನೆಯ ವರ್ಷದ ಎಂಬಿಎ ಮಾಡುತ್ತಿದ್ದಾಳೆ...
❣️❣️❣️
ಮುಂದುವರೆಯುವುದು...
ಕಥೆ ಇಷ್ಟವಾದರೆ ರೈಟಿಂಗ್ ನೀಡಿ ಕಾಮೆಂಟ್ ಮಾಡಿ ಪ್ರೋತ್ಸಾಹಿಸಿ..
❣️❣️❣️
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ