
ಪ್ರತಿಲಿಪಿಆದಿ ಕವಿಗಳು, ಕವಿಕುಲ ತಿಲಕರು, ಧೀಮಂತರೆಲ್ಲ ರಾಮಚರಿತೆಯ ಖಳ ನಾಯಕಿಯಾಗಿ ನನ್ನನ್ನು ರೂಪಿಸಿದ ಕಥೆಯನ್ನೋದಿ ನಿಮ್ಮ ಮನದೊಳಗೆ ಮಂಥರೆಯ ಅದಾವ ರೂಪ ನೆಲೆ ನಿಂತಿದೆ ಎಂಬುದನ್ನು ನಾನು ಬಲ್ಲೆ. ಒಂದು ವಿಷಯ ತಿಳಿದುಕೊಳ್ಳಿ, ಕಥೆಗಳೆಲ್ಲ ವಾಸ್ತವವಾಗಿರುವುದಿಲ್ಲ, ಅಲ್ಲೆಲ್ಲ ತುಂಬಿರುವುದು ಕಲ್ಪನೆ, ಉತ್ಪ್ರೇಕ್ಷೆಗಳೇ! ಇದು ಮಂಥರೆಯ ಆತ್ಮಕಥೆಯೆನ್ನುವುದಕ್ಕಿಂತಲೂ ಆತ್ಮನಿವೇದನೆ ಎನ್ನಬಹುದೇನೋ? ಈ ಕಥೆಗೆ ಮನ್ನಣೆ, ಹೊಗಳುವಿಕೆ, ಪಾರಿತೋಷಕಗಳು, ಬಹುಮಾನಗಳು ಬೇಕಿಲ್ಲ. ಈ ಕಥೆಯಲ್ಲಿ ರಾಮಚರಿತೆಯಲ್ಲಿ ನೀವು ಪ್ರೀತಿಸಿದ ಪಾತ್ರಗಳೂ ಬರಬಹುದು, ಅಲ್ಲ ಬಂದೇ ಬರುತ್ತವೆ. ಮಂಥರೆಯ ಅಂತರಂಗವನ್ನು ಅರಿತ ಮೇಲೆ ನಿಮಗವು ಒಂದಿಷ್ಟು ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ