- ನಿಮಗಾಗಿ ಕೆಲವು ಸಲಹೆಗಳು : ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಗೆ ಅದ್ಭುತ ಕೃತಿಗಳನ್ನು ರಚಿಸಿ!14 मई 2024ಆತ್ಮೀಯ ಸಾಹಿತಿಗಳೇ, ಆರಂಭದಿಂದಲೇ ಓದುಗರನ್ನು ತನ್ನತ್ತ ಸೆಳೆಯಬಲ್ಲ ಆಕರ್ಷಕ, ಅದ್ಭುತ ಧಾರಾವಾಹಿಯನ್ನು ರಚಿಸಲು ಸಿದ್ಧರಿದ್ದೀರಾ? ನಿಮ್ಮ ಸೃಜನಶೀಲತೆಗೆ ಕೆಲಸ ನೀಡಿ: ನಿಮ್ಮ ಮುಂದಿನ ಸುದೀರ್ಘ ಧಾರಾವಾಹಿಯನ್ನು ರಚಿಸಲು ನಾವು ನೀಡುವ ಕೆಲವು ಟ್ರೆಂಡಿಂಗ್ ಕಥಾಹಂದರಗಳು, ಪಾತ್ರ ಪೋಷಣೆಯ ಮಾಹಿತಿಗಳು, ಇತರ ವಿವರಗಳ ಸಹಾಯವನ್ನು ಪಡೆದುಕೊಳ್ಳಬಹುದು! ಆ ಮೂಲಕ ನಿಮ್ಮಿಂದ ಓದುಗರ ಮನಮುಟ್ಟುವ ಅದ್ಭುತ ಕೃತಿ ರಚನೆಯಾಗಲಿ! ಟ್ರೆಂಡಿಂಗ್ ಧಾರಾವಾಹಿಗಳನ್ನು ರಚಿಸಿ ಪ್ರತಿ ತಿಂಗಳೂ ಖಚಿತ ಆದಾಯ ಗಳಿಸಿ! ಈ ಕೆಳಗಿನ ಕಥಾಹಂದರಗಳು ಕೆಲವು ಉದಾಹರಣೆಗಳು. ಇವುಗಳನ್ನು ಬಳಸಿಕೊಂಡು ನಿಮ್ಮ ಧಾರಾವಾಹಿಗಳನ್ನು ರಚಿಸಬಹುದು. ಸಿ.ಇ.ಓ/ಬಿಲಿಯನೇರ್ ಪ್ರೇಮಕತೆ 1. ಅನಿಕಾ ಒಬ್ಬ ಪ್ರತಿಭಾವಂತ ಕಲಾವಿದೆ. ತನ್ನ ಕುಟುಂಬದ ಪ್ರತಿಸ್ಪರ್ಧಿ ಕಂಪನಿಯ ಸಿ.ಇ.ಓ ವೀರ್ನೊಂದಿಗೆ ಮನೆಯವರ ಒತ್ತಾಯದ ಮೇರೆಗೆ ಮದುವೆಯಾಗುತ್ತಾಳೆ. ಅನಿಕಾ ಸರಳವಾದ ಹಿನ್ನೆಲೆಯ ಪ್ರತಿಭಾವಂತ ಸಂಗೀತಗಾರ ರೋಹನ್ನನ್ನು ಪ್ರೀತಿಸುತ್ತಿರುತ್ತಾಳೆ. ಅನಿಕಾ ತನ್ನ ಮನದಲ್ಲಿ ರೋಹನ್ ಪ್ರೀತಿಗಾಗಿ ಪರಿತಪಿಸುತ್ತಿರುವಾಗ, ಇಷ್ಟವಿಲ್ಲದ ತನ್ನ ಮದುವೆಯ ಐಷಾರಾಮಿ ಬದುಕನ್ನು ಹೇಗೆ ನಿಭಾಯಿಸುತ್ತಾಳೆ? ಅನಿಕಾಳನ್ನು ಮನಸಾರೆ ಪ್ರೀತಿಸುವ ವೀರ್ ಮತ್ತು ತಾನು ಬಯಸುತ್ತಿರುವ ರೋಹನ್ನ ಪ್ರೀತಿಯ- ಕರ್ತವ್ಯ ಮತ್ತು ಹೃದಯದ ನಡುವೆ ಅವಳ ಆಯ್ಕೆ ಯಾವುದಾಗಬಹುದು? ಈ ಮಧ್ಯೆ ವ್ಯವಹಾರ ಮತ್ತು ಕೌಟುಂಬಿಕ ವಿಚಾರಗಳು ಅವರ ಜೀವನಕ್ಕೆ ಯಾವ ರೀತಿಯ ತಿರುವುಗಳನ್ನು ನೀಡಬಹುದು? 2. ರಾಹುಲ್, ಒಂದು ದೊಡ್ಡ ಕಂಪನಿಯ ಸಿಇಒ ಆಗಿರುತ್ತಾನೆ. ತನ್ನ ಕುಟುಂಬದ ಸಮಸ್ಯೆಯೊಂದನ್ನು ಪರಿಹರಿಸಲು ರೆಸ್ಟೋರೆಂಟ್ ಒಂದರಲ್ಲಿ ಶೆಫ್ ಆಗಲು ತರಬೇತಿ ಪಡೆಯಲು ಹೋಗುತ್ತಾನೆ. ಅವನು ತನ್ನ ನಿಜವಾದ ಗುರುತನ್ನು ತಿಳಿಯದಂತೆ ನೋಡಿಕೊಳ್ಳುತ್ತಿರುತ್ತಾನೆ. ಅಲ್ಲಿ ಪ್ರತಿಭಾವಂತ ಮುಖ್ಯ ಶೆಫ್ ಮಾಯಾಳನ್ನು ಭೇಟಿಯಾಗುತ್ತಾನೆ. ರೋಹನ್ ಮಾಯಾಳ ಉತ್ಸಾಹ ಮತ್ತು ಕಾರ್ಯವೈಖರಿಗೆ ಮನಸೋಲುತ್ತಾನೆ. ಆದರೆ ಪ್ರೀತಿಯಲ್ಲಿ ಬೀಳುವ ಅವನು ತನ್ನ ಮೂಲ ಉದ್ದೇಶವನ್ನು ಹೇಗೆ ನಿಭಾಯಿಸುತ್ತಾನೆ? ರಾಹುಲ್ ಬಗ್ಗೆ ಸತ್ಯವನ್ನು ಕಂಡುಕೊಂಡಾಗ ಮಾಯಾ ಹೇಗೆ ಪ್ರತಿಕ್ರಿಯಿಸುತ್ತಾಳೆ? 3. ತನ್ನ ಪ್ಲೇಬಾಯ್ ಸ್ವಭಾವಕ್ಕೆ ಹೆಸರುವಾಸಿಯಾದ ಕೋಟ್ಯಾಧಿಪತಿ ಅರ್ಜುನ್, ಪ್ರತಿಭಾವಂತ ಚಿತ್ರ ಕಲಾವಿದೆ ಶ್ರೇಯಾಳ ಸೌಂದರ್ಯ ಮತ್ತು ಕಲೆಗೆ ಮಾರುಹೋಗಿರುತ್ತಾನೆ. ಅವಳ ಹೃದಯವನ್ನು ಗೆಲ್ಲಲು, ಅವನು ತನ್ನ ನಿಜವಾದ ಗುರುತನ್ನು ಮರೆಮಾಚುತ್ತಾನೆ. ಮತ್ತು ಕಲೆಯಲ್ಲಿ ಆಸಕ್ತಿ ಇರುವವನಂತೆ ನಟಿಸಿ, ಅವಳ ವಿದ್ಯಾರ್ಥಿಯಾಗಿ ಸೇರಿಕೊಳ್ಳುತ್ತಾನೆ. ಆದರೆ ಅರ್ಜುನನ ಕುಟುಂಬದ ಅಸಮ್ಮತಿ ಮತ್ತು ಅವನ ಹಿಂದಿನ ಸತ್ಯಗಳನ್ನು ತಿಳಿದ ಮೇಲೆ ಅವರ ಪ್ರೀತಿ ಉಳಿಯಬಹುದೇ? 4. ಬಿಲಿಯನೇರ್ ಆದಿತ್ಯ ತನ್ನ ಆತ್ಮೀಯ ಸ್ನೇಹಿತನ ಸಹೋದರಿ ಕಿರಣ್ಳನ್ನು ರಹಸ್ಯವಾಗಿ ಪ್ರೀತಿಸುತ್ತಿರುತ್ತಾನೆ. ಕಿರಣ್ಳ ಸಹೋದರ ಸೈನಿಕನಾಗಿದ್ದು, ತನ್ನ ಕರ್ತವ್ಯ ನಿಭಾಯಿಸಲು ಹೋದಾಗ, ಅವನು ಅವಳ ಸುರಕ್ಷತೆಯ ಜವಾಬ್ದಾರಿಯನ್ನು ಆದಿತ್ಯನಿಗೆ ಒಪ್ಪಿಸುತ್ತಾನೆ. ಆದಿತ್ಯ ಕಿರಣ್ಳನ್ನು ಜೋಪಾನ ಮಾಡುತ್ತಾನೆ. ಆದರೆ ಅವನ ಭಾವನೆಗಳನ್ನು ಅವಳೆದುರು ವ್ಯಕ್ತಪಡಿಸುವುದಿಲ್ಲ. ಅವರ ಸಂಬಂಧವನ್ನು ಇಷ್ಟಪಡದ ಆದಿತ್ಯನ ಸಂಬಂಧಿ, ಅವನ ಆಸ್ತಿಯನ್ನು ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಿರುತ್ತಾನೆ. ಆ ಸಂದರ್ಭದಲ್ಲಿ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಮುಂದೆ ಏನಾಗಬಹುದು? 5. ಸಾಹಿತಿ ರಘುವೀರ್, ತಾನು ಕೋಟ್ಯಾಧಿಪತಿ ಎಂದು ಸುತ್ತಲಿನವರೊಡನೆ ಮರೆಮಾಚಿರುತ್ತಾನೆ. ಅವನ ಹೆಂಡತಿ ಮೈಥಿತಿಯ ಹೆತ್ತವರು ಅವನು ತಮ್ಮ ಮಗಳಿಗೆ ಯೋಗ್ಯನಲ್ಲ ಎಂದು ಭಾವಿಸುತ್ತಿರುತ್ತಾರೆ. ಮೈಥಿಲಿಯ ಕುಟುಂಬವು ಒಮ್ಮೆ ಅನುಮಾನಾಸ್ಪದ ಮತ್ತು ಅನಿರೀಕ್ಷಿತ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ರಘುವೀರ್ ಎದುರಾದ ಸಮಸ್ಯೆಯನ್ನು ನಿಭಾಯಿಸಲು ತನ್ನ ನೈಜತೆಯನ್ನು ಪ್ರಕಟಪಡಿಸುವ ಸಂದಿಗ್ಧಕ್ಕೆ ಬೀಳುತ್ತಾನೆ. ಅವನು ತನ್ನ ರಹಸ್ಯವನ್ನು ಕಾಪಿಟ್ಟುಕೊಳ್ಳುವ ಮೂಲಕ ಮೈಥಿಲಿಯನ್ನು ಅಪಾಯಕ್ಕೆ ತಳ್ಳಬಹುದೇ? ಅಥವಾ ತನ್ನ ಪ್ರೀತಿಗಾಗಿ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹುದೇ? ಒಪ್ಪಂದ/ಒತ್ತಾಯದ ಮದುವೆ 1. ಶ್ವೇತಾ ತನ್ನ ಮೇಲಧಿಕಾರಿ ರಾಜೀವ್ನನ್ನು ದ್ವೇಷಿಸುತ್ತಿರುತ್ತಾಳೆ. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಗೆ ಸರಿಯಾದ ಟ್ರೀಟ್ಮೆಂಟ್ ಕೊಡಿಸಲು ಅವಳಿಗೆ ಹಣದ ಅಗತ್ಯವಿರುತ್ತದೆ. ರಾಜೀವ್ನ ಸಾಂಪ್ರದಾಯಿಕ ಮನೋಭಾವದ ಅಜ್ಜ ಅವರು ಸಾಯುವ ಮೊದಲು ಮೊಮ್ಮಗನ ಮದುವೆ ನೋಡುವ ಆಸೆ ವ್ಯಕ್ತಪಡಿಸಿದಾಗ, ರಾಜೀವ್ ಶ್ವೇತಾಳಿಗೆ ನಿರ್ದಯವಾಗಿ ಒಪ್ಪಂದದ ಮದುವೆಯಾಗುವಂತೆ ಒತ್ತಾಯಿಸುತ್ತಾನೆ. ಅವರ ಬಲವಂತದ ಪ್ರೀತಿಯು ನಿಜವಾದ ಪ್ರೀತಿಯಾಗಿ ಅರಳಬಹುದೇ? ಅಥವಾ ನಿರಂತರ ಜಗಳ ಅವರನ್ನು ದೂರ ಮಾಡಬಹುದೇ? 2. ವರ್ಷ ರಹಸ್ಯವಾಗಿ ತನ್ನ ಬಾಸ್ ಅಜಯ್ನನ್ನು ಪ್ರೀತಿಸುತ್ತಿರುತ್ತಾಳೆ. ಅವನ ಸೆಕ್ರೆಟರಿಯಾಗಿ ಕೆಲಸ ಮಾಡುತ್ತಿದ್ದವಳಿಗೆ ಅವನ ಬಳಿ ತನ್ನ ಭಾವನೆಗಳನ್ನು ಹೇಳಿಕೊಳ್ಳುವ ಧೈರ್ಯ ಇರುವುದಿಲ್ಲ. ಅಜಯ್ ಕುಟುಂಬ ಅವನಿಗೆ ಮದುವೆಯಾಗಲು ಒತ್ತಡ ಹೇರತೊಡಗಿದಾಗ ಅವನು ಒಂದು ಪ್ರಸ್ತಾಪದೊಂದಿಗೆ ವರ್ಷಳ ಬಳಿ ಬರುತ್ತಾನೆ. ಅದು ಮನೆಯವರ ಒತ್ತಡದಿಂದ ತಪ್ಪಿಸಿಕೊಳ್ಳಲು ಒಪ್ಪಂದದ ಮದುವೆ. ವರ್ಷ ತನ್ನ ಭಾವನೆಗಳಿಗೆ ಕಡಿವಾಣ ಹಾಕಿ ಅವನೊಡನೆ ಒಪ್ಪಂದದ ಮದುವೆಯಾಗುತ್ತಾಳಾ? ಅಜಯ್ನ ಸ್ವಾರ್ಥದ ನಡವಳಿಕೆಯು ಅವಳ ಹೃದಯವನ್ನು ಒಡೆಯುತ್ತದೆಯೇ? 3. ತನ್ನ ಕುಟುಂಬದ ವ್ಯವಹಾರವನ್ನು ನಿರ್ದಯವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಆರ್ಯನ್ನೊಂದಿಗೆ ತನ್ನ ಕಂಪನಿಯನ್ನು ಉಳಿಸಲು ಕರುಣಾ ಒಪ್ಪಂದದ ಮದುವೆಗೆ ತಯಾರಾಗುತ್ತಾಳೆ. ಆದರೂ ಆರ್ಯನ್ ಮದುವೆಯಾಗಲು ರಹಸ್ಯ ಉದ್ದೇಶಗಳನ್ನು ಹೊಂದಿರುತ್ತಾನೆ. ಇಬ್ಬರೂ ತಮ್ಮ ವ್ಯವಹಾರವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದವರಾಗಿದ್ದರಿಂದ ಪರಸ್ಪರ ಪ್ರೀತಿ, ಕಾಳಜಿ ಇರುವುದಿಲ್ಲ. ಬೋರ್ಡ್ ರೂಂ ಮೀಟಿಂಗ್ನಲ್ಲಿ ನಡೆಯುವ ಅವರ ಪೈಪೋಟಿ ಮತ್ತು ಘರ್ಷಣೆಗಳು ಪ್ರೀತಿಗೆ ಜಾಗವನ್ನು ನೀಡಬಹುದೇ? ಅಥವಾ ಅವರ ಒಪ್ಪಂದದ ಮದುವೆಯು ಅಧಿಕಾರಕ್ಕಾಗಿ ನಡೆಯುವ ಯುದ್ಧವಾಗಬಹುದೇ? 4. ಬೆಂಗಳೂರಿನಲ್ಲಿ ತನ್ನ ಹೀರೋಯಿನ್ ಆಗುವ ಕನಸನ್ನು ಬೆನ್ನಟ್ಟುತ್ತಿರುವ ಸಣ್ಣ ಪಟ್ಟಣದ ಹುಡುಗಿ ಆರಾಧನಾ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುತ್ತಾಳೆ. ಚಲನಚಿತ್ರ ನಿರ್ಮಾಪಕ ವಿವೇಕ್ ಅವರ ಮುಂಬರುವ ಚಿತ್ರದಲ್ಲಿ ಒಂದೊಳ್ಳೆಯ ಪಾತ್ರವನ್ನು ಪಡೆಯಲು ಅವನೊಡನೆ ಇಷ್ಟವಿಲ್ಲದೆ ಒಪ್ಪಂದದ ಮದುವೆಗೆ ಒಪ್ಪುತ್ತಾಳೆ. ಆದರೆ, ಸಂಪ್ರದಾಯದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿರುವ ವಿವೇಕ್ ಕುಟುಂಬ ಮನೆಗೆ ಒಳ್ಳೆಯ ಸೊಸೆಯ ನಿರೀಕ್ಷೆಯಲ್ಲಿರುತ್ತದೆ. ಆರಾಧನಾಳ ನಟನಾ ಕೌಶಲ್ಯ ನಕಲಿ ಮದುವೆಯಾಗಿ ಮನೆಯವರ ಕಣ್ಕಟ್ಟಲು ಸಹಾಯವಾಗಬಹುದೇ? ಅಥವಾ ಕುಟುಂಬದ ಕರ್ತವ್ಯದ ಒತ್ತಡದಲ್ಲಿ ಅವಳ ಕನಸು ಕಳೆದುಹೋಗುತ್ತದೆಯೇ? 5. ಸ್ವತಂತ್ರ ಮನೋಭಾವದ ನೃತ್ಯಗಾರ್ತಿ ವೇದ್ಯ ತನ್ನದೇ ಆದ ಅಕಾಡೆಮಿಯನ್ನು ತೆರೆಯುವ ಕನಸು ಹೊತ್ತಿರುತ್ತಾಳೆ. ಆಕೆಯ ಆರ್ಥಿಕ ಪರಿಸ್ಥಿತಿ ಅದಕ್ಕೆ ಸಹಕರಿಸದ ಕಾರಣ ಮನೋಜ್ ಎಂಬ ಉದ್ಯಮಿಯೊಂದಿಗೆ ಒಪ್ಪಂದದ ಮದುವೆಗೆ ಒಪ್ಪುತ್ತಾಳೆ; ವೇದ್ಯ ಅವನ ಜೊತೆ ಒಂದು ವರ್ಷ ಉಳಿಯಬಹುದು ಎಂಬ ಷರತ್ತಿನೊಂದಿಗೆ. ವೇದ್ಯ ತನ್ನ ಅಕಾಡೆಮಿ ತೆರೆಯಲು ಹಣವನ್ನು ಪಡೆಯುತ್ತಾಳೆ ಮತ್ತು ಮದುವೆಯಾದ ಮನೋಜ್ ತನ್ನ ಕುಟುಂಬದ ಪೂರ್ವಜರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುತ್ತಾನೆ. ಅವರ ಒಪ್ಪಂದದ ಮದುವೆ ಭಾವಪೂರ್ಣ ಪ್ರೇಮಕಥೆಯಾಗಿ ಬದಲಾಗಬಹುದೇ? ಅಥವಾ ಅವರ ಹೊಂದಿಕೆಯಾಗದ ವ್ಯಕ್ತಿತ್ವಗಳು ಅವರನ್ನು ದೂರ ಮಾಡಬಹುದೇ? ವೇದ್ಯ ತನ್ನ ಕನಸು ಮತ್ತು ಅವಳ ಹೊಸ ಪ್ರೀತಿಯ ನಡುವೆ ಯಾವುದನ್ನು ಆಯ್ಕೆ ಮಾಡಬಹುದು? ಮಾಫಿಯಾ/ ಗ್ಯಾಂಗ್ಸ್ಟರ್ ಪ್ರೀತಿ 1. ಕುಖ್ಯಾತ ಡಾನ್ ಯಶವಂತ್ ರಾಣಾ ಮಗಳು ದಿಯಾ, ಹಿಂಸೆಯಿಲ್ಲದ ಜೀವನವನ್ನು ಬಯಸುತ್ತಾಳೆ. ಬೀದಿ ಬದಿಯ ಸಂಗೀತಗಾರನಾದ ರಿಷಿಯ ಭಾವಪೂರ್ಣ ಮಧುರ ಗೀತೆಗಳಿಗೆ ಆಕರ್ಷಿತಳಾದ ಆಕೆ ಅವನನ್ನು ಪ್ರೀತಿಸುತ್ತಾಳೆ. ದಿಯಾಳಿಂದ ರಿಷಿ ಒಂದು ರಹಸ್ಯವನ್ನು ಅವಳಿಂದ ಮುಚ್ಚಿಟ್ಟಿರುತ್ತಾನೆ - ಅವನು ಪ್ರತಿಸ್ಪರ್ಧಿ ಗ್ಯಾಂಗ್ನ ನಾಯಕ ರಾಜ್ ಮಿಶ್ರಾನ ಮಗ! ಅವರ ಪ್ರೀತಿಯು ಅವರ ಕುಟುಂಬಗಳ ನಡುವಿನ ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಬಹುದೇ? ದಿಯಾ ತನ್ನ ತಂದೆಯನ್ನು ಧಿಕ್ಕರಿಸಿ ಪ್ರೀತಿಯನ್ನು ಆರಿಸಿಕೊಳ್ಳುವಳೇ? ಅಥವಾ ಕುಟುಂಬದ ಒಳಿತಿಗಾಗಿ ತನ್ನ ಸಂತೋಷವನ್ನು ತ್ಯಾಗ ಮಾಡಬೇಕಾಗುತ್ತದೆಯೇ? 2. ಅನಿಕಾ ತನ್ನ ಮಾಫಿಯಾ ಕುಟುಂಬದ ಪರಂಪರೆಯಲ್ಲಿ ಸಿಕ್ಕಿಬಿದ್ದ ಮೃದು ಮನಸ್ಸಿನ ಮನೋವೈದ್ಯೆ. ರೋಗಿಯಾಗಿ ಅವಳ ಬಳಿ ಬರುವ ವಿಖ್ಯಾತ್ಗೆ ಚಿಕಿತ್ಸೆ ನೀಡುವಾಗ ಅವನತ್ತ ಆಕರ್ಷಿತಳಾಗುತ್ತಾಳೆ. ಅವರಿಬ್ಬರೊಳಗೂ ಪ್ರೀತಿ ಅರಳುತ್ತಿದ್ದಂತೆ, ಅನಿಕಾಳಿಗೆ ಅವನ ಬಗೆಗಿನ ಒಂದು ಸತ್ಯ ತಿಳಿಯುತ್ತದೆ. ತನ್ನ ತಂದೆಯ ಕೊಲೆಗೆ ಸೇಡು ತೀರಿಸಿಕೊಳ್ಳಲು ವಿಖ್ಯಾತ್ ಕಾಯುತ್ತಿರುತ್ತಾನೆ, ಅದು ಬೇರಾರೂ ಅಲ್ಲದೇ ಅನಿಕಾಳ ತಂದೆಯೇ ಆಗಿರುತ್ತಾರೆ. ಅನಿಕಾ ತನ್ನ ಕುಟುಂಬ ಮತ್ತು ಪ್ರೀತಿಯ ನಡುವೆ ಯಾವುದನ್ನು ಆಯ್ಕೆ ಮಾಡುತ್ತಾಳೆ? ಪ್ರತೀಕಾರಕ್ಕಾಗಿ ಕಾಯುತ್ತಿರುವ ವಿಖ್ಯಾತ್ನಿಂದ ರಕ್ತಸಿಕ್ತ ಘರ್ಷಣೆಯ ಇತಿಹಾಸ ಪುನಃ ಆರಂಭವಾಗುವುದೇ? 3. ಎಸಿಪಿ ಶಾಲಿನಿ ವರ್ಮಾ, ತನ್ನ ಶೌರ್ಯಕ್ಕೆ ಹೆಸರುವಾಸಿಯಾದ ನೀತಿವಂತ ಪೋಲೀಸ್ ಅಧಿಕಾರಿ. ಕುಖ್ಯಾತ ಮಲ್ಲಿಕ್ ಗ್ಯಾಂಗ್ ಅನ್ನು ಪಟ್ಟುಬಿಡದೆ ಬಗ್ಗಿಸಿ, ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಾಳೆ. ಆದರೆ ಅವಳಿಗೆ ಗೊತ್ತಿಲ್ಲ, ಅವಳ ಬಾಲ್ಯದ ಗೆಳೆಯ ಜಯಂತ್ ಈಗ ಆ ಗ್ಯಾಂಗ್ನಲ್ಲಿ ಉದಯೋನ್ಮುಖ ತಾರೆ ಎಂಬುದು! ಒಂದು ಆಕಸ್ಮಿಕ ಭೇಟಿ ಅವರ ಹಳೆಯ ಪ್ರೇಮವನ್ನು ಪುನರುಜ್ಜೀವನಗೊಳಿಸುತ್ತದೆ. ಆದರೆ ಶಾಲಿನಿ ತಂದೆಯಿಂದ ಎನ್ಕೌಂಟರ್ ಆದ ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹಾತೊರೆಯುತ್ತಿರುವ ಅವನಿಗೆ ಯಾವುದು ಮುಖ್ಯವಾಗುತ್ತದೆ? ಪ್ರೀತಿ, ಕರ್ತವ್ಯ, ಸೇಡು ಮತ್ತು ಎರಡನೇ ಅವಕಾಶಗಳ ನಡುವೆ ಅವರ ಬದುಕು ಎತ್ತ ಸಾಗಬಹುದು? 4. ರಾಶಿ ಶರ್ಮಾ ರಹಸ್ಯ ಪೋಲೀಸ್ ಅಧಿಕಾರಿ. ಡಾನ್ ಧನಂಜಯ್ನ ಕಿರಿಯ ಮಗನಾದ ಕರಣ್ ವಿವಾಹದ ಮುಂಚಿನ ಸಮಾರಂಭದಲ್ಲಿ ನರ್ತಕಿಯಾಗಿ ಅವರ ಮನೆಗೆ ನುಸುಳುತ್ತಾಳೆ. ಆ ಗ್ಯಾಂಗ್ಅನ್ನು ಹಿಡಿದು ತನ್ನ ಕರ್ತವ್ಯ ನಿಭಾಯಿಸಲು ಬಂದವಳು ಕರಣ್ ಕೈಯ್ಯಲ್ಲಿ ಸಿಕ್ಕಿಬೀಳುತ್ತಾಳೆ. ಜೀವನ ಅಥವಾ ಮರಣದ ನಿರ್ಧಾರದೊಂದಿಗೆ ಹೋರಾಡುತ್ತಾಳೆ. ಅದೇ ವೇಳೆಗೆ ಕರಣ್ನ ಒಳ್ಳೆಯತನದಿಂದ ಅವನೆಡೆಗೆ ಆಕರ್ಷಿತಳಾಗುತ್ತಾಳೆ. ಅವರ ಪ್ರೀತಿ ಯಾವ ತಿರುವುಗಳನ್ನು ನೀಡಬಹುದು? ಅವಳು ಡಾನ್ನ ಸಾಮ್ರಾಜ್ಯವನ್ನು ಕೆಡವಬಹುದೇ? ಪ್ರೀತಿಯ ಬಲೆಯಲ್ಲಿ ಸಿಲುಕಿ ಕರ್ತವ್ಯಕ್ಕೆ ಚ್ಯುತಿ ಬರಬಹುದೇ? 5. ಸ್ಯಾಂಡಲ್ವುಡ್ನ ಸುಂದರ ನಟಿ ಆಯಿಷಾ ಒಬ್ಬ ನಿಗೂಢ ವ್ಯಕ್ತಿಯಿಂದ ನಿರಂತರ ಬೆದರಿಕೆಗೆ ಒಳಗಾಗುತ್ತಾಳೆ. ಭೂತಕಾಲದ ಕರಾಳತೆಯ ಜೊತೆ ಜೀವಿಸುತ್ತಿರುವ ಮಾಜಿ ಸೈನಿಕ ರಾಜೀವ್ನನ್ನು ಅವಳ ಅಂಗರಕ್ಷಕನಾಗಿ ನೇಮಿಸಲಾಗುತ್ತದೆ. ರಾಜೀವ್ ರಹಸ್ಯ ಪೋಲೀಸ್ ಅಧಿಕಾರಿಯಾಗಿದ್ದು ಆ ನಿಗೂಢ ವ್ಯಕ್ತಿ ಮತ್ತು ಒಂದು ಕ್ರಿಮಿನಲ್ ಗುಂಪಿನ ಗುಪ್ತ ಸಂಪರ್ಕವನ್ನು ತನಿಖೆ ಮಾಡುತ್ತಾನೆ. ಇದೇ ಸಮಯದಲ್ಲಿ ಅವರ ನಡುವೆ ಪ್ರೀತಿಯು ಬೆಳೆಯುತ್ತದೆ. ಆಯಿಷಾಳನ್ನು ರಕ್ಷಿಸುವಾಗ ರಾಜೀವ್ನಿಂದ ವಿವಿಧ ಅಪರಾಧಗಳು ಪತ್ತೆಯಾಗುತ್ತವೆ. ಅವುಗಳ ಮೂಲವನ್ನು ರಾಜೀವ್ ಹುಡುಕಬಹುದೇ? ಆಯಿಷಾ ಮತ್ತು ರಾಜೀವ್ ಪ್ರೀತಿಗೆ ಏನಾದರೂ ತೊಂದರೆ ಎದುರಾಗಬಹುದೇ? ಬಾಡಿಗೆ ತಾಯ್ತನ/ವಿಚ್ಛೇದನ/ಪ್ರೀತಿಯಲ್ಲಿ ಎರಡನೇ ಅವಕಾಶ 1. ಬಹುದೊಡ್ಡ ಕಂಪನಿಯ ಸಿಇಒ ಜೀವನ್ನ ಅದ್ದೂರಿ ವಿವಾಹವನ್ನು ಸಣ್ಣ ಪಟ್ಟಣದ ಹಾಲ್ ಒಂದರಲ್ಲಿ ಆಯೋಜಿಸಲು ವೆಡ್ಡಿಂಗ್ ಪ್ಲಾನರ್ ನಿವೇದನಾಳನ್ನು ನೇಮಿಸಲಾಗಿತ್ತು. ಜೀವನ್ ಮತ್ತು ನಿವೇದನಾರಿಗೆ ಮೊದಲಿನಿಂದಲೂ ಪರಿಚಯವಿತ್ತು. ಈಗ ಅವರು ಒಟ್ಟಿಗೆ ಕೆಲಸ ಮಾಡುವಾಗ, ಹಳೆಯ ಭಾವನೆಗಳು ಮತ್ತೆ ಹೊರಹೊಮ್ಮುತ್ತವೆ. ನಿವೇದನಾ ಈ ಬಾರಿ ಜೀವನ್ನನ್ನು ಮತ್ತೆ ನಂಬುವಳೇ? ಕುಟುಂಬದ ಒತ್ತಡದಿಂದ ಮದುವೆಗೆ ಒಪ್ಪಿರುವ ಜೀವನ್ ಮತ್ತೆ ನಿವೇದನಾಳನ್ನು ಸೇರುವನೇ? ಅವರಿಬ್ಬರ ಜೀವನ ಯಾವ ದಿಕ್ಕಿಗೆ ತಿರುಗಬಹುದು? 2. ದಿವ್ಯಾ ಒಬ್ಬ ಶಿಕ್ಷಕಿ. ತನ್ನ ಬಾಲ್ಯದ ಗೆಳತಿ ಅಂಜಲಿ ಮತ್ತು ಅವಳ ಶ್ರೀಮಂತ ಪತಿ ವಿಶ್ವಾಸ್ಗೆ ಬಾಡಿಗೆ ತಾಯಿಯಾಗಲು ಒಪ್ಪುತ್ತಾಳೆ. ದಿವ್ಯಾ ಮಗುವನ್ನು ತನ್ನ ಗರ್ಭದಲ್ಲಿ ಹೊತ್ತ ಸಮಯದಲ್ಲಿ, ಅವಳು ವಿಶ್ವಾಸ್ನೊಂದಿಗೆ ಅನಿರೀಕ್ಷಿತ ಭಾವನಾತ್ಮಕ ಸಂಪರ್ಕವನ್ನು ಹೊಂದುತ್ತಾಳೆ. ಸ್ನೇಹದ ಮೇಲಿನ ಅವಳ ನಿಷ್ಠೆ ಮತ್ತು ವಿಶ್ವಾಸ್ ಮೇಲೆ ಬೆಳೆಯುತ್ತಿರುವ ಅವಳ ಭಾವನೆಗಳ ನಡುವೆ ಅವಳ ಆಯ್ಕೆ ಏನಾಗಿರಬಹುದು? 3. ಪ್ರಿಯಾ ಮತ್ತು ಸಮೀರ್ ಒತ್ತಾಯಪೂರ್ವಕವಾಗಿ ಮದುವೆಯಾಗಿರುತ್ತಾರೆ. ಅವರ ವೈಯಕ್ತಿಕ ಕೆಲವು ರಹಸ್ಯಗಳಿಂದಾಗಿ ಪರಸ್ಪರರಲ್ಲಿ ಪ್ರೀತಿ ಮೊಳಕೆಯೊಡೆದಿರುವುದಿಲ್ಲ. ಸಮೀರ್ ಜೊತೆಗಿನ ಆಕಸ್ಮಿಕ ಮಧುರ ಘಳಿಗೆಯ ನಂತರ ಪ್ರಿಯಾ ಗರ್ಭಿಣಿಯಾಗುತ್ತಾಳೆ. ಆಗ ಅವರು ಹೊಸ ಜವಾಬ್ದಾರಿಗಳನ್ನು ಒಟ್ಟಾಗಿ ಎದುರಿಸುತ್ತಾರೆ. ಆಗ ಅವರ ಸಂಬಂಧದ ನಡುವಲ್ಲಿನ ಬಿರುಕುಗಳು ಮತ್ತಷ್ಟು ಹೆಚ್ಚಾಗಬಹುದೇ? ಅಥವಾ ಮಗುವಿನ ಕಾರಣದಿಂದ ಅವರಿಬ್ಬರೂ ಒಂದಾಗಬಹುದೇ? 4. ತನ್ನ ಶ್ರೀಮಂತ ಅತ್ತೆಯ ಮನೆಯಿಂದ ಹೊರಹಾಕಲ್ಪಟ್ಟ ಮಾಯಾ ಆ ಸಂದರ್ಭದಲ್ಲಿ ಗರ್ಭಿಣಿಯಾಗಿರುತ್ತಾಳೆ. ತವರು ಮನೆಯ ಬಡತನದ ಕಾರಣದಿಂದ ಅಲ್ಲಿ ಹೋಗಲಿಚ್ಛಿಸದೆ ತನ್ನ ಜೀವನವನ್ನು ಏಕಾಂಗಿಯಾಗಿ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಮತ್ತು ಆ ಪ್ರಯತ್ನದಲ್ಲಿ ಗೆದ್ದು ಮಿಲಿಯನೇರ್ ಆಗುತ್ತಾಳೆ. ಅವಳು ತನಗೆ ಮೋಸ ಮಾಡಿದ್ದಾಳೆಂಬ ತಪ್ಪು ತಿಳುವಳಿಕೆಯಿಂದ ಅವಳ ಪತಿ ಅಮರ್ ಅವಳನ್ನು ದೂರವೇ ಇಟ್ಟಿರುತ್ತಾನೆ. ವರ್ಷಗಳ ನಂತರ, ಅವರು ಮತ್ತೆ ಭೇಟಿಯಗುತ್ತಾರೆ. ಸತ್ಯವನ್ನು ತಿಳಿದ ಅಮರ್ ಅವಳನ್ನು ಮತ್ತೆ ಸೇರಲು ಬಯಸುತ್ತಾನೆ. ಮಾಯಾ ಅವನನ್ನು ಕ್ಷಮಿಸಬಹುದೇ? ಅಥವಾ ಅವನಿಂದ ದೂರವೇ ಉಳಿಯಬಹುದೇ? 5. ವಿಚ್ಛೇದನವಾಗಿ ವರ್ಷಗಳ ನಂತರ, ಛಾಯಾಗ್ರಾಹಕ ಅರ್ನವ್ ಅವನ ಮಾಜಿ ಪತ್ನಿ ಮುಕ್ತಾಳನ್ನು ಭೇಟಿಯಾಗುತ್ತಾನೆ. ಅವಳೀಗ ಯಶಸ್ವಿ ವೈದ್ಯೆಯಾಗಿರುತ್ತಾಳೆ. ಅವಳು ಸಿಂಗಲ್ ಪೇರೆಂಟ್ ಆಗಿದ್ದು ಆ ಮಗುವಿನ ಜೈವಿಕ ತಂದೆ ಅವನೇ ಎಂದು ತಿಳಿದು ಅರ್ನವ್ ಆಘಾತಕ್ಕೊಳಗಾಗುತ್ತಾನೆ. ಅರ್ನವ್ ಮುಕ್ತಾಳ ಜೊತೆ ಮತ್ತೆ ಸಂಸಾರ ನಡೆಸಲು ಇಚ್ಛೆ ಪಡುತ್ತಾನೆ. ಅವಳ ನಂಬಿಕೆಯನ್ನು ಪುನಃ ಗಳಿಸಿ, ತಂದೆಯಾಗಿ ತನ್ನ ಹೊಸ ಪಾತ್ರವನ್ನು ನಿರ್ವಹಿಸುವಲ್ಲಿ ಅವನು ಯಶಸ್ವಿಯಾಗಬಹುದೇ? ಸಹ-ಪೋಷಕತ್ವದ ಅವರ ಪ್ರಯಾಣವು ಹಳೆಯ ಕಹಿಯನ್ನು ಮತ್ತೆ ನೆನಪಿಸುವುದೇ? ಕಾಲ್ಪನಿಕ ಭಯಾನಕ ಪ್ರೇಮ 1. ನಿಹಾರಿಕಾ ತನ್ನ ಕುಟುಂಬದ ಕರಾಳ ರಹಸ್ಯವೊಂದನ್ನು ಕಂಡುಹಿಡಿಯುತ್ತಾಳೆ. ಅವರು ನಿಧಿಯೊಂದನ್ನು ಪಡೆದುಕೊಳ್ಳುವುದಕ್ಕಾಗಿ ತಂತ್ರ-ಮಂತ್ರಗಳ ಮೊರೆ ಹೋಗುತ್ತಿರುತ್ತಾರೆ. ನಿಹಾರಿಕಾ ಕೂಡಾ ಅದೇ ಹಾದಿಯಲ್ಲಿ ಸಾಗಿ ತನ್ನ ಪೂರ್ವಿಕರಿಗೆ ಸಿಗದ ನಿಧಿಯನ್ನು ಹುಡುಕುವ ಪ್ರಯತ್ನ ಮಾಡುತ್ತಾಳೆ. ಆ ಸಂದರ್ಭದಲ್ಲಿ ಪರಿಚಯವಾಗುವ ಆರ್ಯನ್ನನ್ನು ತನ್ನ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ಮನಸ್ಸು ಮಾಡುತ್ತಾಳೆ. ಆಗಲೇ ಅವನ ಮೃದು ಹೃದಯಕ್ಕೆ ಅವಳು ಮನಸೋತಿರುತ್ತಾಳೆ. ನಿಹಾರಿಕಾಳ ದುರುದ್ದೇಶ ಸಫಲವಾಗುತ್ತದೆಯೇ? ಅಥವಾ ಅವರಿಬ್ಬರ ನಡುವೆ ಪ್ರೀತಿ ಬೆಳೆದು ಕೆಟ್ಟತನ ತೊಲಗುತ್ತದೆಯೇ? 2. ಇತಿಹಾಸದ ವಿದ್ಯಾರ್ಥಿನಿ ಶಿಖಾ, ಮ್ಯೂಸಿಯಂನಲ್ಲಿ ಪುರಾತನ ರಕ್ಷಾಕವಚವೊಂದರ ಮೇಲೆ ಎಡವಿ ಬೀಳುತ್ತಾಳೆ. ಅವಳು ರಕ್ಷಾಕವಚವನ್ನು ಮುಟ್ಟುತ್ತಿದ್ದಂತೆ, ಅವಳು ಹಿಂದಿನ ಯುಗಕ್ಕೆ ಹೋಗುತ್ತಾಳೆ. ಅಲ್ಲಿ ವೀರ ದೇವಾಂಶ್ನನ್ನು ಭೇಟಿಯಾಗುತ್ತಾಳೆ. ಅವರ ಪ್ರೀತಿ ಸಮಯ ಮತ್ತು ಸ್ಥಳವನ್ನು ಮೀರಿದ್ದಾಗಿರುತ್ತದೆ. ಆಗ ರಕ್ಷಾಕವಚ ಮತ್ತು ಅದರ ಶಕ್ತಿಯನ್ನು ಹೊಂದಲು ದುರುದ್ದೇಶಪೂರಿತವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಅವರಿಗೆ ತಿಳಿಯುತ್ತದೆ. ದೇವಾಂಶ್ ಮತ್ತು ಶಿಖಾ ಒಟ್ಟಾಗಿ ಆ ದುರುಳರನ್ನು ಎದುರಿಸಬಹುದೇ? ಅಥವಾ ಏನಾದರೂ ತೊಂದರೆಯಾಗಿ ಅವರಿಬ್ಬರೂ ದೂರವಾಗಬಹುದೇ? 3. ನಿಶಾ ತನ್ನ ಸುತ್ತ ಇರುವ ಆತ್ಮಗಳನ್ನು ನೋಡುವ ಸಾಮರ್ಥ್ಯವನ್ನು ಹೊಂದಿರುತ್ತಾಳೆ. ಅವಳು ರಾಘವ್ ಎಂಬ ನಿಗೂಢ ಅಪರಿಚಿತನನ್ನು ಭೇಟಿಯಾಗುತ್ತಾಳೆ. ನಿಶಾಳ ವಿಶೇಷ ಸಾಮರ್ಥ್ಯ ಅವರಿಬ್ಬರನ್ನೂ ಒಂದಾಗುವಂತೆ ಮಾಡುತ್ತದೆ. ಆದರೆ ನಿಶಾಳ ಸಾಮರ್ಥ್ಯವನ್ನು ದುರುಪಯೋಗಪಡಿಸಿಕೊಳ್ಳುವ ಅವನ ದುರುದ್ದೇಶ ಅವಳಿಗೆ ತಿಳಿಯುತ್ತದೆ. ಅತೃಪ್ತ ಆತ್ಮಗಳಿಗೆ ಶಾಂತಿಯನ್ನು ನೀಡಲು ಅವರಿಬ್ಬರೂ ಒಟ್ಟಾಗಿ ಕೆಲಸ ಮಾಡಬಹುದೇ? ಅಥವಾ ಪರಸ್ಪರ ಯುದ್ಧದಲ್ಲಿ ಅವರ ಪ್ರೀತಿಯು ಸೋಲಬಹುದೇ? 4. ಪುರಾತನ ದೇವಾಲಯವೊಂದರಲ್ಲಿ ತನ್ನ ನೃತ್ಯ ಪ್ರದರ್ಶನ ನೀಡುತ್ತಿರುವ ಪ್ರತಿಭಾನ್ವಿತ ನರ್ತಕಿ ಅಂಜಲಿ, ಶಕ್ತಿಶಾಲಿ ಯಕ್ಷನನ್ನು ಅರಿವಿಲ್ಲದೆ ಎಚ್ಚರಗೊಳಿಸುತ್ತಾಳೆ. ತಣಿಸಲಾಗದ ಹಸಿವಿನಿಂದ ಶಾಪಗ್ರಸ್ತನಾದ ಯಕ್ಷನು ಅಂಜಲಿಯ ಪ್ರಾಣಶಕ್ತಿಗಾಗಿ ಹಂಬಲಿಸುತ್ತಾನೆ. ಆದರೆ ಅವನು ಅವಳ ಬಳಿ ಬರುತ್ತಿದ್ದಂತೆ ಒಂದು ವಿಧವಾದ ಆಕರ್ಷಣೆಗೆ ಒಳಪಡುತ್ತಾನೆ. ಅವಳಲ್ಲಿರುವ ವಿಶೇಷ ಸಾಮರ್ಥ್ಯ ಏನಾಗಿರಬಹುದು? ಆ ಯಕ್ಷನ ಮುಂದಿನ ನಡೆ ಏನು? ಅವರ ನಡುವೆ ಬೆಳೆಯುವ ಬಾಂಧವ್ಯದ ಮುಂದಿನ ಕತೆ ಏನಾಗಿರಬಹುದು? 5. ನಿಯತಿ ಒಬ್ಬ ಕಿನ್ನರಿ. ಆದರೆ ಶಾಪಗ್ರಸ್ಥವಾಗಿ ಭೂಮಿಯ ಮೇಲೆ ಸಾಮಾನ್ಯಳಂತೆ ಬದುಕುತ್ತಿರುತ್ತಾಳೆ. ಒಮ್ಮೆ ನಿವೇದ್ ಎಂಬ ಯುವಕ ಅವಳನ್ನು ಭೇಟಿಯಾಗುತ್ತಾನೆ. ಅವಳ ಭೇಟಿಯ ನಂತರ ಬಡವನಾದ ಅವನ ಅದೃಷ್ಟ ಖುಲಾಯಿಸುತ್ತದೆ. ಅಲ್ಲಿಂದ ಅವರಿಬ್ಬರ ನಡುವೆ ಸ್ನೇಹ ಬೆಳೆದು, ಮುಂದೆ ಪ್ರೀತಿ ಅರಳುತ್ತದೆ. ಅವಳ ಶಾಪ ವಿಮೋಚನೆಯಾಗುವ ಸಮಯ ಕೂಡಾ ಹತ್ತಿರವಾಗುತ್ತಿರುತ್ತದೆ. ಅದೇ ಸಂದರ್ಭದಲ್ಲಿ ಅವಳು ನಿಗೂಢ ವ್ಯಕ್ತಿಯೊಬ್ಬನಿಂದ ತೊಂದರೆಗೊಳಗಾಗುತ್ತಾಳೆ. ಹಾಗಾದರೆ ಆ ನಿಗೂಢ ವ್ಯಕ್ತಿ ಯಾರು? ಅವಳು ಅಲ್ಲಿಂದ ಹೇಗೆ ಪಾರಾಗುತ್ತಾಳೆ? ನಿವೇದ್ ಮತ್ತು ಅವಳ ಪ್ರೇಮ ಯಾವ ತಿರುವುಗಳನ್ನು ಪಡೆಯುತ್ತದೆ? ತಂತ್ರಜ್ಞಾನದ ಸಹಾಯದಿಂದ ನಿಮ್ಮ ಕಥಾ ರಚನೆಗೆ ಇನ್ನಷ್ಟು ಬಲ ನೀಡಿ: ಜೆಮಿನಿ(Gemini)ಯಂತಹ ಎ.ಐ ಟೂಲ್ಗಳು ನಿಮ್ಮ ಕಥಾ ರಚನಾ ಪ್ರಕ್ರಿಯೆಯನ್ನು ಸುಲಭಗೊಳಿಸಬಹುದು. Geminiಯನ್ನು ನೀವು ಈ ರೀತಿಯಾಗಿ ಬಳಸಿಕೊಳ್ಳಬಹುದು: 1. ಕಥಾವಸ್ತುವಿನ ಅಭಿವೃದ್ಧಿ: ನಿಮ್ಮ ಕತೆಯ ಬಗೆಗಿನ ನಿಮ್ಮ ಯೋಚನೆ, ಕಲ್ಪನೆಗಳನ್ನು ನಿಮ್ಮ ಭಾಷೆ ಅಥವಾ ಇಂಗ್ಲಿಷ್ನಲ್ಲಿ Gemini ಯಲ್ಲಿ ವಿವರಣೆ ನೀಡಿ. ಆ ಮೂಲಕ ಕತೆಯನ್ನು ಮುಂದುವರೆಸಲು ಬೇಕಾದ ತಿರುವು, ಉಪಕತೆಗಳ ಕುರಿತು ಸಲಹೆ ಕೇಳಬಹುದು. ಉದಾಹರಣೆ: "ನಾನು ತನ್ನ ಕುಟುಂಬದಿಂದ ತನಗಾಗಿ ನೇಮಿಸಲ್ಪಟ್ಟ ಬಾಡಿಗಾರ್ಡ್ನನ್ನು ಪ್ರೀತಿ ಮಾಡುವ ಬಿಲಿಯನೇರ್ ಮಗಳ ಬಗ್ಗೆ ಕತೆ ಬರೆಯುತ್ತಿದ್ದೇನೆ. ಅವರ ಪ್ರೇಮಕಥೆಯು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವರು ಎದುರಿಸಬಹುದಾದ ಕೆಲವು ಆಸಕ್ತಿದಾಯಕ ಸವಾಲುಗಳು ಯಾವುವು?" 2. ಪಾತ್ರ ಸೃಷ್ಟಿ: ನಿಮ್ಮ ಪಾತ್ರಗಳ ಕೆಲವು ಸ್ವಭಾವಗಳು, ನಡತೆ, ಲಕ್ಷಣಗಳ ಕುರಿತು ವಿವರಿಸಿ. Gemini ಯ ಮೂಲಕ ಕತೆ ಅಭಿವೃದ್ಧಿ ಹೊಂದಿದಂತೆ ಪಾತ್ರ ಪೋಷಣೆ ಯಾವ ರೀತಿಯಾಗಿ ನಡೆಯಬೇಕು ಎಂಬ ಸಲಹೆ ಪಡೆಯಬಹುದು. ಉದಾಹರಣೆ: "ನಾನು ಒಂದು ದಿಟ್ಟ ಹೆಣ್ಣಿನ ಬದುಕಿನ ಸವಾಲುಗಳ ಕತೆಯನ್ನು ಬರೆಯುತ್ತಿದ್ದೇನೆ. ಅವಳ ಪಾತ್ರ ಕತೆಯಲ್ಲಿ ಯಾವ ರೀತಿ ಅಭಿವೃದ್ಧಿ ಹೊಂದಬೇಕು?" ನಿಮ್ಮ ಕಥಾವಸ್ತು ಅಥವಾ ಪಾತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ Gemini ಯಲ್ಲಿ ನೀವು ಪ್ರಶ್ನೆಗಳನ್ನು ಕೇಳಬಹುದು. Gemini ನಿಮ್ಮ ಇನ್ಪುಟ್ಅನ್ನು ವಿಶ್ಲೇಷಿಸುತ್ತದೆ ಮತ್ತು ನಿಮ್ಮ ಇನ್ಪುಟ್ಗೆ ಸರಿಹೊಂದುವಂತಹ ಸಲಹೆಗಳು, ಆಲೋಚನೆಗಳು ಮತ್ತು ಸಂಭಾವ್ಯ ನಿರ್ದೇಶನಗಳನ್ನು ನೀಡುತ್ತದೆ. ಇಷ್ಟೇ ಅಲ್ಲದೆ ನೀವೇ ಇತರ ವಿಭಿನ್ನ ಎ.ಐ ಟೂಲ್ಗಳನ್ನು ಬಳಸಿಕೊಳ್ಳಬಹುದು. ನೆನಪಿಡಿ, Geminiಯನ್ನು ಕೇವಲ ಒಂದು ಸಾಧನವಾಗಿ ಬಳಸಿ; ನಿಮ್ಮ ಸೃಜನಶೀಲತೆಗೆ ಹೆಚ್ಚಿನ ಒತ್ತು ನೀಡುವುದು ಒಳ್ಳೆಯದು. ಮನುಷ್ಯನ ಕಲ್ಪನೆಗೆ ಅನಂತವೇ ಮಿತಿ ಆಗಿರುವುದರಿಂದ ಎ.ಐ ಟೂಲ್ಗಳನ್ನು ಆ ಕಲ್ಪನೆಗಳಿಗೆ ಸಾಣೆ ಹಿಡಿಯುವ ಸಾಧನಗಳಾಗಿ ಮಾತ್ರ ಬಳಸುವುದು ಉತ್ತಮ. ಕೆಳಗೆ ನೀಡಲಾಗಿರುವ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡು ಅತ್ಯುತ್ತಮ ಕೃತಿ ರಚಿಸಿ ಸೂಪರ್ ಸಾಹಿತಿಯಾಗಿ ಕಥಾವಸ್ತು ಮತ್ತು ಪಾತ್ರಪೋಷಣೆ: (1) ಒಂದು ಕಥಾವಸ್ತು/ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿಸುವುದು ಹೇಗೆ? (2) ಉಪಕತೆಗಳು ಮತ್ತು ಪಾತ್ರಪೋಷಣೆ ಮಾಡುವುದು ಹೇಗೆ? ನಿರ್ದಿಷ್ಟ ಪ್ರಕಾರದ ಕತೆಗಳನ್ನು ಬರೆಯುವಿಕೆ: (1) ಪ್ರೀತಿ-ಪ್ರೇಮ ವಿಷಯಾಧಾರಿತ ಕತೆಗಳನ್ನು ಆಸಕ್ತಿದಾಯಕವಾಗಿ ರಚಿಸುವುದು ಹೇಗೆ? (2) ಕೌಟುಂಬಿಕ, ಸಾಮಾಜಿಕ, ಮಹಿಳಾ ಕೇಂದ್ರಿತ ಕೃತಿಗಳನ್ನು ಆಸಕ್ತಿದಾಯಕವಾಗಿ ಹೇಗೆ ರಚಿಸಬಹುದು? (3) ಕಾಲ್ಪನಿಕ(ಫ್ಯಾಂಟಸಿ), ರಹಸ್ಯ, ಭಯಾನಕ ವಿಷಯಾಧಾರಿತ ಕತೆಗಳನ್ನು ಕುತೂಹಲಕಾರಿಯಾಗಿ ರಚಿಸುವುದು ಹೇಗೆ? (4) ಥ್ರಿಲ್ಲರ್ ಧಾರಾವಾಹಿಗಳನ್ನು ಕೌತುಕಭರಿತವಾಗಿಸುವುದು ಹೇಗೆ?? ಬರವಣಿಗೆಯ ತಂತ್ರಗಳು: (1) ನಿರೂಪಣಾ ಶೈಲಿ ಮತ್ತು ಸನ್ನಿವೇಶಗಳ ಸೃಷ್ಟಿ, ಘಟನೆಗಳನ್ನು ಜೋಡಿಸುವುದು ಹೇಗೆ? (2) ಅಧ್ಯಾಯಗಳ ರೂಪುರೇಷೆ ಮತ್ತು ಸನ್ನಿವೇಶಗಳನ್ನು ಬರೆಯುವ ವಿಧಾನ (3) ಸಂಭಾಷಣಾ ಶೈಲಿ ಮತ್ತು ಕೃತಿಯ ಮೊದಲ ಅಧ್ಯಾಯವನ್ನು ಆರಂಭಿಸುವ ಬಗೆ (4) ತಿರುವುಗಳು ಮತ್ತು ಕಥಾ ಕೊಂಡಿಗಳನ್ನು ಬಳಸುವುದು; ಕತೆಯನ್ನು ಅಂತ್ಯಗೊಳಿಸುವ ಪರಿ (5) ವಿವಿಧ ಭಾವನೆಗಳನ್ನು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ? ಯೋಜನೆ ರೂಪಿಸುವಿಕೆ ಮತ್ತು ಬರೆಯುವಾಗ ಎದುರಾಗುವ ಸಮಸ್ಯೆಗಳಿಗೆ ಪರಿಹಾರ: (1) ಸತತವಾಗಿ ಬರೆಯಲು ವೇಳಾಪಟ್ಟಿ ತಯಾರಿಸುವುದು ಹೇಗೆ? (2) ಬರೆಯುವಾಗ ಎದುರಾಗುವ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಪ್ರತಿಲಿಪಿಯಲ್ಲಿ ಸುದೀರ್ಘ ಧಾರಾವಾಹಿಗಳನ್ನು ಬರೆಯುವುದರ ಪ್ರಯೋಜನ: (1) ಪ್ರತಿಲಿಪಿಯು ತನ್ನ ಬರಹಗಾರರಿಗೆ ಸುದೀರ್ಘ ಕೃತಿಗಳನ್ನು ರಚಿಸಲು ಏಕೆ ಪ್ರೇರೇಪಿಸುತ್ತದೆ? (2) ಟ್ರೆಂಡಿಂಗ್ ಧಾರಾವಾಹಿಗಳ ವಿಶ್ಲೇಷಣೆ (3) ಓದುಗರನ್ನು ಆಕರ್ಷಿಸಬಲ್ಲ ವಿವಿಧ ಬಗೆಯ ಪ್ರಚಾರ ತಂತ್ರಗಳು (4) ಪ್ರತಿಲಿಪಿ ಶಿಫಾರಸ್ಸು ವ್ಯವಸ್ಥೆ(ರೆಕಮಂಡೇಶನ್ ಸಿಸ್ಟಂ) ಹೇಗೆ ಕಾರ್ಯ ನಿರ್ವಹಿಸುತ್ತದೆ? (5) ಪ್ರೀಮಿಯಂ ಧಾರಾವಾಹಿಗಳಿಂದ ಮಾಸಿಕ ಆದಾಯ ಗಳಿಸುವ ಬಗೆ (6) ಸೀಸನ್ಗಳನ್ನು ಬರೆಯುವಿಕೆ (7) ದೀರ್ಘ ಧಾರಾವಾಹಿಗಳನ್ನು ರಚಿಸುವುದರ ಪ್ರಯೋಜನಗಳು ಧಾರಾವಾಹಿಗಳನ್ನು ರಚಿಸುವ ಕುರಿತು ವಿಶೇಷ ಮಾಹಿತಿ ಮತ್ತು ಆನ್ಲೈನ್ ತರಬೇತಿಯ ರೆಕಾರ್ಡಿಂಗ್'ಗಳನ್ನು ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: 1. ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2. ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0 3. ಪ್ರತಿಲಿಪಿ ಕ್ರಿಯೇಟರ್ಸ್ ಪ್ರೋಗ್ರಾಮ್ ಇಂದಿನಿಂದಲೇ ಯೋಜನೆಯನ್ನು ರೂಪಿಸಲು ಆರಂಭಿಸಿ! ಈ ರೀತಿಯಾಗಿ ಯೋಜನೆ ರೂಪಿಸಿಕೊಳ್ಳಲು 4-5 ದಿನಗಳ ಕಾಲಾವಕಾಶ ಬೇಕಾಗಬಹುದು. ಆದರೆ ಈ ಯೋಜನೆ ನಿಮ್ಮ ಕಥಾರಚನೆಗೆ ಖಂಡಿತವಾಗಿ ಸಹಾಯ ಮಾಡುತ್ತದೆ. ಈ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿ, ದೀರ್ಘ ಧಾರಾವಾಹಿ ಬರವಣಿಗೆ ನಿಮಗೆ ಎಷ್ಟು ಸರಳ ಮತ್ತು ಸುಲಭವಾಗಿ ತೋರುತ್ತದೆ ಎಂಬುದನ್ನು ನೀವು ಮನಗಾಣುವಿರಿ. ಇದು ಸ್ಪರ್ಧೆಯ ಮುಕ್ತಾಯದ ದಿನಾಂಕದೊಳಗೆ ನಿಗದಿತ ಅಧ್ಯಾಯಗಳನ್ನು ಸುಲಭವಾಗಿ ಪ್ರಕಟಿಸಲು ಉತ್ತಮ ವಿಧಾನ. ಭಾರತದ ಅತಿದೊಡ್ಡ ಕಥಾಸ್ಪರ್ಧೆಯಾದ ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8 ರಲ್ಲಿ ಭಾಗವಹಿಸಿ! ಶುಭವಾಗಲಿ! ಪ್ರತಿಲಿಪಿ ಸ್ಪರ್ಧಾ ವಿಭಾಗಇನ್ನೂ ಹೆಚ್ಚು ತೋರಿಸಿ
- ಸೂಪರ್ ಸಾಹಿತಿ ಅವಾರ್ಡ್ಸ್ | ಸೀಸನ್ 8 | FAQ ಬ್ಲಾಗ್09 मई 20241. ಈ ಸ್ಪರ್ಧೆಯಲ್ಲಿ ಯಾರು ಭಾಗವಹಿಸಬಹುದು? ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಅಥವಾ ಹೊಂದಿರದ ಎಲ್ಲಾ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. 2. ನನ್ನ ಧಾರಾವಾಹಿಯಲ್ಲಿ ಮುನ್ನುಡಿ, ಪಾತ್ರ ಪರಿಚಯ ಅಥವಾ ಹೆಚ್ಚುವರಿ ಟಿಪ್ಪಣಿಗಳನ್ನು ಪ್ರತ್ಯೇಕ ಅಧ್ಯಾಯಗಳಾಗಿ ಪ್ರಕಟಿಸುವುದನ್ನು ನಾನು ಏಕೆ ತಪ್ಪಿಸಬೇಕು? ನಿಮ್ಮ ಧಾರಾವಾಹಿಯಲ್ಲಿ ಮುನ್ನುಡಿ, ಪಾತ್ರ ಪರಿಚಯ ಮತ್ತು ಹೆಚ್ಚುವರಿ ಟಿಪ್ಪಣಿಗಳನ್ನು ಪ್ರತ್ಯೇಕ ಅಧ್ಯಾಯಗಳಾಗಿ ಪ್ರಕಟಿಸುವುದನ್ನು ತಪ್ಪಿಸುವುದು ಏಕೆ ಉತ್ತಮ ಎಂಬುದು ಇಲ್ಲಿದೆ: (1) ರೀಡರ್ ಎಂಗೇಜ್ಮೆಂಟ್: ಮುಖ್ಯ ಕಥೆಯು ಮೊದಲ ಅಧ್ಯಾಯದಲ್ಲಿ ತಕ್ಷಣವೇ ಪ್ರಾರಂಭವಾಗಬೇಕೆಂದು ಓದುಗರು ನಿರೀಕ್ಷಿಸುತ್ತಾರೆ. ಧಾರಾವಾಹಿಯ ಭಾಗವಾಗಿ ಅಗತ್ಯವಿಲ್ಲದ ವಿಷಯವನ್ನು ಪ್ರಕಟಿಸುವುದರಿಂದ ಕಥೆಯನ್ನು ಓದುವ ಆಸಕ್ತಿಯನ್ನು ಓದುಗರು ಕಳೆದುಕೊಳ್ಳಬಹುದು. (2) ಸಲಹೆ: ನೀವು ಬಯಸಿದರೆ ನಿಮ್ಮ ಮೊದಲ ಅಧ್ಯಾಯವನ್ನು 4-5 ಸಾಲುಗಳ ಮುನ್ನುಡಿ ಅಥವಾ ಪರಿಚಯದೊಂದಿಗೆ ಪ್ರಾರಂಭಿಸಬಹುದು, ನಂತರ ನಿಮ್ಮ ಓದುಗರನ್ನು ಸೆಳೆಯಲು ನಿಮ್ಮ ಕಥೆಯ ಮೊದಲ ದೃಶ್ಯವನ್ನು ನೇರವಾಗಿ ಪ್ರಾರಂಭಿಸಿ. 3. ನನ್ನ ಧಾರಾವಾಹಿಯನ್ನು ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಸೇರಿಸುವುದು ಹೇಗೆ? ನೀವು ಹೊಸ ಧಾರಾವಾಹಿಯನ್ನು ರಚಿಸುವಾಗ ಮೊದಲ 15 ಅಧ್ಯಾಯಗಳು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸಲ್ಪಡುವುದಿಲ್ಲ ಅಂದರೆ ಲಾಕ್ ಆಗುವುದಿಲ್ಲ. 16 ನೆಯ ಅಧ್ಯಾಯ ಪ್ರಕಟಗೊಂಡಾಗ ನಿಮ್ಮ ಧಾರಾವಾಹಿ ತಾನಾಗಿಯೇ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸಲ್ಪಡುತ್ತದೆ. ಮೊದಲ 15 ಅಧ್ಯಾಯಗಳು ಪ್ರಕಟಗೊಂಡಾಗ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಆಯ್ಕೆ ನಿಮಗೆ ಕಾಣಿಸುವುದಿಲ್ಲ. 16 ನೆಯ ಅಧ್ಯಾಯದ ನಂತರ ನಿಮಗೆ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಆಯ್ಕೆ ಕಾಣಿಸುತ್ತದೆ. 16 ನೆಯ ಅಧ್ಯಾಯದಿಂದ ಎಲ್ಲಾ ಅಧ್ಯಾಯಗಳು ಲಾಕ್ ಆಗಲ್ಪಡುತ್ತವೆ ಮತ್ತು ಶಾಶ್ವತವಾಗಿ ಪ್ರತಿಲಿಪಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತವೆ. ಪ್ರೀಮಿಯಂ ಚಂದಾದಾರಿಕೆ, ನಾಣ್ಯಗಳನ್ನು ನೀಡುವಿಕೆ ಅಥವಾ ಮರುದಿನದವರೆಗೆ ಕಾಯುವುದರ ಮೂಲಕ ಓದುಗರು ನಿಮ್ಮ ಧಾರಾವಾಹಿಯ ಅಧ್ಯಾಯಗಳನ್ನು ಅನ್ಲಾಕ್ ಮಾಡಲು ಸಾಧ್ಯವಾಗುತ್ತದೆ. 4. ನಾನು ಗೋಲ್ಡನ್ ಬ್ಯಾಡ್ಜ್ ಹೊಂದಿಲ್ಲ, ಏನು ಮಾಡಬೇಕು? ನೀವು ಗೋಲ್ಡನ್ ಬ್ಯಾಡ್ಜ್ ಹೊಂದಿಲ್ಲದಿದ್ದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯ ಕಾಲಾವಕಾಶದಲ್ಲಿ ನೀವು ಗೋಲ್ಡನ್ ಬ್ಯಾಡ್ಜ್ ಪಡೆದರೆ ನಿಮ್ಮ ಕೃತಿ 15 ಅಧ್ಯಾಯಗಳ ನಂತರ ಸ್ವಯಂಚಾಲಿತವಾಗಿ ಪ್ರತಿಲಿಪಿ ಪ್ರೀಮಿಯಂಅನ್ನು ಸೇರುತ್ತದೆ. ಒಂದೊಮ್ಮೆ ನಿಮ್ಮ ಕೃತಿ ಸ್ವಯಂಚಾಲಿತವಾಗಿ ಪ್ರೀಮಿಯಂಗೆ ಸೇರ್ಪಡೆಯಾಗದಿದ್ದರೆ, 16 ನೆಯ ಅಧ್ಯಾಯದ ನಂತರ ನೀವು ಈ ಕೆಳಗಿನ ವಿಧಾನವನ್ನು ಅನುಸರಿಸುವುದರ ಮೂಲಕ ಕೃತಿಯನ್ನು ಪ್ರೀಮಿಯಂಗೆ ಸೇರಿಸಬಹುದು: 1: ಪ್ರತಿಲಿಪಿ ಅಪ್ಲಿಕೇಶನ್ನಿನ ಹೋಂ ಪೇಜಿನಲ್ಲಿ ಕಾಣುವ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 2: ನಿಮ್ಮ ಕೃತಿಯನ್ನು ಎಡಿಟ್ ಮಾಡುವಲ್ಲಿಗೆ ಹೋಗಿ, ಇತರೆ ಮಾಹಿಗಳನ್ನು ಎಡಿಟ್ ಮಾಡಿ ಎನ್ನುವಲ್ಲಿಗೆ ಹೋಗಿ; 3: ಸಬ್ಸ್ಕ್ರಿಪ್ಷನ್ ಸೌಲಭ್ಯಕ್ಕೆ ಸೇರಿಸಿ ಎಂಬಲ್ಲಿ ಹೌದು ಎಂದು ಆಯ್ಕೆ ಮಾಡಿ. ನಿಮ್ಮ ಕೃತಿ 24 ಗಂಟೆಗಳಲ್ಲಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತದೆ. 5. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವುದು ಹೇಗೆ? ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಸಾಹಿತಿಯಾಗಲು ಎರಡು ಮಾನದಂಡಗಳಿವೆ: 1. ನೀವು ಕನಿಷ್ಠ 200 ಹಿಂಬಾಲಕರನ್ನು ಹೊಂದಿರಬೇಕು. ನಂತರ; 2. ನೀವು ಹಿಂದಿನ 30 ದಿನಗಳಲ್ಲಿ ಕನಿಷ್ಠ 5 ಬರಹಗಳನ್ನು ಪ್ರಕಟಿಸರಬೇಕು. 6. ನನ್ನ ಕೃತಿ ಸ್ಪರ್ಧೆಗೆ ಪರಿಗಣಿತವಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ನಿಮ್ಮ ಕೃತಿ ಸ್ಪರ್ಧೆಗೆ ಪರಿಗಣಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು: (1) ಸ್ಪರ್ಧೆಯ ಕಾಲಾವಧಿಯ ಒಳಗೆ ನಿಮ್ಮ ಧಾರಾವಾಹಿಯ ಎಲ್ಲಾ ಅಧ್ಯಾಯಗಳನ್ನು ಪ್ರಕಟಿಸಬೇಕು: ಸ್ಪರ್ಧೆಯ ಪ್ರಾರಂಭ ಮತ್ತು ಮುಕ್ತಾಯದ ದಿನಾಂಕದೊಳಗೆ ನಿಮ್ಮ ಧಾರಾವಾಹಿಯ ಎಲ್ಲಾ ಅಧ್ಯಾಯಗಳು ಪ್ರಕಟಗೊಂಡು, ಪೂರ್ಣಗೊಂಡಿರಬೇಕು ಮತ್ತು ಕನಿಷ್ಠ 80 ಅಧ್ಯಾಯಗಳನ್ನು ಹೊಂದಿರಬೇಕು. ಪ್ರತಿ ಅಧ್ಯಾಯ ಕನಿಷ್ಠ 1000 ಪದಗಳನ್ನು ಹೊಂದಿರಬೇಕು. ಗರಿಷ್ಠ ಪದಸಂಖ್ಯೆಗೆ ಯಾವುದೇ ಮಿತಿಯಿಲ್ಲ. (2) ಸ್ಪರ್ಧೆಯ ಪ್ರಭೇದವನ್ನು ಆಯ್ಕೆ ಮಾಡಬೇಕು: ನಿಮ್ಮ ಕೃತಿಯನ್ನು ಪ್ರಕಟಿಸುವಾಗ ಸ್ಪರ್ಧೆಯ ಪ್ರಭೇದ ಸೂಪರ್ ಸಾಹಿತಿ- 8ನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು. (3) ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು: ಸ್ಪರ್ಧೆಯ ವಿವರಗಳಲ್ಲಿ ನೀಡಿರುವ ಎಲ್ಲಾ ಮಾಹಿತಿಗಳನ್ನು, ನಿಯಮಗಳನ್ನು ಗಮನವಿಟ್ಟು ಓದಿ, ಅರ್ಥೈಸಿಕೊಂಡು ಎಲ್ಲಾ ನಿಯಮಗಳನ್ನು ಪಾಲಿಸಿ ನಿಮ್ಮ ಕೃತಿಯನ್ನು ಪ್ರಕಟಿಸಬೇಕು. 7. ಸ್ಪರ್ಧೆಯ ವಿಜೇತ ಕೃತಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಸ್ಪರ್ಧೆಯ ಮುಕ್ತಾಯದ ದಿನದ ನಂತರ, ಸ್ಪರ್ಧೆಯ ಪ್ರಭೇದದ ಅಡಿಯಲ್ಲಿ ಪ್ರಕಟಿಸಲ್ಪಟ್ಟ ಎಲ್ಲಾ ಕೃತಿಗಳನ್ನು ನಮ್ಮ ತಂಡ ನಮ್ಮ ಸಿಸ್ಟಂ ಸಹಾಯದಿಂದ ಸಂಗ್ರಹಿಸುತ್ತದೆ. ಸಲ್ಲಿಸಲ್ಪಟ್ಟ ಕೃತಿಗಳ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿರುವುದರ ಬಗ್ಗೆ ನಮ್ಮ ತಂಡ ಪರಿಶೀಲಿಸುತ್ತದೆ. ನಂತರ ನಮ್ಮ ನಿರ್ಣಾಯಕರ ಹಾಗೂ ಸಂಪಾದಕರ ತಂಡ ಕೃತಿಯನ್ನು ಓದಿ; ಭಾಷೆ, ವ್ಯಾಕರಣ, ಕಥಾವಸ್ತು, ಕಥಾಹಂದರ, ಸೃಜನಶೀಲತೆ ಮುಂತಾದ ಮಾನದಂಡಗಳನ್ನು ಆಧರಿಸಿ ವಿಜೇತ ಕೃತಿಗಳನ್ನು ಆಯ್ಕೆ ಮಾಡುತ್ತದೆ. 8. ನಾನು ಈಗಾಗಲೇ ಪ್ರಕಟಿಸಿರುವ ಕೃತಿಯ ಮುಂದಿನ ಸೀಸನ್ಅನ್ನು ಸ್ಪರ್ಧೆಗಾಗಿ ಪ್ರಕಟಿಸಬಹುದೇ? ಖಂಡಿತ, ನೀವು ಈಗಾಗಲೇ ಪ್ರತಿಲಿಪಿಯಲ್ಲಿ ಪ್ರಕಟಿಸಿರುವ ಯಾವುದೇ ಕತೆಯ ಮುಂದಿನ ಸೀಸನ್ಅನ್ನು ಸ್ಪರ್ಧೆಗಾಗಿ ಪ್ರಕಟಿಸಬಹುದು. ಈಗಾಗಲೇ ಜನಪ್ರಿಯವಾಗಿರುವ ನಿಮ್ಮ ಕತೆಯ ಮುಂದಿನ ಸೀಸನ್ಅನ್ನು ಪ್ರಕಟಿಸುವುದು ಉತ್ತಮ ಯೋಚನೆ. ಆದರೆ ನಿಮ್ಮ ಪ್ರಸ್ತುತ ಕೃತಿ ಹಿಂದಿನ ಕೃತಿಯ ಮೇಲೆಯೇ ಹೆಚ್ಚು ಅವಲಂಬಿತವಾಗಿರದಂತೆ ನೋಡಿಕೊಳ್ಳುವುದು ಉತ್ತಮ; ಸಾಧ್ಯವಾದಷ್ಟು ತೀರ್ಪುಗಾರರಿಗೆ ಸ್ಪರ್ಧೆಗೆ ಸಲ್ಲಿಸಿರುವ ಕೃತಿಗಳನ್ನು ಓದಿ, ಪರಿಶೀಲಿಸಲು, ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು. 9. ನಾನು ಒಂದೇ ಕೃತಿಯನ್ನು ಎರಡು ಸ್ಪರ್ಧೆಗಾಗಿ ಪ್ರಕಟಿಸಬಹುದೇ? ಒಂದು ಕೃತಿ ಒಂದೇ ಸ್ಪರ್ಧೆಗಾಗಿ! ಪ್ರತಿಯೊಂದು ಸ್ಪರ್ಧೆಯ ಉದ್ದೇಶ, ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಹಾಗಾಗಿ ಒಂದು ಕೃತಿಯನ್ನು ಒಂದೇ ಸ್ಪರ್ಧೆಗಾಗಿ ಸಲ್ಲಿಸಬೇಕು. ಒಂದೇ ಕೃತಿಯನ್ನು ಬೇರೆ ಬೇರೆ ಸ್ಪರ್ಧೆಗಳಿಗೆ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ. 10. ಸ್ಪರ್ಧೆಯ ಫಲಿತಾಂಶವನ್ನು ನಾನು ಎಲ್ಲಿ ನೋಡಬಹುದು? ನೀವು ಸ್ಪರ್ಧೆಯ ಫಲಿತಾಂಶದ ವಿವರಗಳನ್ನು ಬ್ಲಾಗ್ ವಿಭಾಗದಲ್ಲಿ ನೋಡಬಹುದು. ಸ್ಪರ್ಧೆಯ ಫಲಿತಾಂಶಗಳು ಆಯಾ ಸ್ಪರ್ಧೆಯ ವಿವರಗಳಲ್ಲಿ ತಿಳಿಸುವ ದಿನಾಂಕದಂದು ಬ್ಲಾಗ್ ವಿಭಾಗದಲ್ಲಿ ಪ್ರಕಟಗೊಳ್ಳುತ್ತವೆ. ಬ್ಲಾಗ್ ವಿಭಾಗಕ್ಕೆ ಹೋಗಲು- 1. ಪ್ರತಿಲಿಪಿಯ ಹೋಂ ಪೇಜ್'ನಲ್ಲಿ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 2. ಆ ಪುಟದ ಕೆಳಗೆ ಅಂಕಿಅಂಶಗಳು, ಅಗ್ರಮಾನ್ಯ ಸಾಹಿತಿಗಳು ಆಯ್ಕೆಯ ಜೊತೆಗೆ ಬ್ಲಾಗ್ ವಿಭಾಗವನ್ನೂ ಕಾಣಬಹುದು. 3. ಬ್ಲಾಗ್ ವಿಭಾಗಕ್ಕೆ ಹೋಗಿ ಸ್ಪರ್ಧೆಯ ಫಲಿತಾಂಶವನ್ನು ವೀಕ್ಷಿಸಬಹುದು. ನೀವು ಯಾವುದೇ ಸಮಸ್ಯೆ, ಅನುಮಾನಗಳನ್ನು ಹೊಂದಿದ್ದಲ್ಲಿ [email protected] ಗೆ ಈಮೇಲ್ ಕಳುಹಿಸಿ. ನಮ್ಮ ತಂಡ 24 ಗಂಟೆಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಲು ಪ್ರಯತ್ನಿಸುತ್ತದೆ. ಸಾವಿರಾರು ಲೇಖಕರು ಈಗಾಗಲೇ ನಮ್ಮ ಪ್ಲಾಟ್ಫಾರ್ಮ್ನಲ್ಲಿ ತಮ್ಮ ಕೃತಿಗಳ ಪ್ರಕಟಣೆಯ ಮೂಲಕ ಯಶಸ್ಸನ್ನು ಕಂಡುಕೊಂಡಿದ್ದಾರೆ, ತಮ್ಮ ಪ್ರತಿಭೆಯನ್ನು ಆಕರ್ಷಕ ಕಥೆಗಳಾಗಿ ಪರಿವರ್ತಿಸಿ ಆ ಮೂಲಕ ಪ್ರತಿ ತಿಂಗಳೂ ಆದಾಯವನ್ನು ಗಳಿಸುತ್ತಿದ್ದಾರೆ. ನೀವೂ ಅವರೊಳಗೊಬ್ಬರಾಗಲು ಇಲ್ಲಿದೆ ಅವಕಾಶ! ಸ್ಪರ್ಧೆಯಲ್ಲಿ ಭಾಗವಹಿಸಿ ಸಾಹಿತ್ಯ ಲೋಕದಲ್ಲಿ ನಿಮ್ಮದೇ ಛಾಪು ಮೂಡಿಸುವ ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ! ಶುಭವಾಗಲಿ! ಪ್ರತಿಲಿಪಿ ಸ್ಪರ್ಧಾ ವಿಭಾಗಇನ್ನೂ ಹೆಚ್ಚು ತೋರಿಸಿ
- ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯ ‘ಶ್ರೀಮತಿ ಎಚ್. ಜಿ. ರಾಧಾದೇವಿ ಸ್ಮರಣ ಪುರಸ್ಕಾರ’ - ವಿಜೇತರಿಗೆ ಅಭಿನಂದನೆಗಳು!11 अप्रैल 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಸೂಪರ್ ಸಾಹಿತಿ ಅವಾರ್ಡ್ಸ್-6 ಸ್ಪರ್ಧೆಯಲ್ಲಿ ವಿಶೇಷವಾಗಿ, ಕನ್ನಡದ ಖ್ಯಾತ ಕಾದಂಬರಿಕಾರ್ತಿ ಶ್ರೀಮತಿ ಎಚ್. ಜಿ. ರಾಧಾದೇವಿಯವರ ಸ್ಮರಣಾರ್ಥ ಪುರಸ್ಕಾರ ವಿಭಾಗವನ್ನು ಪರಿಚಯಿಸಲಾಗಿತ್ತು. ಶ್ರೀಮತಿ ಎಚ್. ಜಿ. ರಾಧಾದೇವಿಯವರ ಪುತ್ರಿ ಶ್ರೀಮತಿ ಶ್ರೀಲಕ್ಷ್ಮಿ, ವೀಣಾ ನಾಯಕ್ ಮತ್ತು ಅವರ ಬಳಗದ 11 ತೀರ್ಪುಗಾರರು ಸ್ಪರ್ಧೆಯ ಕೃತಿಗಳನ್ನು ಓದಿ ಶ್ರೀಮತಿ ಎಚ್. ಜಿ. ರಾಧಾದೇವಿ ಸ್ಮರಣ ಪುರಸ್ಕಾರ ವಿಭಾಗದ ವಿಜೇತ ಕೃತಿಗಳನ್ನು ಆಯ್ಕೆ ಮಾಡಿರುತ್ತಾರೆ. ಎಲ್ಲಾ ವಿಜೇತರಿಗೂ ಅಭಿನಂದನೆಗಳು. ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯಲ್ಲಿ ಈ ವಿಶೇಷ ಬಹುಮಾನವನ್ನು ಘೋಷಿಸಿ ನಮ್ಮೊಂದಿಗೆ ಕೈ ಜೋಡಿಸಿರುವ ಶ್ರೀಮತಿ ಶ್ರೀಲಕ್ಷ್ಮಿ ಮತ್ತು ವೀಣಾ ನಾಯಕ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕನ್ನಡದ ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ಎಚ್. ಜಿ. ರಾಧಾದೇವಿಯವರ ಹೆಸರಿನಲ್ಲಿ ನೀಡುತ್ತಿರುವ ಈ ಪುರಸ್ಕಾರವು ಪ್ರತಿಲಿಪಿಯ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಅತ್ಯುತ್ತಮ ಕೃತಿಗಳನ್ನು ನೀಡುವ ಕನಸು ಹೊತ್ತಿರುವ ನೂರಾರು ಯುವ ಲೇಖಕ/ಲೇಖಕಿಯರಿಗೆ ಆಶೀರ್ವಾದಪೂರ್ವಕ ಪ್ರೋತ್ಸಾಹ ನೀಡಿದಂತಾಗುತ್ತದೆ. ಜೊತೆಗೆ ಸ್ಪರ್ಧೆಯ ಕೃತಿಗಳನ್ನು ಕೂಲಂಕಷವಾಗಿ ಓದಿ, ವಿಶ್ಲೇಷಿಸಿ ವಿಜೇತ ಕೃತಿಗಳನ್ನು ಆಯ್ಕೆ ಮಾಡಿರುವ ಎಲ್ಲಾ ತೀರ್ಪುಗಾರರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ವಿಜೇತ ಕೃತಿಗಳ ವಿವರ: ಪ್ರಥಮ ಬಹುಮಾನ: ಪ್ರಖ್ಯಾ ಅವರ ಮೃತ್ಯೋರ್ಮಾ ಅಮೃತಂಗಮಯ ದ್ವಿತೀಯ ಬಹುಮಾನ: ವೀಣಾ ವಿನಾಯಕ ಅವರ ಇಷ್ಟೇ ಸಾಕು ಈ ಜನ್ಮಕೆ ತೃತೀಯ ಬಹುಮಾನ: ಶಿವಶಂಕರ್ ಎಸ್. ಜಿ ಅವರ ಓ..ನನ್ನ ಚೇತನ! ಸಮಾಧಾನಕರ ಬಹುಮಾನಗಳು: 1. ಸವಿತಾ ರಮೇಶ್ ಅವರ ಮೋಹದ ಬಲೆ 2. ಭಾರತಿ ಕೃತಿಕಾ ಅವರ ನೀನಿಲ್ಲದೆ 3. ನಯನಾ ಭಟ್ ಅವರ ಅನ್ವೇಷಣೆ ನನ್ನೊಲವ ಹುಡುಕಾಟದಲ್ಲಿ 4. ರಮ್ಯಾ ವಿಜಿತ್ ಅವರ ಯದ್ಭಾವಂ ತದ್ಭವತಿ 5. ಅನಿತಾ ಹೆಚ್. ಅವರ ಈ ಪ್ರೀತಿ ಒಂಥರಾ ಸ್ಪರ್ಧೆಯ ವಿಜೇತ ಕೃತಿಗಳ ಕುರಿತು ಆಯೋಜಕರು ಮತ್ತು ತೀರ್ಪುಗಾರರ ಅನಿಸಿಕೆ: ಪ್ರಿಯ ಸ್ನೇಹಿತರೇ, ಖ್ಯಾತ ಲೇಖಕಿ ಶ್ರೀಮತಿ H G ರಾಧಾದೇವಿಯವರ ಹೆಸರಿನಲ್ಲಿ 2019ರಿಂದ ಫೇಸ್ಬುಕ್ ನ ವಿವಿಧ ಸಾಹಿತ್ಯದ ಗ್ರೂಪ್ಗಳಲ್ಲಿ ಕಥಾ ಸ್ಪರ್ಧೆ ನಡೆಸುತ್ತಾ ಬಂದಿದ್ದೆವು. ನಮ್ಮ ತಾಯಿಯವರ ಸಾಹಿತ್ಯದ ಮಾಧ್ಯಮ ಕಾದಂಬರಿ ಆದ್ದರಿಂದ ಕಾದಂಬರಿ ಪ್ರಕಾರದಲ್ಲಿ ಪ್ರತಿಭಾನ್ವಿತ ಉದಯೋನ್ಮುಖ ಲೇಖಕರಿಗೆ ಪ್ರೋತ್ಸಾಹ ಕೊಡುವ ವಿಚಾರ ತಲೆಯಲ್ಲಿ ಬಂತು. ಈ ದಿಸೆಯಲ್ಲಿ ನನ್ನ ಉದ್ದೇಶಕ್ಕೆ ಒತ್ತಾಸೆಯಾಗಿ ನಿಂತದ್ದು ಪ್ರತಿಲಿಪಿ. ಲಕ್ಷಾಂತರ ಓದುಗರು ಹಾಗು ಸಾವಿರಾರು ಬರಹಗಾರರನ್ನು ಒಳಗೊಂಡ ಪ್ರತಿಲಿಪಿ ಸಂಸ್ಥೆಯವರು ತಮ್ಮ 'ಸೂಪರ್ ಸಾಹಿತಿ ಅವಾರ್ಡ್ಸ್ - 6' ಸ್ಪರ್ಧೆಗೆ ಬಂದ ಕಾದಂಬರಿಗಳನ್ನು ನಮಗೆ ಕೊಟ್ಟರು. ನನ್ನ ಸಾಹಿತ್ಯ ಸಂಬಂಧಿ ಪ್ರತಿಯೊಂದು ಕಾರ್ಯಗಳಲ್ಲೂ ಕೈ ಜೋಡಿಸಿ, ನನಗೆ ಬೆಂಬಲ ನೀಡುವ ಶ್ರೀಮತಿ ವೀಣಾ ನಾಯಕ್ ಮೇಡಂ ಅವರು ಈ ಬಾರಿ ಸಹಾ ನನ್ನೊಂದಿಗೆ ಇದ್ದಾರೆ. ಅವರು ತಾವಾಗಿಯೇ ಒಂದು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಅಂತೆಯೇ ನಮ್ಮ ಸ್ಪರ್ಧೆಯ ದ್ವಿತೀಯ ಬಹುಮಾನದ ಪ್ರಾಯೋಜಕರು ಶ್ರೀಮತಿ ವೀಣಾ ನಾಯಕ್ ಅವರು. ನಮ್ಮ ಈ ಕಾರ್ಯ ಯಶಸ್ವಿಯಾಗಲು ನಮ್ಮೊಂದಿಗೆ ಕೈ ಜೋಡಿಸಿದ ನಮ್ಮ ತೀರ್ಪುಗಾರರಿಗೂ ಅನಂತ ಧನ್ಯವಾದಗಳು. ಈ ಕಾದಂಬರಿಗಳನ್ನು ಓದಿ, ಪ್ರತಿಯೊಂದು ಕೃತಿಯಲ್ಲಿನ ಉತ್ತಮ ಅಂಶಗಳನ್ನು ಪಟ್ಟಿಮಾಡಿ, ಅಂಕಗಳನ್ನು ಕೊಟ್ಟು ಬಹುಮಾನಕ್ಕಾಗಿ ಆಯ್ಕೆ ಮಾಡಿದ ನಮ್ಮ ತೀರ್ಪುಗಾರ್ತಿಯರು- 1. ಶ್ರೀಮತಿ ಮಾಲತಿ ಮುದಕವಿ 2. ಶ್ರೀಮತಿ ವಿದ್ಯಾ ಶಿರಹಟ್ಟಿ 3. ಶ್ರೀಮತಿ ರಾಧಾ ಶ್ಯಾಮರಾವ್ 4. ಶ್ರೀಮತಿ ಕವಿತಾ ಅಭಯಂ 5. ಶ್ರೀಮತಿ ಇಂದಿರಾ ಪ್ರಸಾದ್ 6. ಶ್ರೀಮತಿ ಉಷಾ ಗದ್ದಗಿಮಠ 7. ವಿನುತಾ ಹಂಚಿನಮನಿ 8. ಪುಷ್ಪಾ ಹಾಲಭಾವಿ 9. ನಳಿನಿ ಭೀಮಪ್ಪ 10. ದೀಪಿಕಾ ಚಾಟೆ 11. ಶ್ರೀಮತಿ ಅನುಪಮಾ ರವೀಂದ್ರನಾಥ್ ಸಕಾಲದಲ್ಲಿ ಇಷ್ಟೆಲ್ಲ ಕೃತಿಗಳನ್ನು ಓದಿ, ವಿಶ್ಲೇಷಿಸಿದ ನಮ್ಮ ಎಲ್ಲಾ ತೀರ್ಪುಗಾರ್ತಿಯರಿಗೆ ನಮನಗಳು. ಸ್ಪರ್ಧೆಗೆ ಬಂದ ಕೃತಿಗಳ ಓದು ಒಂದು ಅತ್ಯಂತ ವಿಭಿನ್ನ ವಿಶಿಷ್ಟ ಅನುಭವ ಕೊಟ್ಟಿತು. ಬಹುತೇಕ ಲೇಖಕ/ಲೇಖಕಿಯರ ಪ್ರಯತ್ನ ಉತ್ತಮವಾಗಿದೆ. ಹೊಸ ಮಾದರಿಯ ಕಥಾವಸ್ತು, ನಿರೂಪಣೆಯಲ್ಲಿ ಹೊಸತನ, ಇಂದಿನ ಸಮಾಜದ ಸಮಸ್ಯೆಗಳ ದರ್ಶನ ಇತ್ಯಾದಿ ಪ್ರತಿಯೊಂದರಲ್ಲೂ ನವೀನತೆ ಇದೆ. ಇನ್ನು ಬಹುಮಾನ ವಿಜೇತ ಕೃತಿಗಳ ವಿವರ- ಮೊದಲ ಬಹುಮಾನ ಪಡೆದ ಪ್ರಖ್ಯಾ ಅವರ ಮೃತ್ಯೋರ್ಮ ಅಮೃತಂಗಮಯ ಕಾದಂಬರಿಯ ವಸ್ತುವಿಷಯವಾದ ಸಸ್ಯ ಶಾಸ್ತ್ರ, ಕಾಪಿ ರೈಟ್ ಆಕ್ಟ್ ವಗೈರೆ ವಿಷಯವೂ ಹೊಸದು. ಅದನ್ನು ಪ್ರಸ್ತುತ ಪಡಿಸಿರುವ ರೀತಿ ಕೂಡ ಚೆನ್ನಾಗಿದೆ. ನಡು ನಡುವೆ ಇರುವ ಟ್ವಿಸ್ಟ್ ಗಳೂ ಕಥೆಯ ಆಕರ್ಷಣೆ ಹೆಚ್ಚಿಸಿವೆ ಆದ್ದರಿಂದಲೇ ಈ ಕಾದಂಬರಿಗೆ ಪ್ರಥಮ ಬಹುಮಾನ. ಇನ್ನು ಎರಡನೇ ಬಹುಮಾನ ಪಡೆದ ವೀಣಾ ವಿನಾಯಕ್ ಅವರ ಇಷ್ಟೇ ಸಾಕು ಈ ಜನ್ಮಕೆ ಕಾದಂಬರಿಯ ಶೈಲಿ ತುಂಬಾನೇ ಚೆನ್ನಾಗಿದೆ . ಮಲೆನಾಡಿನ ಬದುಕಿನ ಸರಳ ಸುಂದರ ಚಿತ್ರಣ. ಸಿರಿವಂತ, ಬಡ ಕುಟುಂಬ, ಹಳ್ಳಿ - ಪಟ್ಟಣ, ಆಧುನಿಕ - ಸಾಂಪ್ರದಾಯಿಕ ಎರಡೂ ಕುಟುಂಬಗಳ ಚಿತ್ರಣ ಇಲ್ಲಿದೆ. ಮೂರನೇ ಬಹುಮಾನ ಪಡೆದ ಜಿ. ಎಸ್. ಶಿವಶಂಕರ್ ಅವರ ಓ ನನ್ನ ಚೇತನ ಕಾದಂಬರಿಯ ವಸ್ತು ಹಾಗು ನಿರೂಪಣೆ ಎರಡೂ ಹೊಸದು, ಅಮೆರಿಕಾದಲ್ಲಿ ಕೆಲಸ ಮಾಡುವ ಒಬ್ಬ ಭಾರತೀಯ, ಆತ ಭೌತ ಶಾಸ್ತ್ರದ ಪ್ರಾಧ್ಯಾಪಕ. ಪರಕಾಯ ಪ್ರವೇಶವನ್ನು ವೈಜ್ಞಾನಿಕವಾಗಿ ಸಾಧಿಸಿ, ಲೋಕ ಕಲ್ಯಾಣಕ್ಕಾಗಿ ಅದನ್ನು ಬಳಸುವುದು ಈ ಕಥಾವಸ್ತುವಿನ ಪರಿಕಲ್ಪನೆಯೇ ಹೊಚ್ಚ ಹೊಸದು. ಟಿವಿ ವರದಿಗಾರನೊಬ್ಬ ಈ ರಹಸ್ಯದ ಬೆನ್ನು ಹತ್ತಿ ಶೋಧಿಸಲು ಯತ್ನಿಸುವುದು ಕಥೆಗೆ ಕುತೂಹಲಕಾರಿ ಟ್ವಿಸ್ಟ್ ನೀಡಿದೆ. ಈ ಮೂರೂ ಕಾದಂಬರಿಗಳಲ್ಲದೆ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಸಮಾಧಾನ ಬಹುಮಾನಕ್ಕೆ ಪಾತ್ರವಾದ ಐದು ಕಾದಂಬರಿಗಳು ಸಹಾ ಇವೆ. ಸಿಂಗಲ್ ಪೇರೆಂಟ್ ಆಗಿ ಬದುಕಲು ನಿರ್ಧರಿಸುವ ಹೆಣ್ಣಿನ ಸ್ವಾಭಿಮಾನದ ಕಥೆ ಚಿತ್ರಿಸುವ ಸವಿತಾ ರಮೇಶ್ ಅವರ ಮೋಹದ ಬಲೆ. ತೀರ್ಥಯಾತ್ರೆಯ ಸಂದರ್ಭದಲ್ಲಿ ಒಟ್ಟಾದ ಗೃಹಿಣಿಯರ ಕಥೆಗಳ ಗುಚ್ಛವಾದ ಭಾರತಿ ಕೃತ್ತಿಕಾ ಅವರಾ ನೀನಿಲ್ಲದೆ ಕಾದಂಬರಿ; ಇವರೆಲ್ಲರೂ ಮನೆಗಾಗಿ ಏನೆಲ್ಲಾ ಮಾಡಿದರೂ, ಗಂಡನ ಹಾಗು ಸೊಸೆಯಂದಿರು ಅಸಡ್ಡೆಗೆ ಒಳಗಾದವರು. ಆದರೆ ಈಗ ಮಗನ ಸಹಾಯದಿಂದ ಇಲ್ಲಿ ಬಂದು ತಮ್ಮ ವೈಯುಕ್ತಿಕ ಸ್ವಾತಂತ್ರ್ಯ ಎಂಜಾಯ್ ಮಾಡುತ್ತಾರೆ. ಹಾಗು ಮನೆಯವರಿಗೆ ವಿಶೇಷವಾಗಿ ಗಂಡನಿಗೆ ಇವರ ಕೊರತೆ ಅನುಭವವಾಗುವ ಕಥಾ ವಸ್ತುವಿನದು. ನಯನಾ ಭಟ್ ಅವರ ಅನ್ವೇಷಣೆ ಜನ್ಮಾಂತರದ ಪ್ರೇಮಿಗಳ ಕಥೆ. ರಮ್ಯಾ ವಿಜಿತ್ ಅವರ ಯದ್ಭಾವಂ ತದ್ಭವತಿ ಕಾದಂಬರಿಯ ಸಾರಾಂಶ ಬೇರೆಯವರಿಗೆ ಒಳಿತು ಆಶಿಸಿದರೆ, ತಮಗೂ ಒಳಿತೇ ಆಗುತ್ತದೆ ಎನ್ನುವ ನೀತಿ ಇಷ್ಟವಾಯ್ತು. ನಾಯಕಿ ಸರಯುವಿನ ನಿಸ್ವಾರ್ಥ ಮನೋಭಾವ ಹಾಗು ವರ್ಮಾ ಕುಟುಂಬದ ಒಳ್ಳೆತನ ಇಷ್ಟವಾಗುತ್ತದೆ. ಇನ್ನು ಅನಿತಾ ಅವರ ಈ ಪ್ರೀತಿ ಒಂಥರಾ ಕಾದಂಬರಿಯ ಕಥೆಯಲ್ಲಿ ತಾಜಾತನವಿದೆ ಮಾಮೂಲು ಪ್ರೇಮ ಕಥೆಗಳಿಗಿಂತ ಭಿನ್ನವಾಗಿದೆ ಕೂಡ. ಈ ಐದೂ ಕಾದಂಬರಿಕಾರರು ಕಥನ ಕಲೆಯನ್ನು ಇನ್ನೂ ಒಂದಷ್ಟು ಪಳಗಿಸಿಕೊಂಡರೆ ಮತ್ತಷ್ಟು ಎತ್ತರಕ್ಕೆ ಬೆಳೆಯಬಲ್ಲರು. ಇನ್ನು ಸ್ಪರ್ಧೆಗೆ ಬಂದ ಉಳಿದ ಕಾದಂಬರಿಗಳ ಬಗ್ಗೆ ಹೇಳುವುದಾದರೆ, ಬಹಳಷ್ಟು ಬರಹಗಾರರ ಪ್ರಯತ್ನ ಉತ್ತಮವಾಗಿಯೇ ಇತ್ತು. ಕಾದಂಬರಿಯ ವಿಷಯದ ಆಯ್ಕೆಯೇ ಸಾಕು ಇವರೆಲ್ಲ ಇದರಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ ಎನ್ನುವ ಸಾಕ್ಷಿ. ಕೆಲವರು ವ್ಯಾಕರಣದೋಷಗಳು ಹಾಗು ಭಾಷಾ ಶುದ್ಧಿಯ ಕಡೆಗೆ ಇನ್ನಷ್ಟು ಗಮನ ಕೊಡಬೇಕಾಗಿದೆ(ಇದು ಎಲ್ಲರಿಗೂ ಅನ್ವಯಿಸಿ ಹೇಳಿದ್ದಲ್ಲ). ವಿಜೇತರಿಗೆ ಮತ್ತೊಮ್ಮೆ ಅಭಿನಂದನೆಗಳು, ಪ್ರಯತ್ನಿಸಿದವರಿಗೆ ಮುಂದಿನ ಸ್ಪರ್ಧೆಗೆ ಶುಭಹಾರೈಕೆಗಳು. ಸುಂದರ ಸರ್ಟಿಫಿಕೇಟ್ಗಳನ್ನು ಮಾಡಿಕೊಟ್ಟ ಶ್ರೀಮತಿ ವಿದ್ಯಾ ಎಂ ಹೆಗಡೆಯವರಿಗೆ ಧನ್ಯವಾದಗಳು. ಸಹ ಪ್ರಾಯೋಜಕರಾದ ಶ್ರೀಮತಿ ವೀಣಾ ನಾಯಕ್ ಹಾಗು ತೀರ್ಪುಗಾರರಾದ ನಮ್ಮ ಎಲ್ಲಾ ಲೇಖಕಿಯರಿಗೂ ಧನ್ಯವಾದಗಳು. ಕನ್ನಡ ಸಾಹಿತ್ಯವನ್ನು ಎಲೆಕ್ಟ್ರಾನಿಕ್ ಮಾಧ್ಯಮದಲ್ಲೂ ಬೆಳೆಸುತ್ತಿರುವ, ರಾಶಿ ರಾಶಿ ಹೊಸ ಬರಹಗಾರರನ್ನು ಹುಟ್ಟುಹಾಕಿ, ಅವರೆಲ್ಲರಿಗೂ ನಿರಂತರ ಪ್ರೋತ್ಸಾಹ ಕೊಡುತ್ತಿರುವ ಪ್ರತಿಲಿಪಿ ಸಂಸ್ಥೆಗೆ ಅನಂತ ಪ್ರಣಾಮಗಳು.ಇನ್ನೂ ಹೆಚ್ಚು ತೋರಿಸಿ
- ‘ಸೂಪರ್ ಸಾಹಿತಿ ಅವಾರ್ಡ್ಸ್- 6’ ಸ್ಪರ್ಧೆಯ ‘ಪ್ರತಿಭಾವಂತ ಉದಯೋನ್ಮುಖ ಲೇಖಕ'ರಿಗೆ ಅಭಿನಂದನೆಗಳು!09 अप्रैल 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿಯ ಪ್ರತಿಭಾವಂತ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಲು, ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯಲ್ಲಿ ಪ್ರತಿಭಾವಂತ ಉದಯೋನ್ಮುಖ ಲೇಖಕ ಪ್ರಶಸ್ತಿ- ವಿಭಾಗವನ್ನು ಪರಿಚಯಿಸಲಾಗಿತ್ತು. ಸ್ಪರ್ಧೆಗೆ ಬರಹಗಾರರ ಪ್ರತಿಕ್ರಿಯೆ ಉತ್ತಮ ರೀತಿಯಲ್ಲಿ ವ್ಯಕ್ತವಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೃತಿಯ ಮೂಲಕ ಲಕ್ಷಾಂತರ ಓದುಗರನ್ನು ತಲುಪುವ ಅವಕಾಶವನ್ನು ಈ ಎಲ್ಲಾ ಬರಹಗಾರರು ಪಡೆದುಕೊಂಡಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತದೆ. ಪ್ರತಿಲಿಪಿ ಆಯೋಜಿಸಿದ್ದ 'ಸೂಪರ್ ಸಾಹಿತಿ ಅವಾರ್ಡ್ಸ್ 6' ಸ್ಪರ್ಧೆಯಲ್ಲಿ ಭಾಗವಹಿಸಿ 60 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ಪ್ರಕಟಿಸಿರುವ ಎಲ್ಲಾ ಬರಹಗಾರರ ಪರಿಶ್ರಮ, ಬದ್ಧತೆ ಮತ್ತು ಉತ್ಸಾಹ ಮಾದರಿಯಾಗುವಂಥದ್ದು. ಸಹಜವಾಗಿ ಕತೆ ಬರೆಯುವಾಗ ಸಮಯದ ಮಿತಿ ಇರಲಾರದು; ಆಗ ಬರಹಗಾರರಿಗೆ ಸಮಯದ ಸ್ವಾತಂತ್ರ್ಯ ಅಧಿಕವಿರುವುದರಿಂದ ಹೆಚ್ಚು ಒತ್ತಡವಿರದಂತೆ ತಮ್ಮ ಬರವಣಿಗೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ಇರುತ್ತದೆ. ಆದರೆ ಸ್ಪರ್ಧೆ ಎಂದಾಕ್ಷಣ ಇರುವ ಮನೋಭಾವವೇ ಬೇರೆಯಾಗುತ್ತದೆ. ಕಾಲಾವಕಾಶದಿಂದ ಹಿಡಿದು ಅದಕ್ಕೆ ಓದುಗರು ಸ್ಪಂದಿಸುವ ರೀತಿಯವರೆಗೆ ಎಲ್ಲವನ್ನು ಮಸ್ತಿಷ್ಕದಲ್ಲಿಟ್ಟುಕೊಂಡು ತಮ್ಮ ಮೂಲ ಆಲೋಚನೆಗೆ ಧಕ್ಕೆ ಬರದಂತೆ ಕೃತಿಯನ್ನು ರಚಿಸುವುದು ಒಂದು ಯಜ್ಞವೆಂದೇ ಹೇಳಬಹುದು. ಹಾಗಾಗಿ ಸ್ಪರ್ಧೆಯ ಕಾಲಾವಕಾಶದೊಳಗೆ ತಮ್ಮ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು. ಪ್ರತಿಭಾವಂತ ಉದಯೋನ್ಮುಖ ಲೇಖಕರ ಪಟ್ಟಿ- ಕ್ರ. ಸಂ. ಕೃತಿ ಕರ್ತೃ 1 ಜಡ್ಜ್ ಮೆಂಟ್(ಪ್ರೀತಿ ಕುರುಡಲ್ಲ.....) ರಶ್ಮಿ ಮಂಜುನಾಥ್ 2 ಒಡೆದ ಕನ್ನಡಿ ಲತಾ ರವಿ 3 ಗಿಗೋಳೋ (ಗಂಡು ವೇಶ್ಯೆ) ಸಂಜಯ್ ಪಾಟೀಲ್ 4 ಸಿಂಹ ಪುರಿಯ ರಹಸ್ಯ ಮಾಧವಿ ಹೆಬ್ಬಾರ್ 5 ಘರ್ಷಣೆ ರಾಘವ್ ವಿಶ್ವಾಸಿ 6 ಶ್ವೇತ ವರ್ಣ ಕಮಲಾಕ್ಷಿ ಶೆಟ್ಟಿಗಾರ್ 7 ನಿನಗಾಗಿ ನಾನಿಲ್ಲವೇ? ನಿರ್ಮಲಾ ವಿಘ್ನೇಶ್ ಕೋಟ್ಯಾನ್ 8 ನಿಗೂಢ ಶಿಲ್ಪ ಎಸ್. 9 ಸುಗುಣ ಸುವರ್ಣಾ ಭಟ್ 10 ಮಹಿರ ಪುಷ್ಪಲತಾ ಹರೀಶ್ 11 ಸೌಪರ್ಣಿಕ ಆದರ್ಶ ಪಟೇಲ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬರಹಗಾರರು ಸ್ಪರ್ಧೆಯ ಕುರಿತು ಆಸಕ್ತಿ ತೋರಿಸಿ ಇನ್ನಷ್ಟು ಉತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂಬುದು ನಮ್ಮ ಆಶಯ. ಮತ್ತೊಮ್ಮೆ ಎಲ್ಲಾ ಲೇಖಕರಿಗೂ ಅಭಿನಂದನೆಗಳು. - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- 'ಒಲವ ಇಬ್ಬನಿ' ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ29 मार्च 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಒಲವ ಇಬ್ಬನಿ' ಧಾರಾವಾಹಿ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ಪ್ರೀತಿ, ಪ್ರೇಮ, ಸಂಬಂಧಗಳ ನಡುವಿನ ಬಾಂಧವ್ಯವನ್ನು ಪ್ರತಿಬಿಂಬಿಸುವ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 10 ಅಧ್ಯಾಯಗಳ ಕಿರು ಕಥಾಸರಣಿಗಳನ್ನು ರಚಿಸುವ ಸ್ಪರ್ಧೆಯಾಗಿತ್ತು. ಪ್ರತಿಲಿಪಿಯ ಹೊಸ ಬರಹಗಾರರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬರಹಗಾರರು ಈ ಸ್ಪರ್ಧೆಯಲ್ಲಿ ತಮ್ಮ ಕಿರು ಧಾರಾವಾಹಿಯನ್ನು ಪ್ರಕಟಿಸುವುದರ ಮೂಲಕ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವತ್ತ ಒಂದು ಹೆಜ್ಜೆ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಯಾಕೆ ಮುಖ್ಯವಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು! ಸರಳವಾಗಿ ಹೇಳುವುದಾದರೆ, ಬರಹಗಾರರಿಗೆ ತಮ್ಮ ಬರವಣಿಗೆಯ ಮೂಲಕವೇ ಆದಾಯ ಗಳಿಸುವ ಅವಕಾಶ ಪಡೆಯಲು ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಮೊದಲ ಹೆಜ್ಜೆ. ಒಲವ ಇಬ್ಬನಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಬರಹಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ಲಕ್ಷಾಂತರ ಓದುಗರ ಪ್ರೀತಿ, ಅಭಿಮಾನ ಗಳಿಸುವಂತಾಗಲಿ ಎಂದು ನಾವು ಆಶಿಸುತ್ತೇವೆ. ಬರವಣಿಗೆಯ ಕುರಿತು ನಿಮಗಿರುವ ಆಸಕ್ತಿ ಮತ್ತು ನಿಯಮಿತವಾಗಿ ಕೃತಿಗಳನ್ನು ರಚಿಸುವ ಬದ್ಧತೆ ಮುಂದಿನ ದಿನಗಳಲ್ಲಿ ನಿಮಗೆ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಸಹಾಯ ಮಾಡಲಿದೆ. ವಿಜೇತ ಕೃತಿಗಳ ವಿವರ ಪ್ರಥಮ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಇಂದು ಅವರ ಹೇಳದೆ ಉಳಿದ ಮಾತುಗಳು ನೂರು ಕತೆಯ ಕುರಿತು: ವಿಭಿನ್ನ ಕಥಾಹಂದರದೊಂದಿಗೆ ಪ್ರೇಮವನ್ನು ತೆರೆದಿಡುವ ಪ್ರಯತ್ನ, ಬಹಳ ಉತ್ತಮವಾಗಿ ಮೂಡಿಬಂದಿದೆ. ಪ್ರೀತಿಗೆ ಸಾವಿಲ್ಲ ಎನ್ನುವ ಮಾತನ್ನು ಹೇಳಿದ ರೀತಿ ಚೆನ್ನಾಗಿದೆ. ದ್ವಿತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಶ್ರೀನಾಥ್ ಫೇಸ್ಬುಕ್ ಅವರ ಒಲವು ಮೂಡಿದಾಗ ಕತೆಯ ಕುರಿತು: ಮೊದಲ ನೋಟದಲ್ಲಿ ಉಂಟಾದ ಪ್ರೀತಿ ಇದ್ದ ತಡೆಗಳನ್ನೆಲ್ಲ ದಾಟಿಕೊಂಡು ಹೇಗೆ ಸಫಲವಾಯಿತು ಎಂಬುದನ್ನು ಲೇಖಕರು ಈ ಕತೆಯಲ್ಲಿ ಅಚ್ಚುಕಟ್ಟಾಗಿ ಹೇಳಿದ್ದಾರೆ. ತೃತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಆಶ್ರಿತ ಕಿರಣ್ ಅವರ ಒಲಿದ ಜೀವ ಕತೆಯ ಕುರಿತು: ಉತ್ತಮ ಕಥಾಹಂದರದ ಆಯ್ಕೆ, ಮತ್ತು ನಿರೂಪಣೆಯೂ ಹೊಂದಿಕೊಂಡು ಕತೆ ಚೆನ್ನಾಗಿ ಮೂಡಿಬಂದಿದೆ. ಪ್ರೀತಿಯ ದಾಂಪತ್ಯ ಗೀತೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ. ನಾಲ್ಕನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಮಂಗಲಾ ಬಾಡನಟ್ಟಿ ಅವರ ಒಲವೇ ಮಂದಾರ ಐದನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಸುನೀತ ಶೆಟ್ಟಿ ಅವರ ಸನಿಹ ರೋಮಾಂಚನ ಆರನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ರೇಖಾ ರಘು ಅವರ ಒಮ್ಮೊಮ್ಮೆ ಹೀಗೂ ಆಗುವುದು ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು ಕ್ರ. ಸಂ ಕರ್ತೃ ಕೃತಿ 1 ಸುಮಾ ಬೆಳಗೆರೆ ನೀನೆ ನನ್ನ ಜೀವ 2 ಅಶೋಕ್ ಕುಮಾರ್ ಜಿ. ಎಸ್ ಬಾಳಿನೊಲುಮೆ 3 ಪ್ರಶ್ನಾ ನಾರಾಯಣ ರೈ ನಿನಗೂ ಒಲವಾಗುವವರೆಗೆ ಕಾಯುವೆ... 4 ಶಿವಗೀತಾ ಹೃದಯದ ಸಪ್ತಸ್ವರ 5 ಪ್ರಪಂಚ ಪ್ರಣಯದ ದಾರಿಯಲ್ಲಿ ಮಿಹಿಕ ಸಿಂಚನ 6 ತನುಶ್ರೀ ಸಿ ನಾಗರಾಜ್ ಬಾಳನೌಕೆ 7 ಎಸ್ ಬದುಕಿನ ಬಣ್ಣವೇ ಶೃತಿಯಾದಾಗ 8 ರಕ್ಷಿತಾ ರಚ್ಚು ಅಚ್ಚು ರಚ್ಚು 9 ಮೌನ ಒಲವ ಇಬ್ಬನಿ 10 ಪಾರಿಜಾತ ಕರುಳ ಬಂಧ ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ: ಬರವಣಿಗೆ ಒಂದು ಕಲಾ ಸಾಧನೆ. ಅದರಲ್ಲಿ ಧಾರಾವಾಹಿಗಳ ರಚನೆ ಬಹಳ ಸಮಯ, ಅಧ್ಯಯನ ಬೇಡುವ ಕೌಶಲ್ಯಗಳಲ್ಲಿ ಒಂದು ಎಂದರೆ ತಪ್ಪಲ್ಲ. ಒಳ್ಳೆಯ ಕಥಾಹಂದರ, ಅಚ್ಚುಕಟ್ಟು ನಿರೂಪಣೆ ಮತ್ತು ಓದುಗರ ಮನಸ್ಸು ಮುಟ್ಟುವ ಸಂಭಾಷಣೆ, ಕುತೂಹತ ಕೆರಳಿಸುವ ಅಂಶಗಳನ್ನು ಸರಿಯಾದ ಹದಕ್ಕೆ ತರುವುದು ಬರಹಗಾರನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಪ್ರತಿ ಅಧ್ಯಾಯಗಳಲ್ಲೂ ಕುತೂಹಲ ಕಾಪಾಡಿಕೊಂಡು ಜೊತೆಗೆ ತನ್ನ ಕಥಾವಸ್ತುವಿನಿಂದ ಹೊರಬರದೇ ಧಾರಾವಾಹಿಗಳು ರಚನೆಯಾಗಬೇಕು; ಅಂದಾಗ ಮಾತ್ರ ಧಾರಾವಾಹಿ ಓದುಗರ ಮನಸ್ಸಿನಲ್ಲಿ ಅದು ಅಚ್ಚೊತ್ತಬಲ್ಲದು. ಹಾಗಾಗಿ ಒಲವ ಇಬ್ಬನಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರು ಧಾರಾವಾಹಿಗಳನ್ನು ರಚಿಸಿರುವ ಎಲ್ಲರಿಗೂ ಅವರ ಪ್ರಯತ್ನಕ್ಕಾಗಿ ಶ್ಲಾಘಿಸಲೇಬೇಕು; ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಉಳಿದಂತೆ ಉತ್ತಮ ಕತೆಗಳು ರಚಿಸಲ್ಪಟ್ಟಿದ್ದವು. ಕೆಲವು ಕತೆಗಳ ವಿಷಯಗಳಲ್ಲಿ ಹೋಲಿಕೆಯೆನಿಸಿದರೂ ನಿರೂಪಣೆಯಲ್ಲಿ ಭಿನ್ನವಾಗಿದ್ದವು. ಒಂದೆರಡು ಕತೆಗಳು ಮಾನವರ ನಡುವಿನ ವಿಭಿನ್ನ, ವಿವಿಧ ಬಂಧಗಳನ್ನು ಬಹಳ ಉತ್ತಮ ರೀತಿಯಲ್ಲಿ ತೆರೆದಿಡುವ ಪ್ರಯತ್ನ ಮಾಡಿವೆ. ಕಥಾ ರಚನೆಯ ಮೂಲಕ ಪ್ರೀತಿ, ಪ್ರೇಮ, ಸಂಬಂಧಗಳ ಸವಿಯನ್ನು ಸಂಭ್ರಮಿಸುವ ಸ್ಪರ್ಧೆಯ ಉದ್ದೇಶ ಸಫಲವಾಗಿದೆ ಎಂದರೆ ತಪ್ಪಿಲ್ಲ. ಆದರೂ ಬರಹಗಾರರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಓದು, ಅಧ್ಯಯನಗಳ ಮೂಲಕ ಹೊಸ ಹೊಸ ಪ್ರಯೋಗಗಳನ್ನು ಮಾಡುವಂತಾಗಲಿ, ಕಥಾವಸ್ತು ಪ್ರೀತಿ-ಪ್ರೇಮ ಎಂದಾದರೂ ಕಥಾಹಂದರದಲ್ಲಿ ಇತರ ಹಲವು ವಿಷಯಗಳಿಂದ ಪ್ರೇರಣೆ ಪಡೆದು ಕತೆಗಳಲ್ಲಿ ಬಳಸಿಕೊಳ್ಳುವಂತಾಗಲಿ ಎಂಬುದು ನಮ್ಮ ಆಶಯ. ಸಲ್ಲಿಸಲ್ಪಟ್ಟಿದ್ದ ಕತೆಗಳಲ್ಲಿ ಭಾಷೆ, ಸಾಹಿತ್ಯ, ನಿರೂಪಣೆ ಮತ್ತು ಮೌಲ್ಯಯುತ ಸಂದೇಶ ಮುಂತಾದ ಮಾನದಂಡಗಳ ಆಧಾರದ ಮೇಲೆ ವಿಜೇತ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ಬರಹಗಾರರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ. - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ಸೂಪರ್ ಸಾಹಿತಿ ಅವಾರ್ಡ್ಸ್- 6 ರಲ್ಲಿ 80+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು!28 मार्च 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಬಹು ನಿರೀಕ್ಷಿತ ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯ ಫಲಿತಾಂಶ ಕೆಲವು ದಿನಗಳ ಹಿಂದೆ ಘೋಷಣೆಯಾಗಿದೆ! ಇದು ಭಾರತದ ಅತಿದೊಡ್ಡ ಆನ್ಲೈನ್ ಕಥಾ ಸ್ಪರ್ಧೆಯಾಗಿದ್ದು ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ವೇದಿಕೆಯನ್ನೊದಗಿಸುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ 80+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸುವ ಬರಹಗಾರರಿಗೆ ಪ್ರತಿಲಿಪಿ ಕಡೆಯಿಂದ ಖಚಿತ ಬಹುಮಾನ ನೀಡುವುದಾಗಿ ತಿಳಿಸಲಾಗಿತ್ತು. ನಿಗದಿತ ಕಾಲಾವಧಿಯಲ್ಲಿ 80+ ಅಧ್ಯಾಯಗಳನ್ನು ಹೊಂದಿರುವ ಧಾರಾವಾಹಿ ರಚಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಬರಹಗಾರರು ಸಾಕಷ್ಟು ಶ್ರಮ ಮತ್ತು ಸಮಯವನ್ನು ವ್ಯಯಿಸಿ ತಮ್ಮ ಕೌಶಲ್ಯಕ್ಕೆ ರೂಪ ನೀಡಿರುತ್ತಾರೆ. ಶಿಸ್ತುಬದ್ಧ ಮತ್ತು ಯೋಜನಾಬದ್ಧವಾಗಿ ಕೃತಿಯನ್ನು ರಚಿಸಿರುತ್ತಾರೆ. ಸಾಹಿತ್ಯ ಮತ್ತು ಬರವಣಿಗೆಯ ಕುರಿತು ಆಸಕ್ತಿ ಹೊಂದಿರುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ನಿಜವಾಗಿಯೂ, ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು ಈ ಸವಾಲನ್ನು ಸ್ವೀಕರಿಸಿ 80, 100+ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇಂತಹ ಪ್ರತಿಭಾವಂತ ಬರಹಗಾರರನ್ನು ಹೊಂದಿರುವುದು ನಮಗೆ ಹೆಮ್ಮೆಯ ವಿಷಯ. ಇದೇ ರೀತಿಯ ಬದ್ಧತೆ ಮತ್ತು ಪರಿಶ್ರಮದಿಂದ ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಇನ್ನಷ್ಟು ಉತ್ತಮವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಯಾಗಿಸಿದ್ದಕ್ಕೆ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಾಹಿತ್ಯದ ಕುರಿತು ನಿಮಗಿರುವ ಆಸಕ್ತಿ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಈ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿದೆ. ಸ್ಪರ್ಧೆಗೆ ಸಲ್ಲಿಸಲ್ಪಟ್ಟ ಕನ್ನಡದ ಬೃಹತ್ ಧಾರಾವಾಹಿ ಚೈತ್ರಾ ಯೋಗೇಶ್ ಅವರ 216 ಅಧ್ಯಾಯಗಳ ನಿನ್ನೇ ಪ್ರೀತಿಸುವೆ ಎಂದೂ 80+ ಅಧ್ಯಾಯಗಳ ಧಾರಾವಾಹಿ ರಚಿಸಿದವರ ವಿವರ- ಕ್ರ. ಸಂ ಕರ್ತೃ ಕೃತಿ 1 ಸಂಧ್ಯಾ ಭಟ್ ಸೂಕ್ಷ್ಮ 2 ಹಿತ್ಯ ನಾ ನಿನ್ನಾ ಬಿಡಲಾರೆ 3 ಸುಷ್ಮಿತಾ ಕೆ. ಎನ್ ಒಲವಿನ ಅಭಿಸಾರಿಕೆ 4 ಓಂಪ್ರಕಾಶ್ ನಾಯಕ್ ಕೆಂಪು ಜೀಪು 5 ಗೋಪಾಲ ಬಂಗಾರದ ಹುಲಿ 6 ಮಾಲಾ ನಾರಾಯಣ ಕವಲೊಡೆದ ಬದುಕು ನನ್ನದು 7 ಸವಿತಾ ಪ್ರೀತಿಯ ಪಯಣ 8 ಉಮಾ ರಾವ್ ಎಸ್ ಭಟ್ ಯೂಫೋರಿಯಾ 9 ವಿದ್ಯಾ ಮೂರ್ತಿ ನಿನ್ನೊಲವಿನಾಸರೆ 10 ಗಜಲಕ್ಷ್ಮಿ ಗೋವಿಂದ ರಾಜು ಬೆದರಿದ ಅರಗಿಣಿ 11 ಭಾನು ಹೆಚ್. ಎಫ್ ಭಾವ ಶರಧಿ 12 ಭಾರತಿ ಕೃತಿಕಾ ನೀನಿಲ್ಲದೆ 13 ಪ್ರಸನ್ನಾ ವಿ ಚೆಕ್ಕೆಮನೆ ಈ ಹೃದಯ ನಿನಗೇ ಮೀಸಲು 14 ಮನುಪ್ರಿಯ ಒಲವಿನ ಹೂವೇ... 15 ತೀರ್ಥ ಶಿವು ಸದ್ದಿಲ್ಲದೆ ಮೂಡಿದೆ ಪ್ರೇಮ... 16 ವೀಣಾ ವಿನಾಯಕ ಇಷ್ಟೇ ಸಾಕು ಈ ಜನ್ಮಕೆ 17 ಸುಜಲ ಘೋರ್ಪಡೆ ಜೀವನ ಸಂಜೀವನ 18 ಲಕ್ಷ್ಮಿ ಗೌಡ ಕಾರ್ಮೋಡ 19 ಚೈತ್ರಾ ಯೋಗೇಶ್ ನಿನ್ನೇ ಪ್ರೀತಿಸುವೆ ಎಂದೂ 20 ಆರತಿಗುರು ನಿರೀಕ್ಷೆಯ ಜೀವನ 21 ಚೈತ್ರ ಭಟ್ಟ ಸೀತೆಯಂತೆ ಕಾಯುವೆ, ನೀ ರಾಮನಾದರೆ.. 22 ಶಿಲ್ಪ ಎಸ್. ನಿಗೂಢ 23 ಶುಭಾ ಶ್ರೀನಾಥ್ ಕನ್ನಡಿಯಲ್ಲಿ ಕಂಡ ಪ್ರತಿಬಿಂಬ 24 ತುಳಸಿ ಚೈತ್ರಾ ದಯಾನಂದ್ ಕಾ ಬೋರಪ್ಪ ಚೆಲುವೆ ಮೊಗದಿ ಗೆಲುವು ಕಂಡಿತು 25 ಮಾಲಾ ಭಟ್ ಯುಗ್ಮ 26 ವಿಜಯ ಭಾರತಿ ತಲ್ಲಣಿಸದಿರು 27 ಶ್ರೀನಿವಾಸ ಸಂಡೂರು ಎ ಜಾಕಲ್ಸ್ ಡೇ 28 ಕೌಸಲ್ಯ ಕಾರಂತ್ ಬದುಕು ಜಟಕಾಬಂಡಿ ನಮ್ಮ ದೃಷ್ಟಿಯಲ್ಲಿ ನೀವೆಲ್ಲರೂ ಸೂಪರ್ ಸಾಹಿತಿಗಳು! ನಿಮ್ಮಿಂದ ಇನ್ನಷ್ಟು ಉತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ನೀವು ಸೂಪರ್ ಸಾಹಿತಿ ಅವಾರ್ಡ್ಸ್ : ಸೂಪರ್ 7 ಸೀಸನ್ ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 60+ ಅಧ್ಯಾಯಗಳ ಧಾರಾವಾಹಿಯನ್ನು ಮೇ 7 ರ ಒಳಗೆ ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://kannada.pratilipi.com/event/03likagbaw ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ! - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ನಿಮ್ಮ ಕೃತಿಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ - ಅರ್ಲಿ ಬರ್ಡ್ ಆಫರ್29 फ़रवरी 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಕೇವಲ 5000/- ರೂಪಾಯಿಗಳಲ್ಲಿ ನಿಮ್ಮ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಅವಕಾಶ ಇಲ್ಲಿದೆ! ಪ್ರತಿಲಿಪಿಕನ್ನಡದಲ್ಲಿ ತಮ್ಮ ಕಾದಂಬರಿಗಳನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸುವ ನೂರಾರು ಲೇಖಕ ಲೇಖಕಿಯರ ಬಹುದಿನಗಳ ಅಪೇಕ್ಷೆಯ ಮೇರೆಗೆ ಪ್ರತಿಲಿಪಿಯು ಮುದ್ರಣ ಸೌಲಭ್ಯವನ್ನೂ ಒದಗಿಸುತ್ತಿದೆ. ಕೆಳಗಿನ ವಿವರಗಳನ್ನು ಪರಿಶೀಲಿಸಿ ಸೀಮಿತ ಅವಧಿಯ ಕೊಡುಗೆಗಳನ್ನು ಪಡೆದು ನಿಮ್ಮ ಕೃತಿಗಳನ್ನು ಪುಸ್ತಕ ರೂಪದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಮುದ್ರಿಸಿ ಪ್ರಕಟಿಸಿ. ಹೆಚ್ಚಿನ ಮಾಹಿತಿಗೆ [email protected] ಸಂಪರ್ಕಿಸಿ. ಬೇಸಿಕ್ ಪ್ಯಾಕೇಜ್ ಯೋಜನೆ : 40,000 ಪದಗಳಿರುವ ಕಾದಂಬರಿಯ ಮುದ್ರಣಕ್ಕೆ 5,000/- ರೂಪಾಯಿಗಳು + 18% GST. ಪಾವತಿಸಬೇಕಾಗುತ್ತದೆ. 40,000 ಕ್ಕೂ ಅಧಿಕ ಪದಸಂಖ್ಯೆಯನ್ನು ಹೊಂದಿದ್ದಲ್ಲಿ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ. ಮತ್ತು ಪ್ರತಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಪ್ಯಾಕೇಜ್ ನಲ್ಲಿ ಕೆಳಗಿನ ಸೌಲಭ್ಯಗಳು ಸೇರಿರುತ್ತವೆ : - 15 ಮುದ್ರಿತ ಪ್ರತಿಗಳು - ಇದರಲ್ಲಿ ಶಿಪ್ಪಿಂಗ್ ಖರ್ಚು ಸೇರಿದೆ - ರಕ್ಷಾಪುಟ ವಿನ್ಯಾಸವನ್ನು ಪ್ರತಿಲಿಪಿಯೇ ಮಾಡುತ್ತದೆ. - ಪುಸ್ತಕದ ISBN ನಂಬರ್ - ಮುದ್ರಣ ಕಾಗದ - ಬೇಸಿಕ್ ಗುಣಮಟ್ಟ - ಪ್ರಥಮ ಹಂತದ ಟೈಪ್ ಸೆಟ್ಟಿಂಗ್ ಪ್ಯಾಕೇಜ್ ಒಳಗೊಂಡಿರದ ಸೌಲಭ್ಯಗಳು : ಪ್ರೂಫ್ ರೀಡಿಂಗ್/ ಕರಡು ತಿದ್ದುಪಡಿ. ಗಮನದಲ್ಲಿಡಬೇಕಾದ ಇತರೆ ಅಂಶಗಳು : - ಒಪ್ಪಂದಕ್ಕೆ ಸಹಿ ಹಾಕುವಾಗಲೇ ಹಣ ಪಾವತಿ ಮಾಡಬೇಕು. ಇದನ್ನು ಒಂದೇ ಕಂತಿನಲ್ಲಿ ಪಾವತಿಸಬೇಕಾಗುತ್ತದೆ - ಸಾಹಿತಿಗಳು ಮುದ್ರಣ ಪ್ರಕ್ರಿಯೆ ಪ್ರಾರಂಭಕ್ಕೂ ಮೊದಲು ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ - ಭೌತಿಕ ಪುಸ್ತಕದ ವಿಡಿಯೋವನ್ನು ಸಾಹಿತಿಗಳ ಮಾಹಿತಿಗಾಗಿ ಕಳುಹಿಸಲಾಗುವುದು. (ಸೂಚನೆ - ಇದು ನಿಮ್ಮ ಪುಸ್ತಕದ ವಿಡಿಯೋ ಆಗಿರದಿರಬಹುದು. ಈ ಉದ್ದೇಶಕ್ಕಾಗಿ ಪ್ರಿಂಟ್ ಮಾಡಲಾದ ಪುಸ್ತಕವನ್ನು ನಿಮ್ಮ ಮಾಹಿತಿಗಾಗಿ ಕಳುಹಿಸಲಾಗುವುದು) - ಸಾಹಿತಿಗಳು ಪುಸ್ತಕದಲ್ಲಿ ಯಾವುದಾದರೂ ಬದಲಾವಣೆ ಮಾಡಲಿಚ್ಛಿಸಿದಲ್ಲಿ 7-10 ದಿವಸಗಳ ಕಾಲಾವಕಾಶ ಲಭ್ಯವಿರುತ್ತದೆ. ಈ ಸಮಯದಲ್ಲಿ ಲೇಖಕರು ಸ್ವತಃ ಪ್ರೂಫ್ ರೀಡಿಂಗ್ ಮತ್ತು ಟೈಪ್ ಸೆಟ್ಟಿಂಗ್ ಮಾಡಬೇಕಾಗುತ್ತದೆ. - ಎಡಿಟ್ ಮಾಡಿದ ಪ್ರತಿಯನ್ನು ನಮಗೆ ಕಳುಹಿಸಿದ ಬಳಿಕ ಗರಿಷ್ಟ 30 ದಿನಗಳಲ್ಲಿ ಮುದ್ರಿತ ಪುಸ್ತಕಗಳನ್ನು ಕಳುಹಿಸಲಾಗುವುದು. - ರಕ್ಷಾಪುಟದ ವಿನ್ಯಾಸವನ್ನು ಪ್ರತಿಲಿಪಿಯೇ ನಿರ್ಧರಿಸುತ್ತದೆ. ಲೇಖಕರು ಸ್ಯಾಂಪಲ್ ಕಳುಹಿಸಬಹುದು. ಆದರೆ ಅಂತಿಮ ನಿರ್ಧಾರ ಪ್ರತಿಲಿಪಿಯದ್ದೇ ಆಗಿರುತ್ತದೆ. ಒಂದು ರಕ್ಷಾಪುಟವನ್ನು ಮಾತ್ರ ವಿನ್ಯಾಸಗೊಳಿಸಲಾಗುತ್ತದೆ. - ಕೃತಿಯ ಹಕ್ಕುಗಳು ಆಯಾ ಲೇಖಕ/ಲೇಖಕಿಯರದ್ದೇ ಆಗಿರುತ್ತದೆ. ಪ್ರತಿಲಿಪಿ ಯಾವುದಾದರೂ ಹಕ್ಕುಗಳನ್ನು ಪಡೆದುಕೊಂಡಿದ್ದಲ್ಲಿ ಮಾತ್ರ ಅದರ ಹಕ್ಕು ಪ್ರತಿಲಿಪಿಯದ್ದಾಗಿರುತ್ತದೆ. - ಪುಸ್ತಕದ ರಕ್ಷಾಪುಟದ ಹಕ್ಕು ಪ್ರತಿಲಿಪಿಯದ್ದಾಗಿರುತ್ತದೆ. ಇದನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ದಯವಿಟ್ಟು ಒಪ್ಪಂದದ ಎಲ್ಲ ನಿಯಮಗಳು ಮತ್ತು ಅಂಶಗಳನ್ನು ಸರಿಯಾಗಿ ಪರಿಶೀಲಿಸಿ ಅರ್ಥೈಸಿಕೊಳ್ಳಿ. - ಪುಸ್ತಕ ಮುದ್ರಣಕ್ಕೂ ಮೊದಲು ಪ್ರತಿಲಿಪಿಯು ಆಯಾ ಕೃತಿಗಳ ಕರ್ತೃಗಳ ಓದಿಗಾಗಿ ಕೃತಿಯ ಪಿಡಿಎಫ್ ಕಳುಹಿಸುತ್ತದೆ. ಟೈಪ್ ಸೆಟ್ಟಿಂಗ್/ಪ್ರೂಫ್ ರೀಡಿಂಗ್ ಮಾರ್ಗದರ್ಶನ : ಕೃತಿಯಲ್ಲಿ ಯಾವುದೇ ಎಮೋಜಿ ಬಳಸುವಂತಿಲ್ಲ. ಹೆಚ್ಚುವರಿ ಸ್ಪೇಸ್ ಮತ್ತು ಲೈನ್ ಗಳು ಇರುವಂತಿಲ್ಲ. ಹೆಚ್ಚುವರಿ ಪೂರ್ಣವಿರಾಮಗಳು, ಅಲ್ಪವಿರಾಮಗಳು ಇರಬಾರದು. ಪ್ರಶ್ನೋತ್ತರಗಳು : 1. ನಾನು ಈ ಯೋಜನೆಯಲ್ಲಿ ಆಸಕ್ತನಾಗಿದ್ದೇನೆ. ನಾನೇನು ಮಾಡಬೇಕು ? ನೀವು ಪುಸ್ತಕ ಮುದ್ರಿಸಲು ಇಚ್ಛಿಸಿದ್ದಲ್ಲಿ [email protected] ಸಂಪರ್ಕಿಸಬಹುದು 2. ಪುಸ್ತಕ ಮುದ್ರಣ ಯೋಜನೆಯಲ್ಲಿ ಯಾವೆಲ್ಲ ಪ್ರಕ್ರಿಯೆಗಳಿವೆ ? ಒಮ್ಮೆ ನೀವು ಇಮೇಲ್ ಕಳುಹಿಸಿದ ಬಳಿಕ, ನಾವು ನಿಮ್ಮನ್ನು ಸಂಪರ್ಕಿಸಿ, ನಿಮ್ಮ ಪುಸ್ತಕದ ಮಾಹಿತಿ ಪಡೆದುಕೊಳ್ಳುತ್ತೇವೆ. ಬಳಿಕ spotdraft ಮೂಲಕ ಒಪ್ಪಂದಕ್ಕೆ ಸಹಿ ಹಾಕಿ, ನಾವು ನೀಡುವ ಬ್ಯಾಂಕ್ ಖಾತೆಗೆ ಹಣ ಪಾವತಿಸಬೇಕಾಗುತ್ತದೆ. ಹಣಪಾವತಿ ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಪುಸ್ತಕದ ವಿವರಗಳನ್ನು ಸಂಗ್ರಹಿಸಲು ಗೂಗಲ್ ಫಾರ್ಮ್ ಕಳುಹಿಸಲಾಗುತ್ತದೆ. ಪುಸ್ತಕದ ಹಸ್ತಪ್ರತಿಯನ್ನು ನಿಮಗೆ ಕಳುಹಿಸಲಾಗುತ್ತದೆ. ಪುಸ್ತಕದ ವಿವರಗಳು ಮತ್ತು ಎಡಿಟ್ ಮಾಡಿದ ಹಸ್ತಪ್ರತಿ ನಮಗೆ ತಲುಪಿದ ಬಳಿಕ, ಪುಸ್ತಕ ಮುದ್ರಣದ ಪ್ರಕ್ರಿಯೆ ಮತ್ತು ಇನ್ನಿತರ ಎಲ್ಲ ಪ್ರಕ್ರಿಯೆಗಳು ಪ್ರಾರಂಭಗೊಳ್ಳುತ್ತವೆ. 3. ಪುಸ್ತಕದ ಪ್ರಕಾಶಕರು ಯಾರು ? ಪ್ರತಿಲಿಪಿ ಪೇಪರ್ ಬ್ಯಾಕ್ಸ್ 4. ನಾನು ನನ್ನ ಕಾದಂಬರಿಯನ್ನು ಮುದ್ರಣಕ್ಕಾಗಿ ಹೇಗೆ ಕಳುಹಿಸಬೇಕು ? ಕಾದಂಬರಿ ಈಗಾಗಲೇ ಪ್ರತಿಲಿಪಿಯಲ್ಲಿ ಲಭ್ಯವಿದ್ದಲ್ಲಿ, ನಾವದನ್ನು ಡೌನ್ಲೋಡ್ ಮಾಡಿ ಅದರ ಕರ್ತೃಗಳಿಗೆ ಅಂತಿಮ ಹಂತದ ಎಡಿಟಿಂಗ್ ಗೆ MS ವರ್ಡ್ ಫೈಲ್ ಮೂಲಕ ಕಳುಹಿಸುತ್ತೇವೆ. 5. ನನ್ನ ಕಾದಂಬರಿ ಪ್ರತಿಲಿಪಿಯಲ್ಲಿ ಪ್ರಕಟಗೊಂಡಿಲ್ಲ. ಆದರೆ ಮುದ್ರಿಸಲು ಇಚ್ಛಿಸುತ್ತೇನೆ. ಇದಕ್ಕೆ ಅನುಸರಿಸಬೇಕಾದ ಕ್ರಮಗಳೇನು ? ನಾವು ಪ್ರತಿಲಿಪಿಯಲ್ಲಿ ಮುದ್ರಿತವಾಗದ ಕೃತಿಗಳನ್ನೂ ಸಹ ಪ್ರಕಟಿಸುತ್ತೇವೆ. ನಿಮ್ಮ ಕೃತಿಯನ್ನು MS ವರ್ಡ್ ಫಾರ್ಮ್ಯಾಟ್ ನಲ್ಲಿ ನಮಗೆ ಕಳುಹಿಸಿ. 6. ನಾನು ಹಣವನ್ನು ಹೇಗೆ ಪಾವತಿಸಬೇಕು ? ನೀವು ಒಪ್ಪಂದದಲ್ಲಿರುವ ಎಲ್ಲ ನೀತಿ ನಿಯಮಗಳನ್ನು ಅರ್ಥಮಾಡಿಕೊಂಡ ಬಳಿಕ ಹಣ ಪಾವತಿಸಬೇಕಾದ ಖಾತೆಯ ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇವೆ. 7. ನನ್ನ ಪುಸ್ತಕದ ಮಾರಾಟ ಬೆಲೆ ಎಷ್ಟಿರಬಹುದು ? ಇದನ್ನು ಹಲವಾರು ಅಂಶಗಳು ನಿರ್ಧರಿಸುವುದರಿಂದ ನಿಮ್ಮೊಡನೆ ಈ ಕುರಿತು ಕೂಲಂಕುಷವಾಗಿ ಚರ್ಚಿಸಿ ಬೆಲೆ ನಿಗದಿಪಡಿಸಲಾಗುತ್ತದೆ. 8. ನನ್ನ ಪುಸ್ತಕಗಳನ್ನು ಆನ್ಲೈನ್ ವೆಬ್ಸೈಟ್ ಗಳ ಮೂಲಕವೂ ಮಾರಾಟ ಮಾಡುವಿರಾ ? (ಉದಾ : ಅಮೆಜಾನ್) ಹೌದು. ನಿಮ್ಮ ಪುಸ್ತಕಗಳನ್ನು ಅಮೆಜಾನ್ ನಲ್ಲಿ ಲಿಸ್ಟ್ ಮಾಡಲಾಗುತ್ತದೆ. ಇದಕ್ಕೆ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ. 9. ಪುಸ್ತಕದ ಗಾತ್ರ ಎಷ್ಟಿರುತ್ತದೆ ? 8.5 x 5.5 ಇಂಚುಗಳುಇನ್ನೂ ಹೆಚ್ಚು ತೋರಿಸಿ
- ‘ಸೂಪರ್ ಸಾಹಿತಿ ಅವಾರ್ಡ್ಸ್ 6’ ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ25 फ़रवरी 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಬಹು ನಿರೀಕ್ಷಿತಸೂಪರ್ ಸಾಹಿತಿ ಅವಾರ್ಡ್ಸ್ 6ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ! ಹಿಂದಿನ ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಬರಹಗಾರರಿಂದ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ನವ ಬರಹಗಾರರು ಗೋಲ್ಡನ್ ಬ್ಯಾಡ್ಜ್ ಪಡೆದು, ಈ ಸ್ಪರ್ಧೆಯಲ್ಲಿ ಭಾಗವಹಿಸಿ 60+ ಅಧ್ಯಾಯಗಳ ಧಾರಾವಾಹಿ ರಚಿಸಿರುವುದನ್ನು ನಾವು ಗಮನಿಸಿದ್ದೇವೆ. ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. ಸ್ಪರ್ಧೆಯಲ್ಲಿ ವಿಜೇತ ಸಾಹಿತಿಗಳಾಗಿ ಗುರುತಿಸಿಕೊಂಡು, ಉತ್ತಮ ಕೃತಿಗಳನ್ನು ರಚಿಸಿರುವ ಸೂಪರ್ ಸಾಹಿತಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ. ನಿಮ್ಮ ಸಾಹಿತ್ಯ ಕೃಷಿ ಇನ್ನಷ್ಟು ಉತ್ತಮ ರೀತಿಯಲ್ಲಿ ಮುಂದುವರೆದು ಕನ್ನಡ ಸಾಹಿತ್ಯಕ್ಕೆ ನಿಮ್ಮಿಂದ ಅತ್ಯುತ್ತಮ ಕೃತಿಗಳು ಪ್ರತಿಲಿಪಿಯ ಮೂಲಕ ಸಿಗುವಂತಾಗಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಪರಿಶ್ರಮದಿಂದ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು- ಓದುಗರ ಆಯ್ಕೆಯ ಕೃತಿಗಳು: ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಕತೆಗಳಲ್ಲಿ; ಸ್ಪರ್ಧೆಯ ಪ್ರಾರಂಭದ ದಿನಾಂಕದಿಂದ ಮುಕ್ತಾಯದ ದಿನಾಂಕದವರೆಗಿನ ಅಂಕಿಅಂಶಗಳ ಆಧಾರದ ಮೇಲೆ, ಈ ಕೆಳಗಿನ ಅಂಶಗಳನ್ನು ಪರಿಗಣಿಸಿ, ಒಟ್ಟಾರೆ ರೇಶಿಯೋ ಪಡೆದು ಓದುಗರ ಆಯ್ಕೆಯ ಕೃತಿಗಳ ಸ್ಥಾನಗಳನ್ನು ತೀರ್ಮಾನಿಸಲಾಗಿದೆ. - ಆಯಾ ಬರಹಗಾರರ ಹಿಂಬಾಲಕರ ಸಂಖ್ಯೆಗೆ ಹೋಲಿಸಿದರೆ ಆ ಕೃತಿಯ ಓದಿನ ಸಂಖ್ಯೆ - ಹೆಚ್ಚು ಚರ್ಚಿಸಲ್ಪಡುವ ಕೃತಿ, ಅಂದರೆ ಆರಂಭದಿಂದ ಅಂತ್ಯದವರೆಗೆ ಓದಿದವರ ಶೇಕಡಾವಾರು ಸಂಖ್ಯೆ ಪ್ರಥಮ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪುಷ್ಪಲತಾ ಹರೀಶ್ಅವರಮಹಿರ ದ್ವಿತೀಯ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಮನುಪ್ರಿಯಅವರಒಲವಿನ ಹೂವೇ... ತೃತೀಯ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಅನಿತಾ ಹೆಚ್.ಅವರಈ ಪ್ರೀತಿ ಒಂಥರಾ ನಾಲ್ಕನೆಯ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪ್ರಸನ್ನಾ ವಿ ಚೆಕ್ಕೆಮನೆಅವರಈ ಹೃದಯ ನಿನಗೇ ಮೀಸಲು ಐದನೆಯ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸುಷ್ಮಿತಾ ಕೆ. ಎನ್ಅವರಒಲವಿನ ಅಭಿಸಾರಿಕೆ ಆರನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ತೀರ್ಥ ಶಿವುಅವರಸದ್ದಿಲ್ಲದೆ ಮೂಡಿದೆ ಪ್ರೇಮ... ಏಳನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪುಷ್ಕರಿಣಿಅವರಕೈಲಾಸಪುರ ಎಂಟನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶ್ವೇತಾಅವರನೀ ಜೊತೆಗಿರೆ... ಸಾಕು!(ನಾನೆಂದು ನಿನ್ನವನು) ಒಂಬತ್ತನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಚೈತ್ರಾ ಯೋಗೇಶ್ಅವರನಿನ್ನೇ ಪ್ರೀತಿಸುವೆ ಎಂದೂ ಹತ್ತನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಉಮಾ ರಾವ್ ಎಸ್ ಭಟ್ಅವರಯೂಫೋರಿಯಾ ತೀರ್ಪುಗಾರರ ಆಯ್ಕೆಯ ಕೃತಿಗಳು: ಓದುಗರ ಆಯ್ಕೆಯ ವಿಜೇತ ಕೃತಿಗಳನ್ನು ಆರಿಸಿದ ನಂತರ ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಉಳಿದ ಎಲ್ಲಾ ಕತೆಗಳನ್ನು ತೀರ್ಪುಗಾರರು ಓದಿ, ವಿಶ್ಲೇಷಿಸಿ ಅವುಗಳಲ್ಲಿ ಉತ್ತಮವಾದ ಕೃತಿಗಳನ್ನು ವಿಜೇತ ಕೃತಿಗಳಾಗಿ ಆಯ್ಕೆ ಮಾಡಿದ್ದಾರೆ. ಪ್ರಥಮ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶ್ರೀನಿವಾಸ ಸಂಡೂರುಅವರಎ ಜಾಕಲ್ಸ್ ಡೇ ದ್ವಿತೀಯ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಓಂಪ್ರಕಾಶ್ ನಾಯಕ್ಅವರಕೆಂಪು ಜೀಪು ತೃತೀಯ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶಿವಶಂಕರ್ ಎಸ್. ಜಿಅವರಓ..ನನ್ನ ಚೇತನ! ನಾಲ್ಕನೆಯ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವಿಜಯ ಭಾರತಿಅವರತಲ್ಲಣಿಸದಿರು ಐದನೆಯ ಬಹುಮಾನ:4,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ರಾಘವ್ ವಿಶ್ವಾಸಿಅವರಘರ್ಷಣೆ ಆರನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸಂಜಯ್ ಪಾಟೀಲ್ಅವರಗಿಗೋಳೋ (ಗಂಡು ವೇಶ್ಯೆ) ಏಳನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಕೌಸಲ್ಯ ಕಾರಂತ್ಅವರಬದುಕು ಜಟಕಾಬಂಡಿ ಎಂಟನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸಂಧ್ಯಾ ಭಟ್ಅವರಸೂಕ್ಷ್ಮ ಒಂಬತ್ತನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಮಾಧವಿ ಹೆಬ್ಬಾರ್ಅವರಸಿಂಹ ಪುರಿಯ ರಹಸ್ಯ ಹತ್ತನೆಯ ಬಹುಮಾನ:4,000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವೇದಾ ಮಂಜುನಾಥನ್ಅವರಜಾಡು....!! ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು: ಈ ಬಾರಿ ಸಣ್ಣ ಅಂತರದಿಂದ ವಿಜೇತ ಕೃತಿಗಳ ಪಟ್ಟಿಗೆ ಬರಲು ಸಾಧ್ಯವಾಗದ ಕೆಲವು ಧಾರಾವಾಹಿಗಳನ್ನು ಕೆಳಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇವೆ. ಕೃತಿ ಕರ್ತೃ ಮೃತ್ಯೋರ್ಮಾ ಅಮೃತಂಗಮಯ ಪ್ರಖ್ಯಾ ಎಲ್ಲಿರುವೆ......! ಕೃಷ್ಣ ತುಳಸಿ ಇಷ್ಟೇ ಸಾಕು ಈ ಜನ್ಮಕೆ ವೀಣಾ ವಿನಾಯಕ ನನ್ನ ನಿನ್ನ ನಡುವೆ ಏನಿಲ್ಲಾ...!!? ರಾಧಾಮಣಿ ಜೆ. ಹೆಚ್ ಜೀವನ ಸಂಜೀವನ ಸುಜಲ ಘೋರ್ಪಡೆ ಕಾರ್ಮೋಡ ಲಕ್ಷ್ಮಿ ಗೌಡ ಯದ್ಭಾವಂ ತದ್ಭವತಿ ರಮ್ಯಾ ವಿಜಿತ್ ಬಂಗಾರದ ಹುಲಿ ಗೋಪಾಲ ಮೋಹದ ಬಲೆ ಸವಿತಾ ರಮೇಶ್ ಒಡೆದ ಕನ್ನಡಿ ಲತಾ ರವಿ ನಿನ್ನೊಲವಿನಾಸರೆ ವಿದ್ಯಾ ಮೂರ್ತಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪೂಜಾ ಕೌಶಿಕ್ ಕನ್ನಡಿಯಲ್ಲಿ ಕಂಡ ಪ್ರತಿಬಿಂಬ ಶುಭಾ ಶ್ರೀನಾಥ್ ಸೀತೆಯಂತೆ ಕಾಯುವೆ, ನೀ ರಾಮನಾದರೆ.. ಚೈತ್ರ ಭಟ್ಟ ಕಥಾನಾಯಕಿ ಕೃಷ್ಣಪ್ರಿಯೆ ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಡಳಿಯ ಅನಿಸಿಕೆ: ಆತ್ಮೀಯ ಸಾಹಿತಿಗಳೇ, ಬರವಣಿಗೆ ಎನ್ನುವ ಕಲೆ ಒಂದು ಕೃತಿಯಾಗಿ ಓದುಗನ ಮನದಾಳದಲ್ಲಿ ಇಳಿಯಬೇಕಾದರೆ, ಉಳಿಯಬೇಕಾದರೆ ಅದರಲ್ಲಿ ಒಂದು ಹದವಿರಬೇಕು, ಸತ್ವವಿರಬೇಕು, ಸ್ವಾತಂತ್ರ್ಯವೂ ಇರಬೇಕು. ಒಂದು ಹಾಡು ಕೇಳುಗನ ಮನಸ್ಸಿಗೆ ಹತ್ತಿರವಾಗುತ್ತದೆದಂರೆ ಅದರ ಸಾಹಿತ್ಯ, ಶೃತಿ, ರಾಗ, ತಾಳ, ಸ್ವರಗಳೆಲ್ಲವೂ ಕ್ರಮಬದ್ಧವಾಗಿ ಒಳ್ಳೆಯ ಹಾಡುಗಾರರ ದನಿಯಲ್ಲಿ ಹೊರಬರಬೇಕು. ಅಂತೆಯೇ ಒಬ್ಬ ಬರಹಗಾರನ ಆಲೋಚನೆ ಓದುಗನ ಮನಸ್ಸಿನಲ್ಲಿ ಜಾಗ ಪಡೆಯಬೇಕಾದರೆ ಆ ಆಲೋಚನೆಯ ಸ್ಪಷ್ಟ ರೂಪ ಮೊದಲು ಬರಹಗಾರನ ಮನಸ್ಸನ್ನು ಗೆಲ್ಲಬೇಕು. ಒಂದು ಆಲೋಚನೆ, ಅದರಿಂದ ಕಥಾವಸ್ತು, ಅದನ್ನು ಬೆಳೆಸಿದಾಗ ಕಥಾಹಂದರ, ಅದನ್ನು ಮುನ್ನಡೆಸಲು ಪಾತ್ರಗಳು, ಕುತೂಹಲಕ್ಕಾಗಿ ತಿರುವುಗಳು, ಹಾಡುಗಾರನ ದನಿಯಂತೆ ಬರೆಯುವ ಶೈಲಿ, ಇದಕ್ಕೆಲ್ಲ ಮೂಲವಾಗಿ ಭಾಷೆ ಮತ್ತು ವ್ಯಾಕರಣದಲ್ಲಿನ ಹಿಡಿತ; ಒಂದು ಆಲೋಚನೆಯನ್ನು ವಿಸ್ತ್ರತ ಕಥೆ/ಕಾದಂಬರಿಯಾಗಿ ಪ್ರಸ್ತುತಪಡಿಸಲು ಅವಶ್ಯಕವಾದವುಗಳಾಗಿವೆ. ಈ ಪ್ರಕ್ರಿಯೆ ಕೇವಲ ಒಂದು ಎರಡು ದಿನಗಳಲ್ಲಿ ಮುಗಿದು ಬಿಡಬಹುದಾದಂತದ್ದಲ್ಲ. ಆದರೆ ಪ್ರತಿಲಿಪಿ ಆಯೋಜಿಸಿದ್ದ 'ಸೂಪರ್ ಸಾಹಿತಿ ಅವಾರ್ಡ್ಸ್ 6' ಸ್ಪರ್ಧೆಯಲ್ಲಿ ಭಾಗವಹಿಸಿ 60, 80, 100 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ಪ್ರಕಟಿಸಿರುವ ಎಲ್ಲಾ ಬರಹಗಾರರ ಪರಿಶ್ರಮ, ಬದ್ಧತೆ ಮತ್ತು ಉತ್ಸಾಹ ಮಾದರಿಯಾಗುವಂಥದ್ದು. ಸಹಜವಾಗಿ ಕತೆ ಬರೆಯುವಾಗ ಸಮಯದ ಮಿತಿ ಇರಲಾರದು; ಆಗ ಬರಹಗಾರರಿಗೆ ಸಮಯದ ಸ್ವಾತಂತ್ರ್ಯ ಅಧಿಕವಿರುವುದರಿಂದ ಹೆಚ್ಚು ಒತ್ತಡವಿರದಂತೆ ತಮ್ಮ ಬರವಣಿಗೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ಇರುತ್ತದೆ. ಆದರೆ ಸ್ಪರ್ಧೆ ಎಂದಾಕ್ಷಣ ಇರುವ ಮನೋಭಾವವೇ ಬೇರೆಯಾಗುತ್ತದೆ. ಕಾಲಾವಕಾಶದಿಂದ ಹಿಡಿದು ಅದಕ್ಕೆ ಓದುಗರು ಸ್ಪಂದಿಸುವ ರೀತಿಯವರೆಗೆ ಎಲ್ಲವನ್ನು ಮಸ್ತಿಷ್ಕದಲ್ಲಿಟ್ಟುಕೊಂಡು ತಮ್ಮ ಮೂಲ ಆಲೋಚನೆಗೆ ಧಕ್ಕೆ ಬರದಂತೆ ಕೃತಿಯನ್ನು ರಚಿಸುವುದು ಒಂದು ಯಜ್ಞವೆಂದೇ ಹೇಳಬಹುದು. ಹಾಗಾಗಿ ಸ್ಪರ್ಧೆಯ ಕಾಲಾವಕಾಶದೊಳಗೆ ತಮ್ಮ ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು. ಪ್ರತಿ ಆವೃತ್ತಿಗಳ ಕೃತಿಗಳನ್ನು ನೋಡುವಾಗಲೂ ವಿಭಿನ್ನ ರೀತಿಯ ಕೃತಿಗಳು ಸಲ್ಲಿಸಲ್ಪಟ್ಟಿರುವುದು, ಸಲ್ಲಿಸಲ್ಪಡುತ್ತಿರುವುದು ಪ್ರಶಂಸನೀಯ. ಕನ್ನಡ ಸಾಹಿತ್ಯಾಸಕ್ತರಿಗೆ ಉತ್ತಮ ಗುಣಮಟ್ಟದ ಧಾರಾವಾಹಿಗಳನ್ನು ನೀಡುತ್ತಿರುವ ಲೇಖಕರಿಗೆ ಧನ್ಯವಾದಗಳು. ಹೊಸ ಹೊಸ ವಿಚಾರಗಳು, ವಿಶೇಷಗಳು ಈ ಕೃತಿಗಳ ಮೂಲಕ ಲಕ್ಷಾಂತರ ಓದುಗರನ್ನು ತಲುಪುತ್ತಿರುವುದು ಸಂತಸದ ಸಂಗತಿ. ಬರಹಗಾರರ ಆಲೋಚನೆ, ಬರವಣಿಗೆ, ನಿರೂಪಣೆಯಲ್ಲಿ ಪ್ರತಿ ಬಾರಿಯೂ ಬೆಳವಣಿಗೆ, ಬದಲಾವಣೆ ಕಾಣುತ್ತಿರುವುದು ಆಶಾದಾಯಕ ವಿಷಯ. ಮಾನವರು ಎಲ್ಲಿಯವರೆಗೆ ತಮ್ಮನ್ನು ತಾವು ಉತ್ತಮಪಡಿಸಿಕೊಳ್ಳಲು ತೊಡಗಿಕೊಂಡಿರುತ್ತಾರೋ ಅಲ್ಲಿಯವರೆಗೆ ಜಗತ್ತು ಹೊಸದನ್ನು, ಅದ್ಭುತಗಳನ್ನು ಕಾಣುತ್ತಿರುತ್ತದೆ; ಹಾಗೆಯೇ ಸಾಹಿತ್ಯದಲ್ಲಿಯೂ ಲೇಖಕರು ತಮ್ಮನ್ನು ತಾವು ಮತ್ತಷ್ಟು ಉತ್ತಮಪಡಿಸಿಕೊಳ್ಳುವಲ್ಲಿ ಹೆಜ್ಜೆ ಇರಿಸಿದಷ್ಟು ಅದ್ಭುತ ಕೃತಿಗಳ ಮೂಲಕ ಅನೇಕ ವಿಚಾರಗಳು ಜನರನ್ನು ತಲುಪಲು ಸಾಧ್ಯವಾಗುತ್ತದೆ. ಸಾಹಿತ್ಯ ಹರಿಯುವ ತೊರೆಯಾಗಬೇಕಾದರೆ ವಿಭಿನ್ನ ಪ್ರಯೋಗಗಳು ನಡೆಯಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬರಹಗಾರರು ಸ್ಪರ್ಧೆಯ ಕುರಿತು ಆಸಕ್ತಿ ತೋರಿಸಿ ಇನ್ನಷ್ಟು ಉತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂಬುದು ನಮ್ಮ ಆಶಯ. ಮತ್ತೊಮ್ಮೆ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು. ಶುಭವಾಗಲಿ! -ಪ್ರತಿಲಿಪಿ ಕನ್ನಡ ದಯವಿಟ್ಟು ಗಮನಿಸಿ:ಕೆಲವೇ ದಿನಗಳಲ್ಲಿ, ಈ ಸ್ಪರ್ಧೆಯಲ್ಲಿ 80+ ಅಧ್ಯಾಯಗಳ ಧಾರಾವಾಹಿಗಳನ್ನು ಪ್ರಕಟಿಸಿದ ಎಲ್ಲಾ ಯಶಸ್ವಿ ಬರಹಗಾರರ ಪಟ್ಟಿಯನ್ನು ಮತ್ತು ಉದಯೋನ್ಮುಖ ಲೇಖಕರ ಹೆಸರನ್ನು ನಾವು ಪ್ರಕಟಿಸುತ್ತೇವೆ. ಸ್ಪರ್ಧೆಯ ವಿವರಗಳಲ್ಲಿ ತಿಳಿಸಿದಂತೆ ಪ್ರತಿಲಿಪಿ ಕಡೆಯಿಂದ ಅವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ನಾವು ಅವರ ಸಾಧನೆಯನ್ನು ಇಡೀ ಪ್ರತಿಲಿಪಿ ಕುಟುಂಬದೊಂದಿಗೆ ಆಚರಿಸುತ್ತೇವೆ. ಜೊತೆಗೆ ಹೆಚ್. ಜಿ. ರಾಧಾದೇವಿ ಸ್ಮರಣ ಪುರಸ್ಕಾರ ವಿಜೇತರ ಪಟ್ಟಿಯನ್ನು ಸಹ ಪ್ರಕಟಿಸಲಾಗುವುದು. ಪ್ರತಿಲಿಪಿ ಬ್ಲಾಗ್ ವಿಭಾಗವನ್ನು ಗಮನಿಸುತ್ತಿರಿ!ಇನ್ನೂ ಹೆಚ್ಚು ತೋರಿಸಿ
- ಪ್ರತಿಲಿಪಿ ಉದಯೋನ್ಮುಖ ಲೇಖಕ ಪ್ರಶಸ್ತಿ ಸ್ಪರ್ಧೆಯ ಫಲಿತಾಂಶ12 जनवरी 2024ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಪ್ರತಿಲಿಪಿ ಉದಯೋನ್ಮುಖ ಲೇಖಕ ಪ್ರಶಸ್ತಿ' ಧಾರಾವಾಹಿ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ತಮ್ಮಿಷ್ಟದ ಯಾವುದೇ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 10 ಅಧ್ಯಾಯಗಳ ಕಿರು ಕಥಾಸರಣಿಗಳನ್ನು ರಚಿಸುವ ಸ್ಪರ್ಧೆಯಾಗಿತ್ತು. ಪ್ರತಿಲಿಪಿಯ ಹೊಸ ಬರಹಗಾರರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬರಹಗಾರರು ಈ ಸ್ಪರ್ಧೆಯಲ್ಲಿ ತಮ್ಮ ಕಿರು ಧಾರಾವಾಹಿಯನ್ನು ಪ್ರಕಟಿಸುವುದರ ಮೂಲಕ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವತ್ತ ಒಂದು ಹೆಜ್ಜೆ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಯಾಕೆ ಮುಖ್ಯವಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು! ಸರಳವಾಗಿ ಹೇಳುವುದಾದರೆ, ಬರಹಗಾರರಿಗೆ ತಮ್ಮ ಬರವಣಿಗೆಯ ಮೂಲಕವೇ ಆದಾಯ ಗಳಿಸುವ ಅವಕಾಶ ಪಡೆಯಲು ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಮೊದಲ ಹೆಜ್ಜೆ. ಪ್ರತಿಲಿಪಿ ಉದಯೋನ್ಮುಖ ಲೇಖಕ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಬರಹಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ಲಕ್ಷಾಂತರ ಓದುಗರ ಪ್ರೀತಿ, ಅಭಿಮಾನ ಗಳಿಸುವಂತಾಗಲಿ ಎಂದು ನಾವು ಆಶಿಸುತ್ತೇವೆ. ಬರವಣಿಗೆಯ ಕುರಿತು ನಿಮಗಿರುವ ಆಸಕ್ತಿ ಮತ್ತು ನಿಯಮಿತವಾಗಿ ಕೃತಿಗಳನ್ನು ರಚಿಸುವ ಬದ್ಧತೆ ಮುಂದಿನ ದಿನಗಳಲ್ಲಿ ನಿಮಗೆ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಸಹಾಯ ಮಾಡಲಿದೆ. ವಿಜೇತ ಕೃತಿಗಳ ವಿವರ: ಪ್ರಥಮ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಅಚಲ ಬಿ. ಹೆನ್ಲಿ ಅವರ ವಂಶಿ ಕತೆಯ ಕುರಿತು: ಒಂದು ಶಿಕ್ಷಕಿಯ ಜೀವನದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಮತ್ತು ಭಾವಪೂರ್ವಕವಾಗಿ ಈ ಕತೆಯಲ್ಲಿ ಬಿಂಬಿಸಲಾಗಿದೆ. ಒಬ್ಬ ಗುರುವಿನ ಒಂದು ಸಣ್ಣ ಕಾಳಜಿ, ಮಾರ್ಗದರ್ಶನ ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಪರಿಣಾಮಕಾರಿಯಾಗಬಹುದು ಎನ್ನುವುದನ್ನು ಉತ್ತಮವಾಗಿ ಹೇಳಲಾಗಿದೆ. ದ್ವಿತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಚೈತನ್ಯ ಬಿ ಅವರ ಹೊಸ ಬೆಳಕು... ಕತೆಯ ಕುರಿತು: ಒಂದೊಳ್ಳೆಯ ಕೌಟುಂಬಿಕ ಪ್ರೇಮಕತೆ. ಸಾಮಾನ್ಯ ಕಥಾಹಂದರವೆನಿಸಿದರೂ ನಿರೂಪಣಾ ಶೈಲಿಯ ಮೂಲಕ ಕತೆ ಓದುಗರನ್ನು ಆಕರ್ಷಿಸುತ್ತದೆ. ತೃತೀಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಮಾಯಾ ಕವನ ಅವರ ದೇವರ ಕೆರೆ ಕತೆಯ ಕುರಿತು: ಒಂದು ಊರಿನ ಕೆರೆ ಮತ್ತು ಆ ಊರಿನವರ ಸುತ್ತ ಸುತ್ತುವ ಕತೆ ಸಾಮಾಜಿಕ, ಕೌಟುಂಬಿಕ, ರಾಜಕೀಯ ವಿಚಾರಗಳನ್ನು ಒಳಗೊಂಡು ಉತ್ತಮವಾಗಿ ಮೂಡಿಬಂದಿದೆ. ಒಂದು ಘಟನೆಯನ್ನು ಪ್ರಮುಖವಾಗಿ ತೆಗೆದುಕೊಂಡು ಅದರ ಸುತ್ತ ಕತೆಯ ಎಳೆಯನ್ನು ಹೆಣೆದ ರೀತಿ ಚೆನ್ನಾಗಿದೆ. ನಾಲ್ಕನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಸುಮಾ ಬೆಳಗೆರೆ ಅವರ ಆಶ್ಲೇಷ ಐದನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಅಶೋಕ್ ಕುಮಾರ್ ಜಿ. ಎಸ್ ಅವರ ದಿಗಂತದಲ್ಲಿ ಗೋಚರಿಸಿದ ಸೂರ್ಯ ಆರನೆಯ ಬಹುಮಾನ: ರೈಟಿಂಗ್ ಕಿಟ್ ಮತ್ತು ಆಕರ್ಷಕ ಡಿಜಿಟಲ್ ಪ್ರಮಾಣಪತ್ರ ಪ್ರಶ್ನಾ ನಾರಾಯಣ ರೈ ಅವರ ಅಪರಾಧಿ ನಾನಲ್ಲವಾದರೂ .....ಅಪವಾದವೇಕೆ? ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು ಕ್ರ. ಸಂ ಕರ್ತೃ ಕೃತಿ 1 ಆಶ್ರಿತಾ ಕಿರಣ್ ಮೌನವೇ ಪ್ರೀತಿಯೋ ಪ್ರೀತಿಯೇ ಮೌನವೋ 2 ಸುನೀತಾ ಶೆಟ್ಟಿ ಕಣ್ಣಲ್ಲಿ ಮೂಡಿದ ಕಾಮನಬಿಲ್ಲು 3 ಕವಿತಾ ಟಿ. ಎಸ್ ಅಭೀಜ್ಞಾ 4 ಕೀರ್ತಿರಾ ಭಾರವಿ 5 ಪ್ರಪಂಚ ಸಮಾನಾಂತರ ಹಾದಿಯಲ್ಲಿ ಪ್ರೀತಿಯ ಪಯಣ 6 ಅಕ್ಷಿತಾ ಶೆಟ್ಟಿ ನೀನಾದೆ ನನ್ನ ಬದುಕಿನ ದೀಪ 7 ಭಾನು ಶ್ರೀಪಾದ್ ಅಗಣಿತ ತಾರಾ ಗಣಗಳ ನಡುವೆ 8 ಶಿವಾನಿ ಶ್ರೀ ನಿವಾಸ ಕಲ್ಯಾಣ 9 ಚೈತ್ರಾ ಪ್ರೀತಿಯ ಹೆಸರೇ ನೀನು 10 ಸುಹಾನಿ ನಾಯ್ಕ್ ನಾನೆಂದಿಗೂ ನಿನ್ನವನಾಗಿರುವೆ 11 ನವ್ಯ ಪ್ರೀತಿಯೇ ನನ್ನುಸಿರು 12 ಧರಣಿ ಸಪ್ತ ಸಾಗರದಾಚೆ ಎಲ್ಲೋ ಸುಪ್ತ ಸಾಗರ ಕಾದಿದೆ!! ಸ್ಪರ್ಧೆಯಲ್ಲಿ ಭಾಗವಹಿಸುವುದರ ಗೋಲ್ಡನ್ ಬ್ಯಾಡ್ಜ್ ಪಡೆದುಕೊಂಡಿರುವ ಲೇಖಕರು: ಕ್ರ. ಸಂ ಲೇಖಕರು 1 ಶ್ರೀ ಭಾಗ್ಯ ಪೂಜಾರಿ 2 ಲಕ್ಷ್ಮೀ ಬೀರರಾಜು 3 ಸುಷ್ಮಿತಾ ಶೆಟ್ಟಿ 4 ಅಕ್ಷಿತಾ ಶೆಟ್ಟಿ 5 ರಶ್ಮಿತಾ ಗೋಲ್ಡನ್ ಬ್ಯಾಡ್ಜ್ ಹೊಂದಿರದ ಹಲವಾರು ಲೇಖಕ/ಲೇಖಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಗೋಲ್ಡನ್ ಬ್ಯಾಡ್ಜ್ ಹೊಂದುವಂತಾಗಿ, ತಮ್ಮ ಮುಂಬರುವ ಧಾರಾವಾಹಿಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುವ ಸೌಲಭ್ಯವನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಗೋಲ್ಡನ್ ಬ್ಯಾಡ್ಜ್ ಪಡೆದುಕೊಂಡಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು. ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ: ಧಾರಾವಾಹಿಗಳ ರಚನೆ ಸೂಕ್ಷ್ಮವಾದ, ಸರಳವೆನಿಸಿದರೂ ಬಹಳ ಶ್ರಮ ಬೇಡುವ ಕಾಯಕ. ಕಥಾಹಂದರ ಆಯ್ಕೆ, ಅಚ್ಚುಕಟ್ಟು ನಿರೂಪಣೆ ಮತ್ತು ಅಧ್ಯಯನ ಬೇಡುವ ಈ ಕೌಶಲ್ಯ; ಮೌಲ್ಯಯುತ ಸಂದೇಶಗಳನ್ನು ನೀಡುತ್ತ, ಸಮಾಜದ ವಸ್ತುಸ್ಥಿತಿಯನ್ನು ತೆರೆದಿಡುತ್ತ ಓದುಗರಿಗೆ ಮನೋರಂಜನೆಯ ರಸದೌತಣ ನೀಡಬೇಕು. ಪ್ರತಿ ಅಧ್ಯಾಯಗಳಲ್ಲೂ ಕುತೂಹಲ ಕಾಪಾಡಿಕೊಂಡು ಜೊತೆಗೆ ತನ್ನ ಕಥಾವಸ್ತುವಿನಿಂದ ಹೊರಬರದೇ ಧಾರಾವಾಹಿಗಳು ರಚನೆಯಾಗಬೇಕು; ಅಂದಾಗ ಮಾತ್ರ ಧಾರಾವಾಹಿ ಓದುಗರ ಮನಸ್ಸಿನಲ್ಲಿ ಅಚ್ಚೊತ್ತಬಲ್ಲದು. 'ಪ್ರತಿಲಿಪಿ ಉದಯೋನ್ಮುಖ ಲೇಖಕ ಪ್ರಶಸ್ತಿ' ಸ್ಪರ್ಧೆಯಲ್ಲಿ ವಿವಿಧ ಕಥಾವಸ್ತು, ಕಥಾಹಂದರಗಳುಳ್ಳ ಧಾರಾವಾಹಿಗಳು ಸಲ್ಲಿಸಲ್ಪಟ್ಟಿದ್ದವು. ಭಾಗವಹಿಸಿದ ಎಲ್ಲರಿಗೂ ಅವರ ಪ್ರಯತ್ನಕ್ಕಾಗಿ ಶ್ಲಾಘಿಸಲೇಬೇಕು. ಕಥಾವಸ್ತು ವಿಭಿನ್ನವಾಗಿದ್ದರೂ ನಿರೂಪಣೆ ಹಾಗೂ ವ್ಯಾಕರಣ ಬಳಕೆಯತ್ತ ಗಮನ ಹರಿಸುವುದು ಮುಖ್ಯ ಎಂದೆನಿಸಿತು. ಕೆಲವೊಮ್ಮೆ ಕಣ್ತಪ್ಪಿನಿಂದ ದೋಷಗಳಾಗುವುದುಂಟು, ಆದರೆ ಚಿಹ್ನೆಗಳ ಬಳಕೆಗಳಲ್ಲಿ ಸಾಕಷ್ಟು ಜಾಗೃತೆ ವಹಿಸುವುದು ಅಗತ್ಯ. ಜೊತೆಗೆ ಕೆಲವು ಕತೆಗಳು ಸ್ಪರ್ಧೆಯ ನಿಯಮಗಳನ್ನು ಪಾಲಿಸಿರಲಿಲ್ಲ; ಹಲವು ಕತೆಗಳು ಪೂರ್ಣಗೊಂಡಿರಲಿಲ್ಲ. ನಿಯಮಗಳನ್ನು ಪಾಲಿಸದ ಕೃತಿಗಳನ್ನು ಸ್ಪರ್ಧೆಯಿಂದ ಹೊರಗುಳಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸ್ಪರ್ಧೆಗಳ ತೀರ್ಪುಗಳನ್ನು ನೀಡುವುದು ಸವಾಲಿನ ಸಂಗತಿಯೇ ಸರಿ. ಸಲ್ಲಿಸಲ್ಪಟ್ಟಿದ್ದ ಕತೆಗಳಲ್ಲಿ ಭಾಷೆ, ಸಾಹಿತ್ಯ, ನಿರೂಪಣೆ ಮತ್ತು ಮೌಲ್ಯಯುತ ಸಂದೇಶ, ಸೃಜನಶೀಲತೆ ಮುಂತಾದ ಮಾನದಂಡಗಳ ಆಧಾರದ ಮೇಲೆ ವಿಜೇತ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈಗ ವಿಜೇತ ಕೃತಿಗಳ ಪಟ್ಟಿಯಲ್ಲಿ ಆಯ್ಕೆಯಾಗಿರುವ ಕೃತಿಗಳು ಮಾತ್ರ ಶ್ರೇಷ್ಠ ಕೃತಿಗಳು ಎಂದು ಅರ್ಥವಲ್ಲ! ಸ್ಪರ್ಧೆಯ ಮಾನದಂಡಗಳ ಅನುಸಾರ ವಿಜೇತ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಹಲವು ಕಥಾಹಂದರಗಳು ಇನ್ನಷ್ಟು ಅಧ್ಯಯನದ ಮೂಲಕ ಉತ್ತಮವಾದ ನಿರೂಪಣೆಯಲ್ಲಿ ಮೂಡಿಬಂದರೆ ಅತ್ಯುತ್ತಮ ಕೃತಿಗಳಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಬರವಣಿಗೆಯ ಕುರಿತು ಆಸಕ್ತಿ, ಬದ್ಧತೆ ಮತ್ತು ಉತ್ಸಾಹ; ಜೊತೆಗೊಂದಷ್ಟು ಅಧ್ಯಯನ ಉತ್ತಮ ಕೃತಿಗಳನ್ನು ರಚಿಸುವುದಕ್ಕೆ ಸಹಕಾರಿ. ಗೆಲ್ಲುವುದಕ್ಕೆ ಸ್ಪರ್ಧಿಸುವುದು ಅಥವಾ ಪ್ರಯತ್ನಿಸುವುದೇ ಮೊದಲ ಮೆಟ್ಟಿಲು. ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಬಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳನ್ನು ತಿಳಿಸುತ್ತೇವೆ. - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ಪ್ರತಿಲಿಪಿಯಲ್ಲಿ ನಿಮ್ಮ ಗಳಿಕೆ ಸುಸ್ಥಿರವಾಗಿರಲು ಅನುಸರಿಸಬೇಕಾದ ಪ್ರಮುಖ ೧೦ ವಿಧಾನಗಳು :09 जनवरी 2024ಪ್ರತಿಲಿಪಿಯಲ್ಲಿ ನಿಮ್ಮ ಗಳಿಕೆ ಸುಸ್ಥಿರವಾಗಿರಲು ಅನುಸರಿಸಬೇಕಾದ ಪ್ರಮುಖ ೧೦ ವಿಧಾನಗಳು: ಓದುಗರೊಂದಿಗೆ ಸದಾ ಸಂಪರ್ಕದಲ್ಲಿರಿ: ಪ್ರತಿಲಿಪಿಯಲ್ಲಿ ಸದಾ ಸಕ್ರಿಯವಾಗಿರಿ ಮತ್ತು ಕನಿಷ್ಟ ಒಂದಾದರೂ ಧಾರಾವಾಹಿ ಮುಂದುವರೆಯುತ್ತಲೇ ಇರುವಂತೆ ನೋಡಿಕೊಳ್ಳಿ. ನಮ್ಮಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಆಕರ್ಷಕ ಕಥಾಹಂದರ ಹೊಂದಿರುವ, ಕನಿಷ್ಠ 1000 ಪದಗಳನ್ನು ಪ್ರತಿ ಅಧ್ಯಾಯದಲ್ಲಿ ಹೊಂದಿದ ನೂರಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳು ಓದುಗರಿಂದ ಸತತವಾಗಿ ಓದಲ್ಪಡುತ್ತವೆ. ಪ್ರತಿನಿತ್ಯ ಈ ರೀತಿಯ ಕಾದಂಬರಿಗಳ ಅಧ್ಯಾಯಗಳನ್ನು ರಚಿಸಿ ಪ್ರಕಟಿಸುವ ಮೂಲಕ ಓದುಗರೊಂದಿಗೆ ಸತತವಾಗಿ ಸಂಪರ್ಕದಲ್ಲಿರಬಹುದು. ಸಕ್ರಿಯರಾಗಿ ಪೋಸ್ಟ್ ಮಾಡುತ್ತಿರಿ: ಹೊಸದಾಗಿ ಪ್ರಾರಂಭವಾದ ನಿಮ್ಮ ಕೃತಿಗಳ ಕುರಿತ ಕುತೂಹಲಭರಿತ ಮಾಹಿತಿ, ಕೃತಿಯಲ್ಲಿ ವಿವರಿಸುವ ಸ್ಥಳ, ಘಟನೆ, ಕಾಲಘಟ್ಟ, ಮಹಾನ್ ವ್ಯಕ್ತಿಗಳು, ಇನ್ನಿತರೇ ಅಂಶಗಳ ಕುರಿತು ಪೋಸ್ಟ್ ಮಾಡುವ ಮೂಲಕ ಓದುಗರಲ್ಲಿ ನಿಮ್ಮ ಮುಂಬರುವ ಧಾರಾವಾಹಿಯ ಕುರಿತು ಕುತೂಹಲ ಸೃಷ್ಟಿಸಿ. ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸಲು ಪ್ರಾರಂಭಿಸಿದ ಬಳಿಕ, ಪ್ರತಿ ಅಧ್ಯಾಯ ಪ್ರಕಟಗೊಂಡಾಗ ಆಯಾ ಅಧ್ಯಾಯದಲ್ಲಿ ನೆಡೆಯುವ ಕಥೆಯ ಕುರಿತು, ಪಾತ್ರ, ಸನ್ನಿವೇಶ, ಘಟನೆ ಮುಂತಾದವುಗಳ ಕುರಿತು ಮಾಹಿತಿ ನೀಡಿ. ಇದು ಓದುಗರನ್ನು ಸದಾ ಹಿಡಿದಿಡಲು ಸಹಕಾರಿಯಾಗುತ್ತದೆ. ವಾರದಲ್ಲಿ ಕನಿಷ್ಟ ಮೂರು ಅಧ್ಯಾಯವನ್ನಾದರೂ ಪ್ರಕಟಿಸಲು ನಿರ್ಧರಿಸಿ. ಹವ್ಯಾಸ ಬೆಳೆಸಿಕೊಳ್ಳಿ: ಪ್ರತಿನಿತ್ಯ ಕನಿಷ್ಟ 30-45 ನಿಮಿಷಗಳನ್ನು ಬರವಣಿಗೆಗಾಗಿಯೇ ಮೀಸಲಿಡುತ್ತೇನೆಂದು ನಿರ್ಧರಿಸಿ. ಪ್ರತಿನಿತ್ಯ ಕನಿಷ್ಠ 800-1000 ಪದಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಲ್ಲಿ ಕ್ರಮೇಣ ಬರಹದ ಮೇಲೆ ಹಿಡಿತ ಸಾಧಿಸಿ, ಸುಲಭವಾಗಿ ದಿನವೂ ಒಂದೆರೆಡು ಅಧ್ಯಾಯಗಳನ್ನು ರಚಿಸಿ ಪ್ರಕಟಿಸಬಹುದು. ಓದುಗರ ಮೆಚ್ಚಿನ ವಿಷಯ ಆಯ್ಕೆ ಮಾಡಿಕೊಳ್ಳಿ: ಪ್ರಸ್ತುತ ಪ್ರತಿಲಿಪಿಯ ಓದುಗರು ಪ್ರೀತಿ ಪ್ರೇಮ, ನಿಗೂಢ ರೋಚಕ, ಪತ್ತೇದಾರಿ, ಕೌಟುಂಬಿಕ ಮತ್ತು ಮಹಿಳಾ ಕೇಂದ್ರಿತ ವಿಷಯಗಳನ್ನು ಹೊಂದಿರುವ ಕೃತಿಗಳನ್ನು ಓದಲು ಇಚ್ಛಿಸುತ್ತಾರೆ. ಪ್ರಾರಂಭದಲ್ಲಿ ನೀವು ಕಥೆ ಹೆಣೆಯಲು ಸುಲಭವಾಗುವ ಈ ವಿಷಯವಸ್ತುಗಳನ್ನಿಟ್ಟುಕೊಂಡು ಕೃತಿ ರಚಿಸಿ. ಓದುಗರು ಮತ್ತು ಹಿಂಬಾಲಕರ ಸಂಖ್ಯೆ ಹೆಚ್ಚಾದಂತೆ, ನಿಮ್ಮ ಕೃತಿಗಳ ಕುರಿತ ವಿಮರ್ಶೆ, ಅಭಿಪ್ರಾಯಗಳ ಸಂಖ್ಯೆಯೂ ಹೆಚ್ಚುತ್ತದೆ. ಇದು ಬರೆಯುವಲ್ಲಿ ನಿಮಗೆ ಹೊಸ ಆತ್ಮವಿಶ್ವಾಸ ನೀಡುತ್ತದೆ. ಕ್ರಮೇಣ ವೈವಿಧ್ಯಮಯ ವಿಷಯಗಳ ಕುರಿತು ಅಥವಾ ನಿಮ್ಮಿಷ್ಟದ ಪ್ರಭೇದದಲ್ಲಿ ಬರಹವನ್ನು ರಚಿಸಿ ಓದುಗರನ್ನು ಓದಲು ಪ್ರೇರೇಪಿಸಬಹುದು. ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಗಳಲ್ಲಿ ಸದಾ ಭಾಗವಹಿಸಿ: ನಿಮ್ಮ ಗಳಿಕೆ, ಓದಿನ ಸಂಖ್ಯೆ, ಅಭಿಪ್ರಾಯ/ವಿಮರ್ಶೆಗಳ ಸಂಖ್ಯೆ, ಹಿಂಬಾಲಕರ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳಲು ಪ್ರತಿಲಿಪಿ ನೆಡೆಸುವ ಎಲ್ಲ ಸ್ಪರ್ಧೆಗಳಲ್ಲಿ ಸದಾಕಾಲ ಭಾಗವಹಿಸಿ. ಇದು ನಿಗದಿತ ಸಮಯದಲ್ಲಿ ನಿರ್ದಿಷ್ಟ ಪದಸಂಖ್ಯೆ ಮತ್ತು ಅಧ್ಯಾಯಗಳನ್ನು ಹೊಂದಿರುವ ಕೃತಿಗಳನ್ನು ಪ್ರಕಟಿಸಲು ಪ್ರೇರೇಪಿಸುವುದರಿಂದ ನಿಮಗೆ ಸತತವಾಗಿ ಅಷ್ಟೇ ಅಲ್ಲದೇ ವೇಗವಾಗಿ ಬರೆಯುವ ಅಭ್ಯಾಸ ಮೈಗೂಡಿಸುತ್ತದೆ. ಅಧ್ಯಾಯಗಳ ಗಾತ್ರ ಮತ್ತು ಕೊಂಡಿಗಳು: ಪ್ರತಿ ಅಧ್ಯಾಯವೂ ಮುಂದಿನ ಅಧ್ಯಾಯದ ಕಥಾಹಂದರಕ್ಕೆ ಆಕರ್ಷಕ ಕೊಂಡಿ ನೀಡಿದಲ್ಲಿ, ಓದುಗರು ನಿಮ್ಮ ಧಾರಾವಾಹಿಗಳ ಹೊಸ ಅಧ್ಯಾಯವನ್ನು ಓದಲು ಕಾತರರಾಗಿರುವಂತೆ ಮಾಡುತ್ತದೆ. ಪ್ರತಿ ಅಧ್ಯಾಯವೂ ಅತ್ಯುತ್ತಮ ಕಥಾಹಂದರ ಮತ್ತು ಕಥೆಗೆ ಸೂಕ್ತವೆನಿಸಿದ ಅಂಶಗಳನ್ನು ಹೊಂದಿದ್ದಲ್ಲಿ, ಅವುಗಳನ್ನು ನಾಣ್ಯಗಳ ಮೂಲಕ ಅನ್ಲಾಕ್ ಮಾಡಿ ಓದುವವರ ಸಂಖ್ಯೆ ಹೆಚ್ಚುತ್ತದೆ. ಸಬ್ಸ್ಕ್ರೈಬ್ ಮಾಡಲು ಉತ್ತೇಜಿಸಿ: ನಿಮ್ಮ ಕೃತಿಗಳನ್ನು ತಡೆ ರಹಿತವಾಗಿ ಮತ್ತು ಜಾಹಿರಾತು ರಹಿತವಾಗಿ ಓದಲು ಸಬ್ಸ್ಕ್ರಿಪ್ಷನ್ ಖರೀದಿಸುವಂತೆ ಓದುಗರ ಮನವೊಲಿಸಿ. ಸುದೀರ್ಘ ಕಥಾನಕಗಳನ್ನು ಪ್ರಕಟಿಸಲು ನೀವು ವ್ಯಯಿಸಿರುವ ಸಮಯ ಮತ್ತು ಕಲ್ಪನೆಗೆ ಪ್ರತಿಯಾಗಿ ಓದುಗರ ಪ್ರೀತಿ ಅಭಿಮಾನ ಮೆಚ್ಚುಗೆ ವಿಮರ್ಶೆ ಅಭಿಪ್ರಾಯಗಳ ಜೊತೆಗೆ ಹಣವೂ ಸಂಪಾದನೆಯಾದಲ್ಲಿ ನಿಮ್ಮ ಸಮಯ ಮತ್ತು ಬರಹ ಕೌಶಲ್ಯದ ಹೂಡಿಕೆಗೆ ಸೂಕ್ತ ಬೆಲೆ ಲಭ್ಯವಾದಂತಾಗುತ್ತದೆ. ಯಾವುದೇ ಕಾದಂಬರಿಯನ್ನು ಬರೆಯುವ ಮುನ್ನ ಮತ್ತು ಕೊನೆಯ ಅಧ್ಯಾಯದ ಪ್ರಕಟಣೆಯ ಬಳಿಕ ಧಾರಾವಾಹಿಗಾಗಿ ನೀವು ಪಟ್ಟ ಕಷ್ಟ, ಸಂಶೋಧನೆಯ ವಿವರಗಳು, ಭೇಟಿಯಾದ ವ್ಯಕ್ತಿ ಮತ್ತು ಸ್ಥಳಗಳು ಮುಂತಾದ ವಿವರ ನೀಡಿದಲ್ಲಿ, ನಿಮ್ಮ ಪ್ರತಿಲಿಪಿ ಖಾತೆ ಓದುಗರ ಮನಗೆಲ್ಲುವಲ್ಲಿ ಯಾವುದೇ ಸಂಶಯವಿಲ್ಲ. ಪ್ರಚಾರಕ್ಕೂ ಪ್ರಾಮುಖ್ಯತೆ ನೀಡಿ: ಯಾವುದೇ ಉತ್ಪನ್ನ ಅಥವಾ ಸೇವೆ ಅತ್ಯುತ್ತಮವಾಗಿದೆ ಎಂಬ ಮಾಹಿತಿ ಪ್ರಚಾರದ ಮೂಲಕ ಹೆಚ್ಚು ಗ್ರಾಹಕ/ಬಳಕೆದಾರರನ್ನು ತಲುಪುತ್ತದೆ. ಇದು ಪ್ರತಿಲಿಪಿಯ ನಿಮ್ಮ ಬರಹಗಳಿಗೂ ಅನ್ವಯಿಸುತ್ತದೆ. ಓದುಗರೊಂದಿಗೆ ಹಂಚಬಹುದಾದ ನಿಮ್ಮ ಬದುಕಿನ ಘಟನೆಗಳು, ಸಾಧನೆಗಳು, ಕೃತಿಯ ಮಾಹಿತಿ, ಸ್ಥಳ/ವ್ಯಕ್ತಿ ಪರಿಚಯ, ನಿಮ್ಮ ಭಾವನಾತ್ಮಕ ಅಂಶಗಳು ಮುಂತಾದವುಗಳನ್ನು ಪ್ರತಿಲಿಪಿಯಲ್ಲಿ ಪೋಸ್ಟ್ ಮಾಡಿ. ನಿಮ್ಮ ಪ್ರತಿಲಿಪಿಯ ಕೃತಿಗಳ ಪರಿಚಯ, ಓದುಗರ ಅಭಿಪ್ರಾಯಗಳು, ಅವರ ಭಾವನಾತ್ಮಕ ಸ್ಪಂದನೆ, ಪ್ರತಿಯೊಂದು ಕೃತಿಯ ವಿಶೇಷ, ಪ್ರತಿ ಅಧ್ಯಾಯದ ಕುತೂಹಲಭರಿತ ಮಾಹಿತಿ ಇತ್ಯಾದಿಗಳನ್ನು ನೀವು ಸಕ್ರಿಯರಿರುವ ಮತ್ತು ಅವಕಾಶವಿರುವ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ. ಜೊತೆಗೆ ನಿಮ್ಮ ಪ್ರತಿಲಿಪಿಯ ಪ್ರೊಫೈಲ್ ಮತ್ತು ಬರಹದ ಲಿಂಕ್ ಹಂಚಿ. ಇದು ಹೊಸ ಓದುಗರಿಗೆ ನಿಮ್ಮ ಪ್ರತಿಲಿಪಿ ಕೃತಿಗಳ ಮಾಹಿತಿ ನೀಡಿ ಅವರನ್ನು ನಿಮ್ಮ ಖಾಯಂ ಓದುಗರಾಗಲು ಪ್ರೇರೇಪಿಸುತ್ತದೆ. ಓದುಗರೊಂದಿಗೆ ಸಂವಾದ: ನಿಮ್ಮ ಕೃತಿಗಳನ್ನು ಓದಿ ವಿಮರ್ಶಿಸಿದ ಅಭಿಪ್ರಾಯ ತಿಳಿಸಿದ ಓದುಗರಿಗೆ ಪ್ರತಿಕ್ರಿಯಿಸಿ. ಕೃತಿಯ ಕಥಾಹಂದರ, ಪಾತ್ರಗಳು, ಸ್ಥಳಗಳು, ಸಂಭಾಷಣೆ, ಘಟನೆಗಳು, ಸನ್ನಿವೇಶಗಳು, ಕಾಲಘಟ್ಟ ಮುಂತಾದ ವಿಷಯಗಳ ಕುರಿತು ನೀವು ಸಂವಹನದಲ್ಲಿ ಮಾಹಿತಿ ನೀಡಿ ಓದುಗರು ನಿಮ್ಮ ಕೃತಿಗಳ ಕುರಿತು ಇನ್ನಷ್ಟು ಆಕರ್ಷಿತರಾಗುವಂತೆ ಮಾಡಬಹುದು. ಹೊಸ ಸೀಸನ್'ಗಳು: ಓದುಗರಿಂದ ಮೆಚ್ಚಲ್ಪಟ್ಟ ಧಾರಾವಾಹಿಗಳ ಮುಂದಿನ ಸೀಸನ್ ರಚಿಸಿ. ಅದು ಪ್ರಸ್ತುತ ಪ್ರಕಟಿಸಿ ಮುಗಿದಿರುವ ಕಥೆಯ ಪೂರ್ವಭಾಗವಿರಬಹುದು ಅಥವಾ ಉತ್ತರಭಾಗವಿರಬಹುದು. ನೀವು ಈಗಾಗಲೇ ಪ್ರಕಟಿಸಿದ ಕಾದಂಬರಿಯಲ್ಲಿನ ಜನಪ್ರಿಯ ಪಾತ್ರಗಳ ಮರುಪ್ರವೇಶದ ಮೂಲಕ ಕಥೆಯೊಂದಿಗೆ ಭಾವನಾತ್ಮಕವಾಗಿ ಬೆಸೆದಿರುವ ಓದುಗರನ್ನು ಪುನಃ ಅದೇ ರೀತಿಯ ಭಾವನಾಲೋಕಕ್ಕೆ ಕರೆದೊಯ್ಯಬಹುದು! ಈ ಕೆಳಗೆ ನೀಡಲಾಗಿರುವ ಲಿಂಕ್ಗಳ ಮೂಲಕ ಸುದೀರ್ಘ ಕೃತಿಗಳನ್ನು ರಚಿಸಲು ಹಂತಗಳನ್ನು ಸುಲಭವಾಗಿ ಅರಿಯಿರಿ: 1. ಪ್ರತಿಲಿಪಿಯು ತನ್ನ ಬರಹಗಾರರಿಗೆ ಸುದೀರ್ಘ ಕೃತಿಗಳನ್ನು ರಚಿಸಲು ಏಕೆ ಪ್ರೇರೇಪಿಸುತ್ತದೆ? 2. ಒಂದು ಕಥಾವಸ್ತು/ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿಸುವುದು ಹೇಗೆ? 3. ಉಪಕತೆಗಳು ಮತ್ತು ಪಾತ್ರಪೋಷಣೆ ಮಾಡುವುದು ಹೇಗೆ? 4. ಪ್ರೀತಿ-ಪ್ರೇಮ ವಿಷಯಾಧಾರಿತ ಕತೆಗಳನ್ನು ಆಸಕ್ತಿದಾಯಕವಾಗಿ ರಚಿಸುವುದು ಹೇಗೆ? 5. ಕೌಟುಂಬಿಕ, ಸಾಮಾಜಿಕ, ಮಹಿಳಾ ಕೇಂದ್ರಿತ ಕೃತಿಗಳನ್ನು ಆಸಕ್ತಿದಾಯಕವಾಗಿ ಹೇಗೆ ರಚಿಸಬಹುದು? 6. ಕಾಲ್ಪನಿಕ(ಫ್ಯಾಂಟಸಿ), ರಹಸ್ಯ, ಭಯಾನಕ ವಿಷಯಾಧಾರಿತ ಕತೆಗಳನ್ನು ಕುತೂಹಲಕಾರಿಯಾಗಿ ರಚಿಸುವುದು ಹೇಗೆ? 7. ಥ್ರಿಲ್ಲರ್ ಧಾರಾವಾಹಿಗಳನ್ನು ಕೌತುಕಭರಿತವಾಗಿಸುವುದು ಹೇಗೆ? 8. ನಿರೂಪಣಾ ಶೈಲಿ ಮತ್ತು ಸನ್ನಿವೇಶಗಳ ಸೃಷ್ಟಿ, ಘಟನೆಗಳನ್ನು ಜೋಡಿಸುವುದು ಹೇಗೆ? 9. ಅಧ್ಯಾಯಗಳ ರೂಪುರೇಷೆ ಮತ್ತು ಸನ್ನಿವೇಶಗಳನ್ನು ಬರೆಯುವ ವಿಧಾನ 10. ಸಂಭಾಷಣಾ ಶೈಲಿ ಮತ್ತು ಕೃತಿಯ ಮೊದಲ ಅಧ್ಯಾಯವನ್ನು ಆರಂಭಿಸುವ ಬಗೆ 11. ತಿರುವುಗಳು ಮತ್ತು ಕಥಾ ಕೊಂಡಿಗಳನ್ನು ಬಳಸುವುದು; ಕತೆಯನ್ನು ಅಂತ್ಯಗೊಳಿಸುವ ಪರಿ 12. ವಿವಿಧ ಭಾವನೆಗಳನ್ನು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ? 13. ಟ್ರೆಂಡಿಂಗ್ ಧಾರಾವಾಹಿಗಳ ವಿಶ್ಲೇಷಣೆ 14. ಓದುಗರನ್ನು ಆಕರ್ಷಿಸಬಲ್ಲ ವಿವಿಧ ಬಗೆಯ ಪ್ರಚಾರ ತಂತ್ರಗಳು 15. ಸತತವಾಗಿ ಬರೆಯಲು ವೇಳಾಪಟ್ಟಿ ತಯಾರಿಸುವುದು ಹೇಗೆ? 16. ಬರೆಯುವಾಗ ಎದುರಾಗುವ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ 17. ದೀರ್ಘ ಧಾರಾವಾಹಿಗಳನ್ನು ರಚಿಸುವುದರ ಪ್ರಯೋಜನಗಳು ಪ್ರತಿಲಿಪಿ ತಂಡ ಹಂಚಿಕೊಂಡಿರುವ ಈ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿ! ದೀರ್ಘ ಧಾರಾವಾಹಿ ಬರವಣಿಗೆ ನಿಮಗೆ ಎಷ್ಟು ಸರಳ ಮತ್ತು ಸುಲಭವಾಗಿ ತೋರುತ್ತದೆ ಎಂಬುದನ್ನು ನೀವು ಮನಗಾಣುವಿರಿ. ಈ ಮೂಲಕ ಬಹು ಅಧ್ಯಾಯಗಳ ಸುದೀರ್ಘ ಧಾರಾವಾಹಿಯನ್ನು ಸುಲಭವಾಗಿ ಪೂರ್ಣಗೊಳಿಸುವಿರಿ ಎಂದು ನಾವು ನಂಬುತ್ತೇವೆ. ಇಂದಿನಿಂದಲೇ ಬರೆಯಲು ಆರಂಭಿಸಿ!ಇನ್ನೂ ಹೆಚ್ಚು ತೋರಿಸಿ
- ಪ್ರತಿಲಿಪಿಯು ಕೃತಿಗಳ ಹಕ್ಕುಸ್ವಾಮ್ಯವನ್ನು ಹೇಗೆ ರಕ್ಷಿಸುತ್ತದೆ09 जनवरी 2024ಆತ್ಮೀಯ ಸಾಹಿತಿಗಳೇ, ವೈಯಕ್ತಿಕವಾಗಿ ಸಂದೇಶ ಕಳುಹಿಸುವ ಮೂಲಕ ಕೆಲವು ವೇದಿಕೆಗಳು, ಆ್ಯಪ್ ಗಳು ಮತ್ತು ವ್ಯಕ್ತಿಗಳು ನಮ್ಮ ಅನೇಕ ಲೇಖಕ ಲೇಖಕಿಯರನ್ನುಸಂಪರ್ಕಿಸಿದ ಕುರಿತು ದೂರುಗಳು ಬಂದಿರುತ್ತವೆ. ಈ ಕುರಿತಂತೆ ಪ್ರತಿಲಿಪಿಕನ್ನಡದ ಸಾಹಿತಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಅಂಶಗಳನ್ನು ನಿಮಗೆ ಈ ಮೂಲಕ ತಿಳಿಸಲು ಬಯಸುತ್ತೇವೆ : ನಿಮ್ಮ ಬರಹಗಳಿಗೆ ನಿರ್ದಿಷ್ಟ ಶುಲ್ಕ ವಿಧಿಸಿ ಬರೆಯಲು ವಿನಂತಿಸುವ ಯಾವುದೇ ಪ್ಲಾಟ್ಫಾರ್ಮ್ ಅಥವಾ ವ್ಯಕ್ತಿಗಳಿಂದ ಸದಾಕಾಲ ದೂರವಿರಿ. ಈ ರೀತಿಯ ಒಪ್ಪಂದಗಳು ನಿಮ್ಮ ಕೃತಿಗಳ ಹಕ್ಕುಸ್ವಾಮ್ಯವನ್ನು ಆಜೀವಪರ್ಯಂತ ಕಳೆದುಕೊಳ್ಳಲು ಕಾರಣವಾಗುತ್ತವೆ. ಸಂದೇಶ ವಿಭಾಗದಲ್ಲಿ ಈ ರೀತಿಯ ವ್ಯಕ್ತಿ ಅಥವಾ ಸಂಸ್ಥೆಗಳ ತಾತ್ಕಾಲಿಕ ಆಕರ್ಷಕ ಕೊಡುಗೆಗಳ ವಂಚನೆಗೆ ದಯವಿಟ್ಟು ಬಲಿಯಾಗಬೇಡಿ. ಅವರ ಮಾಹಿತಿ ನಮಗೆ ನೀಡಿ ಅಥವಾ ಅವರನ್ನು ಬ್ಲಾಕ್ ಮಾಡಿ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಪ್ರತಿಲಿಪಿಯಲ್ಲಿ ಅಥವಾ ಇತರೆ ಯಾವುದೇ ವೇದಿಕೆಯಲ್ಲಿ ಪ್ರಕಟಿಸಿದ ನಿಮ್ಮ ಬರಹವನ್ನು ಅಪ್ರಕಟಿತಗೊಳಿಸಲು ಸೂಚಿಸಿದಲ್ಲಿ, ನೀವು ನಿಮ್ಮ ಕೃತಿಗಳ ಹಕ್ಕು ಸ್ವಾಮ್ಯವನ್ನು ಕಳೆದುಕೊಳ್ಳುತ್ತಿರುವುದರ ಲಕ್ಷಣ ಎಂದು ಭಾವಿಸಬಹುದು. ಪ್ರತಿಲಿಪಿಯಲ್ಲಿ, ನಾವು ಯಾವುದೇ ಗುಪ್ತ/ರಹಸ್ಯ ಒಪ್ಪಂದಗಳ ಮೂಲಕ ಲೇಖಕ/ಲೇಖಕಿಯಿಂದ ಸಂಪೂರ್ಣ ಬರಹಗಳ ಹಕ್ಕನ್ನು ಪಡೆದಿರುವುದಿಲ್ಲ. ನಮ್ಮ ತಂಡವು ವಿವಿಧ ಮಾನದಂಡಗಳಿಗನುಗುಣವಾಗಿ ಯಾವುದೇ ಕೃತಿಯ ಹಕ್ಕನ್ನು ಪಡೆಯಲು ಇಚ್ಛಿಸಿದಲ್ಲಿ ನಮ್ಮ ನೀತಿ ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ವಿವರಿಸಿ, ಅವು ಆಯಾ ಕೃತಿಗಳ ಕರ್ತೃಗಳಿಗೆ ಒಪ್ಪಿತವಾದಲ್ಲಿ ಮಾತ್ರ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಹಕ್ಕುಗಳನ್ನು ಪಡೆದುಕೊಳ್ಳುತ್ತೇವೆ. ನಮ್ಮ ಎಲ್ಲ ಸಂವಹನಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರುವಂತೆ ಮತ್ತು ಲೇಖಕ/ಲೇಖಕಿಯರಿಗೆ ಯಾವುದೇ ಗೊಂದಲವಾಗದಂತೆ ನಾವು ಸದಾ ಎಚ್ಚರಿಕೆ ವಹಿಸುತ್ತೇವೆ. ಪ್ರತಿಲಿಪಿಯ ಲೇಖಕ/ಲೇಖಕಿಯರು ಇತರರಿಗೆ ಕಾನೂನಾತ್ಮಕವಾಗಿ ನೀಡಬಹುದಾದ ತಮ್ಮ ಬರಹಗಳ ವಿವಿಧ ಹಕ್ಕು ಮತ್ತು ಅಧಿಕಾರಗಳ ಕುರಿತು ಮಾಹಿತಿ ನೀಡುತ್ತೇವೆ. ಉದಾಹರಣೆಗೆ : ಪ್ರತಿಲಿಪಿಯಲ್ಲಿ ಪ್ರಕಟಗೊಂಡ ಕೃತಿಗಳನ್ನು ನಾವು ನಿರ್ದಿಷ್ಟ ಅವಧಿಗೆ ಇತರೆ (ಕಾಮಿಕ್ಸ್, ವೆಬ್ ಸೀರೀಸ್, ಮುದ್ರಿತ ಪುಸ್ತಕಗಳು, ಧ್ವನಿಮುದ್ರಿತ ರೂಪ ಇತ್ಯಾದಿ) ರೂಪದಲ್ಲಿ ಮಾರ್ಪಡಿಸುವ ಹಕ್ಕುಗಳನ್ನು ಆಯಾ ಸಾಹಿತಿಗಳಿಗೆ ಸಂಪೂರ್ಣವಾಗಿ ವಿವರಿಸಿಯೇ ಪಡೆಯುತ್ತೇವೆ. ಸಂಪೂರ್ಣ ಹಕ್ಕು ಪಡೆಯಲು ನಾವು ಇಚ್ಛಿಸಿದಲ್ಲಿ ಆ ಕುರಿತೂ ಸಹ ಮಾಹಿತಿ ನೀಡಿಯೇ ಮುಂದುವರೆಯುತ್ತೇವೆ. ಯಾವುದೇ ಸಾಹಿತಿ ತಮ್ಮ ಕೃತಿಗಳ ಸಂಪೂರ್ಣ ಹಕ್ಕುಸ್ವಾಮ್ಯವನ್ನು ಬಿಟ್ಟುಕೊಡಬಾರದು. ಅದು ಪ್ರತಿಲಿಪಿಯ ಲೇಖಕರ ಮೂಲಭೂತ ಹಕ್ಕು ಎಂದು ನಂಬುತ್ತೇವೆ. ಹೆಚ್ಚುವರಿಯಾಗಿ, ಅನೇಕ ಬರಹಗಾರರು ಭವಿಷ್ಯದ ಅಚ್ಚರಿದಾಯಕ ಬದಲಾವಣೆಗಳನ್ನು ನಮ್ಮಲ್ಲಿ ನಿರೀಕ್ಷಿಸದಿರಬಹುದು. ಕೃತಕ ಬುದ್ಧಿಮತ್ತೆಯ ವಿಕಸನದೊಂದಿಗೆ, ಪ್ರತಿಲಿಪಿಯಂತಹ ವೇದಿಕೆಗಳಲ್ಲಿ ಕಥೆಗಳನ್ನು ಶೀಘ್ರದಲ್ಲೇ 20 ಭಾಷೆಗಳಿಗೆ ಅನುವಾದಿಸಬಹುದು, ಪ್ರತಿ ಭಾಷೆಯಿಂದ ಲೇಖಕರು ಗಳಿಸಲು ಸಾಧ್ಯವಾಗಬಹುದು. ಆಡಿಯೋ, ಫಿಲ್ಮ್ ಮತ್ತು ಕಾಮಿಕ್ಸ್ನಂತಹ ಹಕ್ಕುಗಳನ್ನು ಪ್ರತ್ಯೇಕವಾಗಿ ನೀಡಬಹುದು, ಇದು ಲೇಖಕರು ವೈವಿಧ್ಯಮಯ ಸ್ಟ್ರೀಮ್ಗಳಿಂದ ಗಳಿಸಲು ಅನುವು ಮಾಡಿಕೊಡುತ್ತದೆ. ಯಾವುದೇ ಕೃತಿಯ ಹಕ್ಕುಸ್ವಾಮ್ಯದ ಕುರಿತು ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡು ಮುಂದುವರೆಯಲು ಆಯಾ ಒಪ್ಪಂದಗಳ ಕುರಿತು ವಕೀಲರೊಂದಿಗೆ ಚರ್ಚಿಸಿ ಮುಂದುವರೆಯಬಹುದು. ಅಥವಾ [email protected] ಗೆ ಇಮೇಲ್ ಕಳುಹಿಸುವ ಮೂಲಕ ನಮ್ಮ ಕಾನೂನು ತಜ್ಞರ ಸಲಹೆ ಪಡೆಯಬಹುದು.ಇನ್ನೂ ಹೆಚ್ಚು ತೋರಿಸಿ
- ಸೂಪರ್ ಸಾಹಿತಿ ಅವಾರ್ಡ್ಸ್- ಸೂಪರ್ 7 ಸೀಸನ್ | ಶೀಘ್ರದಲ್ಲಿ ಆರಂಭವಾಗಲಿದೆ28 दिसम्बर 2023ಆತ್ಮೀಯ ಸಾಹಿತಿಗಳೇ, ಹೊಸ ಕ್ಯಾಲೆಂಡರ್ ವರ್ಷ 2024 ನ್ನು ಸ್ವಾಗತಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶುಭಾಶಯವನ್ನು ಕೋರುತ್ತಿದ್ದೇವೆ. ನಿಮ್ಮ ಸಾಹಿತ್ಯ ಪಯಣವನ್ನು ಇನ್ನಷ್ಟು ಮುಂದುವರೆಸಿ ಯಶಸ್ಸನ್ನು ಗಳಿಸುವ ಹಾದಿಯಲ್ಲಿ ಈ ಹೊಸ ವರ್ಷ ನಿಮಗೆ ಹೊಸ ಹುರುಪು ನೀಡುವಂತಾಗಲಿ! ನಮ್ಮ ಸಾಹಿತಿಗಳಿಗಾಗಿ ಶೀಘ್ರದಲ್ಲಿಯೇ ಸೂಪರ್ ಸಾಹಿತಿ ಅವಾರ್ಡ್ಸ್- ಸೂಪರ್ 7 ಸೀಸನ್ ಅನ್ನು ಆಯೋಜಿಸಲಿದ್ದೇವೆ. ನಮ್ಮ ಸವಾಲು : ಹೊಸ ವರ್ಷವೆಂದರೆ ಹೊಸ ಹುಮ್ಮಸ್ಸು, ಉತ್ಸಾಹ, ಸಂಭ್ರಮ! ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಓದುಗರನ್ನು ಪಡೆದು, ಜನಪ್ರಿಯತೆ ಗಳಿಸುವಂತಹ ಕಥಾಹಂದರವನ್ನು ಹೊಂದಿರುವ ಹೊಚ್ಚ ಹೊಸ ಧಾರಾವಾಹಿಯನ್ನು ಬರೆಯಲು ಆರಂಭಿಸಿ. ಹೊಸವರ್ಷದ ಸಮಯದಲ್ಲಿ ನಿಮ್ಮ ಒಂದು ಅತ್ಯುತ್ತಮ ಕೃತಿಯ ಮೂಲಕ ಪ್ರತಿಲಿಪಿಯ ಲಕ್ಷಾಂತರ ಓದುಗರ ಮನಗೆಲ್ಲುವ ಅವಕಾಶವಿದು. ಸಾಹಿತ್ಯ ಲೋಕದಲ್ಲಿ ನಿಮ್ಮದೇ ಛಾಪು ಮೂಡಿಸುವ ಅವಕಾಶದ ಸದ್ವಿನಿಯೋಗ ಪಡೆಯಿರಿ. ನಿಮ್ಮ ಕತೆಯ ಪಾತ್ರಗಳು ಮತ್ತು ರೂಪುರೇಷೆಯನ್ನು ಇಂದಿನಿಂದಲೇ ಯೋಚಿಸಿ. ಸ್ಪರ್ಧೆಯನ್ನು ನಾವು ಜನವರಿ 2 ರಂದು ಆರಂಭಿಸಲಿದ್ದೇವೆ! ಈ ಸೂಪರ್ 7 ಸೀಸನ್ನಿನ ಅತ್ಯಾಕರ್ಷಕ ಬಹುಮಾನ, ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮ ಸಂದೇಶಗಳನ್ನು ಗಮನಿಸುತ್ತಿರಿ.ಇನ್ನೂ ಹೆಚ್ಚು ತೋರಿಸಿ
- ಸೂಪರ್ ಸಾಹಿತಿ ಅವಾರ್ಡ್ಸ್- 5 ರಲ್ಲಿ 100+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸಿರುವ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು!17 अक्टूबर 2023ಆತ್ಮೀಯ ಸಾಹಿತ್ಯಾಭಿಮಾನಿಗಳೇ, ನಿಮ್ಮೊಂದಿಗೆ ಒಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ! ಬಹು ನಿರೀಕ್ಷಿತ ಸೂಪರ್ ಸಾಹಿತಿ ಅವಾರ್ಡ್ಸ್ 5 ಸ್ಪರ್ಧೆಯ ಫಲಿತಾಂಶ ಕೆಲವು ದಿನಗಳ ಹಿಂದೆ ಘೋಷಣೆಯಾಗಿದೆ! ಇದು ಭಾರತದ ಅತಿದೊಡ್ಡ ಆನ್ಲೈನ್ ಕಥಾ ಸ್ಪರ್ಧೆಯಾಗಿದ್ದು ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ವೇದಿಕೆಯನ್ನೊದಗಿಸುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ 100+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸುವ ಬರಹಗಾರರಿಗೆ ಪ್ರತಿಲಿಪಿ ಕಡೆಯಿಂದ ಖಚಿತ ಬಹುಮಾನ ನೀಡುವುದಾಗಿ ತಿಳಿಸಲಾಗಿತ್ತು. ನಿಗದಿತ ಕಾಲಾವಧಿಯಲ್ಲಿ 100+ ಅಧ್ಯಾಯಗಳನ್ನು ಹೊಂದಿರುವ ಧಾರಾವಾಹಿ ರಚಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಬರಹಗಾರರು ಸಾಕಷ್ಟು ಶ್ರಮ ಮತ್ತು ಸಮಯವನ್ನು ವ್ಯಯಿಸಿ ತಮ್ಮ ಕೌಶಲ್ಯಕ್ಕೆ ರೂಪ ನೀಡಿರುತ್ತಾರೆ. ಶಿಸ್ತುಬದ್ಧ ಮತ್ತು ಯೋಜನಾಬದ್ಧವಾಗಿ ಕೃತಿಯನ್ನು ರಚಿಸಿರುತ್ತಾರೆ. ಸಾಹಿತ್ಯ ಮತ್ತು ಬರವಣಿಗೆಯ ಕುರಿತು ಆಸಕ್ತಿ ಹೊಂದಿರುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ನಿಜವಾಗಿಯೂ, ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು ಈ ಸವಾಲನ್ನು ಸ್ವೀಕರಿಸಿ 100+ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇಂತಹ ಪ್ರತಿಭಾವಂತ ಬರಹಗಾರರನ್ನು ಹೊಂದಿರುವುದು ನಮಗೆ ಹೆಮ್ಮೆಯ ವಿಷಯ. ಇದೇ ರೀತಿಯ ಬದ್ಧತೆ ಮತ್ತು ಪರಿಶ್ರಮದಿಂದ ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಇನ್ನಷ್ಟು ಉತ್ತಮವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಯಾಗಿಸಿದ್ದಕ್ಕೆ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಾಹಿತ್ಯದ ಕುರಿತು ನಿಮಗಿರುವ ಆಸಕ್ತಿ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಈ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿದೆ. ಸ್ಪರ್ಧೆಗೆ ಸಲ್ಲಿಸಲ್ಪಟ್ಟ ಕನ್ನಡದ ಬೃಹತ್ ಧಾರಾವಾಹಿ- ಬನಶಂಕರಿ ಕುಲಕರ್ಣಿ ಅವರ 180 ಅಧ್ಯಾಯಗಳಭಾರ್ಯ ರೂಪವತಿ ಶತೃ 100+ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದವರ ವಿವರ- ಕೃತಿ ಕರ್ತೃ ಕ್ಷಮಿಸಿ ಬಿಡಲೆ ಒಲವಿಗೆ ಸೋತು..!! ವಿನುತಾ ಗೌಡ ಅಮ್ನೋರ ಮಗಳು ವಿಷ್ಣುಪ್ರಿಯಾ ಭಾರ್ಯ ರೂಪವತಿ ಶತೃ ಬನಶಂಕರಿ ಕುಲಕರ್ಣಿ ಎಲ್ಲಿ ಮರೆಯಾದೆ? ಏಕೆ ದೂರಾದೆ? ವೀಣಾ ದೊರೆಸಾನಿ ಲಕ್ಷ್ಮಿ ಗೌಡ ಕಾಲ: ಕ್ರೀಡತಿ ವಿಜಯ ಭಾರತಿ ಶಿವರಂಜನಿ ಸಂಧ್ಯಾ ಭಟ್ ನೀ ಮರೆಯಾದೆ ಏಕೆ? ವಿದ್ಯಾ ಮೂರ್ತಿ ಕಾದಿರುವೆ ಜೀವ ಸಖ ಜೆ ಕೆ ಸ್ವತಂತ್ರ ಹಕ್ಕಿ ವೇದಾ ಮಂಜುನಾಥ್ ಆರಕ್ಕೇರದವರು ಗಜಲಕ್ಷ್ಮಿ ಗೋವಿಂದ ರಾಜು ಆಲಿಸಲಾರೆಯಾ ಮೌನದಿ ಹೃದಯದ ಮಾತನ್ನು ಮಾಲಾ ನಾರಾಯಣ ಬದುಕೆಂಬ ಮಾಯಾವಿ ಮೌನ ವಿ ಮತ್ತೆ ಒಲವ ಮಳೆಯಾಗುವುದೇ? ವೀಣಾ ನಮ್ಮ ದೃಷ್ಟಿಯಲ್ಲಿ ನೀವೆಲ್ಲರೂ ಸೂಪರ್ ಸಾಹಿತಿಗಳು! ನಿಮ್ಮಿಂದ ಇನ್ನಷ್ಟು ಉತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ನೀವು ಸೂಪರ್ ಸಾಹಿತಿ ಅವಾರ್ಡ್ಸ್ 6 ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 60+ ಅಧ್ಯಾಯಗಳ ಧಾರಾವಾಹಿಯನ್ನು ಡಿಸೆಂಬರ್ 25 ರ ಒಳಗೆ ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://kannada.pratilipi.com/event/9ys4h3faop ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ! - ಪ್ರತಿಲಿಪಿ ಸ್ಪರ್ಧಾ ವಿಭಾಗಇನ್ನೂ ಹೆಚ್ಚು ತೋರಿಸಿ
- 'ಪ್ರೇಮಾಮೃತವರ್ಷಿಣಿ' ಕಥಾ ಸ್ಪರ್ಧೆಯ ಫಲಿತಾಂಶ14 अक्टूबर 2023ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಬಹು ನಿರೀಕ್ಷಿತ ಪ್ರೇಮಾಮೃತವರ್ಷಿಣಿ ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ! ಪ್ರತಿಲಿಪಿಯ ನವ ಬರಹಗಾರರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬರಹಗಾರರು ಈ ಸ್ಪರ್ಧೆಯಲ್ಲಿ ತಮ್ಮ ಧಾರಾವಾಹಿಯನ್ನು ಪ್ರಕಟಿಸುವುದರ ಮೂಲಕ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವತ್ತ ಒಂದು ಹೆಜ್ಜೆ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಯಾಕಷ್ಟು ಮುಖ್ಯವಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು! ಸರಳವಾಗಿ ಹೇಳುವುದಾದರೆ, ಬರಹಗಾರರಿಗೆ ತಮ್ಮ ಬರವಣಿಗೆಯ ಮೂಲಕವೇ ಆದಾಯ ಗಳಿಸುವ ಅವಕಾಶ ಪಡೆಯಲು ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಮೊದಲ ಹೆಜ್ಜೆ. ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಬರಹಗಾರರು ತಮ್ಮ ಧಾರಾವಾಹಿಯ ಅಧ್ಯಾಯಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಆ ಮೂಲಕ ತಮ್ಮ ಬರಹಗಳಿಂದಲೇ ಪ್ರತಿ ತಿಂಗಳೂ ಆದಾಯ ಗಳಿಸುವ ಅವಕಾಶವೂ ಸಿಗಲಿದೆ. ಇದಲ್ಲದೆ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಬರಹಗಾರರು ಪ್ರತಿಲಿಪಿ ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಆಕರ್ಷಕ ನಗದು ಬಹುಮಾನ, ಭೌತಿಕ ಪ್ರಮಾಣಪತ್ರ ಮತ್ತಿತರ ಪ್ರಯೋಜನಗಳನ್ನು ಪಡೆಯುವ ಅವಕಾಶ ಸಿಗಲಿದೆ. ಪ್ರೇಮಾಮೃತವರ್ಷಿಣಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಬರಹಗಾರರ ಆಸಕ್ತಿ ಮತ್ತು ಪರಿಶ್ರಮ ಶ್ಲಾಘನೀಯ. ಬರವಣಿಗೆಯ ಕುರಿತು ನಿಮಗಿರುವ ಆಸಕ್ತಿ ಮತ್ತು ಬದ್ಧತೆ ಮುಂದಿನ ದಿನಗಳಲ್ಲಿ ನಿಮಗೆ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಸಹಾಯ ಮಾಡಲಿದೆ. ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ಲಕ್ಷಾಂತರ ಓದುಗರ ಪ್ರೀತಿ, ಅಭಿಮಾನ ಗಳಿಸುವಂತಾಗಲಿ ಎಂದು ನಾವು ಆಶಿಸುತ್ತೇವೆ. ಪ್ರೇಮಾಮೃತವರ್ಷಿಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಬಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳನ್ನು ತಿಳಿಸುತ್ತೇವೆ. ವಿಜೇತ ಕೃತಿಗಳ ವಿವರ ಪ್ರಥಮ ಬಹುಮಾನ:1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಮಲ್ಲಿಕಾ ಶಾಂತಾರಾಮ್ ಶೆಟ್ಟಿಅವರಮುಡಿಗೇರಿದ ಮಲ್ಲಿಗೆ ಕೃತಿಯ ಕುರಿತು:ಪ್ರೀತಿಯ ವಿವಿಧ ಸ್ವರೂಪಗಳನ್ನು ಉತ್ತಮವಾದ ಕತೆಗಳ ಮೂಲಕ ಪ್ರಸ್ತುತಪಡಿಸಿರುವ ಕಥಾಸಂಕಲನವಿದು. ಉತ್ತಮ ಕಥಾಹಂದರಗಳು ಮತ್ತು ನಿರೂಪಣೆಯ ಮೂಲಕ ಓದುಗರನ್ನು ಆಕರ್ಷಿಸುತ್ತದೆ. ಮನುಷ್ಯ ಸಂಬಂಧಗಳಲ್ಲಿ ಪ್ರೀತಿಯ ವಿವಿಧ ಬಗೆಯನ್ನು ಪ್ರಸ್ತುತಪಡಿಸಿರುವ ರೀತಿ ಉತ್ತಮವಾಗಿದೆ. ದ್ವಿತೀಯ ಬಹುಮಾನ:1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಭಾನು ಶ್ರೀಪಾದ್ಅವರನಿನ್ನ ಭಾವ ನಿನ್ನ ರಾಗ ಕೃತಿಯ ಕುರಿತು:ವಿಭಿನ್ನ ಕಥಾಹಂದರದ ಆಯ್ಕೆ ಮತ್ತು ಮನಮುಟ್ಟುವ ನಿರೂಪಣೆಯ ಮೂಲಕ ಈ ಕಥಾಸಂಕಲನ ಓದುಗರ ಮನಸ್ಸಿನಲ್ಲಿ ನೆಲೆಯೂರುತ್ತದೆ. ಪ್ರತಿ ಕತೆಯಲ್ಲಿಯೂ ಬೆರೆತ ಭಾವನಾತ್ಮಕತೆ ಓದುವಿಕೆಯಲ್ಲಿ ತಲ್ಲೀನರಾಗುವಂತೆ ಮಾಡುತ್ತದೆ. ತೃತೀಯ ಬಹುಮಾನ:1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವಸು ಭದ್ರಾವತಿಅವರಪ್ರೀತಿಯ ಮಜಲುಗಳು ಕೃತಿಯ ಕುರಿತು:ಪ್ರತಿ ಕತೆಯಲ್ಲಿ ಪ್ರೀತಿಯನ್ನು ವಿಭಿನ್ನ ಭಾವದಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸಲಾಗಿದೆ. ಉತ್ತಮ ಕಥಾಹಂದರ ಮತ್ತು ನಿರೂಪಣಾ ಶೈಲಿಯ ಮೂಲಕ ಈ ಕಥಾಸಂಕಲನ ಓದುಗರನ್ನು ಸೆಳೆಯುತ್ತದೆ. ನಾಲ್ಕನೆಯ ಬಹುಮಾನ:1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಚೈತನ್ಯಾ ಬಿಅವರಪ್ರೇಮಾಮೃತವರ್ಷಿಣೀ - ಕಥಾಸರಣಿ ಐದನೆಯ ಬಹುಮಾನ:1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ನಂದಿನಿಅವರಒಲವಾಮೃತವರ್ಷಿಣಿ ಆರನೆಯ ಬಹುಮಾನ:1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವರ್ಷಾ ಕಡಸೂರುಅವರಪ್ರೇಮಸುಧೆ ಏಳನೆಯ ಬಹುಮಾನ:1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸತೀಶ್ ಪಿಅವರದಿವ್ಯ ಪ್ರೇಮ ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು ಕ್ರ. ಸಂ ಕೃತಿ ಕರ್ತೃ 1 ಮುಡಿ ಏರಿದ ಹೂ ಸುಮಾ ಬೆಳಗೆರೆ 2 ಅನುರಾಗ ಸಂಗಮ ಲಾವಣ್ಯಾ ಹೆಗಡೆ 3 ಪ್ರೀತಿಯೆಂಬ ಅದ್ಭುತ! ಅದ್ವಯ 4 ಪ್ರೇಮಾಮೃತವರ್ಷಿಣಿ ಪ್ರಶ್ನಾ ನಾರಾಯಣ ರೈ 5 ಪ್ರೇಮ ಸುಮವು ಅರಳಿತು ಅಶೋಕ್ ಕುಮಾರ್ ಜಿ. ಎಸ್ 6 ಪಯಣ ಪ್ರೀತಿಯ ಜೊತೆಗೆ ಶ್ರೀಮೇಧ 7 ಬೆಸೆದ ಬಂಧನ ಮಾನಸ ವಿಜಯ್ 8 ಪ್ರೇಮಾಮೃತವರ್ಷಿಣಿ ದೀಕ್ಷಾ 9 ಕಥಾಸರಣಿ ರಾಧಾ ಕೃಷ್ಣನ ಅರಸಿ 10 ಜಂಭೋ ಶ್ವೇತಾ 11 ಪ್ರೇಮಾಮೃತವರ್ಷಿಣಿ ಎಲ್. ವಿ. ಎಲ್ 12 ಅಂಜೆಲಿಕಾ - ಪ್ರೀತಿಯ ಮಜಲುಗಳಿಗೊಂದು ಸಾಕ್ಷಿ ಅಂಜೆಲಿಕಾ 13 ಪ್ರೇಮಾಮೃತವರ್ಷಿಣಿ ಕಥೆಗಳು ಹರ್ಷ ವರ್ಧನ ಹೆಗಡೆ ನಿಟ್ಟೂರು 14 ಪ್ರೇಮದ ಹೊನಲು ಪ್ರೀತಿಯ ತೋರಣ ಪವಿತ್ರ ಹೆಗಡೆ 15 ಪ್ರೇಮಾಮೃತವರ್ಷಿಣಿ ಪ್ರಸನ್ನ ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ: ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಪ್ರೇಮಾಮೃತವರ್ಷಿಣಿ' ಕಥಾ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ತಮ್ಮಿಷ್ಟದ ಯಾವುದೇ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 7 ವಿಭಿನ್ನ ಕತೆಗಳ ಕಥಾಸಂಕಲನವನ್ನು ರಚಿಸುವ ಸ್ಪರ್ಧೆಯಾಗಿತ್ತು. ಸಲ್ಲಿಸಲ್ಪಟ್ಟಿದ್ದ ಕತೆಗಳು ಉತ್ತಮ ಕಥಾವಸ್ತುಗಳ ಮೇಲೆ ರಚಿಸಲ್ಪಟ್ಟಿದ್ದವು; ನಿರೂಪಣೆ, ಕಥಾ ಸಾರ ಬಹಳ ಉತ್ತಮವಾಗಿತ್ತು. ಅವುಗಳಲ್ಲಿ ಎಲ್ಲಾ ಕಥಾಸಂಕಲನಗಳ ಎಲ್ಲಾ ಕತೆಗಳನ್ನು ಓದಿ ವಿಜೇತ ಕೃತಿಗಳನ್ನು ಆಯ್ಕೆ ಮಾಡುವುದು ಸುಲಭದ ವಿಷಯವಾಗಿರಲಿಲ್ಲ. ಕಥಾವಸ್ತುವಿನ ಆಯ್ಕೆಯಲ್ಲಿ ವಿಭಿನ್ನತೆಯಿದ್ದರೂ ಪ್ರಸ್ತುತಿ ಮತ್ತು ನಿರೂಪಣಾ ಶೈಲಿ ಇನ್ನಷ್ಟು ಸುಧಾರಿಸಿದರೆ ಉತ್ತಮ ಎನಿಸಿತು. ಕೆಲವು ಕತೆಗಳಲ್ಲಿ ಪ್ರೀತಿಯನ್ನು ಪ್ರಸ್ತುತಪಡಿಸುವಂತಹ ನಿರೂಪಣೆಯಲ್ಲಿ ಹಿಂದೆ ಬಿದ್ದರೆ, ಕೆಲವು ಕತೆಗಳು ಆಯ್ದುಕೊಂಡ ಕಥಾವಸ್ತುವಿಗೆ ತಮ್ಮ ನಿರೂಪಣೆಯಿಂದ ಇನ್ನಷ್ಟು ಶಕ್ತಿ ತುಂಬಬಹುದಿತ್ತು ಎನಿಸಿದ್ದು ಸುಳ್ಳಲ್ಲ. ಹಾಗೆಯೇ ಬಹುತೇಕ ಕತೆಗಳು ಕೊಟ್ಟಿರುವ ವಿಷಯವಸ್ತುವನ್ನೇ ಶೀರ್ಷಿಕೆಯಾಗಿಸಿಕೊಂಡಿವೆ, ಕತೆಗೆ ತಕ್ಕಂತೆ ಬೇರೆ ಶೀರ್ಷಿಕೆ ಹುಡುಕುವ ಪ್ರಯತ್ನವೇ ಇಲ್ಲದಂತಿದೆ!! ಜೊತೆಗೆ ಬರಹಗಾರರು ಭಾಷಾ ಶುದ್ಧತೆ, ಅಧ್ಯಯನ, ನಿರೂಪಣಾ ಶೈಲಿಯ ಕುರಿತು ಇನ್ನಷ್ಟು ಗಮನ ಹರಿಸುವುದು ಉತ್ತಮ. ಹಿಂದೆಯೂ ಹೇಳಿದಂತೆ, ವಿಜೇತ ಕೃತಿಗಳ ಪಟ್ಟಿಯಲ್ಲಿ ಕಂಡುಬಂದ ಕೃತಿಗಳೇ ಶ್ರೇಷ್ಠವೆಂದಲ್ಲ! ಓದುವಾಗ ಪ್ರತಿ ಕೃತಿಯಲ್ಲಿಯೂ ಏನೋ ಒಂದು ಹೊಸ ಅಂಶ, ಹೊಸ ವಿಷಯ ಕಾಣುತ್ತದೆ. ಆದರೆ ಸ್ಪರ್ಧೆಯಲ್ಲಿ ತೀರ್ಪು ನೀಡಬೇಕಾದರೆ ಹಲವು ಅಂಶಗಳನ್ನು ಅಂದರೆ ಭಾಷೆ, ಸಾಹಿತ್ಯ, ನಿರೂಪಣೆ, ಸೃಜನಶೀಲತೆ ಮತ್ತು ಮೌಲ್ಯಯುತ ಸಂದೇಶ ಮುಂತಾದ ಮಾನದಂಡಗಳನ್ನು ಪರಿಗಣಿಸಬೇಕಾಗಿರುವುದರಿಂದ ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ. ಎಲ್ಲಾ ಬರಹಗಾರರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ. - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ‘ಸೂಪರ್ ಸಾಹಿತಿ ಅವಾರ್ಡ್ಸ್ 5’ ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ30 सितम्बर 2023ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಬಹು ನಿರೀಕ್ಷಿತ ಸೂಪರ್ ಸಾಹಿತಿ ಅವಾರ್ಡ್ಸ್ 5ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ! ಹಿಂದಿನ ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಯ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಬರಹಗಾರರಿಂದ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ನವ ಬರಹಗಾರರು ಗೋಲ್ಡನ್ ಬ್ಯಾಡ್ಜ್ ಪಡೆದು, ಈ ಸ್ಪರ್ಧೆಯಲ್ಲಿ ಭಾಗವಹಿಸಿ 60+ ಅಧ್ಯಾಯಗಳ ಧಾರಾವಾಹಿ ರಚಿಸಿರುವುದನ್ನು ನಾವು ಗಮನಿಸಿದ್ದೇವೆ. ಸೂಪರ್ ಸಾಹಿತಿ ಅವಾರ್ಡ್ಸ್ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. 12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. ಸ್ಪರ್ಧೆಯಲ್ಲಿ ವಿಜೇತ ಸಾಹಿತಿಗಳಾಗಿ ಗುರುತಿಸಿಕೊಂಡು, ಉತ್ತಮ ಕೃತಿಗಳನ್ನು ರಚಿಸಿರುವಸೂಪರ್ ಸಾಹಿತಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ. ನಿಮ್ಮ ಸಾಹಿತ್ಯ ಕೃಷಿ ಇನ್ನಷ್ಟು ಉತ್ತಮ ರೀತಿಯಲ್ಲಿ ಮುಂದುವರೆದು ಕನ್ನಡ ಸಾಹಿತ್ಯಕ್ಕೆ ನಿಮ್ಮಿಂದ ಅತ್ಯುತ್ತಮ ಕೃತಿಗಳು ಪ್ರತಿಲಿಪಿಯ ಮೂಲಕ ಸಿಗುವಂತಾಗಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಪರಿಶ್ರಮದಿಂದ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶ ಕಂಡು ಮುಕ್ತಾಯಗೊಂಡಿದೆ. ಪ್ರತಿಭಾವಂತ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ. ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಕತೆಗಳನ್ನು ತೀರ್ಪುಗಾರರು ಓದಿ, ವಿಶ್ಲೇಷಿಸಿ ಅವುಗಳಲ್ಲಿ ಉತ್ತಮವಾದ ಕೃತಿಗಳನ್ನು ಆಯ್ಕೆ ಮಾಡಿದ್ದಾರೆ. ವಿಜೇತ ಕೃತಿಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು- ವಿಜೇತ ಕೃತಿಗಳ ವಿವರ: ಪ್ರಥಮ ಬಹುಮಾನ:10,000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪುಷ್ಕರಿಣಿಅವರಆರೋಕ್ಷ ಕತೆಯ ಕುರಿತು:ದೇಶ ವಿರೋಧಿ ಚಟುವಟಿಕೆಗಳನ್ನು ಬೇಧಿಸುವ ಕರ್ತವ್ಯನಿರತ ಕಥಾನಾಯಕಿ ಅದರ ಜಾಲದೊಳಗೆ ತನಗೇ ತಿಳಿಯದಂತೆ ಸಿಕ್ಕಿಬಿದ್ದು, ಅದರಿಂದ ಹೊರಬರುವಾಗ ಅನಾವರಣವಾಗುವ ಹಲವು ಸತ್ಯಗಳನ್ನು ಕತೆ ತೆರೆದಿಡುತ್ತ ಸಾಗುತ್ತದೆ. ಕಥಾಹಂದರ, ನಿರೂಪಣೆ, ಭಾಷೆ ಎಲ್ಲವೂ ಉತ್ತಮವಾಗಿದ್ದು, ಪ್ರತಿ ಹಂತದಲ್ಲಿ ಓದುಗರಲ್ಲಿ ಕುತೂಹಲ ಹುಟ್ಟಿಸಲು ಈ ಕತೆ ಸಫಲವಾಗುತ್ತದೆ. ದ್ವಿತೀಯ ಬಹುಮಾನ:7000 ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಜ್ಯೋತಿ ಬಾಳಿಗಾಅವರವಿಧಿಯಾಟವನ್ನು ಬಲ್ಲವರು ಯಾರು? ಕತೆಯ ಕುರಿತು:ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯ ಕೂಡ ಮನುಷ್ಯನಿಗೆ ಬಹಳ ಮುಖ್ಯ. ಬಹಳ ಬಾರಿ ನಮ್ಮ ಸುತ್ತಲಿನ ಪರಿಸರ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ; ಇನ್ನು ಕೆಲವು ಬಾರಿ ವ್ಯಕ್ತಿಗತವಾಗಿ ಬರುತ್ತವೆ. ಅದಕ್ಕಾಗಿ ಪೋಷಕರ, ಪಾಲಕರ, ಸುತ್ತಲಿನವರ ಸಹಕಾರ ಎಷ್ಟು ಅಗತ್ಯ ಎಂಬುದನ್ನು ಕತೆ ಸಾರುತ್ತದೆ. ಉತ್ತಮ ಸಂದೇಶವುಳ್ಳ ಮಾಹಿತಿಯುಕ್ತ ಕಥಾಹಂದರದಿಂದ ಕತೆ ಓದುಗರ ಮನಸ್ಸನ್ನು ತಲುಪುತ್ತದೆ. ತೃತೀಯ ಬಹುಮಾನ:4000 ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶ್ವೇತಾ ಹೆಗಡೆಅವರಹೃದಯ ನಾರಂಗಿ ಕತೆಯ ಕುರಿತು:ತನ್ನದಲ್ಲದ ತನ್ನ ಮಗುವೊಂದನ್ನು ಸಲಹುವ ತಾಯಿಯೊಬ್ಬಳ ಕತೆ. ಕಳೆದುಕೊಂಡ ತನ್ನ ಒಲವನ್ನು ಜೀವನದ ದಾರಿಯಲ್ಲಿ ಎದುರಿಸಿದಾಗ ಉಂಟಾಗುವ ತಳಮಳಗಳು, ಭಾವತಲ್ಲಣಗಳು, ಗತದ ರಹಸ್ಯಗಳು ಇವೆಲ್ಲವನ್ನು ಹದವಾಗಿ ಬೆರೆಸಿ ಕತೆಯನ್ನು ರಚಿಸಲಾಗಿದೆ. ಉತ್ತಮ ನಿರೂಪಣೆಯೊಂದಿಗೆ ಕತೆ ಓದುಗನ ಮನಸ್ಸಿನಲ್ಲಿ ಜಾಗ ಪಡೆಯುತ್ತದೆ. ನಾಲ್ಕನೆಯ ಬಹುಮಾನ:2000 ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಬನಶಂಕರಿ ಕುಲಕರ್ಣಿಅವರಭಾರ್ಯ ರೂಪವತಿ ಶತೃ ಕತೆಯ ಕುರಿತು:ಸ್ಕ್ರಿಜೋಫ್ರೀನಿಯಾ ಖಾಯಿಲೆ ಒಂದು ಕುಟುಂಬದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂಬ ಕಥಾಹಂದರವನ್ನು ಹೊಂದಿರುವ ಈ ಕತೆ ಪ್ರತಿಯೊಂದು ಪಾತ್ರಗಳ ಭಾವನೆಗಳು, ಮನಸ್ಥಿತಿಯ ಚಿತ್ರಣವನ್ನು ಓದುಗನ ಮನಸ್ಸಿನಲ್ಲಿ ಚಿತ್ರಿಸುವ ಕಾಯಕವನ್ನು ಮಾಡುತ್ತದೆ. ಮಹಿಳೆಯರು ಎದುರಿಸುವ ಕೌಟುಂಬಿಕ ಸಮಸ್ಯೆ, ನೋವುಗಳನ್ನು ಬಿಚ್ಚಿಡುವ ಕತೆ ಉತ್ತಮವಾಗಿ ಮೂಡಿಬಂದಿದೆ. ಐದನೆಯ ಬಹುಮಾನ:2000/- ರೂಪಾಯಿಗಳ ನಗದು ಬಹುಮಾನ + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶ್ರುವಿಅವರರಾಗ.. ಡಾನ್ಸ್ ಆಫ್ ಡಿಸೈರ್! ಕತೆಯ ಕುರಿತು:ಮನುಷ್ಯರ ಚಂಚಲ ಮನಸ್ಸಿನ ಮುಖಗಳನ್ನು ಪರಿಚಯಿಸುತ್ತಾ ಸಾಗುವ ಕತೆಯಿದು. ಪಾತ್ರಚಿತ್ರಣ, ಕತೆಯ ಶೀರ್ಷಿಕೆ, ನಿರೂಪಣೆಯ ಮೂಲಕ ಓದುಗರ ಗಮನ ಸೆಳೆಯುತ್ತದೆ. ರಾಗ- ದ್ವೇಷಗಳು ಎಂಬ ಶಬ್ದಪುಂಜದ ಆಧಾರಿತವಾಗಿ ರಚಿತವಾದ ಕತೆ, ಕೊನೆಯವರೆಗೂ ಓದುಗರ ಕುತೂಹಲ ತಣಿಸುತ್ತಾ ಉತ್ತಮವಾಗಿ ಮೂಡಿಬಂದಿದೆ. ಆರನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶಿವಶಂಕರ್ ಎಸ್ ಜಿಅವರನೆರಳು!! ಏಳನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವೀಣಾಅವರಎಲ್ಲಿ ಮರೆಯಾದೆ? ಏಕೆ ದೂರಾದೆ? ಎಂಟನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸವಿ ಹೆಬ್ಬಾರಅವರಸರ್ಪಮಂದಿರವಂತೆ ಕಂಪಿನೊಡಲು... ಒಂಬತ್ತನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪ್ರಸನ್ನಾ ಚೆಕ್ಕೆಮನೆಅವರಹೃದಯ ಮುರಳಿ ಮಿಡಿದ ರಾಗ ಹತ್ತನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ರಿತುಅವರಸರ್ವಮಂಗಳ ಮಾಂಗಲ್ಯೆ ಹನ್ನೊಂದನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ರಂಗವಲ್ಲಿಸುತೆಅವರಮನೋಯುಜ್ಯತೆ ಹನ್ನೆರಡನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವಿಜಯ ಭಾರತಿಅವರಕಾಲ: ಕ್ರೀಡತಿ ಹದಿಮೂರನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವೇದಾ ಮಂಜುನಾಥ್ಅವರಸ್ವತಂತ್ರ ಹಕ್ಕಿ ಹದಿನಾಲ್ಕನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಗುರು ರಾಘವೇಂದ್ರಅವರ"ದೃತಿ ವೃಂದ" ಒಂದು ಅಲೌಕಿಕ ಗುಃಯ ಹದಿನೈದನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಲಕ್ಷ್ಮಿ ನಂದಅವರಪಾರ್ಥಸಾರಥಿ ಹದಿನಾರನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಕಸ್ತೂರಿ ಕಮರವೆಅವರಈ ಹೃದಯ ಮಿಡಿಯುವುದು ನಿನಗಾಗಿ ಹದಿನೇಳನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಲಕ್ಷ್ಮಿ ಗೌಡಅವರದೊರೆಸಾನಿ ಹದಿನೆಂಟನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಅಕ್ಷಯ್ ಕೆ ರೈಟರ್ಅವರವಸುಂಧರ ಹತ್ತೊಂಬತ್ತನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ತೇಜಸ್ವಿನಿ ಯಾದವ್ಅವರರುದ್ರಭೈರವಿ ಇಪ್ಪತ್ತನೆಯ ಬಹುಮಾನ:2000/- ರೂಪಾಯಿಗಳು + ಪ್ರತಿಲಿಪಿ ಪ್ರೀಮಿಯಂ ಸೌಲಭ್ಯಕ್ಕೆ ನೇರ ಪ್ರವೇಶ + ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಅನಿತಾಅವರರುದ್ರ - ಸತ್ಯ ಮಿಥ್ಯಗಳ ನಡುವೆ ವಿಶೇಷ ಮೆಚ್ಚುಗೆ ಪಡೆದ ಕೃತಿಗಳು: ಈ ಬಾರಿ ಸಣ್ಣ ಅಂತರದಿಂದ ವಿಜೇತ ಕೃತಿಗಳ ಪಟ್ಟಿಗೆ ಬರಲು ಸಾಧ್ಯವಾಗದ ಕೆಲವು ಧಾರಾವಾಹಿಗಳನ್ನು ಕೆಳಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇವೆ. ಕೃತಿ ಕರ್ತೃ ನನ್ನಾತ್ಮ ನಿವೇದನೆ ನೀ ಆಲಿಸು ರಾಧಾಮಣಿ ಜೆ. ಹೆಚ್ ವೀರಾಂಜನೇಯಂ ಚೈತ್ರ ಭಟ್ ಬದುಕೆಂಬ ಮಾಯಾವಿ ಮೌನ ವಿ ಸಂಜೆಯು ಮೋಹನ ಡಾ. ಲಾವಣ್ಯ ಪ್ರಭೆ ಅಮ್ನೋರ ಮಗಳು ವಿಷ್ಣುಪ್ರಿಯಾ ಒಂದೇ ದೋಣಿಯ ಪಯಣಿಗರು ಸಂಗೀತ ಲೇವಿಸ್ ಮತ್ತೆ ಒಲವ ಮಳೆಯಾಗುವುದೇ? ವೀಣಾ ನನ್ನ ನಾ ಮರೆತಾಗ ರೂಪಾ ರೈ ಅನುರಾಗ ಸಂಗಮ ಸುಜಲ ಘೋರ್ಪಡೆ ರಾಧಾ ರಮಣ ವಿನುತಾಮುರಳಿ ಆಂತರ್ಯದ ಆರ್ತನಾದ ವಿನು ಪಿ ಮಳೆಯ ಮನದರಾಗ ನೀ ನುಡಿದೇ... ಮೇಘನಾ ಯಾವುದೀ ಬಿಡಿಸದ ಬಂಧ ವಸುಧಾ ಶಾಸ್ತ್ರಿ ಮರಳಿ ಬರುವಳೇ ಸೀತೆ...?? ಮನುಪ್ರಿಯ ಶಿವರಂಜನಿ ಸಂಧ್ಯಾ ಭಟ್ ಗೆದ್ದು ಸೋತವನು ಗೋಪಾಲ ಕಲ್ಪತರು ರಾಜೇಶ್ವರಿ ಮಾಲಿಪಾಟೀಲ್ ನಿನ್ನ ಜೊತೆ ನನ್ನ ಕಥೆ ಬೇರೊಂದು ಲೋಕ ಸೃಷ್ಟಿಸಿದೆ ಕುಶಲ ಸಂಧ್ಯಾ ಆರಕ್ಕೇರದವರು ಗಜಲಕ್ಷ್ಮಿ ಗೋವಿಂದ ರಾಜು ಮಧುರಾನುರಾಗ ಕೃಷ್ಣಪ್ರಿಯೆ ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ: ಹಿಂದಿನ ಆವೃತ್ತಿಗಳಂತೆ ಸೂಪರ್ ಸಾಹಿತಿ ಅವಾರ್ಡ್ಸ್- 5 ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿ ಸ್ಪರ್ಧೆಯ ಯಶಸ್ಸಿಗೆ ಕಾರಣರಾದ ಎಲ್ಲ ಬರಹಗಾರರಿಗೆ ಧನ್ಯವಾದಗಳು. ಸ್ಪರ್ಧೆಯ ಕುರಿತು ನಿಮ್ಮ ಆಸಕ್ತಿ ಮತ್ತು ಉತ್ಸಾಹ ಶ್ಲಾಘನೀಯ. ಸ್ಪರ್ಧೆಗೆ ನೂರಾ ಹತ್ತಕ್ಕೂ ಕೃತಿಗಳು ಸಲ್ಲಿಸಲ್ಪಟ್ಟಿದ್ದವು. ಆದರೆ ಅವುಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಪಾಲಿಸಿ ಸಲ್ಲಿಸಲ್ಪಟ್ಟ ಧಾರಾವಾಹಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗಿದೆ. ದೀರ್ಘ ಧಾರಾವಾಹಿಗಳನ್ನು ರಚಿಸುವಾಗ ಬರಹಗಾರರಲ್ಲಿ ಕತೆಯನ್ನು ಮುಂದುವರೆಸುವಲ್ಲಿ ಅನೇಕ ತೊಡಕುಗಳು ಎದುರಾಗಬಹುದು. ಜೊತೆಗೆ ಸಮಯದ ಮಿತಿ ಒಳಪಟ್ಟಾಗ ಒತ್ತಡದ ಮನಸ್ಥಿತಿ ಒಂದು ಕೃತಿಯ ರೂಪುರೇಷೆಯನ್ನು ಬದಲಾಯಿಸಬಹುದು. ಆದರೆ ಇವೆಲ್ಲವುಗಳನ್ನು ಸಮರ್ಥವಾಗಿ ಎದುರಿಸಿ ಬರಹಗಾರರು ಅತ್ಯುತ್ತಮ ಕೃತಿಗಳನ್ನು ರಚಿಸುವಂತಾಗಲಿ ಎಂದು ನಾವು ಬಯಸುತ್ತೇವೆ. ಬರಹಗಾರರಿಗೆ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಪ್ರತಿಯೊಬ್ಬ ಬರಹಗಾರನಿಗೂ ಅವನದೇ ಆದ ತಂತ್ರವಿರುತ್ತದೆ. ಬರವಣಿಗೆಗೆ ಸ್ಪೂರ್ತಿ ಕೂಡ ಬೇರೆ ಬೇರೆ ಮೂಲಗಳಿಂದ ಬರುತ್ತದೆ. ಅವುಗಳನ್ನು ಪ್ರತಿಯೊಬ್ಬ ಬರಹಗಾರ ಸ್ವತಃ ಗಮನಿಸಬೇಕು, ಗುರುತಿಸಬೇಕು. ಆಗ ಎದುರಾಗುವ ತೊಡಕುಗಳಿಂದ ಸಮರ್ಥವಾಗಿ ಹೊರಬರಲು ಸಾಧ್ಯ. ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಎಲ್ಲಾ ಕೃತಿಗಳೂ ಒಂದೊಂದು ರೀತಿಯಲ್ಲಿ ಉತ್ತಮವೆನಿಸುತ್ತಿದ್ದವು. ಬರವಣಿಗೆ ಒಂದು ಸೃಜನಾತ್ಮಕ ಕಲೆಯಾಗಿರುವುದರಿಂದ ಪ್ರತಿಯೊಬ್ಬರ ಭಾವ, ದೃಷ್ಟಿಕೋನಗಳೂ ವಿಭಿನ್ನವಾಗಿರುತ್ತವೆ. ಅದೇ ನಿಟ್ಟಿನಲ್ಲಿ ಆ ಕೃತಿಗಳನ್ನು ಓದಿ ತೀರ್ಪು ನೀಡುವ ಕಾಯಕವೂ ಸುಲಭದ್ದಲ್ಲ. ಆದರೂ ಸಲ್ಲಿಸಲ್ಪಟ್ಟಿರುವ ಕೃತಿಗಳಲ್ಲಿ ಕಥಾಹಂದರ, ಸೃಜನಾತ್ಮಕತೆ, ಪಾತ್ರಪೋಷಣೆ, ನಿರೂಪಣೆ, ಭಾಷೆ ಮತ್ತು ವ್ಯಾಕರಣ ಶುದ್ಧಿ ಮುಂತಾದ ಮಾನದಂಡಗಳ ಆಧಾರದ ಮೇಲೆ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ. ಪ್ರತಿಯೊಬ್ಬರೂ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೃತಿಗಳನ್ನು ರಚಿಸುವತ್ತ ಗಮನ ಹರಿಸುವಂತಾಗಲಿ ಎಂದು ಆಶಿಸುತ್ತೇವೆ. ನೀವು ಸೂಪರ್ ಸಾಹಿತಿ ಅವಾರ್ಡ್ಸ್ 6 ಸ್ಪರ್ಧೆಗೆ ಈಗಾಗಲೇ ಕೃತಿಯನ್ನು ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂದು ಭಾವಿಸುತ್ತೇವೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು 60+ ಅಧ್ಯಾಯಗಳ ಧಾರಾವಾಹಿಯನ್ನು ರಚಿಸಿ ಪ್ರಕಟಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:https://kannada.pratilipi.com/event/9ys4h3faop ಶುಭವಾಗಲಿ! -ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0ನಲ್ಲಿ ಭಾಗವಹಿಸಲು ಆತ್ಮೀಯ ಆಮಂತ್ರಣ!01 सितम्बर 2023ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಬರವಣಿಗೆಯ ಹಾದಿಯ ಪ್ರತಿಯೊಂದು ಹಂತದ ಕುರಿತೂ, ಮುಖ್ಯವಾಗಿ ದೀರ್ಘ ಧಾರಾವಾಹಿ ರಚನೆ ಕುರಿತು ತರಬೇತಿ ನೀಡುವ ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0 ಇದೇ ಸೆಪ್ಟೆಂಬರ್ 8ರಂದು ಪ್ರಾರಂಭವಾಗುತ್ತಿದೆ. ನೋಂದಾವಣಿ ಪ್ರಕ್ರಿಯೆ ಆರಂಭವಾಗಿದೆ. ಈಗಲೇ ನೋಂದಾಯಿಸಿಕೊಂಡು, ತರಬೇತಿಯ ಪೂರ್ಣ ಪ್ರಯೋಜನ ಪಡೆದುಕೊಳ್ಳಿ. ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0ರ ಅಧಿಕೃತ ವಾಟ್ಸ್ಯಾಪ್ ಸಂವಹನ ಸಮೂಹ ಸೇರಿ : https://chat.whatsapp.com/HDIC3mbrDcVA6hXzviUIQO ಅತಿಹೆಚ್ಚು ಮಂದಿ ಈ ಆನ್ಲೈನ್ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಳ್ಳಿ. ಧನ್ಯವಾದಗಳೊಂದಿಗೆ,ಪ್ರತಿಲಿಪಿಕನ್ನಡಬಳಗಇನ್ನೂ ಹೆಚ್ಚು ತೋರಿಸಿ
- ಪ್ರತಿಲಿಪಿ ಸೂಪರ್ ಸಾಹಿತಿ ಅವಾರ್ಡ್ಸ್: 60 ಅಧ್ಯಾಯಗಳ ಧಾರಾವಾಹಿ ರಚಿಸಲು ನಿಮಗಾಗಿ 6 ವಿಶೇಷ ಸಲಹೆಗಳು21 अगस्त 2023ಆತ್ಮೀಯ ಸಾಹಿತಿಗಳೇ, ಭಾರತದ ಅತ್ಯಂತ ಜನಪ್ರಿಯ ಆನ್ಲೈನ್ ಕಥಾ ಸ್ಪರ್ಧೆ ಪ್ರತಿಲಿಪಿ ಸೂಪರ್ ಸಾಹಿತಿ ಅವಾರ್ಡ್ಸ್ ಮತ್ತೆ ಆರಂಭವಾಗಿದೆ. 60+ ಅಧ್ಯಾಯಗಳ ಧಾರಾವಾಹಿ ರಚಿಸುವುದರ ಮೂಲಕ ನೀವು ಪ್ರತಿಲಿಪಿಯ ಸೂಪರ್ ಸಾಹಿತಿ ಎಂದು ಗುರುತಿಸಿಕೊಳ್ಳಬಹುದು ಮತ್ತು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಪಡೆಯಬಹುದು. 60 ಕ್ಕೂ ಅಧಿಕ ಅಧ್ಯಾಯಗಳ ಬೆಸ್ಟ್ ಸೆಲ್ಲರ್ ಕೃತಿಯನ್ನು ರಚಿಸಲು ಈ ಕೆಳಗೆ ನಾವು ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ. 1. ಒಂದು ಕಥಾವಸ್ತುವನ್ನು ಆಯ್ದುಕೊಳ್ಳಿ- ಒಂದು ಹಾಳೆಯಲ್ಲಿ ನಿಮ್ಮ ಕಲ್ಪನೆ/ಆಯ್ದುಕೊಂಡಿರುವ ಕಥಾವಸ್ತುವನ್ನು ಬರೆಯಿರಿ. ನಿಮ್ಮ ಕಥಾವಸ್ತು ದೈನಂದಿನ ಘಟನೆ, ವಿಷಯಗಳಿಂದ ಪ್ರೇರಿತವಾಗಿರಬಹುದು. ನೀವು ಓದಿರುವ/ಕೇಳಿರುವ ಸುದ್ದಿಗಳು, ಅನುಭವಗಳು, ನಿಮ್ಮೆದುರಲ್ಲಿ ಘಟಿಸಿದ ಘಟನೆಗಳು, ಪ್ರತಿಲಿಪಿಯ ನಿಮ್ಮ ಓದುಗರ ಸಲಹೆಗಳು ಹೀಗೆ ಯಾವುದೇ ವಿಷಯವಾಗಿರಬಹುದು. ನಿಮಗೆ ಇಷ್ಟವೆನಿಸುವ ಕಥಾವಸ್ತುವನ್ನು ಆಯ್ಕೆ ಮಾಡಿ. 2. ನಿಮ್ಮ ಕತೆಯ ಸಂಕ್ಷಿಪ್ತ ಸಾರಾಂಶವನ್ನು ಬರೆಯಿರಿ- ನೀವು ಆರಿಸಿಕೊಂಡಿರುವ ಕಥಾವಸ್ತುವಿನ ಆಧಾರದ ಮೇಲೆ ನಿಮಗೆ ತೋಚುವಂತೆ ಸಂಕ್ಷಿಪ್ತ ಸಾರಾಂಶವನ್ನು ಬರೆಯಿರಿ. ನಿಮ್ಮ ಕತೆಯ ಆರಂಭ, ಹರಿವು, ಅಂತ್ಯದ ಬಗ್ಗೆ ಒಂದು ಚೌಕಟ್ಟನ್ನು ರೂಪಿಸಿಕೊಳ್ಳಿ. ಮುಖ್ಯ ಪಾತ್ರಗಳು ಮತ್ತು ಕತೆಗೆ ಅಗತ್ಯವೆನಿಸುವ ಪೋಷಕ ಪಾತ್ರಗಳ ಕುರಿತು ಒಂದೆರಡು ಸಾಲಿನ ಟಿಪ್ಪಣಿ ಬರೆಯಿರಿ. 3. ನಿಮ್ಮ ಕತೆಯ ಮುಖ್ಯ ಪಾತ್ರಗಳನ್ನು ರಚಿಸಿ- ನಿಮ್ಮ ಕತೆಯ ಮುಖ್ಯ ಪಾತ್ರಗಳು, ಅವುಗಳ ಸ್ವಭಾವ, ವ್ಯಕ್ತಿತ್ವದ ಬಗ್ಗೆ ಆಲೋಚಿಸಿ. ಅವರು ವಾಸಿಸುವ ಸ್ಥಳ, ಅವರ ಜೀವನದ ಪ್ರಮುಖ ಘಟ್ಟಗಳು, ಅವರ ವ್ಯಕ್ತಿತ್ವವನ್ನು ಪ್ರಭಾವಿಸುವ ವ್ಯಕ್ತಿ/ಘಟನೆಗಳು, ಅಲ್ಲಿನ ಜೀವನಕ್ರಮ, ಜನರ ವರ್ತನೆ, ಭಾಷೆ ಇತ್ಯಾದಿಗಳ ಕುರಿತು ಕತೆಗೆ ಮುಖ್ಯವೆನಿಸುವ ಇತರ ಪಾತ್ರಗಳ ಬಗ್ಗೆ 4-5 ಸಾಲುಗಳ ಟಿಪ್ಪಣಿ ಬರೆದುಕೊಳ್ಳಿ. 4. ಕತೆಯ ಪ್ರಾರಂಭದಿಂದ ಅಂತ್ಯದವರೆಗಿನ ಪ್ರಮುಖ ಘಟನೆಗಳನ್ನು ಪಟ್ಟಿ ಮಾಡಿ- ಈಗ ನೀವು ಯೋಚಿಸಿರುವ ಕಥಾವಸ್ತು, ಕಥಾಹಂದರ, ಪಾತ್ರಗಳ ಆಧಾರದ ಮೇಲೆ ಕತೆಯಲ್ಲಿ ಅವಶ್ಯಕವಾಗುವ ಪ್ರಮುಖ ಘಟನೆ, ಸಂದರ್ಭಗಳನ್ನು ಆಲೋಚಿಸಿ, ಪಟ್ಟಿಮಾಡಿ. ಕತೆಯ ತಿರುವುಗಳನ್ನು ನಿರ್ಧರಿಸಿ. ಇವು ಕತೆ ಸರಾಗವಾಗಿ ಸಾಗಲು ಸಹಾಯ ಮಾಡುತ್ತವೆ. ಪ್ರಮುಖ ಘಟನೆಗಳನ್ನು 1, 2, 3, 4 ಎಂದು ಪಟ್ಟಿ ಮಾಡಿಕೊಳ್ಳುವುದರಿಂದ ಧಾರಾವಾಹಿಯನ್ನು ರಚಿಸುವಾಗ ತಿರುವುಗಳನ್ನು ನೀಡಲು, ಓದುಗರಲ್ಲಿ ಕುತೂಹಲ ಹುಟ್ಟಿಸಲು ಸುಲಭವಾಗುತ್ತದೆ. ಪ್ರತಿ ಘಟನೆಗಳ ಬಗ್ಗೆ 1 ಸಾಲಿನ ಸಾರಾಂಶ ಬರೆಯಿರಿ. 5. ನಿಮ್ಮ ಕತೆಯನ್ನು ಅಧ್ಯಾಯಗಳಾಗಿ ವಿಭಾಗಿಸಿ- ನಿಮಗೆ ಸಂಪೂರ್ಣ ಕತೆಯ ಚಿತ್ರಣ ದೊರೆತ ಮೇಲೆ ಕತೆಯನ್ನು 60 ಅಧ್ಯಾಯಗಳಾಗಿ ವಿಂಗಡಿಸಿ. ಒಟ್ಟು 6 ವಿಭಾಗಗಳನ್ನು ಮಾಡಿ, ಪ್ರತಿ ವಿಭಾಗದಲ್ಲಿ ಕುತೂಹಲಕಾರಿ ಸನ್ನಿವೇಶ ಇರುವಂತೆ ನೋಡಿಕೊಳ್ಳಿ.- 1-10 ಅಧ್ಯಾಯಗಳು11-20 ಅಧ್ಯಾಯಗಳು21-30 ಅಧ್ಯಾಯಗಳು31-40 ಅಧ್ಯಾಯಗಳು41-50 ಅಧ್ಯಾಯಗಳು51-60 ಅಧ್ಯಾಯಗಳು ಪ್ರತಿ ವಿಭಾಗದಲ್ಲಿ ಕತೆ ಯಾವ ರೀತಿಯಾಗಿ ಮೂಡಿಬರುತ್ತದೆ? ಎಂಬುದರ ಬಗ್ಗೆ ನಿಮ್ಮ ಕಲ್ಪನೆಯನ್ನು 1-2 ಸಾಲುಗಳಲ್ಲಿ ಬರೆಯಿರಿ. 6. ಪ್ರತಿಯೊಂದು ಅಧ್ಯಾಯದ ಕುರಿತು ಟಿಪ್ಪಣಿ ಬರೆಯಿರಿ- ಈಗ ನೀವು ಬಹುತೇಕ ಸಿದ್ಧರಾಗಿದ್ದೀರಿ! ಪ್ರತಿ 10 ಅಧ್ಯಾಯದ ಸಾರಾಂಶ ಬರೆದ ಮೇಲೆ, ಪ್ರತಿ ಅಧ್ಯಾಯದ ಸಂಕ್ಷಿಪ್ತ ಸಾರಾಂಶ ಬರೆಯಿರಿ. ಪ್ರತಿ ಅಧ್ಯಾಯದಲ್ಲಿ ಕತೆ ಯಾವ ರೀತಿಯಾಗಿ ಮೂಡಿಬರುತ್ತದೆ ಎಂಬುದನ್ನು 1-2 ಸಾಲುಗಳಲ್ಲಿ ಬರೆಯಿರಿ, ಉದಾಹರಣೆಗೆ-ಅಧ್ಯಾಯ 1-ಅಧ್ಯಾಯ 2-ಅಧ್ಯಾಯ 3-ಅಧ್ಯಾಯ 4-ಇತ್ಯಾದಿ ******************************* ಈ ರೀತಿಯಾಗಿ ಯೋಜನೆ ರೂಪಿಸಿಕೊಳ್ಳಲು 2-3 ದಿನಗಳ ಕಾಲಾವಕಾಶ ಬೇಕಾಗಬಹುದು. ಆದರೆ ಈ ಯೋಜನೆ ನಿಮ್ಮ ಕಥಾರಚನೆಗೆ ಖಂಡಿತವಾಗಿ ಸಹಾಯ ಮಾಡುತ್ತದೆ. ನೀವು ಸೂಪರ್ ಸಾಹಿತಿ ಅವಾರ್ಡ್ಸ್ ಸ್ಪರ್ಧೆಗೆ ನಿಮ್ಮ ಕೃತಿಯನ್ನು ಪ್ರಕಟಿಸಲು ಆರಂಭಿಸಿದಾಗ ಯಾವುದೇ ತಡೆಯಿಲ್ಲದೆ ಸರಾಗವಾಗಿ ಕತೆಯನ್ನು ಮುಂದುವರೆಸಲು ಈ ಯೋಜನೆ ಅತ್ಯಂತ ಸಹಕಾರಿ. ಯಾವುದೇ ಸಂದರ್ಭದಲ್ಲಿ ನಿಮ್ಮ ಕತೆಯ ಮುಂದುವರೆಯುವಿಕೆಗೆ ತೊಂದರೆಯಾದಲ್ಲಿ ನೀವು ಈಗಾಗಲೇ ಸಿದ್ಧಪಡಿಸಿಕೊಂಡಿರುವ ಪಟ್ಟಿ, ಟಿಪ್ಪಣಿಯ ಸಹಾಯವನ್ನು ಪಡೆಯಬಹುದು. ಇದು ಸ್ಪರ್ಧೆಯ ಮುಕ್ತಾಯದ ದಿನಾಂಕದೊಳಗೆ ನಿಗದಿತ ಅಧ್ಯಾಯಗಳನ್ನು ಸುಲಭವಾಗಿ ಪ್ರಕಟಿಸಲು ಉತ್ತಮ ವಿಧಾನ. ಈ ಕೆಳಗೆ ನೀಡಲಾಗಿರುವ ಲಿಂಕ್ಗಳ ಮೂಲಕ ಸುದೀರ್ಘ ಕೃತಿಗಳನ್ನು ರಚಿಸಲು ಹಂತಗಳನ್ನು ಸುಲಭವಾಗಿ ಅರಿಯಿರಿ: 1. ಪ್ರತಿಲಿಪಿಯು ತನ್ನ ಬರಹಗಾರರಿಗೆ ಸುದೀರ್ಘ ಕೃತಿಗಳನ್ನು ರಚಿಸಲು ಏಕೆ ಪ್ರೇರೇಪಿಸುತ್ತದೆ? 2. ಒಂದು ಕಥಾವಸ್ತು/ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿಸುವುದು ಹೇಗೆ? 3. ಉಪಕತೆಗಳು ಮತ್ತು ಪಾತ್ರಪೋಷಣೆ ಮಾಡುವುದು ಹೇಗೆ? 4. ಪ್ರೀತಿ-ಪ್ರೇಮ ವಿಷಯಾಧಾರಿತ ಕತೆಗಳನ್ನು ಆಸಕ್ತಿದಾಯಕವಾಗಿ ರಚಿಸುವುದು ಹೇಗೆ? 5. ಕೌಟುಂಬಿಕ, ಸಾಮಾಜಿಕ, ಮಹಿಳಾ ಕೇಂದ್ರಿತ ಕೃತಿಗಳನ್ನು ಆಸಕ್ತಿದಾಯಕವಾಗಿ ಹೇಗೆ ರಚಿಸಬಹುದು? 6. ಕಾಲ್ಪನಿಕ(ಫ್ಯಾಂಟಸಿ), ರಹಸ್ಯ, ಭಯಾನಕ ವಿಷಯಾಧಾರಿತ ಕತೆಗಳನ್ನು ಕುತೂಹಲಕಾರಿಯಾಗಿ ರಚಿಸುವುದು ಹೇಗೆ? 7. ಥ್ರಿಲ್ಲರ್ ಧಾರಾವಾಹಿಗಳನ್ನು ಕೌತುಕಭರಿತವಾಗಿಸುವುದು ಹೇಗೆ? 8. ನಿರೂಪಣಾ ಶೈಲಿ ಮತ್ತು ಸನ್ನಿವೇಶಗಳ ಸೃಷ್ಟಿ, ಘಟನೆಗಳನ್ನು ಜೋಡಿಸುವುದು ಹೇಗೆ? 9. ಅಧ್ಯಾಯಗಳ ರೂಪುರೇಷೆ ಮತ್ತು ಸನ್ನಿವೇಶಗಳನ್ನು ಬರೆಯುವ ವಿಧಾನ 10. ಸಂಭಾಷಣಾ ಶೈಲಿ ಮತ್ತು ಕೃತಿಯ ಮೊದಲ ಅಧ್ಯಾಯವನ್ನು ಆರಂಭಿಸುವ ಬಗೆ 11. ತಿರುವುಗಳು ಮತ್ತು ಕಥಾ ಕೊಂಡಿಗಳನ್ನು ಬಳಸುವುದು; ಕತೆಯನ್ನು ಅಂತ್ಯಗೊಳಿಸುವ ಪರಿ 12. ವಿವಿಧ ಭಾವನೆಗಳನ್ನು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ? 13. ಟ್ರೆಂಡಿಂಗ್ ಧಾರಾವಾಹಿಗಳ ವಿಶ್ಲೇಷಣೆ 14. ಓದುಗರನ್ನು ಆಕರ್ಷಿಸಬಲ್ಲ ವಿವಿಧ ಬಗೆಯ ಪ್ರಚಾರ ತಂತ್ರಗಳು 15. ಸತತವಾಗಿ ಬರೆಯಲು ವೇಳಾಪಟ್ಟಿ ತಯಾರಿಸುವುದು ಹೇಗೆ? 16. ಬರೆಯುವಾಗ ಎದುರಾಗುವ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ 17. ದೀರ್ಘ ಧಾರಾವಾಹಿಗಳನ್ನು ರಚಿಸುವುದರ ಪ್ರಯೋಜನಗಳು ಪ್ರತಿಲಿಪಿ ತಂಡ ಹಂಚಿಕೊಂಡಿರುವ ಈ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿ! ದೀರ್ಘ ಧಾರಾವಾಹಿ ಬರವಣಿಗೆ ನಿಮಗೆ ಎಷ್ಟು ಸರಳ ಮತ್ತು ಸುಲಭವಾಗಿ ತೋರುತ್ತದೆ ಎಂಬುದನ್ನು ನೀವು ಮನಗಾಣುವಿರಿ. ಈ ಮೂಲಕ 60+ ಅಧ್ಯಾಯಗಳ ಧಾರಾವಾಹಿಯನ್ನು ಸುಲಭವಾಗಿ ಪೂರ್ಣಗೊಳಿಸುವಿರಿ ಎಂದು ನಾವು ನಂಬುತ್ತೇವೆ. ಇಂದಿನಿಂದಲೇ ಬರೆಯಲು ಆರಂಭಿಸಿ! ಶುಭವಾಗಲಿ!ಪ್ರತಿಲಿಪಿ ಸ್ಪರ್ಧಾ ವಿಭಾಗಇನ್ನೂ ಹೆಚ್ಚು ತೋರಿಸಿ
- 'ಗೋಲ್ಡನ್ ಪೆನ್ ಅವಾರ್ಡ್' ಸ್ಪರ್ಧೆಯ ಫಲಿತಾಂಶ16 अगस्त 2023ಆತ್ಮೀಯ ಸಾಹಿತ್ಯಾಭಿಮಾನಿಗಳೇ, ಬಹು ನಿರೀಕ್ಷಿತ ಗೋಲ್ಡನ್ ಪೆನ್ ಅವಾರ್ಡ್ ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ! ಪ್ರತಿಲಿಪಿಯ ನವ ಬರಹಗಾರರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬರಹಗಾರರು ಈ ಸ್ಪರ್ಧೆಯಲ್ಲಿ ತಮ್ಮ ಧಾರಾವಾಹಿಯನ್ನು ಪ್ರಕಟಿಸುವುದರ ಮೂಲಕ ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆಯುವತ್ತ ಒಂದು ಹೆಜ್ಜೆ ಮುಂದುವರೆಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಯಾಕಷ್ಟು ಮುಖ್ಯವಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು! ಸರಳವಾಗಿ ಹೇಳುವುದಾದರೆ, ಬರಹಗಾರರಿಗೆ ತಮ್ಮ ಬರವಣಿಗೆಯ ಮೂಲಕವೇ ಆದಾಯ ಗಳಿಸುವ ಅವಕಾಶ ಪಡೆಯಲು ಪ್ರತಿಲಿಪಿಯಲ್ಲಿ ಗೋಲ್ಡನ್ ಬ್ಯಾಡ್ಜ್ ಹೊಂದುವುದು ಮೊದಲ ಹೆಜ್ಜೆ. ಈ ಸ್ಪರ್ಧೆಗೆ ಎಲ್ಲಾ ಭಾಷೆಗಳಲ್ಲಿ ಭಾಗವಹಿಸುತ್ತಿದ್ದ ಬರಹಗಾರರಲ್ಲಿ ಒಟ್ಟಾರೆ 176 ಬರಹಗಾರರು ಪ್ರತಿಲಿಪಿಯಲ್ಲಿ ತಮ್ಮ ಪ್ರೊಫೈಲ್ನಲ್ಲಿ ಗೋಲ್ಡನ್ ಬ್ಯಾಡ್ಜ್ ಪಡೆದಿದ್ದಾರೆ, ಆ ಎಲ್ಲಾ ಬರಹಗಾರರಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ. ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಬರಹಗಾರರು ತಮ್ಮ ಧಾರಾವಾಹಿಯ ಅಧ್ಯಾಯಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುವ ಸೌಲಭ್ಯವನ್ನು ಪಡೆಯುತ್ತಾರೆ. ಅವರು ಹೊಸ ಧಾರಾವಾಹಿಯನ್ನು ಪ್ರಕಟಿಸುವಾಗ 16ನೆಯ ಅಧ್ಯಾಯದಿಂದ ಎಲ್ಲಾ ಅಧ್ಯಾಯಗಳು ಲಾಕ್ ಆಗುತ್ತವೆ ಮತ್ತು ಆ ಧಾರಾವಾಹಿ ಶಾಶ್ವತವಾಗಿ ಪ್ರತಿಲಿಪಿ ಪ್ರೀಮಿಯಂಗೆ ಸೇರ್ಪಡೆಯಾಗುತ್ತದೆ. ಪ್ರೀಮಿಯಂ ಚಂದಾದಾರಿಕೆ, ನಾಣ್ಯಗಳನ್ನು ನೀಡುವಿಕೆ ಅಥವಾ ಮರುದಿನದವರೆಗೆ ಕಾಯುವುದರ ಮೂಲಕ ಓದುಗರು ಆ ಧಾರಾವಾಹಿಯ ಅಧ್ಯಾಯಗಳನ್ನು ಅನ್ಲಾಕ್ ಮಾಡಲು ಸಾಧ್ಯವಾಗುತ್ತದೆ. ಗೋಲ್ಡನ್ ಬ್ಯಾಡ್ಜ್ ಪಡೆದಿರುವ ಬರಹಗಾರರಿಗೆ, ಪ್ರತಿಲಿಪಿಯಲ್ಲಿ ದೀರ್ಘ ಧಾರಾವಾಹಿಗಳನ್ನು ರಚಿಸಿ, ಅವುಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ದಾಖಲಿಸುವ ಮೂಲಕ ತಿಂಗಳಿಗೆ ಐದು-ಹತ್ತು ಸಾವಿರ ರೂಪಾಯಿಗಳ ಆದಾಯ ಗಳಿಸುವ ಪ್ರತಿಲಿಪಿ ಲೇಖಕರ ಸಾಲಿಗೆ ಸೇರುವ ಅವಕಾಶ ಸಿಗಲಿದೆ. ಇದಲ್ಲದೆ ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಬರಹಗಾರರು ಪ್ರತಿಲಿಪಿ ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಆಕರ್ಷಕ ನಗದು ಬಹುಮಾನ, ಭೌತಿಕ ಪ್ರಮಾಣಪತ್ರ ಮತ್ತಿತರ ಪ್ರಯೋಜನಗಳನ್ನು ಪಡೆಯುವ ಅವಕಾಶ ಸಿಗಲಿದೆ. ಗೋಲ್ಡನ್ ಪೆನ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಬರಹಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೂಲಕ ಲಕ್ಷಾಂತರ ಓದುಗರ ಪ್ರೀತಿ, ಅಭಿಮಾನ ಗಳಿಸುವಂತಾಗಲಿ ಎಂದು ನಾವು ಆಶಿಸುತ್ತೇವೆ. ಬರವಣಿಗೆಯ ಕುರಿತು ನಿಮಗಿರುವ ಆಸಕ್ತಿ ಮತ್ತು ನಿಯಮಿತವಾಗಿ ಕೃತಿಗಳನ್ನು ರಚಿಸುವಿಕೆ ಮುಂದಿನ ದಿನಗಳಲ್ಲಿ ನಿಮಗೆ ಸಾಹಿತ್ಯ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಸಹಾಯ ಮಾಡಲಿದೆ. ಗೋಲ್ಡನ್ ಪೆನ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಬಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳನ್ನು ತಿಳಿಸುತ್ತೇವೆ. ವಿಜೇತ ಕೃತಿಗಳ ವಿವರ: ಪ್ರಥಮ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸುಮಾ ಬೆಳಗೆರೆ ಅವರ ಚಿತ್ತದೊಳಗಿನ ಚಿತ್ರ ಕತೆಯ ಕುರಿತು: ಇಳಿವಯಸ್ಸಿನವರಿಗೆ ಕಾಡುವ ಖಾಯಿಲೆಗಳಲ್ಲೊಂದಾದ ಅಲ್ಜೀಮರ್ ವೃದ್ಧ ದಂಪತಿಗಳನ್ನು ಹೇಗೆ ಕಾಡುತ್ತದೆ? ಆ ದಂಪತಿಗಳ ಜೀವನ, ಪ್ರೀತಿ, ಬಾಂಧವ್ಯ ಎಲ್ಲವನ್ನೂ ಭಾವನಾತ್ಮಕವಾಗಿ ತೆರೆದಿಡುವ ಕತೆ ಇದು. ದ್ವಿತೀಯ ಬಹುಮಾನ:1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ರೇಖಾ ಹೆಗಡೆ ಅವರ ಒಲವಿನ ಪಲ್ಲವಿ ಕತೆಯ ಕುರಿತು: ಹಳ್ಳಿಯಲ್ಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಯುವಕರ ಮದುವೆಯ ಸಮಸ್ಯೆಯನ್ನು ಕಥಾವಸ್ತುವನ್ನಾಗಿಟ್ಟುಕೊಂಡು ಮೂಡಿಬಂದ ಉತ್ತಮ ಪ್ರೇಮಕತೆ ಒಲವಿನ ಪಲ್ಲವಿ. ಉತ್ತಮ ನಿರೂಪಣೆ ಮತ್ತು ಪಾತ್ರಪೋಷಣೆಯಿಂದ ಮನಮುಟ್ಟುವಂತಿದೆ. ತೃತೀಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ವರ್ಷಾ ಕಡಸೂರು ಅವರ ದೇವಯಾನಿ ಕತೆಯ ಕುರಿತು: ರಾಜಾಡಳಿತದ ಪರಿಕಲ್ಪನೆಯನ್ನಿಟ್ಟುಕೊಂಡು ರಚಿತವಾದ ಮಹಿಳಾ ಪ್ರಧಾನ ಕತೆಯಿದು. ಆಯ್ಕೆ ಮಾಡಿಕೊಂಡಿರುವ ಕಥಾವಸ್ತು, ಪಾತ್ರ ಚಿತ್ರಣ, ನಿರೂಪಣಾ ಶೈಲಿಗಳಿಂದ ಓದುಗರ ಗಮನ ಸೆಳೆಯುವಲ್ಲಿ ಈ ಕತೆ ಸಫಲವಾಗುತ್ತದೆ. ನಾಲ್ಕನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಶೋಭಾ ಮೂರ್ತಿ ಅವರ ಭೂಮಿಗೀತ ಐದನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಆರ್. ಕೆ ಅವರ ಲಿಚ್ಚಿ ಆರನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಭಾನು ಶ್ರೀಪಾದ್ ಅವರ ದೇವಗಂಗಾ ಏಳನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಸ್ವರಾ ಅವರ ಆಲಿಸೊಮ್ಮೆ ಅಂತರಾಳವಾ ಎಂಟನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಅಶೋಕ್ ಕುಮಾರ್ ಜಿ. ಎಸ್ ಅವರ ಪರಿಶೋಧನೆ ಒಂಬತ್ತನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪ್ರಶ್ನಾ ನಾರಾಯಣ ರೈ ಅವರ ಕೊಂಚ ಅನುಸರಿಸಿಕೋ ಹೆಣ್ಣೇ ಹತ್ತನೆಯ ಬಹುಮಾನ: 1000/- ರೂಪಾಯಿಗಳು ಮತ್ತು ಆಕರ್ಷಕ ಚೌಕಟ್ಟಿನ ಭೌತಿಕ ಪ್ರಮಾಣಪತ್ರ ಪ್ರಜ್ಞಾ ಅವರ ಬಾನ ಚಂದಿರ ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು ಕ್ರ. ಸಂ. ಕೃತಿ ಕರ್ತೃ 1 ನಿಯತಿಯ ಸಾಕ್ಷಿ ಅಂಬಿಕ 2 ವಾತ್ಸಲ್ಯ(ಚಿಗುರೊಡೆಯುವುದೇ ಒಡಲು?) ಮಾಲಾ ಭಟ್ 3 ಗರುಡ ರೇಖೆ ರಾಧಾ ಕೃಷ್ಣನ ಅರಸಿ 4 ಹೃದಯವಾ ಸೆಳೆದಳು ತುಂಬುತ್ತಾ ಅನುರಾಗ ಜಾನ್ವಿಕ 5 ಅಂತ್ಯವಿಲ್ಲದ ಆರಂಭ ಪ್ರೀತಿ ಶಾನಭಾಗ್ 6 ರಾಗಕೆ ಸ್ವರವಾಗಿ ರೇಖಾ ರಘು 7 ಹೇಳಿ ಹೋಗು ನೀ ಕಾರಣ ಮನಸ್ವಿ ನಾಯಕ್ 8 ಅಭಿಮನ್ಯು(ಒಂದು ಆಶಾಕಿರಣ) ಸವಿತಾ 9 ಸುವರ್ಣಗಿರಿ ರಹಸ್ಯ ಭಾನು ಪ್ರಿಯಾ 10 ಪುನರ್ನವ(ವಿಧಿ ಬೆಸೆದ ಬಂಧವಿದು) ಮಧುಸೂರ್ಯ ಭಟ್ 11 ಮರಳಿ ಬಂದುಬಿಡು ನನ್ನೊಲವೆ ಅವನ್ಯಾ 12 ಜೀವನ ಸಂಘರ್ಷ ದೀಕ್ಷಾ ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ: ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಗೋಲ್ಡನ್ ಪೆನ್ ಅವಾರ್ಡ್' ಧಾರಾವಾಹಿ ರಚನಾ ಸ್ಪರ್ಧೆ ಉತ್ತಮ ಪ್ರತಿಕ್ರಿಯೆಯೊಂದಿಗೆ ಮುಕ್ತಾಯಗೊಂಡಿದೆ. ಇದು ಬರಹಗಾರರು ತಮ್ಮಿಷ್ಟದ ಯಾವುದೇ ಕಥಾವಸ್ತುವನ್ನು ಆಯ್ದುಕೊಂಡು ಕನಿಷ್ಠ 20 ಅಧ್ಯಾಯಗಳ ಕಥಾಸರಣಿಗಳನ್ನು ರಚಿಸುವ ಸ್ಪರ್ಧೆಯಾಗಿತ್ತು. ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಕೃತಿಗಳಲ್ಲಿ ಉತ್ತಮ ಕೃತಿಗಳನ್ನು ವಿಜೇತ ಕೃತಿಗಳೆಂದು ಆಯ್ಕೆ ಮಾಡಲಾಗಿದೆ. ಸಾಮಾಜಿಕ, ಕೌಟುಂಬಿಕ, ಪತ್ತೇದಾರಿ, ಪ್ರೀತಿ, ಮಹಿಳೆ, ಕಾಲ್ಪನಿಕ, ವೈಜ್ಞಾನಿಕ ಹೀಗೆ ಅನೇಕ ಪ್ರಭೇದಗಳ ಅಡಿಯಲ್ಲಿ ವಿಭಿನ್ನವಾದ ಕತೆಗಳು ಸಲ್ಲಿಸಲ್ಪಟ್ಟಿದ್ದವು. ಹಲವು ಕತೆಗಳು ಸಮಾಜದ, ಮನುಷ್ಯರ ಒಳಿತು-ಕೆಡಕುಗಳನ್ನು ಬಿಂಬಿಸುತ್ತ ಸಾಗಿದರೆ, ಮತ್ತಷ್ಟು ಕತೆಗಳು ಭಾವನಾತ್ಮಕವಾಗಿ ಹೆಣೆಯಲ್ಪಟ್ಟಿದ್ದವು. ನವ ಬರಹಗಾರರು ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಬರಹಗಾರರು ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸುತ್ತೇವೆ. ಗೋಲ್ಡನ್ ಬ್ಯಾಡ್ಜ್ ಹೊಂದಿರದ ಹಲವಾರು ಲೇಖಕ/ಲೇಖಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಗೋಲ್ಡನ್ ಬ್ಯಾಡ್ಜ್ ಹೊಂದುವಂತಾಗಿ, ತಮ್ಮ ಮುಂಬರುವ ಧಾರಾವಾಹಿಗಳನ್ನು ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುವ ಸೌಲಭ್ಯವನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಸ್ಪರ್ಧೆಯಲ್ಲಿ ಭಾಗವಹಿಸಿ ಕೃತಿಗಳನ್ನು ಸಲ್ಲಿಸಿದ ಎಲ್ಲಾ ಬರಹಗಾರರಿಗೂ ಅಭಿನಂದನೆಗಳು. - ಪ್ರತಿಲಿಪಿ ಕನ್ನಡಇನ್ನೂ ಹೆಚ್ಚು ತೋರಿಸಿ
- ಇದೀಗ ನಿಮ್ಮ ಧಾರಾವಾಹಿಗಳನ್ನು ನೀವೇ ಪ್ರೀಮಿಯಂಗೆ ಸೇರಿಸಬಹುದು!01 अगस्त 2023ಆತ್ಮೀಯ ಸಾಹಿತಿಗಳೇ, ನೀವು ಸೌಖ್ಯವಾಗಿರುವಿರಿ ಎಂದು ಭಾವಿಸುತ್ತೇವೆ. ಧಾರಾವಾಹಿಗಳನ್ನು ಸಾಹಿತಿಗಳೇ ಪ್ರೀಮಿಯಂಗೆ ಸೇರಿಸುವ ಬಹುನಿರೀಕ್ಷಿತ ಸೌಲಭ್ಯ ಇದೀಗ ಪ್ರತಿಲಿಪಿ ಕನ್ನಡದಲ್ಲಿ ಬಿಡುಗಡೆಗೊಂಡಿದೆ ಎಂದು ತಿಳಿಸಲು ಹರ್ಷಿಸುತ್ತೇವೆ! ಈ ಸೌಲಭ್ಯವನ್ನು ಪಡೆಯಲು ದಯವಿಟ್ಟು ನಿಮ್ಮ ಅಪ್ಲಿಕೇಶನ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಣ ಮಾಡಿಕೊಳ್ಳಬೇಕೆಂದು ಮನವಿ. ನೀವು ನಿಮ್ಮ ಧಾರಾವಾಹಿಗಳನ್ನು ಪ್ರಸ್ತುತ ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಪ್ರಕಟಿಸುತ್ತಿದ್ದಲ್ಲಿ, ಈ ಬದಲಾವಣೆಗಳು ನಿಮಗೆ ಲಭ್ಯವಾಗುತ್ತವೆ - ಇದು ಪ್ರತಿಲಿಪಿಯಲ್ಲಿ ನನ್ನ ಗಳಿಕೆಯ ಅವಕಾಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ? ಈ ಮೂಲಕ ನಾವು ಎಲ್ಲ ಗೋಲ್ಡನ್ ಬ್ಯಾಡ್ಜ್ ಲೇಖಕ/ಲೇಖಕಿಯರಿಗೆ ಹಣ ಸಂಪಾದನೆಯ ಸಮಾನ ಅವಕಾಶ ಒದಗಿಸುತ್ತಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ. ಈಗ ನೀವು ನಿಮ್ಮ ಮುಕ್ತಾಯಗೊಂಡ ಕೃತಿಗಳನ್ನು ಪ್ರೀಮಿಯಂ ವಿಭಾಗಕ್ಕೆ ಸೇರಿಸಲು ಪ್ರತಿಲಿಪಿ ತಂಡವನ್ನು ಸಂಪರ್ಕಿಸಿ ವಿನಂತಿಸಬೇಕಿಲ್ಲ. ಮುಕ್ತಾಯಗೊಂಡಿರುವ ನಿಮ್ಮ ಕೃತಿಗಳನ್ನು ನೀವೇ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಗೆ ಸೇರಿಸಬಹುದು.. ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ನಾನೀಗ ಮುಂದುವರೆಸುತ್ತಿರುವ ಧಾರಾವಾಹಿಗಳು ಏನಾಗುತ್ತವೆ ? ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ಮುಂದುವರೆಯುತ್ತಿರುವ ಧಾರಾವಾಹಿಗಳೆಲ್ಲವೂ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯ ಅಡಿಯಲ್ಲಿ ತಾನಾಗಿಯೇ ಸೇರಲ್ಪಡುತ್ತವೆ. ಆದರೆ, ಓದುಗರಿಗೆ ಕೆಲವು ಹೊಸ ಅನುಭವಗಳು ಇದರಿಂದಾಗುತ್ತವೆ. ಈ ಯೋಜನೆಯಡಿಯಲ್ಲಿ ನಿಮ್ಮ ಮುಂದುವರೆಯುತ್ತಿರುವ ಧಾರಾವಾಹಿಗಳನ್ನು ತಂದಲ್ಲಿ, ಇದರ ೧೬ನೆಯ ಅಧ್ಯಾಯದಿಂದ ಪ್ರತಿಯೊಂದು ಅಧ್ಯಾಯವೂ ಲಾಕ್ ಆಗಲ್ಪಡುತ್ತದೆ. ಈ ಮೊದಲು, ಯಾವುದೇ ಸಬ್ಸ್ಕ್ರಿಪ್ಷನ್ ಯೋಜನೆ ಖರೀದಿಸದ ಎಲ್ಲ ಓದುಗರೂ ಹೊಸ ಅಧ್ಯಾಯ ಪ್ರಕಟಗೊಂಡ ಐದು ದಿನಗಳ ಬಳಿಕ ಉಚಿತವಾಗಿ ಓದಬಹುದಿತ್ತು. ಈ ಬದಲಾವಣೆಯ ಬಳಿಕ, ಉಚಿತವಾಗಿ ಓದಲು, ಪ್ರೀಮಿಯಂ ಧಾರಾವಾಹಿಗಳ ಅಧ್ಯಾಯಗಳನ್ನು ದಿನಕ್ಕೊಂದರಂತೆ ಅನ್ಲಾಕ್ ಮಾಡಿದಂತೆ, ಹಿಂದಿನ ಅಧ್ಯಾಯವನ್ನು ಸಂಪೂರ್ಣವಾಗಿ ಓದಿದ ಮಾರನೆಯ ಅದರ ಮುಂದಿನ ಅಧ್ಯಾಯ ಅನ್ಲಾಕ್ ಆಗುತ್ತದೆ. ಪ್ರತಿಲಿಪಿ ಈ ಬದಲಾವಣೆಗಳನ್ನು ಯಾಕೆ ತರುತ್ತಿದೆ ? ತಮ್ಮ ಕೃತಿಗಳ ಮೂಲಕ ಹೆಚ್ಚಿನ ಹಣ ಸಂಪಾದಿಸಬಯಸುವ ಎಲ್ಲ ಅರ್ಹ ಲೇಖಕ/ಲೇಖಕಿಯರಿಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಈ ಬದಲಾವಣೆ ಪರಿಚಯಿಸಲಾಗಿದೆ. ನನ್ನ ಓದುಗರಿಗೆ ಯಾವೆಲ್ಲ ರೀತಿಯ ಬದಲಾವಣೆಗಳು ಲಭ್ಯವಾಗುತ್ತವೆ ? ಮುಂದುವರೆಯುತ್ತಿರುವ ಮತ್ತು ಮುಕ್ತಾಯಗೊಂಡಿರುವ ಎಲ್ಲ ಕೃತಿಗಳೂ ಪ್ರೀಮಿಯಂ ಅಡಿಯಲ್ಲಿ ಲಭ್ಯವಾಗುತ್ತವೆ. ಈವರೆಗೂ ಮುಂದುವರೆಯುತ್ತಿರುವ ಕೃತಿಗಳನ್ನು ಗೋಲ್ಡನ್ ಬ್ಯಾಡ್ಜ್ ಹೊಂದಿರುವ ಕರ್ತೃಗಳು ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿಯೂ, ಮುಕ್ತಾಯಗೊಂಡ ಕೃತಿಗಳನ್ನು ಪ್ರತಿಲಿಪಿ ಆಯ್ಕೆ ಮಾಡಿ ಲೇಖಕ/ಲೇಖಕಿಯರನ್ನು ಸಂಪರ್ಕಿಸಿ ಅವರು ಅನುಮತಿಸಿದಲ್ಲಿ ಪ್ರೀಮಿಯಂ ವಿಭಾಗದಡಿಯಲ್ಲಿಯೂ ಸೇರಿಸುತ್ತಿದ್ದರು. ಈ ಹೊಸ ಸೌಲಭ್ಯದಡಿಯಲ್ಲಿ ಆಯಾ ಲೇಖಕ ಲೇಖಕಿಯರುತಮ್ಮ ಮುಕ್ತಾಯಗೊಂಡ ಮತ್ತು ಮುಂದುವರೆಯುತ್ತಿರುವ ಧಾರಾವಾಹಿಗಳನ್ನು ಪ್ರೀಮಿಯಂ ವಿಭಾಗಕ್ಕೆ ಸೇರಿಸಲು ಬಯಸುವ ಧಾರಾವಾಹಿಗಳ ಅಧ್ಯಾಯಗಳು ಓದುಗರಿಗೆ ೧೬ನೆಯ ಅಧ್ಯಾಯದಿಂದ ಲಾಕ್ ಆಗುತ್ತವೆ. ಅದಕ್ಕೂ ಮೊದಲಿನ ಎಲ್ಲ ಅಧ್ಯಾಯಗಳನ್ನೂ ಉಚಿತವಾಗಿ ಒಮ್ಮೆಲೇ ಓದಬಹುದು. ಓದುಗರು ಓದಿದ ಹಿಂದಿನ ಅಧ್ಯಾಯದ ನಂತರದ ಅಧ್ಯಾಯ ಮರುದಿನವೇ ಅನ್ಲಾಕ್ ಆಗುತ್ತದೆ. ಈ ಹಿಂದೆ ಪ್ರೀಮಿಯಂ ಅಡಿಯಲ್ಲಿರುವ ಮುಕ್ತಾಯಗೊಂಡ ಕೃತಿಗಳನ್ನು ಸಂಪೂರ್ಣ ಉಚಿತವಾಗಿ ಓದಬಯಸುತ್ತಿದ್ದ ಓದುಗರಿಗೆ ಪ್ರತಿನಿತ್ಯ ಅವರು ಓದಿದ ಅಧ್ಯಾಯದ ಮುಂದಿನ ಅಧ್ಯಾಯ ಅನ್ಲಾಕ್ ಮರುದಿನ ಆಗುತ್ತಿತ್ತು. ಹೊಸ ಸೌಲಭ್ಯದಡಿಯಲ್ಲಿ ಮುಂದುವರೆಯುತ್ತಿರುವ ಕೃತಿಗಳ ಅಧ್ಯಾಯಗಳೂ ಸಹ ಹಿಂದಿನ ಅಧ್ಯಾಯ ಓದಿ ಮುಗಿಸಿದ ಮರುದಿನ ಅನ್ಲಾಕ್ ಆಗುತ್ತವೆ. ಅವರು ಎಲ್ಲ ಅಧ್ಯಾಯಗಳನ್ನೂ ಒಮ್ಮೆಲೇ ಓದಬಯಸಿದಲ್ಲಿ, ಆಯಾ ಲೇಖಕ/ಲೇಖಕಿಯರನ್ನು ಸಬ್ಸ್ಕ್ರೈಬ್ ಮಾಡಬಹುದು ಅಥವಾ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಖರೀದಿಸಬಹುದು. ಅಥವಾ ಪ್ರತಿ ಅಧ್ಯಾಯಕ್ಕೆ ಐದು ನಾಣ್ಯಗಳಂತೆ ವ್ಯಯಿಸಿ ಅನ್ಲಾಕ್ ಮಾಡಬಹುದು. ನಾನು ನನ್ನ ಮುಂದುವರೆಯುತ್ತಿರುವ ಧಾರಾವಾಹಿಯನ್ನು ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ಹೇಗೆ ತರಬಹುದು ?ಮುಂದುವರೆಯುತ್ತಿರುವ ಕೃತಿಗಳ ಮೊದಲ ೧೫ ಅಧ್ಯಾಯಗಳು ಉಚಿತವಾಗಿರುತ್ತವೆ. ೧೬ನೆಯ ಅಧ್ಯಾಯ ಪ್ರಕಟಗೊಂಡಾಗ ಅದು ತಾನಾಗಿಯೇ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ಬರುತ್ತದೆ. ಈಗಾಗಲೇ ಮುಕ್ತಾಯಗೊಂಡಿರುವ ನನ್ನ ಧಾರಾವಾಹಿಗಳನ್ನು ಹೇಗೆ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ತರಬಹುದು ? ನೀವು ಪ್ರಸ್ತುತ ಮುಂದುವರೆಸುತ್ತಿರುವ ಧಾರಾವಾಹಿಗಳನ್ನು ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಯೋಜನೆಯಡಿಲ್ಲಿ ಪ್ರಕಟಿಸುತ್ತಿದ್ದರೆ, ಅದು ತಾನಾಗಿಯೇ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ಸೇರ್ಪಡೆಯಾಗುತ್ತದೆ. ನೀವು ಇದಕ್ಕೆ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯ ಇರುವುದಿಲ್ಲ. ಆದರೆ, ಈಗಾಗಲೇ ಮುಕ್ತಾಯಗೊಂಡ ನಿಮ್ಮ ಧಾರಾವಾಹಿಗಳನ್ನು ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ತರಬಯಸಿದಲ್ಲಿ, ಬರೆಯಿರಿ ವಿಭಾಗಕ್ಕೆ ಹೋಗಿ ಪ್ರಕಟಿತ ಬರಹಗಳು ಅಡಿಯಲ್ಲಿರುವ ನಿಮ್ಮ ಧಾರಾವಾಹಿಗಳ ಮೇಲೆ ಕ್ಲಿಕ್ ಮಾಡಿ, ಇತರೆ ಮಾಹಿತಿಗಳನ್ನು ಎಡಿಟ್ ಮಾಡಿ ಮೇಲೆ ಕ್ಲಿಕ್ ಮಾಡಿ, ಈ ಯೋಜನೆಯಡಿಯಲ್ಲಿ ಆಯಾ ಧಾರಾವಾಹಿಗಳನ್ನು ತರಬಹುದು. ನಾನು ನನ್ನ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿರುವ ಧಾರಾವಾಹಿಯನ್ನು ಇದರಿಂದ ಹೊರತರಬಯಸಿದಲ್ಲಿ ಅದಕ್ಕೆ ಅವಕಾಶವಿದೆಯೇ ? ನೀವು ನೇರವಾಗಿ ಇದರಿಂದ ನಿಮ್ಮ ಧಾರಾವಾಹಿಯನ್ನು ಹೊರತೆಗೆಯಲು ಅವಕಾಶವಿಲ್ಲ. ಇತರೆ ಮಾಹಿತಿಗಳನ್ನು ಎಡಿಟ್ ಮಾಡಿ ವಿಭಾಗದಲ್ಲಿMake it part of paid program ನಲ್ಲಿ no ಆಯ್ಕೆ ಮಾಡಬೇಕಾಗುತ್ತದೆ. ಇದರಿಂದ ನಮ್ಮ ತಂಡಕ್ಕೆ ನೇರವಾಗಿ ಸೂಚನೆ ಲಭಿಸಿ, ನಾವು ನಿಮ್ಮನ್ನು ಮುಂದಿನ ೭೨ ಗಂಟೆಗಳ ಒಳಗೆ ಸಂಪರ್ಕಿಸಿ ಧಾರಾವಾಹಿಯನ್ನು ಇದರಿಂದ ಹೊರತೆಗೆಯುವ ಕುರಿತು ಚರ್ಚಿಸಿ ಹೊರತೆಗೆಯಲು ಸಹಾಯ ಮಾಡುತ್ತೇವೆ. ಪ್ರತಿಲಿಪಿ ಆ್ಯಪ್/ವೆಬ್ಸೈಟ್ ನಲ್ಲಿ ಆಯಾ ಲೇಖಕ/ಲೇಖಕಿಯರೇ ತಮ್ಮ ಧಾರಾವಾಹಿಗಳನ್ನು ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯಿಂದ ಹೊರತರಲು ಏಕೆ ಸಾಧ್ಯವಿಲ್ಲ ? ಪಾವತಿಸಿ ಓದುವ ಓದುಗರಿಗೆ ನಾವು ಸ್ಥಿರವಾದ ಓದಿನ ಹಿತಾನುಭವವನ್ನು ನೀಡಬಯಸುತ್ತೇವೆ. ಧಾರಾವಾಹಿಯನ್ನು ಈ ಯೋಜನೆಯಿಂದ ಒಮ್ಮೆಲೇ ಹೊರತೆಗೆಯುವುದರಿಂದ, ಓದುಗರ ನಂಬುಗೆ ಮತ್ತು ವಿಶ್ವಾಸಗಳಿಗೆ ಘಾಸಿಯಾಗುವ ಸಾಧ್ಯತೆ ಇರುತ್ತದೆಯಾದ್ದರಿಂದ ಈ ರೀತಿಯ ಕ್ರಮ ಅನುಸರಿಸಲಾಗುತ್ತದೆ. ನನ್ನ ಬರಹದ ರಚನೆ ಮತ್ತು ಪ್ರಕಟಿಸುವಿಕೆಯ ಪ್ರಕ್ರಿಯೆಯಲ್ಲಿ ಯಾವುದಾದರೂ ಬದಲಾವಣೆ ಆಗಲಿದೆಯೇ ?ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ನೀವು ನಿಮ್ಮ ಧಾರಾವಾಹಿಯನ್ನು ತರಬಯಸಿದಲ್ಲಿ - - ಅಧ್ಯಾಯಗಳನ್ನು ಅಳಿಸಲು ಅಥವಾ ಅಪ್ರಕಟಿತಗೊಳಿಸಲು ಸಾಧ್ಯವಾಗುವುದಿಲ್ಲ. ಧಾರಾವಾಹಿಯ ಕೊನೆಯ ಪ್ರಕಟಿತ ಅಧ್ಯಾಯವನ್ನು ಮಾತ್ರ ಅಳಿಸಿ/ಅಪ್ರಕಟಿತಗೊಳಿಸಬಹುದು. ನೀವು [email protected] ಅಥವಾ ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ, ಅಳಿಸಿ/ಅಪ್ರಕಟಿತಗೊಳಿಸಬಹುದು - ಆದರೆ, ನೀವು ಯಾವುದೇ ಅಧ್ಯಾಯವನ್ನು ಎಡಿಟ್ ಮಾಡಲು ಅವಕಾಶ ಲಭ್ಯವಿರುತ್ತದೆ.- ಅಧ್ಯಾಯಗಳನ್ನು ಧಾರಾವಾಹಿಗಳ ಹೊರಗಡೆ ಪ್ರತ್ಯೇಕವಾಗಿ ಪ್ರಕಟಿಸಿ ಧಾರಾವಾಹಿಗೆ ಸೇರಿಸುವ/ ಧಾರಾವಾಹಿಯಿಂದ ಬೇರ್ಪಡಿಸುವ ಆಯ್ಕೆ ಇರುವುದಿಲ್ಲ. - ಧಾರಾವಾಹಿಯ ಒಳಗೆ ಅಧ್ಯಾಯಗಳನ್ನು ಮರುವಿಂಗಡಿಸುವ ಆಯ್ಕೆ ಇರುವುದಿಲ್ಲ. ಬರಹದ ಪ್ರಕ್ರಿಯೆಯಲ್ಲಿ ಯಾಕೆ ಹಲವಾರು ನಿಬಂಧನೆಗಳನ್ನು ಅಳವಡಿಸಲಾಗಿದೆ ? ಪ್ರೀಮಿಯಂ ಚಂದಾದಾರರಿಗೆ ಉಂಟಾಗುವ ಅಹಿತಾನುಭವವನ್ನು ತಪ್ಪಿಸಲು ಈ ನಿಯಮಗಳನ್ನು ಅಳವಡಿಸಲಾಗಿದೆ. ಉದಾಹರಣೆಗೆ - ಓದುಗರೊಬ್ಬರು ಪ್ರೀಮಿಯಂ/ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಖರೀದಿಸಿ ಒಂದು ಧಾರಾವಾಹಿಯನ್ನು ಓದಲು ಪ್ರಾರಂಭಿಸುತ್ತಾರೆ. ಆದರೆ ಅದರ ಕರ್ತೃ ಆ ಧಾರಾವಾಹಿಯ ಅಧ್ಯಾಯವನ್ನು ಅಪ್ರಕಟಿತಗೊಳಿಸಿದಲ್ಲಿ ಅಥವಾ ಮರುವಿಂಗಡಿಸಿದಲ್ಲಿ, ಓದುಗರ ಓದಿನ ಹಿತಾನುಭವಕ್ಕೆ ತಡೆಯುಂಟಾಗುತ್ತದೆ. ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಯಡಿಯಲ್ಲಿ ಪ್ರಕಟಿಸುತ್ತಿರುವ ನನ್ನ ಧಾರಾವಾಹಿ ಮುಕ್ತಾಯಗೊಂಡಾಗ ಏನಾಗುತ್ತದೆ ? ಎಲ್ಲವೂ ಹೇಗಿದೆಯೋ ಹಾಗೆಯೇ ಇರುತ್ತವೆ. ನಿಮ್ಮ ಧಾರಾವಾಹಿ ಪ್ರೀಮಿಯಂ ಅಡಿಯಲ್ಲಿಯೇ ಓದುಗರಿಗೆ ಲಭ್ಯವಾಗುತ್ತದೆ. ಆದರೆ ನೀವು ಧಾರಾವಾಹಿಯನ್ನು ಅಪ್ಲಿಕೇಶನ್ ನಲ್ಲಿ ಮುಕ್ತಾಯಗೊಂಡಿದೆ ಎಂದು ಗುರುತಿಸಿದಲ್ಲಿ, ಅದನ್ನು ಹೆಚ್ಚಿನ ಓದುಗರಿಗೆ ತಲುಪಿಸಲು ವಿವಿಧ ಪ್ರಮೋಷನ್ ಚಟುವಟಿಕೆಗಳಿಗೆ ಬಳಸಲು ನಮಗೆ ಸಹಾಯಕವಾಗುತ್ತದೆ. ನಾನು ಈ ಹೊಸ ಯೋಜನೆಯಡಿಯಲ್ಲಿ ಪ್ರಕಟಗೊಳ್ಳುತ್ತಿರುವ ಈ ಧಾರಾವಾಹಿಯ ಅಧ್ಯಾಯಗಳನ್ನು ಷೆಡ್ಯೂಲ್ ಮಾಡಬಹುದೇ ? ಹೌದು, ಷೆಡ್ಯೂಲಿಂಗ್ ಸೌಲಭ್ಯ ಮೊದಲಿನಂತೆಯೇ ಇರಲಿದೆ. ನನ್ನ ಸೂಪರ್ ಫ್ಯಾನ್ ಗಳ ಓದಿನ ಅನುಭವದಲ್ಲಿ ಯಾವುದಾದರೂ ಬದಲಾವಣೆಗಳಾಗುತ್ತವೆಯೇ ? ಇಲ್ಲ, ಅವರ ಓದಿನ ಅನುಭವದಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ. ಈಗಾಗಲೇ ಪ್ರೀಮಿಯಂ ವಿಭಾಗದಡಿಯಲ್ಲಿರುವ ನನ್ನ ಧಾರಾವಾಹಿಗಳು ಏನಾಗುತ್ತವೆ ? ಅವುಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಈಗಾಗಲೇ ಪ್ರೀಮಿಯಂ ಅಡಿಯಲ್ಲಿರುವ ಕೃತಿಗಳು ಈಗ ಹೇಗೆ ಲಭ್ಯವಾಗುತ್ತವೆಯೋ ಹಾಗೆಯೇ ಲಭ್ಯವಾಗಲಿವೆ. ಈಗಾಗಲೇ ಮುಕ್ತಾಯಗೊಂಡಿರುವ ನನ್ನ ಧಾರಾವಾಹಿಯನ್ನು ಹಿಂದೆ ಪ್ರಕಟಿಸುವಾಗ ಸೂಪರ್ ಫ್ಯಾನ್ ಸೌಲಭ್ಯದಡಿಯಲ್ಲಿ ಸೇರಿಸಿರಲಿಲ್ಲ. ಹೀಗಿದ್ದೂ ಆ ಧಾರಾವಾಹಿಯನ್ನು ಈ ಯೋಜನೆಯಡಿ ತರಬಹುದೇ ? ಈಗಾಗಲೇ ಮುಕ್ತಾಯಗೊಂಡಿರುವ ನಿಮ್ಮ ಧಾರಾವಾಹಿಯನ್ನು ನೀವು ಹಿಂದೆ ಪ್ರಕಟಿಸುತ್ತಿದ್ದಾಗ ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿ ಸೇರಿಸಿರದಿದ್ದರೂ, ಈಗ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಯೋಜನೆಗೆ ಸೇರಿಸಬಹುದು. ನನ್ನ ಓದುಗರು, ಸೂಪರ್ ಫ್ಯಾನ್ ಗಳು ಮತ್ತು ಸಂಪಾದನೆ ಎಲ್ಲವೂ ಈ ಯೋಜನೆಯಿಂದ ಕಡಿಮೆಯಾಗಬಹುದು ಎನಿಸುತ್ತಿದೆ. 1. ಸಹಜವಾಗಿ, ಪ್ರಾರಂಭದಲ್ಲಿ ಈ ಯೋಜನೆಯಿಂದ ಓದುಗರ ಸಂಖ್ಯೆ ಕುಂಠಿತಗೊಳ್ಳಬಹುದು. ಆದರೆ ಇದು ತಾತ್ಕಾಲಿಕವಾಗಿದ್ದು, ಸದಾ ಋಣಾತ್ಮಕವಾಗಿಯೇ ಇರುವುದಿಲ್ಲ. 2. ಎಲ್ಲ ಓದುಗರಿಗೂ ಅಧ್ಯಾಯ ೨೪ ಗಂಟೆಗಳಲ್ಲಿ ಉಚಿತವಾಗುವುದಿಲ್ಲ. ಒಬ್ಬ ಓದುಗ ಲಾಕ್ ಆಗಿರುವ ಅಧ್ಯಾಯವನ್ನು ಸಂಪೂರ್ಣವಾಗಿ ಪ್ರಸ್ತುತ ದಿನ ಓದಿದಲ್ಲಿ ಆತನಿಗೆ ಮರುದಿನ ಮುಂದಿನ ಅಧ್ಯಾಯ ಅನ್ಲಾಕ್ ಆಗುತ್ತದೆ. ಅದು ಆತನಿಗೆ ಮಾತ್ರವೇ ಲಭ್ಯವಾಗುವುದಾಗಿದ್ದು, ಇತರರಿಗೆ ಲಾಕ್ ಆಗಲ್ಪಟ್ಟಿರುತ್ತದೆ. ಉಚಿತವಾಗಿ ಓದಬಯಸುವ ಒಬ್ಬ ಓದುಗನಿಗೆ ದಿನವೊಂದಕ್ಕೆ ಆಯಾ ಧಾರಾವಾಹಿಯ ಒಂದು ಅಧ್ಯಾಯ ಮಾತ್ರ ಅನ್ಲಾಕ್ಆಗುತ್ತದೆ. ಈ ಮಹತ್ವದ ಬದಲಾವಣೆಯಿಂದ ನಿಮ್ಮ ಧಾರಾವಾಹಿಗಳಿಂದ ನೀವು ಈಗ ಗಳಿಸುತ್ತಿರುವ ಆದಾಯ ಇನ್ನೂ ಅಧಿಕಗೊಳ್ಳಲಿದೆ ಮತ್ತು ಹೆಚ್ಚು ಓದಿನ ಸಂಖ್ಯೆ, ವಿಮರ್ಶೆಗಳ ಜೊತೆಗೆ ನೀವು ವ್ಯಯಿಸುವ ಸಮಯ ಮತ್ತು ಕಲ್ಪನೆಗಳಿಗೆ ಪ್ರತಿಯಾಗಿ ಹೆಚ್ಚಿನ ಹಣದ ಸಂಪಾದನೆಯೂ ಆಗುತ್ತದೆ ಎಂದು ಭಾವಿಸುತ್ತೇವೆ. ನಿಮ್ಮಿಂದ ಅತ್ಯುನ್ನತ ಸಾಹಿತ್ಯ ರಚಿಸಲ್ಪಡಲಿ ಎಂದು ಹಾರೈಸುತ್ತೇವೆ. ಧನ್ಯವಾದಗಳೊಂದಿಗೆ ಪ್ರತಿಲಿಪಿಕನ್ನಡಬಳಗಇನ್ನೂ ಹೆಚ್ಚು ತೋರಿಸಿ
- ನಮ್ಮ ಸಾಹಿತಿಗಳ ಸಾಹಿತ್ಯಯಾನವನ್ನು ಓದಿ!31 मई 2023ಆತ್ಮೀಯರೇ, ಇಂದು ನಾವು ಪ್ರತಿಲಿಪಿಕನ್ನಡದ ಕೆಲವು ಸಾಹಿತಿಗಳ ಸಾಹಿತ್ಯಯಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇವೆ. ನಮ್ಮ ಸಾಹಿತಿಗಳ ಸಾಹಿತ್ಯಯಾನವನ್ನು ಓದಿ, ಪ್ರೇರಣೆ ಪಡೆದು ನೀವು ಸಹ ಉತ್ಕೃಷ್ಟ ಸಾಹಿತ್ಯ ಸೃಷ್ಟಿಸುವಂತಾಗಲಿ, ಆ ಮೂಲಕ ಓದುಗರ ಪ್ರೀತಿ, ಅಭಿಮಾನ ಪಡೆಯುವಂತಾಗಲಿ ಮತ್ತು ಪ್ರತಿಲಿಪಿ ಸೌಲಭ್ಯಗಳ ಸದ್ಬಳಕೆಯ ಮೂಲಕ ಆರ್ಥಿಕ ಪ್ರಯೋಜನಗಳನ್ನು ಪಡೆಯುವಂತಾಗಲಿ ಎಂಬುದೇ ನಮ್ಮ ಆಶಯ! ಈ ಕೆಳಗಿನ ಸಾಹಿತಿಗಳ ಹೆಸರಿನ ಮೇಲೆ ಕ್ಲಿಕ್ ಮಾಡುವ ಮೂಲಕ ಆ ಸಾಹಿತಿಗಳ ಸಾಹಿತ್ಯಯಾನವನ್ನು ಓದಬಹುದು : ಶ್ರೀ ಮಂಗಳ ಶೆಟ್ಟಿ ಜಿ ಕೆ ಅನಘ ಶಿವರಾಮ್ ಅನಿತಾ ಅಪರಿಚಿತೆ ಶಾಲಿನಿ ಶ್ರೀನಿವಾಸ ಕರ್ಣ ಶ್ರೀ ದಿವ್ಯ ಸೌಮ್ಯಶ್ರೀ ಹೆಚ್ ವಿ ರಿತು ಪ್ರತಿಮಾ ಪ್ರಸಾದ್ ರಂಗವಲ್ಲಿಸುತೆ ಕಲ್ಪನಾ ಲೋಕದ ವಿಹಾರಿ ಡಾ. ಲಾವಣ್ಯ ಪ್ರಭಾ ಬನಶಂಕರಿ ಕುಲಕರ್ಣಿ ವರ್ಣಿಕ ಸವಿ ಹೆಬ್ಬಾರ ರಮ್ಯಾ (ರಾಗಿಣಿ) ಗೌಡ ಶ್ರುವಿ ಸುಮಾ ಯು ಕೆ ರತ್ನ ಪಟವರ್ಧನ್ ಕಾವ್ಯ ತನ್ಮಯಿ ಕಾವ್ಯ ಸುರೇಶ್ ದಿವ್ಯ ಸಚ್ಚಿನ್ ತೇಜಸ್ವಿನಿ ರಾಜಶೇಖರ್ ಮಾಲಾ ನಾರಾಯಣ ನಂದಿನಿ ಹೆಬ್ಬಾರ್ ವಸುಧಾ ಶಾಸ್ತ್ರಿ ವೀಣಾ ವಿನಾಯಕ ರಾಧಾ ಸನಾ ಇಷ್ಟ ಶೆಟ್ಟಿ ಶ್ರೀ ಬಾಲಾ ವಾಗ್ಮಿಯ ವಿದ್ಯಾ ಗೌಡ ರೂಪಾ ಚೈತ್ರ ಯೋಗೇಶ್ ಸುಜಲ ಘೋರ್ಪಡೆ ಶೀಲಾ ಶ್ರೀ ಅಚಲಾ 'ಮಿಂಚು' ಪ್ರತಿಭಾ ಶಿಲ್ಪ ವಸಿಷ್ಠ ಮೌನ ಗಂಗಾ ಜ್ಯೋತಿ ಬಾಳಿಗಾ ದಶಮಿ ಶೆಟ್ಟಿ ಶಿಲ್ಪ.ಎಂ ವೀಣಾ ವಿದ್ಯಾ ಮಂಜು ಸೌಮ್ಯ ಶಿವರಾಜು ಮಂಜುಳ ದೇವಿ ಆತ್ಮಿಕ ಗೌಡ ರೇಖಾ ದೇವರಾಜ್ ನ್ಯಾನ್ಸಿ ಲಿಝಿ ಅಮ್ಮು ಗೌಡ ನಮ್ಮ ಬರಹಗಾರರ ಸಾಹಿತ್ಯಯಾನವನ್ನು ತಪ್ಪದೇ ಓದಿ ಸ್ಫೂರ್ತಿ ಪಡೆಯಿರಿ! ನಾವೆಲ್ಲರೂ ಸೇರಿ ಸಾಹಿತ್ಯವನ್ನು ಸಂಭ್ರಮಿಸೋಣ! ನಿಮ್ಮ ಸಾಹಿತ್ಯ ಪಯಣಕ್ಕೆ ಶುಭವಾಗಲಿ!ಇನ್ನೂ ಹೆಚ್ಚು ತೋರಿಸಿ